ಭಾರತೀಯ-ಬ್ರಿಟಿಷ್ ಸಂಧಿಯಾದ ಸೆಂಚುರಿ ಕ್ಲಬ್: ವಿನತೆ ಶರ್ಮ ಅಂಕಣ
ನಾನು ಇದನ್ನೆಲ್ಲಾ ಕಲ್ಪಿಸಿಕೊಳ್ಳುತ್ತಾ ನಡೆದಾಡುತ್ತಾ, ಫೋಟೋಗಳನ್ನ ತೆಗೆಯುತ್ತಾ ಇತಿಹಾಸದ ಕಾಲಘಟ್ಟಗಳಲ್ಲಿ ಕಳೆದುಹೋಗಲು ಶತಾಯಗತಾಯ ಪ್ರಯತ್ನ ಮಾಡುತ್ತಿದ್ದೆ. ಅತ್ತ ಕಡೆ ನನ್ನ ಗಂಡ, ‘ನಾವಿಲ್ಲಿ ಕೂತಿದ್ದು, ಅಲ್ಲಿ ಆ ಲಾನ್ನಲ್ಲಿ ಒಂದು ಆನೆ ಕುಟುಂಬ ಓಡಾಡುತ್ತಿದ್ದಾರೆ ಎಷ್ಟು ಚೆನ್ನ, ಅಲ್ವಾ’ ಎಂದರು. ನನ್ನ ಬ್ರಿಟಿಷ್ ಗಂಡನ ಮಾತು ಕೊಲೊನಿಯಲ್ ಟೈಮ್ಸ್ ಕಲ್ಪನೆಗಳಲ್ಲಿ ಮುಳುಗಿದ್ದ ನನ್ನ ಭಾರತೀಯ ಮನಸ್ಸನ್ನು ತಾಕಿತ್ತು. ಆ ಕ್ಷಣದಲ್ಲಿ ಅಲ್ಲೊಂದು ಭಾರತೀಯ-ಬ್ರಿಟಿಷ್ ಸಂಧಿ-ಸಮಾಗಮವಾಗಿತ್ತು. ಖಂಡಿಸಬೇಕೊ, ನಗಬೇಕೊ ತಿಳಿಯದೇ ಕಕ್ಕಾಬಿಕ್ಕಿಯಾಗಿತ್ತು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”
ಅಕ್ಕಮಹಾದೇವಿ ಮತ್ತು ಗೂಗಲ್ ಗುರು: ಎಲ್.ಜಿ.ಮೀರಾ ಅಂಕಣ
ಬದಲಾವಣೆಗಳಾಗುತ್ತಿರುವುದು ಕೇವಲ ಹೆಂಗಸರ ಬದುಕಿನಲ್ಲಲ್ಲ. ಕಳೆದ ಮೂವತ್ತು – ಮೂವತ್ತೈದು ವರ್ಷಗಳಲ್ಲಿ ಬದುಕಿನ ಎಲ್ಲ ಆಯಾಮಗಳಲ್ಲೂ ಪ್ರಾದೇಶಿಕ ಮತ್ತು ಜಾಗತಿಕ ಮಟ್ಟದಲ್ಲಿ ದೊಡ್ಡ ಪ್ರಮಾಣದ ಬದಲಾವಣೆಗಳಾಗಿವೆ. ನಮ್ಮ ಕುಟುಂಬ ವ್ಯವಸ್ಥೆ ಸಹ ಈ ಬದಲಾವಣೆಗಳಿಗೆ ಹೊರತಾಗಿಲ್ಲ. ಹೊಸಹೊಸ ರೀತಿಯ ಆರೋಗ್ಯ ಸಮಸ್ಯೆಗಳು, ಜೀವನಶೈಲಿಯ ಕಾಯಿಲೆಗಳು, ಒಟ್ಟುಕುಟುಂಬಗಳಿರಲಿ, ಬೀಜಕೇಂದ್ರ ಕುಟುಂಬಗಳೇ(ನ್ಯೂಕ್ಲಿಯರ್ ಫ್ಯಾಮಿಲಿ ಎನ್ನುವ ಅರ್ಥದಲ್ಲಿ) ಒಡೆದು ಹೊಸ ರೀತಿಯ ಸಹಜೀವನದ ವ್ಯವಸ್ಥೆಗಳು ಉಗಮವಾಗಿವೆ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಹನ್ನೊಂದನೆಯ ಬರಹ
ಹೊಳೆಯೊಂದು ಹರಿದ್ಹಾಂಗೆ…..: ಸುಧಾ ಆಡುಕಳ ಅಂಕಣ
ತಮ್ಮೂರಿನ ಹೊಳೆಗೂ ಒಂದು ಪುರಾಣವಿರುವುದು ತಿಳಿದು ನೀಲಿಗೆ ಬಹಳ ಖುಶಿಯಾಯಿತು. ಮರುಕ್ಷಣವೇ ಇನ್ನಿಲ್ಲವಾಗುತ್ತಿರುವ ಹೊಳೆಯ ನೆನಪಾಗಿ ವಿಷಾದ ಆವರಿಸಿತು. ಅವಳ ಇತಿಹಾಸದ ಶಿಕ್ಷಕರು ಕಾಣೆಯಾಗಿರುವ ನದಿಗಳ ಬಗೆಗೆ ಎಷ್ಟೊಂದು ವಿಷಯಗಳನ್ನು ಹೇಳಿದ್ದರು. ತಮ್ಮೂರಿನ ಹೊಳೆ ಹೋಗಿ ಸೇರುವ ನದಿಯೆಲ್ಲಿಯಾದರೂ ಕಾಣೆಯಾದರೆ ಅದೊಂದು ವಿದ್ಯಮಾನವಾಗಿ ಉಳಿಯುತ್ತದೆ. ಹೊಳೆ ಕಾಣೆಯಾದರೆ ಹೇಳಹೆಸರಿಲ್ಲದೇ ಮರೆಯಾಗಿಬಿಡುತ್ತದೆ. ಹೀಗೆಲ್ಲ ಯೋಚನೆಗಳು ರಾತ್ರಿಯಿಡೀ ಅವಳನ್ನು ಕಾಡತೊಡಗಿದವು.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣದ ಇಪ್ಪತ್ತೈದನೆಯ ಹಾಗೂ ಕೊನೆಯ ಕಂತು ನಿಮ್ಮ ಓದಿಗೆ
ಆಸ್ಟ್ರೇಲಿಯನ್ ಬನ್ನಿಂಗ್ಸ್ ಸಂಸ್ಕೃತಿ: ವಿನತೆ ಶರ್ಮ ಅಂಕಣ
ರಜೆ ಮುಗಿದು ಕೆಲಸಕ್ಕೆ ವಾಪಸ್ಸಾದ ಸಹೋದ್ಯೋಗಿಗಳನ್ನು ‘ರಜೆಯಲ್ಲಿ ಏನೇನು ಮಾಡಿದಿರಿ’ ಎಂದು ಕೇಳುವುದು ಜನವರಿ ತಿಂಗಳ ಮೊದಲವಾರದ ಅತ್ಯಂತ ಮುಖ್ಯವಾದ ಕೆಲಸ. ಇದನ್ನು ಯಾರೂ ಮರೆಯುವಂತಿಲ್ಲ. ಹಾಗೆ ಕೇಳಿ ಅವರು-ನಾವು ಹೇಳುವ, ಹಂಚಿಕೊಳ್ಳುವ ಕಥೆಗಳು ರೋಚಕವೂ, ರಂಜನೀಯವೂ ಆಗಿರುತ್ತದೆ. ಈ ಬಾರಿ ಯಾತಕ್ಕೋ ಕೆಲವರು ರಜೆಯೆಲ್ಲ ಮನೆ ರಿಪೇರಿ ಕೆಲಸದಲ್ಲೇ ಕಳೆಯಿತು ಎಂದು ಉದ್ಗಾರವೆಳೆದರು. ಸ್ವಂತ ಮನೆಯಿದ್ದರೆ ನಾವು ಮಾಡುವ ರಿಪೇರಿ ಕೆಲಸಗಳಿಗೆ ಕೊನೆ-ಮೊದಲಿರುವುದಿಲ್ಲ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”
ಬನ್ನಿ.. ಸ್ವಯಂಪ್ರಭೆಯರನ್ನು ಸಂಭ್ರಮಾಚರಿಸೋಣ: ಎಲ್.ಜಿ.ಮೀರಾ ಅಂಕಣ
ಸಾಂಪ್ರದಾಯಿಕ ಸಮಾಜದ ಊಹೆಗೆ ನಿಲುಕದ ಇನ್ನೊಂದು ಜಿಗಿತವನ್ನು ನಮ್ಮ ಹೆಣ್ಣುಮಕ್ಕಳು ಈಗ ಮಾಡುತ್ತಿದ್ದಾರೆ. ಅದೇನೆಂದರೆ ಲಿಂಗ ಎಂಬುದು ಕೇವಲ ಗಂಡು-ಹೆಣ್ಣು ಎಂದು ಎರಡು ತುದಿಗಳಲ್ಲ, ಗಂಡಿನೊಳಗೆ ಹೆಣ್ಣು ಮತ್ತು ಹೆಣ್ಣಿನೊಳಗೆ ಗಂಡು ಬೇರೆ ಬೇರೆ ಪ್ರಮಾಣಗಳಲ್ಲಿ ಇರಬಹುದು, ಹೀಗಾಗಿ ಲಿಂಗ ಎಂಬುದು ಶ್ರೇಣಿ ಎಂಬ ಹೊಸ ತಿಳುವಳಿಕೆಯನ್ನು ತಮ್ಮ ನಡೆನುಡಿ, ಇರಿಸರಿಕೆ, ಹೋರಾಟಗಳಿಂದ ತಲುಪಿಸಲು ಪ್ರಯತ್ನಿಸುತ್ತಿದ್ದಾರೆ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಹತ್ತನೆಯ ಬರಹ
ಲೆಕ್ಕಕ್ಕೆ ಸಿಗದ ೨೦೨೪ ಏಳು-ಬೀಳುಗಳು: ವಿನತೆ ಶರ್ಮ ಅಂಕಣ
ಕೂತಿದ್ದ ವಿಮಾನವು ನಿಧಾನವಾಗಿ Aotearoa ಸೌತ್ ಐಲ್ಯಾಂಡ್ ಅಂಚನ್ನು ಸಮೀಪಿಸಿದಾಗ ಎರಡು ಸೀಟ್ ಆಚೆ ಕೂತಿದ್ದ ಹುಡುಗ ‘ಕ್ಯಾನ್ ಯು ಸೀ ದ ಮೌಂಟೆನ್ಸ್?’ ಅಂತ ಕೇಳಿದ. ಕಿಟಕಿಯಿಂದ ಹಿಮಪರ್ವತಗಳನ್ನು ನೋಡುತ್ತಾ ಮೈಮರೆತಿದ್ದ ನನಗೆ ಅವನು ತನ್ನ ಮೊಬೈಲ್ ಫೋನ್ ಕೊಟ್ಟು ‘ಪ್ಲೀಸ್, ವಿಡಿಯೋ ಮಾಡಿ’ ಎಂದಾಗ ಅವನ ಫೋನನ್ನು ಕಿಟಕಿಯ ಮೇಲೆ ಹಿಡಿದು, ನಾನು ಪುನಃ ಪರ್ವತಗಳಲ್ಲಿ ಕಳೆದುಹೋದೆ. ನನ್ನ ಫೋನಿನಲ್ಲಿ ವಿಡಿಯೋ ಹಿಡಿಯುವ ಆಲೋಚನೆ ಕೂಡ ಬರಲಿಲ್ಲ. ಅದನ್ನು ನೆನಪಿಸಿಕೊಂಡರೆ ಯಾಕೋ ಈಗ ನನ್ನಮ್ಮನ ಹಿಮಾಲಯ ಪ್ರವಾಸಗಳ ಡೈರಿ ಜ್ಞಾಪಕಕ್ಕೆ ಬರುತ್ತಿದೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”
ಹಾಡಬೇಕು ನಾವೀಗ ಗೆಳತಿಯರೇ ಸ್ತ್ರೀಸಖ್ಯಗೀತೆಯ..: ಎಲ್.ಜಿ.ಮೀರಾ ಅಂಕಣ
ಹೆಂಗಸರು ಇದೇ ರೀತಿ ತಮ್ಮ ಸಂಜೆಗಳನ್ನು ಕಳೆಯಲು ಸಾಧ್ಯವೇ? ಅಡಿಗೆಮನೆಯ ಜವಾಬ್ದಾರಿ, ಮಕ್ಕಳ ದೇಖರೇಖಿ, ನೆಂಟರಿಷ್ಟರ ಉಪಚಾರ ಮುಂತಾದವುಗಳು ಹೆಣ್ಣಿನ ಸಂಜೆ, ಇಳಿಸಂಜೆಗಳನ್ನು ಕಬಳಿಸುವುದು ವಾಸ್ತವ ಸಂಗತಿ. ಸಂಜೆ ಗಂಡು ಮಾಡುವ `ಚಿಲ್ಲಿಂಗ್’ ಚಟುವಟಿಕೆಗಳನ್ನು ಹೆಣ್ಣು ಮಾಡಿದರೆ ಅವಳನ್ನು ಬೀದಿ ಬಸವಿ, ಬೇಜವಾಬ್ದಾರಿ ಹೆಣ್ಣು, ಚೆಂಗ್ಲು ಹೊಡೆಯುವವಳು ಎಂದೆಲ್ಲ ಅಂದು ಆಡಿ ಕೆಟ್ಟ ಹಣೆಪಟ್ಟಿಗಳನ್ನು ಹಚ್ಚಲಾಗುತ್ತದೆ. ಸನ್ನಿವೇಶ ಹೀಗಿರುವಾಗ, ಹೆಣ್ಣುಗಳು ಸಾಯಂಕಾಲಗಳಲ್ಲಿ ಮನೆಯಿಂದ ಹೊರಗೇ ಬರದಿರುವಾಗ ಅವರ ನಡುವೆ ಸ್ನೇಹ ಸಂಬಂಧಗಳು ಮೂಡುವುದು ಹೇಗೆ?
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣ
ಆ ಹೊಳೆವ ಕಂಗಳು…: ಸುಧಾ ಆಡುಕಳ ಅಂಕಣ
ಅದೇನು ಜಾದೂ ನಡೆಯಿತೋ ತಿಳಿಯದು, ಅಲ್ಲಿಂದ ತಿರುಗಿ ಬಂದ ಮಂಜಿಯ ಅಪ್ಪ ಗಡುಸಾಗಿ ಮಾತನಾಡತೊಡಗಿದ, “ಮಗಳು ನಂದು, ಏನು ಮಾಡಬೇಕಂತ ನಂಗೊತ್ತದೆ. ನೀವು ಇನ್ನೂ ಮೀಸೆ ಸರಿಯಾಗಿ ಬರದಿರೋರೆಲ್ಲ ಕಾನೂನು ಮಾತಾಡೂದು ಬ್ಯಾಡ. ಅವಳ ದೇಹ ಬಿಡುಗಡೆಗೆ ಕಾಯ್ತದೆ. ನಮ್ಮ ಕುಟುಂಬದ ದೆಯ್ಯಗಳು ಅವಳನ್ನು ಕಳಿಸಿಕೊಡು ಅಂತ ಕೂಗ್ತಿವೆ. ನೀವು ಪೋಲೀಸು, ಕಾನೂನು ಅಂತ ವರಾತ ಸುರುಮಾಡಿ ಅವಳ ದೇಹ ಕೊಳೆಯೂ ಹಾಗೆ ಮಾಡಬೇಡಿ.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣದ ಇಪ್ಪತ್ನಾಲ್ಕನೆಯ ಕಂತು ನಿಮ್ಮ ಓದಿಗೆ
ಕೀವೀ-ಕಾಂಗರೂ ದೇಶಸ್ಥರ ನೆಂಟಸ್ತನ: ವಿನತೆ ಶರ್ಮ ಅಂಕಣ
“ಈ ನಾಯಕರ ನಿಲುವು ಏನೆಂದರೆ ತಾವು ಆಸ್ಟ್ರೇಲಿಯಾವನ್ನು ಒಂದು ಆಧುನಿಕ ದೇಶವನ್ನಾಗಿ ಮಾತ್ರ ನೋಡುವುದು. ವಸಾಹತು ಚರಿತ್ರೆಯನ್ನು ಸಮರ್ಥಿಸುವುದಿಲ್ಲ ಮತ್ತು ಬಿಳಿಯರು ಬಂದು ಅಭಿವೃದ್ಧಿಪಡಿಸಿದ್ದರಿಂದ ನಾವು ಈ ಅದೃಷ್ಟದ ನಾಡಿನಲ್ಲಿದ್ದೀವಿ. ಮೂಲಜರಾದ ಅಬೊರಿಜಿನಲ್ ಮತ್ತು ಟೊರ್ರೆ ಸ್ಟ್ರೈಟ್ ದ್ವೀಪವಾಸಿಗಳು ಈ ಆಧುನಿಕ ಆಸ್ಟ್ರೇಲಿಯಾದಲ್ಲಿ ಅದಕ್ಕೆ ಹೊಂದಿಕೊಂಡು ಇರಬೇಕು, ತಮಗೆ ಪ್ರತ್ಯೇಕ ಅಸ್ಮಿತೆ ಬೇಕು ಎಂದು ಕೇಳಬಾರದು. ತನ್ನ ಪಕ್ಷ ಅಧಿಕಾರಕ್ಕೆ ಬಂದರೆ ಈ ರೆಫೆರೆಂಡಮ್ ಮುಂತಾದ ಬೇಡಿಕೆಗಳಿಗೆ ಆಸ್ಪದ ಕೊಡುವುದಿಲ್ಲ, ಎಂದಿದ್ದಾರೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”
						








