Advertisement

ಅಂಕಣ

ಆಧಿಕ್ಯದ ಸಮಸ್ಯೆ…: ಡಾ. ಎಲ್.ಜಿ.ಮೀರಾ ಅಂಕಣ

ಆಧಿಕ್ಯದ ಸಮಸ್ಯೆ…: ಡಾ. ಎಲ್.ಜಿ.ಮೀರಾ ಅಂಕಣ

ಪುರಂದರ ದಾಸರ ಸಾಲುಗಳು ನೆನಪಾಗುತ್ತವೆ – “ಇಷ್ಟು ದೊರಕಿದರೆ ಅಷ್ಟು ಬೇಕೆಂಬಾಸೆ, ಅಷ್ಟು ದೊರಕಿದರೆ ಮತ್ತಿಷ್ಟರಾಸೆ, ಕಷ್ಟ ಬೇಡೆಂಬಾಸೆ ಕಡುಸುಖವ ಕಾಂಬಾಸೆ, ನಷ್ಟ ಜೀವನದಾಸೆ ಪುರಂದರ ವಿಠಲ”. ಮನುಷ್ಯನಿಗೆ ಸಾಕು ಎನ್ನುವುದು ಎಷ್ಟು ಕಷ್ಟ ಎಂಬ ವಿಷಯವು ನಮಗೆ ಇದರಿಂದ ಗೊತ್ತಾಗುತ್ತದೆ ಅಲ್ಲವೆ? ಎಷ್ಟಿದ್ದರೂ ನಮಗೆ ಇನ್ನೂ ಬೇಕು ಬೇಕು ಬೇಕು ಬೇಕು. ಒಬ್ಬೊಬ್ಬರು ಹೊಂದಿರುವ ಸಾವಿರ ಸೀರೆಗಳು, ಮುನ್ನೂರು ಚಪ್ಪಲಿಗಳು, ಚಿನ್ನದ ಶೌಚಾಲಯ ಘಟಕಗಳು, ನಲವತ್ತೆಂಟು ಕೈಗಡಿಯಾರಗಳು ….
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಹದಿನೆಂಟನೆಯ ಬರಹ

read more
ಶರತ್ಕಾಲದ ರಂಗುರಂಗಿನ ಪ್ರಚಾರ: ಡಾ. ವಿನತೆ ಶರ್ಮ ಅಂಕಣ

ಶರತ್ಕಾಲದ ರಂಗುರಂಗಿನ ಪ್ರಚಾರ: ಡಾ. ವಿನತೆ ಶರ್ಮ ಅಂಕಣ

ಕಾನೂನಿನ ಪ್ರಕಾರ ಗೋಡೆ ಗ್ರಫಿಟಿ ಆರ್ಟ್, ಮಸಿ ಬಳೆಯುವುದು ಇಂಥವುದೆಲ್ಲಾ ಅಪರಾಧಗಳು. ಬಲವಾದ, ಅದರಲ್ಲೂ ಕೇಂದ್ರೀಯ ವಿರೋಧಪಕ್ಷದ ನಾಯಕರಾದ ಪೀಟರ್ ಡಟ್ಟನ್ ಅವರ ಭಿತ್ತಿಚಿತ್ರಕ್ಕೆ ಮಸಿ ಬಳೆದದ್ದನ್ನ ನೋಡಿ ನನಗೆ ಆಶ್ಚರ್ಯವಾಯ್ತು. ಅದ್ಯಾರೊ ಬಹಳ ಧೈರ್ಯವಂತರಿರಬೇಕು ಎಂದುಕೊಂಡೆ. ಇಲ್ಲವೇ, ಡಟ್ಟನ್ ಅವರ ಸ್ವಲ್ಪವೂ ಸತ್ವವಿಲ್ಲದ, ಅಸತ್ಯದ, ಅಸಂಗತ ಮಾತುಗಳು, ಹೇಳಿಕೆಗಳಿಂದ ಬೇಸತ್ತು ಅವರ ಭಿತ್ತಿಚಿತ್ರದ ಮುಖಕ್ಕೆ ಮಸಿಬಳೆಯುವ ಯೋಚನೆ ಬಂದಿರಬೇಕು. ಅವರ ಬಳಿ ಸತ್ವಯುತ, ಅಭಿವೃದ್ಧಿ-ಪರ, ಜನ-ಪರ ಆಶ್ವಾಸನೆಗಳು ಇಲ್ಲದಿರುವುದು ಮಸಿಬಳೆದ ಕಿಡಿಗೇಡಿಗಳಿಗೆ ಅದೆಷ್ಟು ನಿರಾಸೆ ತಂದಿರಬೇಕು ಎಂದೆನಿಸಿತು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

read more
ಮಕ್ಕಳನ್ನು ಬೆಳೆಸುವ `ಕಲೆ’- ಎಂದಾದರೂ ಸಿದ್ಧಿಸೀತೇ?: ಎಲ್.ಜಿ.ಮೀರಾ ಅಂಕಣ

ಮಕ್ಕಳನ್ನು ಬೆಳೆಸುವ `ಕಲೆ’- ಎಂದಾದರೂ ಸಿದ್ಧಿಸೀತೇ?: ಎಲ್.ಜಿ.ಮೀರಾ ಅಂಕಣ

ಬೆಳಿಗ್ಗೆ ಏಳುವ ಸಮಯದಿಂದ ಹಿಡಿದು ರಾತ್ರಿ ಮಲಗುವ ಸಮಯದ ತನಕ ಪ್ರತಿಯೊಂದೂ ಅಂದರೆ ಇಂಚಿಂಚು ಜೀವನವೂ ನಿರ್ಬಂಧಮಯವಾದ ಜೀವನಶೈಲಿ ಇರುವ ಸನ್ನಿವೇಶ ಇದು. ಮಕ್ಕಳನ್ನು ಅದರಲ್ಲೂ ವಿಜ್ಞಾನ ಶಿಕ್ಷಣ ಆರಿಸಿಕೊಂಡವರಿಗೆ ಜಂಗಮವಾಣಿಯನ್ನು ಮುಟ್ಟಲೂ ಬಿಡದ, ಯಾವುದೇ ಸಾಂಸ್ಕೃತಿಕ ಚಟುವಟಿಕೆಗಳಿಗೆ ತೊಡಗಿಸದ ಮನೆಗಳಿವೆ, ವಿದ್ಯಾರ್ಥಿನಿಲಯಗಳಿವೆ! ಈ ವ್ಯವಸ್ಥೆಗೆ ಕೆಲವು ಮಕ್ಕಳು ಹೇಗೋ ಹೊಂದಿಕೊಂಡರೆ ಇನ್ನು ಕೆಲವರು ಆ `ಸೆರೆಮನೆ’ಯಿಂದ ಓಡಿ ಹೋಗಿಬಿಡುವುದು, ಅಥವಾ ದಿಕ್ಕು ಕಾಣದೆ ಆತ್ಮಹತ್ಯೆ ಮಾಡಿಕೊಳ್ಳುವುದು ಇಂತಹ ಅತಿರೇಕದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಹದಿನೇಳನೆಯ ಬರಹ

read more
ಬದುಕಿನ ಪಯಣದಲ್ಲಿ ತಂಗುದಾಣಗಳೂ ಇರಲಿ: ಎಸ್. ನಾಗಶ್ರೀ ಅಜಯ್ ಅಂಕಣ

ಬದುಕಿನ ಪಯಣದಲ್ಲಿ ತಂಗುದಾಣಗಳೂ ಇರಲಿ: ಎಸ್. ನಾಗಶ್ರೀ ಅಜಯ್ ಅಂಕಣ

ನಮಗೇನು ಬೇಕು? ಒಂದು ಒಳ್ಳೆಯ ಬಿಡುವು, ನಮ್ಮದೆನ್ನುವ ಸ್ವಲ್ಪ ಸಮಯ, ಜೀವನಕ್ಕೊಂದು ಗುರಿ, ಹತ್ತಿರದವರ ಮೆಚ್ಚುಗೆ ಮತ್ತು ಅಹಂಕಾರಕ್ಕಿಂತ ವಿನಮ್ರತೆಯಲ್ಲಿ ಸುಖ ಕಾಣುವ ಮನಃಸ್ಥಿತಿ. ಪ್ರತಿದಿನವೂ ಅರ್ಧಗಂಟೆಯಾದರೂ ವ್ಯಾಯಾಮ, ನಡಿಗೆ, ಯೋಗ ಇತ್ಯಾದಿಗೆ ಸಮಯ ಮೀಸಲಿಡುವುದು, ಮರೆತುಹೋದ ಹವ್ಯಾಸಗಳೊಂದಿಗೆ ಮತ್ತೆ ಸಖ್ಯ ಬೆಳೆಸುವುದು, ಹೊಸತನ್ನು ಕಲಿಯುವುದು, ಉದ್ಯೋಗ ಮತ್ತು ವೈಯಕ್ತಿಕ ಬದುಕಿನ ನಡುವೆ ಅಂತರ ಕಾಯ್ದುಕೊಳ್ಳುವುದು ಹಾಗೂ ನಮ್ಮ ಇಂದಿನ ಬದುಕು ಹಲವರ ಕನಸೆಂಬುದನ್ನು ಮನಗಾಣುವುದು ಸಹಾಯ ಮಾಡಬಹುದು.
ಎಸ್. ನಾಗಶ್ರೀ ಅಜಯ್ ಬರೆಯುವ “ಲೋಕ ಏಕಾಂತ” ಅಂಕಣ ಬರಹ ನಿಮ್ಮ ಓದಿಗೆ

read more
ಚುನಾವಣಾ ಕಣಕ್ಕೆ ಪ್ರವೇಶ: ಡಾ. ವಿನತೆ ಶರ್ಮ ಅಂಕಣ

ಚುನಾವಣಾ ಕಣಕ್ಕೆ ಪ್ರವೇಶ: ಡಾ. ವಿನತೆ ಶರ್ಮ ಅಂಕಣ

ಈ ಬಾರಿ ಈ ಡಟ್ಟನ್ ಮಹಾಶಯ ವಲಸಿಗರ ಮನ ಓಲೈಸುವ ಪ್ರಯತ್ನಕ್ಕೆ ಇಳಿದಿದ್ದಾರೆ. ಪ್ರತಿದಿನವೂ ಆಸ್ಟ್ರೇಲಿಯನ್ ನಗರಗಳ ಹೊರವಲಯಗಳಲ್ಲಿ ವಾಸಿಸುತ್ತಿರುವ ವಲಸಿಗ ಸಮುದಾಯಗಳಿಗೆ ಭೇಟಿಕೊಟ್ಟು, ಭರವಸೆಗಳನ್ನು ಕೊಡುತ್ತಿದ್ದಾರೆ. ತಾವು ವಲಸಿಗರ ‘ಆಸ್ಟ್ರೇಲಿಯನ್ ಕನಸು’ ಎಂಬುದಕ್ಕೆ ಬೆಂಬಲ ಕೊಟ್ಟು, ವಲಸಿಗರ ಜೀವನವನ್ನು ಹಸನು ಮಾಡುವ ಮಾತನ್ನು ಆಡುತ್ತಿದ್ದಾರೆ. ವಲಸಿಗರೂ ಅಷ್ಟೇ, ಬಹಳ ಆಸಕ್ತಿಯಿಂದ ಚುನಾವಣಾ ವಿಷಯಗಳಲ್ಲಿ ಭಾಗವಹಿಸುತ್ತಿದ್ದಾರೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

read more
ಸ್ತ್ರೀ ಅಸ್ಮಿತೆಯ ವಿಭಿನ್ನ ನೆಲೆಗಳು: ಡಾ. ಎಲ್.ಜಿ. ಮೀರಾ ಅಂಕಣ

ಸ್ತ್ರೀ ಅಸ್ಮಿತೆಯ ವಿಭಿನ್ನ ನೆಲೆಗಳು: ಡಾ. ಎಲ್.ಜಿ. ಮೀರಾ ಅಂಕಣ

ಸ್ತ್ರೀತ್ವವನ್ನು, ಅದರಿಂದ ಹೊಮ್ಮುವ ಅರಿವನ್ನು ತಾತ್ವಿಕವಾಗಿ ನಿರ್ವಚಿಸುವುದು ಒಂದು ಬಗೆಯಾದರೆ, ಪ್ರಸ್ತುತ ಬದುಕನ್ನು ಕಾಣುವ-ಕಟ್ಟುವ ಕ್ರಮವೊಂದನ್ನು ಅದು ನೀಡುವುದೇ ಎಂದು ಅನ್ವಯಕ್ರಮದಿಂದ ನೋಡುವುದು ಇನ್ನೊಂದು ಬಗೆ. ಜಾಗತೀಕರಣದ ಪ್ರಸ್ತುತ ಸಂದರ್ಭದಲ್ಲಿ ಸ್ತ್ರೀಯ ಅಸ್ಮಿತೆಯು ಎದುರಿಸುತ್ತಿರುವ ಸವಾಲುಗಳನ್ನು ಚೇತನಾ ಗುರುತಿಸಿದ್ದಾರೆ ……. ಮಹಿಳೆಯರು ತಮ್ಮನ್ನು ಸ್ವಯಂ ಸಂಘಟಿಸಿಕೊಳ್ಳಲು ತಮ್ಮ ಅಸ್ಮಿತೆಯ ಮೂಲ ಸ್ವರೂಪ ಹಾಗೂ ಶಕ್ತಿ ಸಾಧ್ಯತೆಗಳನ್ನು ಅರಿಯುವುದು ಮೊದಲ ಹೆಜ್ಜೆ. ಇದು ಸಾಮಾಜಿಕ ಚಲನೆಗೂ ಪ್ರೇರಣೆಯಾಗುವ ಸಂಗತಿ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಹದಿನಾರನೆಯ ಬರಹ

read more
ಆಟ ಕಟ್ಟಲು ಕಣದ ಸಿದ್ಧತೆ: ಡಾ. ವಿನತೆ ಶರ್ಮ ಅಂಕಣ

ಆಟ ಕಟ್ಟಲು ಕಣದ ಸಿದ್ಧತೆ: ಡಾ. ವಿನತೆ ಶರ್ಮ ಅಂಕಣ

ಪಕ್ಕದ ಮನೆಯ ಅಂಗಳದಲ್ಲಿರುವ ನಮ್ಮನೆ ಬೇಲಿಗೆ ಆತುಕೊಂಡಿರುವ ಮುರಯ (Murraya) ಮರ ಮೈತುಂಬಾ ಬಿಳಿ ಹೂ ಧರಿಸಿ ನಗುತ್ತಿದೆ. ಶುಭ್ರ ಬಿಳಿ ಹೂ ರಾಶಿ, ಕಡು ಹಸಿರು ಎಲೆಗಳು ಒಂದಕ್ಕೊಂದು ಅಪ್ಪಿಕೊಂಡು ಆ ಬಿಳಿಹಸಿರು ಚಾದರವನ್ನು ಅಪ್ಪಿಕೊಳ್ಳುವ ಆಸೆಯಾಗುತ್ತದೆ. ಹೂಗಳ ಘಮಘಮದಿಂದ ಮೂಗು ಅರಳುತ್ತದೆ. ಹೂಗೊಂಚಲಿನಲ್ಲಿ ಮೊಗ್ಗುಗಳೆ ಹೆಚ್ಚಿರುವುದಕ್ಕೊ ಏನೋ ಅವಕ್ಕೆ ಇನ್ನೂ ಜೇನ್ನೊಣಗಳ ಆಗಮನವಾಗಿಲ್ಲ. ಜೇನ್ನೊಣಗಳ ದಂಡು ಬಂದಾಗ ಅವುಗಳ ಝೇಂಕಾರದ ನಿನಾದ, ಮುರಯ ಹೂ ಗೊಂಚಲುಗಳ ಅಂದ, ತಂಪೇರಿದ ಸಂಜೆ ಮತ್ತು ತರಿಸುತ್ತದೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ

read more
ಹೆಣ್ಣಿನ ಉಡುಪು ಎಂಬ ಯುದ್ಧಭೂಮಿ: ಡಾ.ಎಲ್.ಜಿ.ಮೀರಾ

ಹೆಣ್ಣಿನ ಉಡುಪು ಎಂಬ ಯುದ್ಧಭೂಮಿ: ಡಾ.ಎಲ್.ಜಿ.ಮೀರಾ

ನಾವು ಹೆಂಗಸರು ಹಲವು ಬಗೆಯಲ್ಲಿ ಸೃಷ್ಟಿಯಾಗಿರುತ್ತೇವೆ, ಅಲ್ಲದೆ ವಯಸ್ಸು, ಕಾಲ, ಸಂದರ್ಭ ಬದಲಾದಂತೆ ನಮ್ಮ ಆಯ್ಕೆಗಳು ಬದಲಾಗುತ್ತಿರುತ್ತವೆ. ನಮ್ಮಲ್ಲಿ ಅಲಂಕಾರದ ಗಾಢ ಅಭಿರುಚಿ ಇರುವವರು ಇದ್ದಂತೆ ಅದರ ಬಗ್ಗೆ ಅಷ್ಟೇನೂ ಆಸಕ್ತಿ ಇಲ್ಲದವರೂ ಇರುತ್ತೇವೆ. ನಮಗೆ ಬೇಸರ ತರಿಸುವ ವಿಷಯ ಏನೆಂದರೆ ನಮ್ಮ ಒಳಗಿನ ಗುಣ, ಜೀವನದೃಷ್ಟಿ, ಚಿಂತನೆ ಇವುಗಳಿಗೆ ಪ್ರಾಮುಖ್ಯ ಕೊಡದೆ ಕೇವಲ ಸೀರೆ, ಒಡವೆ, ಮುಖಬಣ್ಣಗಳಿಂದ ನಮ್ಮನ್ನು ಅಳೆದುಬಿಡುವ ಸಮಾಜದ ಧೋರಣೆ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣ

read more
ಇದ್ದಷ್ಟು ಇರಲಿ…: ಎಸ್ ನಾಗಶ್ರೀ ಅಜಯ್ ಅಂಕಣ

ಇದ್ದಷ್ಟು ಇರಲಿ…: ಎಸ್ ನಾಗಶ್ರೀ ಅಜಯ್ ಅಂಕಣ

ತೀರ ಅತಿಯೆನಿಸುವಷ್ಟು ಅಲ್ಲದಿದ್ದರೂ ನಾವೆಲ್ಲರೂ ಒಂದಿಲ್ಲೊಮ್ಮೆ ಈಗಿರುವುದೇ ಚೆಂದ ಎಂದುಕೊಳ್ಳಲು ಆಸೆಪಟ್ಟವರೇ. ಬಡತನ, ಅನಾರೋಗ್ಯ, ಅಜ್ಞಾನಗಳನ್ನು ರಮ್ಯವಾಗಿ ಚಿತ್ರಿಸುತ್ತಾ ಪರಿಶ್ರಮದಿಂದ ಮೇಲೇರಿದವರ ಸಾಧನೆಯನ್ನು ಕಡೆಗಣಿಸಿ ಮಾತನಾಡುತ್ತಾ ಹುಸಿ ಆನಂದ ಹೊಂದಿದವರೇ. ಬಹಳಷ್ಟು ಸಲ ಎದುರಿನವರ ಮೂಗಿನ ನೇರಕ್ಕೆ ಮಾತನಾಡಿ ‘ಒಳ್ಳೆಯವರಾಗಿ’ ಕಾಣುವ ಆಸೆಯೇ ಡೋಂಗಿಗಳ ಬಡಾಯಿಗೆ ಜೈಹೋ ಎನ್ನುವಂತೆ ಮಾಡಿರುತ್ತದೆ.
ಎಸ್. ನಾಗಶ್ರೀ ಅಜಯ್ ಬರೆಯುವ “ಲೋಕ ಏಕಾಂತ” ಅಂಕಣ ಬರಹ ನಿಮ್ಮ ಓದಿಗೆ

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ