Advertisement
ಸೌಮ್ಯಶ್ರೀ ಎ.ಎಸ್. ಬರೆದ ಈ ದಿನದ ಕವಿತೆ

ಸೌಮ್ಯಶ್ರೀ ಎ.ಎಸ್. ಬರೆದ ಈ ದಿನದ ಕವಿತೆ

ಹಾದಿ!

ಕಾಲದ ಚಕ್ರ ಸದ್ದಿಲ್ಲದೆ
ಸರಸರನೆ ಸರಿಯುತಿದೆ
ಒಮ್ಮೆ ಬೆಳದಿಂಗಳ ಬೆಳಕು
ಮತ್ತೊಮ್ಮೆ ಕಡುಕತ್ತಲ ಹಾದಿ

ಮನದ ಮಾಳಿಗೆಯಲಿ
ಕಳೆದ ನೆನಪುಗಳು ಸುಪ್ತವಾಗಿ
ಸುತ್ತಲೂ ಸುತ್ತುತ್ತಿವೆ!

ಹಸಿದವರ ಹಸಿವಡಗಿಸಲು
ಹಸಿರು ಚಿಗುರಿಲ್ಲ
ಕನಸುಗಳ ಹೊತ್ತು
ಭರವಸೆಯ ಹೊದ್ದು
ಕಾದು ಕೂತ ರೈತನ
ಕಣ್ಣೀರು ಬತ್ತಿಲ್ಲ

ಬಡತನದ ಬೇಗೆಯಲ್ಲಿ
ನೊಂದು ಬೆಂದು ನಲುಗಿ
ನರಳುತಿರುವವರ ಆಕ್ರಂದನ ಅಳಿದಿಲ್ಲ!
ದ್ವೇಷ ಅಸೂಯೆ ಸರಿದಿಲ್ಲ
ಭವಿಷ್ಯಕೆ ಮತ್ತಷ್ಟು ಮಗದಷ್ಟು
ಕೂಡಿಡುವ ಬಯಕೆ ಬರಿದಾಗಿಲ್ಲ
ನಾ ಮೇಲು ನೀ ಕೀಳು
ಎಂಬ ಭಾವ ಅಳಿದು

ಬಾಂಧವ್ಯದ ಬೆಸುಗೆ ಬೆಸದಿಲ್ಲ
ನಾವೆಲ್ಲಾ ಒಂದೇ ಎನ್ನುವ
ಹೊಸ ಭಾವ ಅಂಕುರಿಸಿಲ್ಲ
ಮನದ ಮೊಗ್ಗು ಬಿರಿದಿಲ್ಲ
ಹೂವಾಗಿ ಅರಳಿ ಕಂಪು ಸೂಸಿಲ್ಲ
ವರುಷ ಉರುಳುತಿದೆ
ಕಾಲ ಸರಿಯುತಿದೆ!

ಸೌಮ್ಯಶ್ರೀ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಆಗಸನಮರ ಗ್ರಾಮದವರು.
ಭೂಗರ್ಭಶಾಸ್ತ್ರದಲ್ಲಿ ಎಂ.ಎಸ್ಸಿ ಪದವಿಯನ್ನು ಚಿನ್ನದ ಪದಕಗಳೊಂದಿಗೆ ಉತ್ತೀರ್ಣರಾಗಿ ಪ್ರಸ್ತುತ ಕರ್ನಾಟಕ ಸರ್ಕಾರದ ಸಚಿವಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಇವರ ಕತೆ, ಲೇಖನಗಳು ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಸೌಮ್ಯಶ್ರೀಯವರ ಈ ಚೊಚ್ಚಲ ಕಥಾಸಂಕಲನ ೨೦೧೭ರಲ್ಲಿ ಪ್ರಕಟವಾಗಿದೆ.

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ