Advertisement

ಅಂಕಣ

ಸ್ನೇಹ-ಸಂಬಂಧಗಳ ಮೊಕದ್ದಮೆಗಳಲ್ಲಿ ಸಾಕ್ಷಿ ಕೊಡಬೇಕಾದವರು ನಿರಪರಾಧಿಗಳೇ!: ವಿನಾಯಕ ಅರಳಸುರಳಿ ಅಂಕಣ

ಸ್ನೇಹ-ಸಂಬಂಧಗಳ ಮೊಕದ್ದಮೆಗಳಲ್ಲಿ ಸಾಕ್ಷಿ ಕೊಡಬೇಕಾದವರು ನಿರಪರಾಧಿಗಳೇ!: ವಿನಾಯಕ ಅರಳಸುರಳಿ ಅಂಕಣ

ನಿಜವಾದ ಸಂಗತಿಯೇನೆಂದರೆ ಎಷ್ಟೋ ಬಾರಿ ಇಂಥಾ ಅಪವಾದ, ಅಪನಂಬಿಕೆಗಳು ಆ ಕ್ಷಣಕ್ಕೆ ಹುಟ್ಟಿದವುಗಳಾಗಿರುವುದೇ ಇಲ್ಲ. ಒಬ್ಬ ವ್ಯಕ್ತಿಯ ಸ್ನೇಹ, ಸಾಂಗತ್ಯದಲ್ಲಿರುವಾಗಲೇ ಮನುಷ್ಯ ಇಂಥಾದ್ದೊಂದು ಅಗಲಿಕೆಗೆ ತಯಾರಿ ಮಾಡಿಕೊಳ್ಳುತ್ತಿರುತ್ತಾನೆ. ತನಗೆ ಇಷ್ಟವಾಗದ ಆತನ ವ್ಯಕ್ತಿತ್ವಗಳನ್ನು ಹೆಕ್ಕಿಟ್ಟುಕೊಳ್ಳುತ್ತಿರುತ್ತಾನೆ! ಇಂಥಾದ್ದೊಂದು ಸಮಯ ಬಂದಾಗ ಥಟ್ಟನೆ ಅವನ್ನೆಲ್ಲ ಆಚೆ ತೆಗೆದು ‘ಅಕಾರ್ಡಿಂಗ್ ಟೂ ಆ್ಯಕ್ಟ್ ತ್ರೀ ನಾಟ್ ಟೂ’ ಎಂದು ಅವನ್ನು ಹಾಜರುಪಡಿಸಿಯೇ ಬಿಡುತ್ತಾನೆ. ಎಲ್ಲೋ ತಮಾಷೆಗೆ ಆಡಿದ ಮಾತಿನ ಪಳೆಯುಳಿಕೆಯನ್ನು ಎದುರಿಟ್ಟು ‘ಅವತ್ತು ಹೀಗಂದಿದ್ದೆ ನೆನಪಿದೆಯಾ?’
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”

read more
ಹಿರಿಮೆ-ಗರಿಮೆ ಲೋಕದಲ್ಲಿ ಸಿಕ್ಕ ಆಸ್ಟ್ರೇಲಿಯನ್ ಹಕ್ಕಿ: ಡಾ. ವಿನತೆ ಶರ್ಮಾ ಅಂಕಣ

ಹಿರಿಮೆ-ಗರಿಮೆ ಲೋಕದಲ್ಲಿ ಸಿಕ್ಕ ಆಸ್ಟ್ರೇಲಿಯನ್ ಹಕ್ಕಿ: ಡಾ. ವಿನತೆ ಶರ್ಮಾ ಅಂಕಣ

ಕುತೂಹಲಕಾರಿ ವಿಷಯವೆಂದರೆ ಈ ವರ್ಷ ೨೦೨೫ರಲ್ಲಿ ಅಮೆರಿಕಾ ದೇಶವು ಹನ್ನೆರಡನೇ ಸ್ಥಾನಕ್ಕೆ ಇಳಿದಿದೆ. ಯು.ಎಸ್.ಎ ಪಾಸ್ಪೋರ್ಟ್ ಇರುವವರು ೧೮೦ ದೇಶಗಳಿಗೆ ವೀಸಾ ಪಡೆಯದೆ ಹೋಗಬಹುದು. ಹೆನ್ಲಿ ಸಂಸ್ಥೆಯ ಅಧ್ಯಯನದ ಪ್ರಕಾರ ೨೦೧೪ ನೇ ಇಸವಿಯಲ್ಲಿ ಅಮೆರಿಕೆಯು ಮೊಟ್ಟಮೊದಲ ಸ್ಥಾನದಲ್ಲಿದ್ದು ಪ್ರಪಂಚದ ಅತ್ಯಂತ ಪ್ರಭಾವಶಾಲಿ ಪಾಸ್‌ಪೋರ್ಟ್ ಎನ್ನುವ ಹಿರಿಮೆ, ಮಾನ್ಯತೆಯಿತ್ತು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

read more
ಕನ್ನಡದ ಡಿಜಿಟಲ್ ನವೋದಯ ಮತ್ತು ವಿಜ್ಞಾನ ಬರವಣಿಗೆ: ಎಲ್.ಜಿ.ಮೀರಾ ಅಂಕಣ

ಕನ್ನಡದ ಡಿಜಿಟಲ್ ನವೋದಯ ಮತ್ತು ವಿಜ್ಞಾನ ಬರವಣಿಗೆ: ಎಲ್.ಜಿ.ಮೀರಾ ಅಂಕಣ

ಹಲವಾರು ಲೇಖಕ-ಲೇಖಕಿಯರು ತಮ್ಮ ಕೊಡುಗೆಗಳನ್ನು ಕೊಟ್ಟಿದ್ದಾರೆ, ಕೊಡುತ್ತಿದ್ದಾರೆ. ಆದರೂ ಕರ್ನಾಟಕದ ಜನಮಾನಸದಲ್ಲಿ ಮತ್ತು ಉನ್ನತ ಶಿಕ್ಷಣ ಕ್ಷೇತ್ರದ ವಿಜ್ಞಾನದ ಅಧ್ಯಾಪಕರಲ್ಲಿ ಮತ್ತು ಸಂಶೋಧಕರಲ್ಲಿ `ವಿಜ್ಞಾನವೆಂದರೆ ಇಂಗ್ಲಿಷಿನಲ್ಲಿ ಇರುವಂಥದ್ದು, ಇರಬೇಕಾದದ್ದುʼ ಎಂಬ ಗಾಢ ಭಾವನೆ ಬೇರೂರಿದೆ. ಈ ಭಾವನೆ-ಚಿಂತನೆಯ ತಿರುಳು ಎಂದರೆ “ತೀರಾ ಗಂಭೀರ ವಿಜ್ಞಾನ ವಿಚಾರಗಳನ್ನು ಮತ್ತು ಅಂತಾರಾಷ್ಟ್ರೀಯ ಮಟ್ಟದ ವಿಜ್ಞಾನ ಲೇಖನಗಳನ್ನು ಕನ್ನಡದಲ್ಲಿ ಬರೆಯಲಾಗದು, ಹಾಗೆ ಬರೆಯಲು ಸೂಕ್ತ ಪದಗಳೇ ಸಿಗುವುದಿಲ್ಲ” ಎಂಬ ಅನಿಸಿಕೆ ಅಥವಾ ಪೂರ್ವಗ್ರಹ. ಇದು ವಿಜ್ಞಾನಕ್ಷೇತ್ರದ ಹಲವು ಅಧ್ಯಾಪಕರು ಮತ್ತು ವಿಜ್ಞಾನಿಗಳಲ್ಲಿದೆ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಇಪ್ಪತ್ತೊಂಭತ್ತನೆಯ ಬರಹ

read more
ಕಥೆಯಾದಳು ಸೀತಕ್ಕ… : ವಿನಾಯಕ‌ ಅರಳಸುರಳಿ ಅಂಕಣ

ಕಥೆಯಾದಳು ಸೀತಕ್ಕ… : ವಿನಾಯಕ‌ ಅರಳಸುರಳಿ ಅಂಕಣ

ಸೀತಕ್ಕನ ಗಂಡನಿಗೆ ಕೊನೆಗೊಂದು ದಿನ ಡಿಸ್ಚಾರ್ಜಾಯಿತು. ಮನೆಗೆ ಹೋದ ಮೇಲೂ ಸೀತಕ್ಕ ಆಗಾಗ ಕರೆ ಮಾಡುತ್ತಿದ್ದರು. ಆಕೆಯ ಬದುಕು ಮೂರು ನಿಮಿಷದಲ್ಲಿ ಕಂಡ ಎಪಿಸೋಡಿನಂತೆ ನನ್ನೆದುರು ಪ್ರಸಾರವಾಗುತ್ತಿತ್ತು.‌ ಊರಿನಲ್ಲಿ ಸೀತಕ್ಕನಿಗೆ ಅವಳದೇ ಆದ ಒಂದಷ್ಟು ಸ್ನೇಹಗಳಿದ್ದವು. ಆಕೆ ಮಾತ್ರ ಮಾಡಬಹುದಾದ, ಅರ್ಧ ಸಂಬಳದ ಕೆಲಸಗಳಿದ್ದವು. ಅದನ್ನು ಆಕೆಗೆ ಕೊಡುವ ಮನೆಯೊಡತಿಯರೇ ಆಕೆಯ ಸ್ನೇಹಿತೆಯರಾಗಿದ್ದರು. ಅವರ ಮನೆಗಳ ಪಾತ್ರೆ ತೊಳೆಯುತ್ತ, ಹೂಗಿಡಗಳಿಗೆ ನೀರು ಹಾಕುತ್ತ, ಯಾರದೋ ಹೂದೋಟದಲ್ಲಿ ಹೂವರಳಿಸುತ್ತ, ಅಂಗಳಕ್ಕೆ ಸಗಣಿ ನೀರು ಬಳಿಯುತ್ತಾ, ಹಬ್ಬಕ್ಕೆ ತೋರಣ ಕಟ್ಟುತ್ತಾ, ಅವರಾಗಿ ಕೊಟ್ಟರಷ್ಟೇ ತಾನೂ ಹೂ ಮುಡಿಯುತ್ತ ಇದ್ದಳು ಆ ಅಜ್ಜಿ.
ವಿನಾಯಕ‌ ಅರಳಸುರಳಿ ಅಂಕಣ “ಆಕಾಶ ಕಿಟಕಿ”

read more
ಹೀಗೊಂದು ಆಸ್ಟ್ರೇಲಿಯಾದ ಋತು-ಗಾನ: ಡಾ. ವಿನತೆ ಶರ್ಮ ಅಂಕಣ

ಹೀಗೊಂದು ಆಸ್ಟ್ರೇಲಿಯಾದ ಋತು-ಗಾನ: ಡಾ. ವಿನತೆ ಶರ್ಮ ಅಂಕಣ

ಸೆಪ್ಟೆಂಬರ್ ತಿಂಗಳಲ್ಲಿ ಆರಂಭವಾಗುವ ವಸಂತಋತುವಿನ ಮೊದಲ ಭಾಗದಲ್ಲಿ ಅದೇನೊ ಒಂದು ರೀತಿಯ ಕಾಯುವಿಕೆಯಿದೆ. ಮಳೆಗಾಗಿ ಕಾಯುತ್ತಿರುವುದು ಭೂಮಿ, ಪ್ರಾಣಿಪಕ್ಷಿಗಳು ಮತ್ತು ನಾವು ಮನುಷ್ಯರು. ನಮ್ಮ ಕಾಯುವಿಕೆ ಪ್ರಕೃತಿಮಾತೆಗೆ ನಿಧಾನವಾಗಿ ಅರ್ಥವಾಯಿತೇನೊ ಅನ್ನುವಂತೆ ಭಾಸವಾಗುವುದು ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಬೀಸುವ ಬಿರುಗಾಳಿಯಿಂದ. ಇದು ಬರಲಿರುವ ಬೇಸಿಗೆಯ ಮಳೆಗಾಲದ ಚಿಹ್ನೆ. ಡಿಸೆಂಬರ್, ಜನವರಿ ತಿಂಗಳುಗಳಲ್ಲಿ ಮಳೆಗಾಲ. ಇದು ಒಮ್ಮೊಮ್ಮೆ ಫೆಬ್ರವರಿಗೂ ವಿಸ್ತರಿಸಿ ಅಲ್ಲಲ್ಲಿ ಪ್ರವಾಹಗಳು ಹರಿಯುತ್ತವೆ. ಮಾರ್ಚ್ ತಿಂಗಳಿಂದ ಮೇ ವರೆಗೆ ಶರತ್ಕಾಲ. ನಂತರ ಚಳಿಗಾಲ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

read more
ಹಿರಿಯರಿಗೂ ಇಂದಿನ ಪೀಳಿಗೆಗೂ ಇರುವ ಅಂತರವನ್ನು ದಾಟುವುದು ಹೇಗೆ?: ಎಲ್.ಜಿ.ಮೀರಾ ಅಂಕಣ

ಹಿರಿಯರಿಗೂ ಇಂದಿನ ಪೀಳಿಗೆಗೂ ಇರುವ ಅಂತರವನ್ನು ದಾಟುವುದು ಹೇಗೆ?: ಎಲ್.ಜಿ.ಮೀರಾ ಅಂಕಣ

ಹಿರಿಯುರ `ರಾತ್ರಿ ಎಷ್ಟು ಹೊತ್ತಾದರೂ ಮಲಗದ, ಬೆಳಿಗ್ಗೆ ಎಷ್ಟು ಹೊತ್ತಾದರೂ ಏಳದ’ ತಮ್ಮ ಸಂತಾನಗಳ ಮನಸ್ಸಿನ ಹಾಗೂ ಬದುಕಿನ ಮರ್ಮವೇನು ಎಂಬುದನ್ನು ಅರಿಯಲು ಮೊದಲು ತಾವೇ ಒಂದು ಹೆಜ್ಜೆ ಮುಂದೆ ಇಡಬೇಕಿದೆ. ಜಗತ್ತೇ ಒಂದು ಹಳ್ಳಿಯಾದ ಅಂತರ್ಜಾಲದ ಯುಗದಲ್ಲಿ, ಹಳ್ಳಿಯೇ ತಮ್ಮ ಜಗತ್ತಾಗಿದ್ದ ಪೀಳಿಗೆಗೆ ಮತ್ತು ಅವರ ಮಕ್ಕಳಿಗೆ ಈ ಹೆಜ್ಜೆಯು ಒಂದು ಸವಾಲು. ಆದರೆ, ವಿಧಿ ಇಲ್ಲ. ತಮ್ಮ ಮಕ್ಕಳು ಮತ್ತು ಮೊಮ್ಮಕ್ಕಳು ತಮ್ಮಿಂದ ಮಾನಸಿಕವಾಗಿ ಹಾಗೂ ಭಾವನಾತ್ಮಕವಾಗಿ ದೂರ ಆಗಬಾರದು ಎಂದರೆ ಅವರ ಬದುಕಿನ ಲಯಗಳನ್ನು ಅರಿಯಲು ಹಿರಿಯ ಪೀಳಿಗೆಯವರು ಪ್ರಯತ್ನ ಮಾಡಲೇಬೇಕು.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣ

read more
ವಿನಾಯಕ‌ ಅರಳಸುರಳಿ ಹೊಸ ಅಂಕಣ “ಆಕಾಶ ಕಿಟಕಿ” ಇಂದಿನಿಂದ ಶುರು

ವಿನಾಯಕ‌ ಅರಳಸುರಳಿ ಹೊಸ ಅಂಕಣ “ಆಕಾಶ ಕಿಟಕಿ” ಇಂದಿನಿಂದ ಶುರು

ಮೊದಲಿನಿಂದ ಖಾಲಿಯೇ ಇರುವ ಕುರ್ಚಿಗಿಂತ ನಡುವೆ ಒಂದಷ್ಟು ಹೊತ್ತು ಯಾರೋ ಕುಳಿತಿದ್ದು ಎದ್ದು ಹೋದ ಆಸನ ಹೆಚ್ಚು ಖಾಲಿಯಾಗಿ ಕಾಣುತ್ತದೆ. ನವ ಮಾಸ ತುಂಬಿದ ಬಳಿಕ ಜೀವದ ಬದಲಿಗೆ ಶೂನ್ಯವನ್ನು ಹಡೆದ ಒಡಲು ಹೊಸದಾದ ಖಾಲಿತನಕ್ಕೀಡಾಗುತ್ತದೆ. ಬಂದೇ ಬರುವನೆಂದು ನಂಬಿದ್ದ ಅತಿಥಿ.. ಬರಲೇ ಬೇಕಿದ್ದ ಅತಿಥಿ.. ಅವನ ಸ್ವಾಗತಕ್ಕೆ ಏನೆಲ್ಲ ತಯಾರಾಗಿತ್ತು! ತಂದಿಟ್ಟುಕೊಂಡ ಮಲ್ಲಿಗೆ ಮೆದುವಿನ ಟೊಪ್ಪಿಯಿತ್ತು. ಮೊಲದ ತುಪ್ಪಳದಂಥಾ ಅಂಗಿಯಿತ್ತು. ಅದರ ಅಂಚಲ್ಲಿ ಕೈಯಲ್ಲೇ ಹೊಲಿದ ಕಸೂತಿಯಿತ್ತು.
ವಿನಾಯಕ‌ ಅರಳಸುರಳಿ ಹೊಸ ಅಂಕಣ “ಆಕಾಶ ಕಿಟಕಿ” ಇಂದಿನಿಂದ, ಮಂಗಳವಾರಗಳಂದು, ಹದಿನೈದು ದಿಗಳಿಗೊಮ್ಮೆ ನಿಮ್ಮ ಕೆಂಡಸಂಪಿಗೆಯಲ್ಲಿ ಪ್ರಕಟವಾಗಲಿದೆ

read more
ಆಸ್ಟ್ರೇಲಿಯಾದ ಆಂಟಿ-ಇಮಿಗ್ರೇಷನ್ ಪ್ರದರ್ಶನ: ಡಾ. ವಿನತೆ ಶರ್ಮ ಅಂಕಣ

ಆಸ್ಟ್ರೇಲಿಯಾದ ಆಂಟಿ-ಇಮಿಗ್ರೇಷನ್ ಪ್ರದರ್ಶನ: ಡಾ. ವಿನತೆ ಶರ್ಮ ಅಂಕಣ

ಹೋದ ಭಾನುವಾರ ಆಸ್ಟ್ರೇಲಿಯಾದ ಎಲ್ಲಾ ರಾಜಧಾನಿ ನಗರಗಳಲ್ಲಿ ಮತ್ತು ಕೆಲ ಮುಖ್ಯ ಪಟ್ಟಣಗಳಲ್ಲಿ ನಡೆದ ವಲಸೆ-ವಿರೋಧ ಪ್ರದರ್ಶನ ಅನೇಕ ಪ್ರಶ್ನೆಗಳನ್ನು ಹೊರಹಾಕಿದೆ. ಆಸ್ಟ್ರೇಲಿಯಾಕ್ಕೆ ಬರುವ ವಲಸೆಗಾರರ ಸಂಖ್ಯೆ ಮಿತಿಮೀರಿದೆಯೆ? ಈ ವಲಸೆಗಾರರಿಂದ ಸ್ಥಳೀಯ ಆಸ್ಟ್ರೇಲಿಯನ್ನರಿಗೆ ಕಷ್ಟವಾಗುತ್ತಿದೆಯೆ? ಮಿತಿಮೀರಿದ ವಲಸೆಗಾರರ ಸಂಖ್ಯೆಯಿಂದ ಹೌಸಿಂಗ್, ಉದ್ಯೋಗದ ಅವಕಾಶ, ಆರೋಗ್ಯ ಮುಂತಾದ ವಿಷಯಗಳಲ್ಲಿ ಸಮಸ್ಯೆ ಉಂಟಾಗಿದೆಯೇ? ಈಗಿರುವ ಲೇಬರ್ ಕೇಂದ್ರ ಸರಕಾರ ಉದ್ದೇಶಪೂರ್ವಕವಾಗಿ ವಲಸೆಯನ್ನು ಹೆಚ್ಚಿಸಿದೆಯೇ?
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

read more
ಬದುಕು ಎಂಬ ಶಿಕ್ಷಕ, ಮನುಷ್ಯ ಎಂಬ ವಿದ್ಯಾರ್ಥಿ: ಎಲ್.ಜಿ.ಮೀರಾ ಅಂಕಣ

ಬದುಕು ಎಂಬ ಶಿಕ್ಷಕ, ಮನುಷ್ಯ ಎಂಬ ವಿದ್ಯಾರ್ಥಿ: ಎಲ್.ಜಿ.ಮೀರಾ ಅಂಕಣ

ಬದುಕಿನ ಅನಿಶ್ಚಿತತೆ, ಮನುಷ್ಯನ ಬದುಕಿನಲ್ಲಿ ವಿಧಿಯು ಆಡುವ ಆಟ, ಎಷ್ಟೇ ಪ್ರಯತ್ನ ಮಾಡಿದರೂ ತನ್ನ ವಿಧಿಯಲ್ಲಿ ಬರೆದ ದುರಂತದಿಂತ ತಪ್ಪಿಸಿಕೊಳ್ಳಲಾಗದ ಮನುಷ್ಯನ ಅಸಹಾಯಕತೆ – ಇವುಗಳನ್ನು ಈ ಮಹಾನ್ ನಾಟಕ ಮನೋಜ್ಞವಾಗಿ ಹೇಳುತ್ತದೆ. ಒಂದು ಸಂದರ್ಭದಲ್ಲಿ `ಅಯ್ಯೋ, ದುರ್ವಿಧಿಯೇ? ನಾಳೆ ಎಂಬುದು ಏನೆಂದು ಗೊತ್ತಿರದ ಮನುಷ್ಯನ ಪಾಡೆ!! ಓಹ್ …. ಅಯ್ಯೋ .., ಸಾಯುವವರೆಗೂ ಯಾರನ್ನೂ ಸುಖಿ ಅನ್ನಬೇಡ’’ ಎಂಬ ಮಾತನ್ನು ನಾಟಕಕಾರ ಸಫೋಕ್ಲಿಸ್ ಒಂದು ಎಚ್ಚರಿಕೆಯೆಂಬಂತೆ, ಒಂದು ಪಾತ್ರದ ಬಾಯಿಂದ ಹೇಳಿಸಿದ್ದಾನೆ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣ

read more

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ