ಚರ್ಮ: ಎಚ್.ಆರ್.ರಮೇಶ ಬರೆದ ಕತೆ
“ಒಂದು ಸಲ ಚಂದ್ರಾಚಾರಿಯನ್ನು ನೋಡಲು ಕತ್ತಲಲ್ಲಿ ಅವನ ಮನೆಯ ಹಿತ್ತಲಿಗೆ ಹೋದಾಗ ಲಕ್ಷ್ಮಿ ಚೇಳು ಕಚ್ಚಿದ್ದ ಗುರುತು ಅವಳ ಎಡಗಾಲ ಹೆಬ್ಬಟ್ಟಿನ ಮೇಲೆ ಅಚ್ಚುಒತ್ತಿದ ರೀತಿ ಇನ್ನೂ ಹಾಗೆ ಇತ್ತು. ಆದರೂ ಆ ಕತ್ತಲಲ್ಲೂ ಅವನು ಕೊಟ್ಟ ಮುತ್ತು ಹಣೆಯ ಮೇಲೆ ಹಸಿಯಾಗಿಯೇ ಇದ್ದು ಹಣೆ ಮುಟ್ಟಿದಾಗೆಲ್ಲಾ ಚಂದ್ರಾಚಾರಿ ಮಿಂಚಿ ಹೋಗುತ್ತಿದ್ದ. ಈ ಲಹರಿಗಳ ಜೊತೆಗೆ ‘ಚಂದ್ರಾಚಾರಿಯನ್ನು ಮದುವೆಯಾಗಿದ್ದರೆ ಅವನ ಮರದ ಕೆತ್ತನೆಗಳ ಸುಂದರ ಗೊಂಬೆಗಳಂತೆ…”
ಚನ್ನಪ್ಪ ಕಟ್ಟಿಯವರ ಕಥಾಸಂಕಲನದ ಕುರಿತು ಸಾಹೇಬಗೌಡ ಬಿರಾದಾರ ಲೇಖನ
“ಏಕತಾರಿ ಕತೆಯೊಳಗ ಉಪಮೆ ಹಾಗೂ ಹೋಲಿಕೆಗಳು ತುಂಬಿ ತುಳಕತಾವ. ಕಾಂಡಕೊರೆಯುವ ಹುಳು ಒಳಗೆ ಹೊಕ್ಕವರಂತೆ ದಿನದಿನಕ್ಕೆ ಕೃಶನಾಗುತ್ತ ಹೊರಟಿದ್ದಾನೆ, ಮುರುದು ಮುಟಗಿಮಾಡಿ ನುಂಗಿ ನೀರ ಕುಡಿತಿದ್ರು, ಪಡಸಾಲ್ಯಾಗ ಕುಂತಾವ ಎದ್ದು ಹೊಲಕ ಹೋದವರಂಗ ಹೋಗಿ ಬಿಟ್ಟ ನೋಡ್ರಿ, ಮಳಿಯಪ್ಪ ಗವಿ ಸೆರಿದವರಮಗ ರೈತರ ಕೂಡಾ ಕಣಮುಚಗಿ ಆಟ ಆಡಾಕ ಸುರು ಮಾಡಿದ..”
ಓಬಿರಾಯನಕಾಲದ ಕಥಾಸರಣಿಯಲ್ಲಿ ಕುಡ್ಪಿ ವಾಸುದೇವ ಶೆಣೈ ಬರೆದ ಕತೆ
“ಅಂದಿನ ಆ ನಿಶಿ! ವಿಧಾತನು ತನ್ನ ಕಲಾಜ್ಞಾನವನ್ನೆಲ್ಲ ಪ್ರಯೋಗಿಸಿ ಅದನ್ನು ರಚಿಸಿರುವನೆಂಬಂತೆ ತೋರುತ್ತಿತ್ತು. ಆ ಅಂಧಕಾರದ ಭೀಕರ ಸೌಂದರ್ಯವನ್ನು ನೋಡಿ ದೇವಗಣಗಳೂ, ತಾರಾಮಂಡಲವೂ ಮುಗ್ಧವಾದಂತಿತ್ತು. ಸಂಪತನು ಅದರ ಕಡೆಗೆ ತಿಲಾಂಶವೂ ಗಮನಕೊಡದೆ, ಉನ್ಮಾದನಂತೆ ಮನೆಯಿಂದ ಹೊರಬಿದ್ದನು. ಈ ಕೊಲೆಗಡುಕನನ್ನು ಸ್ಪರ್ಶಿಸಲಾರದೆ ವಾಯುದೇವನು ಕೂಗುತ್ತ ದಿಕ್ಕು ತೋಚದೆ ಓಡಾಡಿದನು.”
ವಸುಧೇಂದ್ರರ ‘ತೇಜೋ=ತುಂಗಭದ್ರಾ’ ಕುರಿತು ಎಚ್.ಆರ್. ರಮೇಶ್ ಲೇಖನ
“ಹಂಪಕ್ಕಳನ್ನು ಇವರ ಸುಪರ್ದಿಗೆ ಬಿಟ್ಟು ಹೊರಟಾಗ ಹಂಪಕ್ಕಳಿಗೆ ಇವನ ಮೇಲೆ ಆಸೆ ಹುಟ್ಟುತ್ತದೆ. ಆದರೆ ಅವನು ‘ನಾನೊಂದು ದೇಶದವನು, ನೀನು ಮತ್ತೊಂದು ದೇಶದವಳು. ಒಂದಕ್ಕೊಂದು ಸಂಬಂಧವಿಲ್ಲದ ಸಂಸ್ಕೃತಿಯಲ್ಲಿ ಬೆಳೆದವರು. ಇಬ್ಬರಿಗೂ ಹೊಂದಾಣಿಕೆಯಾಗುವುದಿಲ್ಲ ಹಂಪಮ್ಮ’ ಎನ್ನುತ್ತಾನೆ. ಅದಕ್ಕೆ ಅವಳು ‘ಕಣ್ಣಾ, ಹಲವಾರು ಬಗೆಯ ಕುಲಾವಿಗಳನ್ನು ಹೊಲಿದವಳು ನಾನು… “
ಮಂಟೇದರನೊಕ್ಕಲು ಲೋಕರೂಢಿಗೊಳಗಾದುದು: ಮಂಜುನಾಥ್ ಲತಾ ಬರೆದ ಕತೆ
“‘ಸ್ವಾಮಿ ಮಾದೇಸ್ವಾಮಿಯವರೇ, ನಿಮ್ಮ ಹಾಡುಗಾರಿಕೆಯನ್ನು ಮೆಚ್ಚಿ ಘನ ಸರ್ಕಾರವು ತಮಗೆ ಸೈಟು, ಪ್ರಶಸ್ತಿಗಳನ್ನೆಲ್ಲ ದಯಪಾಲಿಸಿರುವುದು ಸರಿಯಷ್ಟೆ. ಆದರೆ ಅದು ನಿಮ್ಮ ಹಳೆಯ ಮೂಲ ಹಾಡುಗಾರಿಕೆಗೆ ಸಂದ ಬೆಲೆಯಲ್ಲದೆ ಈಗ ನೀವು ಹಾಡಲು ಹೊರಡುತ್ತಿರುವ ಕ್ಯಾಸೆಟ್ ಹಾಡುಗಳಿಗೆ ಸಿಕ್ಕಿದ್ದಲ್ಲ… ನೀವು ನಿಮ್ಮ ಮೂಲವನ್ನು ಮರೆತಂತೆ ಮಾತಾಡುತ್ತಿರುವುದು ಸರಿಯಲ್ಲ… ಇಂಥ ನಿಮ್ಮ ಧೋರಣೆಗೆ ನನ್ನ ಧಿಕ್ಕಾರವಿದೆ…”
ಅಕ್ಷತಾ ಕೃಷ್ಣಮೂರ್ತಿ ಪುಸ್ತಕಕ್ಕೆ ಪ್ರೊ.ಕಾಳೇಗೌಡ ನಾಗವಾರ ಬರೆದ ಮುನ್ನುಡಿ
“ಕರ್ನಾಟಕ ಜಾನಪದ ಅಕಾಡೆಮಿಯ ವತಿಯಿಂದ ನಾಡಿನ ಬೇರೆ ಬೇರೆ ಜಿಲ್ಲೆಗಳಲ್ಲಿ ನಡೆದಿರುವ ಸಮ್ಮೇಳನ, ವಿಚಾರಗೋಷ್ಠಿಗಳಲ್ಲಿ ಆಗಾಗ್ಗೆ ಸುಕ್ರಜ್ಜಿಯ ಒಡನಾಟವು ನೀಡುವ ಆನಂದದ ಸವಿಯನ್ನು ನಾವೆಲ್ಲಾ ಅನುಭವಿಸಿದ್ದೇವೆ. ಕಾಡುಗೊಲ್ಲರ ಸಿರಿಯಜ್ಜಿ, ಸಾಲುಮರದ ತಿಮ್ಮಕ್ಕ, ಹಾಲಕ್ಕಿ ಒಕ್ಕಲು ಬುಡಕಟ್ಟಿನ ವಿಶಿಷ್ಟ ಪ್ರತಿಭೆ ಸುಕ್ರಿ ಬೊಮ್ಮಗೌಡ- ಮುಂತಾದ ಈ ಪ್ರಕೃತಿಯ ಕಂದಮ್ಮಗಳು ನೀಡುವ ಅನುಭವಲೋಕ ಹಾಗೂ …”
ಓಬಿರಾಯನ ಕಾಲದ ಕಥಾಸರಣಿಯಲ್ಲಿ ಕೆ.ಕೆ. ಶೆಟ್ಟಿ ಬರೆದ ಕತೆ
“ಸ್ತ್ರೀಯರೆಂದರೆ ಆಚಾರ್ಯರಿಗೆ ವಿಶೇಷ ಪಕ್ಷಪಾತ. ಕೀರ್ತನೆ ಮುಗಿದ ಕೂಡಲೆ ಸ್ವರಾಜ್ಯಫಂಡಿಗೆ ಹಣ ಆಭರಣ ಕೂಡಿಸಲು ಆಚಾರ್ಯರೇ ತೊಡಗುತ್ತಿದ್ದರು. ಸ್ತ್ರೀಯರು ತಮ್ಮ ಆಭರಣಗಳನ್ನು ಕೊಡಬೇಕೆಂದು ಪ್ರತ್ಯೇಕವಾಗಿ ಉತ್ತೇಜಿಸುತ್ತಿದ್ದರು. ಆಚಾರ್ಯರ ಉತ್ತೇಜಕ ವಾಕ್ಸರಣಿಯ ಬಲೆಯಲ್ಲಿ ಸಿಕ್ಕಿದ ಎಂತಹ ಲೋಭಿಯ ಮನಸ್ಸೂ ಒಮ್ಮೆಗೆ ತಲ್ಲಣವಾಗುತ್ತಿತ್ತು. ಹಣ ಮಾತ್ರವಲ್ಲದೆ ಉಂಗುರ, ಬಳೆ, ಸರ, ಒಂಟಿ ಮೊದಲಾದ ಆಭರಣಗಳೂ…”
ವಿ.ಆರ್. ಕಾರ್ಪೆಂಟರ್ ಕಥಾ ಸಂಕಲನ ಕುರಿತು ಶ್ರೀದೇವಿ ಕೆರೆಮನೆ ಬರಹ
“ಬ್ರಾಹ್ಮಿನ್ ಕೆಫೆ ಎನ್ನುವ ಪಿಡಿಎಫ್ ಒಂದು ಝಗ್ಗನೆ ಮೊಬೈಲ್ ಗೆ ಬಂದು ಕುಳಿತಾಗ ಆ ಹೆಸರು ಆಶ್ಚರ್ಯ ಹುಟ್ಟಿಸಿರಲಿಲ್ಲ. ಯಾಕೆಂದರೆ ಎಷ್ಟೋ ದಿನಗಳಿಂದ ಗೆಳೆಯ ವಿ ಆರ್ ಕಾರ್ಪೆಂಟರ್ ಈ ಹೆಸರನ್ನು ಹೇಳುತ್ತಲೇ ಇದ್ದ. ಕೆಲವೊಮ್ಮೆ ಅಲ್ಲಿನ ಕತೆಗಳ ಒಂದಿಷ್ಟು ಎಳೆಗಳನ್ನೂ ಕೂಡ. ಆದರೆ ಕತೆಗಳು ಪೂರ್ಣಗೊಂಡ ನಂತರ ಅದು ಪಡೆದುಕೊಂಡ ತಿರುವುಗಳನ್ನು ಕಂಡಾಗ ಮೈ ಜುಂ ಎನಿಸುವಂತಾಗುತ್ತದೆ.”
ಬೆಂಗಳೂರಲ್ಲಿ ಕಳೆದುಹೋದ ಸಿಂಹ: ಶಂಕರಪ್ಪ ಕೆ.ಪಿ. ಬರೆದ ಕತೆ
“ದೂರದಲ್ಲಿ ನಾಯಿಗಳು ಬೊಗಳುತ್ತಿದ್ದವು. ಕಾಡು ಸೇರಿಕೊಂಡ ಮೇಲೆ ಬೇಟೆ ಸಿಗದೆ ಹಸಿದಿದ್ದ ಗಡ್ದುಲಿಯು ಕೆಂಪಾಲಗನ ಆಡು ಕುರಿಗಳ ಜಾಡಿಡಿದು ಜೋಪಡಿಯ ಕೊಟ್ಟಿಗೆಯ ಬಳಿ ಬಂದು ನಿಂತಿತ್ತು. ಆ ಕಳ್ಳ ಹೆಜ್ಜೆಗಳನಿಕ್ಕುತ್ತಾ ಒಂದು ಕೊಟ್ಟಿಗೆಯ ಮುಂದೆ ಕಟ್ಟಿದ್ದ ಕರುವಿನ ಮೇಲೆ ಬಿದ್ದು ಗ್ವಾಕೆಗೆ ಬಾಯಾಕಿ ಅಲುಮಾಕಿಬಿಡ್ತು. ಆಡು ಕುರಿಗಳು ಒಂದೇ ಸಮನೆ ಬ್ಯಾಗುಡುತ್ತಿದ್ದವು.”









