Advertisement

ಸಾಹಿತ್ಯ

ಸತೀಶ್ ಚಪ್ಪರಿಕೆ ಕಥಾಸಂಕಲನಕ್ಕೆ ಅವರೇ ಬರೆದ ಮುನ್ನುಡಿಯ ಮಾತುಗಳು

ಸತೀಶ್ ಚಪ್ಪರಿಕೆ ಕಥಾಸಂಕಲನಕ್ಕೆ ಅವರೇ ಬರೆದ ಮುನ್ನುಡಿಯ ಮಾತುಗಳು

” ‘ಗರ್ಭ’ ಹುಟ್ಟಿದ್ದು ಮತ್ತು ನಾನು ಆ ಇಡೀ ಕಥೆಯನ್ನು ಬರೆದಿದ್ದು ಆಸ್ಪತ್ರೆಯೊಂದರ ಮುಂದೆ. ಕಾರಿನಲ್ಲಿ ಕೂತು, ನಡುರಾತ್ರಿಯಲ್ಲಿ ನಾನೊಬ್ಬನೇ ಬಲವಂತವಾಗಿ ನಿದ್ರೆ ಮಾಡುವ ಯತ್ನ ಮಾಡುತ್ತಿದ್ದಾಗ. ಮೇಲೆ ಐಸಿಯುವಿನಲ್ಲಿದ್ದ ಜೀವಕ್ಕಾಗಿ ಚಡಪಡಿಸುತ್ತಲೇ, ಸೋತು ಹೋಗಿದ್ದ ನನ್ನ ಜೀವವನ್ನು ಕೊಡವಿ ಮೇಲೇಳಿಸಿದ ಕಥೆ ‘ಗರ್ಭ.’ ಆ ಕಥೆ ಮೊಳಕೆಯೊಡೆದ ಮರುಕ್ಷಣ, ಬ್ಯಾಗಿನಲ್ಲಿದ್ದ ಲ್ಯಾಪ್ ಟಾಪ್ ತೆಗೆದು ಒಂದೇ ಉಸಿರಿನಲ್ಲಿ ಬರೆಯಲಾರಂಭಿಸಿದಾಗ…”

read more
ಓಬಿರಾಯನ ಕಾಲದ ಕಥಾಸರಣಿಯಲ್ಲಿ ಪಡುಕೋಣೆ ರಮಾನಂದರಾವ್ ಬರೆದ ಕತೆ

ಓಬಿರಾಯನ ಕಾಲದ ಕಥಾಸರಣಿಯಲ್ಲಿ ಪಡುಕೋಣೆ ರಮಾನಂದರಾವ್ ಬರೆದ ಕತೆ

“ಹೊರಗಿನಿಂದ ಆ ಬಡ ಜನರ ಗಲಾಟೆ ಇನ್ನೂ ಅವನಿಗೆ ಕೇಳಿಸುತ್ತಿತ್ತು. ಆದರೆ ಅವರ ಮೇಲಿದ್ದ ಅವನ ಕೋಪವೂ ತಾತ್ಸಾರವೂ ಈಗ ಬಹಳ ಮಟ್ಟಿಗೆ ಕಡಿಮೆಯಾದುವು. ಅವರಲ್ಲೊಬ್ಬರಿಗೆ ಒಂದೊಂದು ಅರ್ಧಪಾವು ಅಕ್ಕಿ ಹಾಕಿ ಅವರನ್ನೆಲ್ಲ ಕಳುಹಿಸಿಬಿಡಲೇ ಎಂದು ಆಲೋಚಿಸಿದನು. ಆದರೆ ಅವರ ಗೋಳು ಭಿಕ್ಷೆಯನ್ನೆತ್ತುವುದಕ್ಕಲ್ಲ, ಅಕ್ಕಿಯ ಧಾರಣೆಯನ್ನು ಕಡಿಮೆ ಮಾಡುವುದಕ್ಕೆ ಎಂದು ಅವನು ಚೆನ್ನಾಗಿ ತಿಳಿದಿದ್ದನು. ಅದು ಅವನ ನೆನಪಿಗೆ ಬರುತ್ತಲೆ ಮೆಲ್ಲಮೆಲ್ಲನೆ ದ್ರವಿಸುತ್ತಿರುವ ಅವನ ಹೃದಯ.. “

read more
ಪ್ರವೀಣ ಕವನಸಂಕಲನದ ಕುರಿತು ಕಿರಸೂರ ಗಿರಿಯಪ್ಪ ಬರೆದ ಲೇಖನ

ಪ್ರವೀಣ ಕವನಸಂಕಲನದ ಕುರಿತು ಕಿರಸೂರ ಗಿರಿಯಪ್ಪ ಬರೆದ ಲೇಖನ

ಹುಳಕ್ಕೆ ಎಲ್ಲೆಲ್ಲಿಯ ಕನೆಕ್ಷನ್ನುಗಳಿವೆ? ಎನ್ನುವುದರ ಮೂಲಕ ಮುಗ್ಧ ಜನರಿಗೆ ಈ ಹಸಿವೆಂಬ ಹುಳ ಅದ್ಹೇಗೆ ತನ್ನ ಹಿಡಿತ ಸಾಧಿಸಿದೆ ಎಂಬುದನ್ನು ಮನದಟ್ಟು ಮಾಡುತ್ತಾ ಸಾಗುತ್ತದೆ. ‘ಹೂವುಗಳ್ಯಾಕೋ ಮೊಗ್ಗಿನಲೆ ಕಮರುತ್ತಿವೆ’ ಎನ್ನುವ ಸಾಲಿನಲ್ಲಿಯೂ ಮುಗ್ಧ ಹೃದಯಗಳ ಆತಂಕ ಎತ್ತಿ ತೋರಿಸುತ್ತದೆ. ಮತ್ತೆ ಮುಂದುವರೆದು ‘ಹೂವು ಅರಳಿಲ್ಲ’ ಎನ್ನುವ ಕವಿತೆಯಲ್ಲಿ ಬೆಳಕಿನ ಬೆಂಬತ್ತಿ ಹೋಗಿ, ಎಷ್ಟೆ ದಾರಿ ಸವಿಸಿದರೂ ಗಾಢಕತ್ತಲೆಯಲ್ಲಿ…”

read more
ಡಿ.ಎಸ್.ಎನ್ ಅವರ ‘ಗಾಂಧಿ ಕಥನ’ವೆಂಬ ಗಾಂಧಿಯ ಗಂಧ: ಎಚ್.ಆರ್.ರಮೇಶ್ ಲೇಖನ

ಡಿ.ಎಸ್.ಎನ್ ಅವರ ‘ಗಾಂಧಿ ಕಥನ’ವೆಂಬ ಗಾಂಧಿಯ ಗಂಧ: ಎಚ್.ಆರ್.ರಮೇಶ್ ಲೇಖನ

“ಗಾಂಧಿ ದಿನದಿನಕ್ಕೂ ಪ್ರಸ್ತುತವಾಗುತ್ತ ಹೋಗುತ್ತಾರೆ. ಗಾಂಧಿ ಲೋಕದ ಬದುಕಿನ ಭವಿಷ್ಯ. ಗಾಂಧಿಯನ್ನು ಯಾವರೂಪದಲ್ಲಾದರೂ ಎದುರಾಗಲೇಬೇಕು. ಅವರ ಚಿಂತನೆಗಳಿಲ್ಲದ ಮುಂದಿನ ಸಮಾಜವನ್ನು ಕಟ್ಟಲು ಆಗುವುದಿಲ್ಲ. ಅವರ ಸಂಕೀರ್ಣವಾದ ವ್ಯಕ್ತಿತ್ವದಿಂದಾಗಿಯೇ ಅವರ ಜೊತೆ ಜಗಳಕ್ಕೆ ವಿಫುಲವಾದ ಅವಕಾಶವೂ ಇದೆ. ಅವರು ನಿಜ ಅರ್ಥದಲ್ಲಿ ಹೀರೋ. ಬದುಕಿನ ತೀವ್ರತೆರನಾದ ಸಂದರ್ಭಗಳನ್ನು…”

read more
ಮುನವ್ವರ್ ಜೋಗಿಬೆಟ್ಟು ಬರೆದ ಸಣ್ಣ ಕತೆ “ಎರಡನೇ ತಿರುವು”

ಮುನವ್ವರ್ ಜೋಗಿಬೆಟ್ಟು ಬರೆದ ಸಣ್ಣ ಕತೆ “ಎರಡನೇ ತಿರುವು”

“ಏನೋ ತೀರ್ಮಾನಿಸಿದವಳಂತೆ, ಮೆಟ್ಟಿಲಿಳಿದು ರಸ್ತೆಗೆ ಬಂದಳು. ನಿಡು ದೂರದಲ್ಲಿ ಕುತೂಹಲ ಹುಟ್ಟಿಸುವ ಆ ಎರಡನೇ ಅಡ್ಡ ರಸ್ತೆ. ಒಮ್ಮೆ ಉರಿದು ಮತ್ತೆ ನಂದುತ್ತಿರುವ ದಾರಿದೀಪ. ಸಾಲದ್ದಕ್ಕೆ ಲೈಟು ಕಂಬದಿಂದ “ಟ್ರೀ” ಎಂಬ ಶಾರ್ಟ್ ಸರ್ಕ್ಯೂಟಿನ ಸದ್ದು. ಬೆಳಕು ನಂದಿ ಹೊತ್ತುವಷ್ಟರಲ್ಲೇ ಕತ್ತಲ ಮಧ್ಯೆ ರಪ್ಪನೆ ಯಾರೋ ನುಗ್ಗಿದಂತಾಗಿ ಇವಳೆದೆಯ ತುಂಬಾ ಹಾಲಿನವನ ಪ್ರೇತ. ಮತ್ತೆ ಮತ್ತೆ ನಡೆದಳು.”

read more
ಡಾ. ಬಸವರಾಜ ಸಾದರ ಅವರ ಅನುವಾದಿತ ಕತೆಗಳ ಸಂಕಲನದಿಂದ ಒಂದು ಕತೆ

ಡಾ. ಬಸವರಾಜ ಸಾದರ ಅವರ ಅನುವಾದಿತ ಕತೆಗಳ ಸಂಕಲನದಿಂದ ಒಂದು ಕತೆ

“ಸಾಹೇಬ್ರೆ, ಎಲ್ಲಾ ನಾಚಿಕೆ ಬಿಟ್ಟು, ಇರೋ ಸತ್ಯಾನೆಲ್ಲಾ ನಿಮಗೆ ಹೇಳುತ್ತೇನೆ. ನನ್ನ ಹತ್ತಿರ ಒಂದೇ ಒಂದು ಒಳಲಂಗ ಇದೆ. ಅದನ್ನು ನನ್ನ ಮದುವೆಯಲ್ಲಿ ಕೊಟ್ಟಿದ್ದರು. ಹರಿದು ಹೋಗಿದ್ದ ಅದನ್ನು ನಾನು ಅದೆಷ್ಟೋ ಸಾರಿ ಹೊಲಿದು ರಿಪೇರಿ ಮಾಡಿಕೊಂಡಿದ್ದೇನೆ. ಅದು ಮತ್ತೆ ಹೊಲಿಯಲಾರದಷ್ಟು ಚಿಂದಿ ಚಿಂದಿಯಾಗಿತ್ತು. ಅದಕ್ಕಾಗಿ ಸಾಹೇಬ್ರೆ…. ಈ ಬ್ಯಾನರ್ ಅನ್ನು ಕಿತ್ತುಕೊಂಡು ಅದರಿಂದ ಒಂದು ಒಳಲಂಗವನ್ನು ನಾನೇ ಹೊಲಿದುಕೊಂಡಿದ್ದೇನೆ…”

read more
ಓಬಿರಾಯನ ಕಾಲದ ಕಥಾ ಸರಣಿಯಲ್ಲಿ ಎಸ್. ವೆಂಕಟರಾಜ ಬರೆದ ಕತೆ

ಓಬಿರಾಯನ ಕಾಲದ ಕಥಾ ಸರಣಿಯಲ್ಲಿ ಎಸ್. ವೆಂಕಟರಾಜ ಬರೆದ ಕತೆ

“ಏನೋ ರಾಷ್ಟ್ರಗೀತೆ! ಪ್ರಾಯಶಃ ಪಿಕೆಟಿಂಗಿಗೆ ಹೋಗುತ್ತಾರಂತ ಕಾಣ್ತದೆ. (ಜ್ಞಾಪಿಸಿಕೊಂಡು) ಹೌದು. ಇವತ್ತು ಮಿರ್ಜಾ ಬ್ರದರ್ಸ್ ರ ಅಂಗಡಿ ಮುಂದೆ ಪಿಕೆಟಿಂಗ್ ಇದೆಯಂತೆ! (ನಗುತ್ತಾ) ಏ! ಮತ್ತೊಂದು ವಿಷಯ – ಆ ಪೈಕಿ ಒಂದು ಹುಡುಗಿ ಏನು ಚೆಂದ ಇದೆ ಗೊತ್ತಿದೆಯೆ? ಅದನ್ನು ನೋಡಿ ನಾನು ಕೂಡ ಪಿಕೆಟಿಂಗಿಗೆ ಸೇರೋಣಾಂತ… “

read more
ಶ್ರೀಧರ ಬಳಗಾರ ಕಾದಂಬರಿಯ ಕುರಿತು ಶ್ರೀದೇವಿ ಕೆರೆಮನೆ ಬರಹ

ಶ್ರೀಧರ ಬಳಗಾರ ಕಾದಂಬರಿಯ ಕುರಿತು ಶ್ರೀದೇವಿ ಕೆರೆಮನೆ ಬರಹ

“ಇಡೀ ಕಾದಂಬರಿಯಲ್ಲಿ ಗಮನ ಸೆಳೆಯುವುದು ಹವ್ಯಕ ಭಾಷೆಯ ಮಾತುಗಳು. ಇಡೀ ಉತ್ತರ ಕನ್ನಡದಲ್ಲಿ ಪ್ರತಿ ಜನಾಂಗಕ್ಕೂ ಅದರದ್ದೇ ಆದ ಒಂದೊಂದು ಭಾಷೆ ಇದೆ. ಅದರದ್ದೇ ಆದ ಏರಿಳಿತಗಳಿವೆ. ಹಾಗೆಯೆ ಒಂದು ಪ್ರದೇಶದಲ್ಲಿ ಯಾವ ಜನಾಂಗ ಪ್ರಬಲವಾಗಿದೆಯೋ ಆ ಜನಾಂಗದ ಮಾತನ್ನು ಸಾಮಾಜಿಕವಾಗಿ ಕೆಳವರ್ಗದ ಜನಾಂಗಗಳೂ ಅನುಸರಿಸುತ್ತವೆ. ಅಂತಹದ್ದೊಂದು ರೂಢಿ ಇಲ್ಲಿದೆ. ಉಗ್ರಾಣಿ ಶಂಕ್ರನಿಂದ ಹಿಡಿದು ಹೆರಿಗೆಯ ಕೆಲಸಕ್ಕೆ ಬರುವ ಲಕ್ಷ್ಮಿಯವರೆಗೆ….”

read more
“ಮೂರ್ತಣ್ಣ”: ದರ್ಶನ್ ಜೆ. ಬರೆದ ಈ ವಾರದ ಕತೆ

“ಮೂರ್ತಣ್ಣ”: ದರ್ಶನ್ ಜೆ. ಬರೆದ ಈ ವಾರದ ಕತೆ

“ಹೀಗೆ ನಡೆಯುತ್ತಿರುವಾಗಲೊಮ್ಮೆ, ಕೃಷ್ಣಪ್ಪನ ಹೋಟೆಲ್ಲಿಗೆ ನಾಲ್ಕು ಬಿಂದಿಗೆ ನೀರು ಸೇದಿ, ಸೈಕಲ್ ನ ಕ್ಯಾರಿಯರ್ ಮೇಲೆರಡು ಬಿಂದಿಗೆ ಕಟ್ಟಿ, ಮುಂದಿನ ಬಾರಿನ ಮೇಲೆರಡಿಟ್ಟು, ಬಿರಬಿರನೆ ಬರುತ್ತಿರುವಾಗ ಯಾರೋ ಎದುರಿನಿಂದ ಹಂದಿಗಳನ್ನು ಓಡಿಸುತ್ತಾ ಬಂದರು. ಮೂರ್ನಾಲಕ್ಕು ಕೊಚ್ಚೆ ಮೈನ ಹಂದಿಗಳು ಒಮ್ಮೆಗೆ ಇದಿರಾದದ್ದರಿಂದ ಮತ್ತು ಹಂದಿಯನ್ನು ಮುಟ್ಟಿಸಿಕೊಂಡರೆ ಸೈಕಲ್ ಮಾರಬೇಕಾದ ಪ್ರಸಂಗದ ಬಗ್ಗೆ ಹೆದರಿ, ಅದನ್ನು ತಪ್ಪಿಸಲು ಹೋಗಿ…”

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ