Advertisement

ಸಾಹಿತ್ಯ

ಅಶೋಕ್ ಕುಮಾರ್ ಅನುವಾದಿಸಿದ ಸುಭಾಷ್ ಚಂದ್ರನ್ ಅವರ ಕಾದಂಬರಿಯ ಒಂದು ಭಾಗ

ಅಶೋಕ್ ಕುಮಾರ್ ಅನುವಾದಿಸಿದ ಸುಭಾಷ್ ಚಂದ್ರನ್ ಅವರ ಕಾದಂಬರಿಯ ಒಂದು ಭಾಗ

“ಮಳೆ ಜೋರಾಗಿ ಮರವನ್ನೇ ಮುಳುಗಿಸುವಂತೆ ಸುರಿಯತೊಡಗಿದಾಗ ರಣಹದ್ದಿನ ಪುಕ್ಕಗಳು ತೊಯ್ದು ತೊಪ್ಪೆಯಾಗುವುದನ್ನು ತನ್ನ ಕಡೆಗಣ್ಣಿಂದ ನೋಡುವುದು ಅಯ್ಯಾಪಿಳ್ಳೆಗೆ ಸಾಧ್ಯವಾಯಿತು. ಪಂಜರಕ್ಕೆ ಒತ್ತಿಕೊಂಡಂತಿದ್ದ ಜುಟ್ಟಿನ ಗಂಟು ಕಳಚಿಕೊಂಡು ಹಿಂದಕ್ಕೆ ಚದುರಿದ್ದ ಕೂದಲಿಗೆ ಕುತ್ತಿಗೆಯನ್ನೊತ್ತಿ ಅಯ್ಯಾಪಿಳ್ಳೆ ತಲೆಯನ್ನು ಹೊರಳಿಸಲು ನೋಡಿದನಾದರೂ ಸಾಧ್ಯವಾಗಲಿಲ್ಲ. ಭೋರ್ಗರೆದು ಸುರಿಯುತ್ತಿರುವ ಮಳೆಯಲ್ಲಿ ಆತ ಬಾಯಾರಿ ತಹತಹಿಸಿದ.”

read more
ಓಬಿರಾಯನ ಕಾಲದ ಕತೆಗಳ ಸರಣಿಯಲ್ಲಿ ಕಡೆಂಗೋಡ್ಲು ಶಂಕರಭಟ್ಟರು ಬರೆದ ಕತೆ “ದುಡಿಯುವ ಮಕ್ಕಳು”

ಓಬಿರಾಯನ ಕಾಲದ ಕತೆಗಳ ಸರಣಿಯಲ್ಲಿ ಕಡೆಂಗೋಡ್ಲು ಶಂಕರಭಟ್ಟರು ಬರೆದ ಕತೆ “ದುಡಿಯುವ ಮಕ್ಕಳು”

“ಸಂಜೆ ಆಯಿತು; ನೆರಳು ಉದ್ದುದ್ದವಾಗಿ ಎಲ್ಲಾ ಕಡೆಗಳಲ್ಲಿಯೂ ಕತ್ತಲಿಸುತ್ತಿದೆ. ಮನುಷ್ಯ ಸಂಚಾರ ಕಡಿಮೆಯಾಗುತ್ತಿದೆ. ದೂರದೂರದಲ್ಲಿ ಯಾರೋ ಯಾರನ್ನೋ ಕರೆಯುವ ಒಂದೊಂದು ಧ್ವನಿ ಅಲೆಯಾಗಿ ಮಾತ್ರ ಕಿವಿಯನ್ನು ಹೊಡೆಯುತ್ತಿದೆ. ಇತರರಲ್ಲಿ ಕರೆಯುವವರೂ ಇದ್ದಾರೆ. ಕರೆಯಿಸಿಕೊಳ್ಳುವವರೂ ಇದ್ದಾರೆ ! ಈ ಬಡ ಕುಟುಂಬದಲ್ಲಿ ಮಾತ್ರ ಅಂಥವರು ಯಾರೂ ಇಲ್ಲವೆ? ಅನ್ಯಾಯವಿದು. ಲಿಂಗಪ್ಪ ಇನ್ನೂ ಬರಲಿಲ್ಲ.”

read more
ಶೂದ್ರ ಶ್ರೀನಿವಾಸ್ ಪುಸ್ತಕದ ಕುರಿತು ಎಚ್.ಆರ್. ರಮೇಶ್ ಬರಹ

ಶೂದ್ರ ಶ್ರೀನಿವಾಸ್ ಪುಸ್ತಕದ ಕುರಿತು ಎಚ್.ಆರ್. ರಮೇಶ್ ಬರಹ

“ಲಂಕೇಶರ ಜೊತೆಯ ತಮ್ಮ ಸುದೀರ್ಘ ಪಯಣದಲ್ಲಿ ನಿಷ್ಠುರತೆಯನ್ನು ಕಾಪಾಡಿಕೊಂಡು ಹೋಗುತ್ತಲೇ ಅವರಿಂದ ಸಾರಾಸಗಟಾಗಿ ಬಿಡಿಸಿಕೊಂಡು ಹೋಗದೆ ಮುನಿಸು, ಜಗಳ, ಟೀಕೆಗಳನ್ನು ಸಹಜವಾಗಿಯೇ ಸ್ವೀಕರಿಸಿ ಕೇವಲ ಸ್ವಚ್ಛಂದ ಪ್ರೀತಿ-ಸ್ನೇಹಗಳನ್ನಷ್ಟೇ ನೆಚ್ಚಿ ಮುನ್ನಡೆದುದರಲ್ಲಿ ಅವರ ತಾಳ್ಮೆ ಹಾಗೂ ಝೆನ್ ತತ್ವದಲ್ಲಿ ಕಾಣುವಂತಹ ಸುಮ್ಮನೆ ಬದುಕುತ್ತ ಇರುತ್ತ ಹೋಗುವ ಕ್ರಮ ಗಮನಸೆಳೆಯುತ್ತದೆ.”

read more
ಉಳಿದ ಪಾಲು: ಸುನೈಫ್ ವಿಟ್ಲ ಬರೆದ ಕತೆ

ಉಳಿದ ಪಾಲು: ಸುನೈಫ್ ವಿಟ್ಲ ಬರೆದ ಕತೆ

“ಕನಸಿನ ವ್ಯಾಖ್ಯಾನ ಹೇಳಬಲ್ಲ ಪಂಡಿತರೆಲ್ಲ ಆಳಿಗೊಂದು ಕತೆ ಕಟ್ಟತೊಡಗಿದರು. ವರ್ಷಗಳು ಉರುಳಿದಂತೆ ಕನಸುಗಳು ನೆನಪಿನ ಯಾವುದೊ ಮೂಲೆಗೆ ಸೇರಿಬಿಡಬೇಕು. ಆದರೆ ನನ್ನ ಕತೆ ಹಾಗಾಗಲಿಲ್ಲ. ಒಂದಲ್ಲ ಒಂದು ರೀತಿಯಲ್ಲಿ ನೆನಪಿನ ಮನೆಯ ಆ ಮೂಲೆಗೆ ಯಾರಾದರೂ ಬೆಳಕು ಹರಿಸುತ್ತಾರೆ. ಆಗ ಮತ್ತೆ ಕೆಲವು ದಿನಗಳು ಕೈ ಜಾರುತ್ತವೆ. ಕೈ ಜಾರುತ್ತವೆ ಎಂದರೆ ಮೋಸದ ಮಾತಾಗಬಹುದು.”

read more
ಕಪಿಲ ಕಾದಂಬರಿಗೆ ಬಾಳಾಸಾಹೇಬ ಲೋಕಾಪೂರ ಮತ್ತು ಕೇಶವ ಮಳಗಿ ಮಾತುಗಳು

ಕಪಿಲ ಕಾದಂಬರಿಗೆ ಬಾಳಾಸಾಹೇಬ ಲೋಕಾಪೂರ ಮತ್ತು ಕೇಶವ ಮಳಗಿ ಮಾತುಗಳು

“`ಹಾಣಾದಿ’ ಕಾದಂಬರಿ ತನ್ನ ಕಥಾವಸ್ತು, ನಿರೂಪಣಾ ವಿಧಾನ ಮತ್ತು ಲೇಖಕ ಹೀಗೆ ಹಲವು ಕಾರಣಗಳಿಂದ ಗಮನ ಸೆಳೆಯುವ ಕೃತಿ. ವರ್ತಮಾನ ಮತ್ತು ಭೂತಕಾಲ ಜತೆಜತೆಗೆ ಸಾಗುವ, ನೆನಪುಗಳ ಸಿಕ್ಕುಗಳಲ್ಲಿ ಓದುಗನನ್ನು ಸಿಲುಕಿಸುವ ಕಾದಂಬರಿ. `ಗಾರುಡಿ ವಾಸ್ತವತೆ’ಯ ತಂತ್ರವನ್ನು ಬಳಸುತ್ತದೆ. ಕಥೆಯೊಳಗೆ ಕಥೆ, ಅದರೊಳಿನ್ನೊಂದು ಕಥೆ ಎಂಬಂತೆ ಇದರ ನಿರೂಪಣೆ. ಕಾದಂಬರಿಯಲ್ಲಿ…”

read more
ಓಬೀರಾಯನ ಕಥಾಸರಣಿಯಲ್ಲಿ ಎಸ್. ವೆಂಕಟರಾಜ ಅವರ ಕತೆ “ಹಾಲು ಕುಡಿದ ಹಾವು”

ಓಬೀರಾಯನ ಕಥಾಸರಣಿಯಲ್ಲಿ ಎಸ್. ವೆಂಕಟರಾಜ ಅವರ ಕತೆ “ಹಾಲು ಕುಡಿದ ಹಾವು”

“ಪಾಪ! ಇಂತಹ ಯೋಚನೆ ಬಂದಾಗಲೇ ಅದನ್ನು ಹೇಗಾದರೂ ಒಳ್ಳೆದರಲ್ಲೋ ಕೆಟ್ಟದರಲ್ಲೋ ಮುಗಿಸಿಬಿಡುತಿದ್ದರೆ ಎಷ್ಟು ಚೆನ್ನಾಗುತಿತ್ತು! ನಿಜವಾಗಿಯಾದರೆ ಕಲಿತವರು ಇಂತಹ ಸಂದರ್ಭದಲ್ಲೇ ಜಾರಿಬೀಳುವುದು. ನಾವು ಹಳ್ಳಿಯವರು ಹೀಗೆಲ್ಲ ಸುಲಭವಾಗಿ ಸಿಕ್ಕಿಬೀಳುವುದಿಲ್ಲ. ನಮಗೆ ಮೈಮೇಲೆ ಅಂಗಿ ಅರಿವೆಯೇ ಇರುವುದಿಲ್ಲ. ಆದುದರಿಂದ ನಮ್ಮ ನಮ್ಮ ದೋಷ ನಮಗೆ ಚೆನ್ನಾಗಿ ಕಂಡುಬಂದು ಅದಕ್ಕೆ ಕೂಡಲೇ ಮದ್ದುಮಾಡುತ್ತೇವೆ.’

read more
ಸೀರೆಯುಡುವ ಗೋಧಾಳ ಮಗ: ಕೆ.ಸತ್ಯನಾರಾಯಣ ಕಾದಂಬರಿ “ಲೈಂಗಿಕ ಜಾತಕ”ದ ಆಯ್ದ ಭಾಗ

ಸೀರೆಯುಡುವ ಗೋಧಾಳ ಮಗ: ಕೆ.ಸತ್ಯನಾರಾಯಣ ಕಾದಂಬರಿ “ಲೈಂಗಿಕ ಜಾತಕ”ದ ಆಯ್ದ ಭಾಗ

“ಗೋದಾ ಸಾಯುವ ಹಿಂದಿನ ವರ್ಷ ಮಗ-ಸೊಸೆ ಬಂದಿದ್ದಾಗ ದೊಡ್ಡ ರಾದ್ಧಾಂತವೇ ಆಗಿಹೋಯಿತು. ಒಂದು ದಿನ ಸೊಸೆ ಗೊಲೇಚಾ ಮಧ್ಯಾಹ್ನ ನಾಲ್ಕು- ನಾಲ್ಕೂವರೆ ಘಂಟೆ ಹೊತ್ತಿನಲ್ಲಿ ರೂಮಿಂದ ಈಚೆಗೆ ಬಂದ(ಳು). ಸಾಲಂಕೃತ ವಧು. ನೋಡಿದರೆ ಕಣ್ಣು ತುಂಬಿ ಬರುವ ಹಾಗೆ. ನಮ್ಮ ಶ್ರೀ ವೈಷ್ಣವ ಹುಡುಗಿಯರ ರೀತಿಯೇ. ಕೆಂಪಂಚು ಇರುವ ಹಸಿರು ಸೀರೆ, ಬಿಳಿ ಬಣ್ಣದ ತುಂಬು ತೋಳಿನ ರವಿಕೆ, ಲೋಲಾಕು, ದೊಡ್ಡ ಹೆರಳು, ಹೀಗೆ.”

read more
ಮೋಕ್ಷ ಸ್ನಾನ ಇಂಗ್ಲಿಷ್ ಮೂಲ: ಆರ್.ಪಿ. ಸಿಸೋಡಿಯಾ ಕನ್ನಡಕ್ಕೆ: ಎಂ.ಜಿ. ಶುಭಮಂಗಳ

ಮೋಕ್ಷ ಸ್ನಾನ ಇಂಗ್ಲಿಷ್ ಮೂಲ: ಆರ್.ಪಿ. ಸಿಸೋಡಿಯಾ ಕನ್ನಡಕ್ಕೆ: ಎಂ.ಜಿ. ಶುಭಮಂಗಳ

“ಕಿಕ್ಕಿರಿದಿದ್ದ ಗುಡಾರದಲ್ಲಿ ಬೆವರಿನಿಂದ ತೊಪ್ಪೆಯಾಗಿದ್ದ ದೇಹಗಳಿಂದ ಬರುವ ವಾಸನೆಯಿಂದ ಹೊಟ್ಟೆಯಲ್ಲಿ ತೊಳೆಸಿದಂತಾಗಿ, ನನಗೆ ನಿದ್ದೆ ಹತ್ತಲಿಲ್ಲ. ಮರುದಿನ ಪವಿತ್ರ ಸಂಗಮಸ್ನಾನದ ನೆನಪಿನಲ್ಲಿ ಪುಳಕಿತಳಾದ ಅಮ್ಮ ಪ್ರಶಾಂತವಾಗಿ ನಿದ್ದೆ ಮಾಡಿದಳು; ಆ ಸ್ನಾನ ತನ್ನ ಪಾಪಗಳನ್ನು ತೊಳೆದು, ಮುಂದಿನ ಜೀವನದಲ್ಲಿ ಸುಖಜೀವನವನ್ನು ಪ್ರಸಾದಿಸುತ್ತದೆಯೆಂಬುದು…”

read more
‘ಅಜಂತಾ’ ಕಾವ್ಯದ ಕುರಿತು ಚಿದಾನಂದ ಸಾಲಿ ಮಾತುಗಳು

‘ಅಜಂತಾ’ ಕಾವ್ಯದ ಕುರಿತು ಚಿದಾನಂದ ಸಾಲಿ ಮಾತುಗಳು

“ಗದ್ಯಾನುವಾದದಲ್ಲಿ ಪದದ ಅರ್ಥ ಸೀಮಿತವಾಗಿದ್ದು, ಎಷ್ಟೋ ಅರ್ಥವಾಗದ ಪದಗಳ ಅರ್ಥವು ಆ ವಾಕ್ಯ, ಆ ಪ್ಯಾರಾ, ಆ ಸಂದರ್ಭಗಳು ಹೊರಡಿಸುವ ಅರ್ಥಗಳಲ್ಲೇ ಅಡಕವಾಗಿರುತ್ತದೆ. ಆದರೆ ಕಾವ್ಯಾನುವಾದದಲ್ಲಿ ಹಾಗಲ್ಲ. ಪ್ರತಿ ಪದವೂ ಒಂದು ವಾಕ್ಯದ, ಒಂದು ನುಡಿಯ ಘಟಕವಾಗಿರುತ್ತಲೇ; ತನ್ನ ಸ್ವತಂತ್ರ ಅಸ್ತಿತ್ವವನ್ನು, ಅಸ್ಮಿತೆಯನ್ನು ಬಿಟ್ಟುಕೊಡದೆ ಅನನ್ಯತೆಯನ್ನೂ ಉಳಿಸಿಕೊಂಡಿರುತ್ತದೆ. ಎರಡು ಭಾಷೆಗಳ ನಡುವೆ ಸುಲಭ ಗೋಚರವಾದ…”

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ