ಬಲೂನು ಊದುವ ಮಂಗಳಿ ಮತ್ತು ಹಾಡು ಹೇಳುವ ಮಕ್ಕಳು… : ಶ್ರೀಹರ್ಷ ಸಾಲಿಮಠ ಅಂಕಣ
“ಕೆಲವು ಮನೆಗಳಿಗೆ ಹೋದಾಗ ಜನ ತಮ್ಮ ಮಕ್ಕಳ ಪ್ರತಿಭಾ ಪ್ರದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಂಡು ಬಿಟ್ಟಿರುತ್ತಾರೆ. ಹಾಡಿನದೋ, ನರ್ತನದ್ದೋ, ಓದಿನದ್ದೋ ಅಥವಾ ಚಿತ್ರ ಬರೆಯುವುದೋ.. ಹೀಗೆ ಯಾವುದೋ ಒಂದು. ಅದೇನೂ ಅಂತಹ ಅಪರೂಪದ ಪ್ರತಿಭೆ ಅಂತ ಇರುವುದಿಲ್ಲ. ಸುಮ್ಮನೆ ಬಂದವರಿಗೆ ತೊರಿಸುವುದಕ್ಕೆ “ಡೆಮೋ ಪರ್ಪಸ್” ಒಂದಷ್ಟು ಕಲಿತದ್ದು…”
ಉಡುಗೊರೆ ಸಂಸ್ಕೃತಿಯಲ್ಲಿ ಅಡಗಿರುವ ತಾಯಂದಿರ ದಿನ: ವಿನತೆ ಶರ್ಮಾ ಅಂಕಣ
“ಒಬ್ಬ ಹೆಣ್ಣು ಅಥವಾ ಗಂಡು ತಾನು ತನ್ನದೇ ಸ್ವಂತ ಮಗುವನ್ನು ಹೆತ್ತು ಅಮ್ಮಅಪ್ಪನಾಗುವ ವಿಷಯದಲ್ಲಿ ಅವರಿಗೆ ಆಯ್ಕೆಯಿದೆ. ಅಷ್ಟರಮಟ್ಟಿಗೆ ಮನುಜಕುಲವೆಂದು ಹೇಳಿಕೊಂಡು ಬೇರೆ ಪ್ರಾಣಿಗಳಿಗಿಂತಲೂ ನಾವುಗಳು ಭಿನ್ನವಾಗಿದ್ದರೂ ಕೂಡ, ಪ್ರತಿಯೊಬ್ಬ ಹೆಣ್ಣು ತಾಯಿಯಾಗಲೇಬೇಕು, ಅದರಲ್ಲೇ ಅವಳ ಸಾರ್ಥಕತೆ ಅಡಗಿದೆ ಎನ್ನುವ ಸಾಮಾಜಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ನಿರೀಕ್ಷೆ, ಒತ್ತಡಗಳು..”
ಮಹಾಯುದ್ಧ ಮುಗಿದು ಎಪ್ಪತ್ತೈದು ವರುಷಗಳ ತರುವಾಯ: ಯೋಗೀಂದ್ರ ಮರವಂತೆ ಅಂಕಣ
“ಎಪ್ಪತ್ತೈದು ವರ್ಷಗಳ ಹಿಂದೆ ಲಂಡನ್ನಿನ ಕೇಂದ್ರಭಾಗದ ಕಟ್ಟಡವೊಂದರ ಬಾಲ್ಕನಿಯಲ್ಲಿ ನಿಂತು, ಹಲ್ಲುಗಳ ನಡುವೆ ಸಿಗಾರ್ ಅದುಮಿ ಹಿಡಿದೇ ನಗೆ ಬೀರುತ್ತಾ ಬಲ ಕೈಯನ್ನು ತನಗಿಂತ ಮೇಲೆತ್ತಿ “ವಿಕ್ಟರಿ” ಸಂಕೇತವನ್ನು ಕೆಳಗೆ ನೆರೆದಿದ್ದ ಜನಸಮೂಹದತ್ತ ತೋರಿಸುತ್ತ ಪ್ರಧಾನಿ ಚರ್ಚಿಲ್ ನಿಂತಿದ್ದಾಗ ಕೇಳಿಬಂದ ಚಪ್ಪಾಳೆ ಕೇಕೆಗಳು ಈಗ ಕೇಳಿಸದಾದರೂ, ಮನೆಯಿಂದ ಹೊರಬರಲಾರದ..”
ಕರೆವವೊಲಾಯ್ತು ಮತ್ತ ಕಳಹಂಸರವಂ ಪಡೆಮೆಚ್ಚೆಗಂಡನಂ: ಆರ್. ದಿಲೀಪ್ ಕುಮಾರ್ ಅಂಕಣ
“ಯಮುನಾನದಿಯ ಮೇಲೆ ಹಾದುಬರುತ್ತಿರುವ ಗಾಳಿಯ ವರ್ಣನೆಯಿಂದ ಹಿಡಿದು ಅಲ್ಲಿಗೆ ಎಲ್ಲರೂ ಬಂದು ಜಲಕ್ರೀಡೆ ಆಡುವಾಗಿನ ಸಂದರ್ಭದವರೆಗಿನ ಎಲ್ಲಾ ವರ್ಣನೆಯನ್ನೊಮ್ಮೆ ಗಮನಿಸಿ ಇದೆಲ್ಲವೂ ಅಮೂರ್ತದಿಂದ ಮೂರ್ತಕ್ಕೆ ತರುವ ಬಹುದೊಡ್ಡ ಪ್ರಯತ್ನ. ಕೊನೆಗೆ ಅವನಿಗೇ ವರ್ಣಿಸಲು ಸಾಲದೆ ದೇಸೀ ಮಾರ್ಗ ಅನ್ನುವ ಮಾತನ್ನು ತರುತ್ತಾನೆ…”
ದುರಂತಗಳ ಸುಳಿಗಾಳಿಯಲ್ಲಿ….: ಲಕ್ಷ್ಮಣ ವಿ.ಎ. ಅಂಕಣ
“ಬೆಂಗಳೂರಿನಲ್ಲಿ ಬಿಲ್ಡರುಗಳ ಲಾಬಿಗೆ ಮಣಿದು ತವರಿಗೆ ಮರಳುವ ಆಸೆ ಹೊತ್ತುಬಂದ ವಲಸೆ ಕಾರ್ಮಿಕರ ಕಣ್ಣುಗಳಲ್ಲಿ ಅದೆಂತಹ ಆಸೆಗಳಿದ್ದವು? ತಮ್ಮವರನ್ನು ನೋಡುವ ಕಾತರ ಎಷ್ಟು ಇದ್ದಿರಬೇಕು. ರೈಲು ರದ್ದಾದ ಸುದ್ದಿಯ ಕೇಳಿ ಇವರೇನು ಬೆಚ್ಚಿ ಬಿದ್ದವರಲ್ಲ. ಇದ್ದ ಲಗ್ಗೇಜನ್ನೇ ತುಸು ಕಡಿಮೆಮಾಡಿ ಬಿಹಾರ ಜಾರ್ಖಂಡ ಮಧ್ಯಪ್ರದೇಶ ಓರಿಸ್ಸಾದಿಂದ ಬಂದ ಕೂಲಿಗಳು ಕೆಂಡದ ಟಾರು ರೋಡು ತುಳಿಯುತ್ತ ನಡೆದುಕೊಂಡೇ ಹೋಗುತ್ತಾರೆಂದರೆ..”
ನಿಮ್ಮೊಡನಿದ್ದೂ ನಿಮ್ಮಂತಾಗದೆ…: ಆಶಾ ಜಗದೀಶ್ ಅಂಕಣ
“ಇಂತಹ ಅದ್ಭುತ ಕವನಗಳನ್ನು ನಮಗಾಗಿ, ನಮ್ಮ ಓದಿಗಾಗಿ, ನಮ್ಮ ಹಾದಿಗೆ ಕಂದೀಲಾಗಿ ಉಳಿಸಿಟ್ಟು ಹೋಗಿದ್ದಾರೆ ನಿಸಾರರು. ಯಾಕೆ ಒಬ್ಬ ಕವಿ ನಮಗೆ ಮುಖ್ಯವಾಗುತ್ತಾರೆ? ಮತ್ತೆ ಮುಖ್ಯವಾಗಬೇಕು? ಎನ್ನುವ ಪ್ರಶ್ನೆಗಳಿಗೆ ಇಂತಹ ಬರಹ ಮತ್ತು ಸಂದರ್ಭಗಳು ನಮಗೆ ಉತ್ತರ ಕೊಡುತ್ತವೆ. ಒಬ್ಬ ಕವಿ ನೇರ ಪರಿಚಯವೇ ಇಲ್ಲದ ಅದೆಷ್ಟೋ ಹೃದಯಗಳನ್ನು ತನ್ನ ಅಮೂರ್ತ ಕೈಗಳಿಂದ ಸೋಕಬಲ್ಲ. ತನ್ನ ಅಷ್ಟೂ ಭಾವ ಲೋಕವನ್ನು ಪರಿಚಯಿಸಿ ನಮ್ಮನ್ನು ಹನಿಗಣ್ಣಾಗಿಸಬಲ್ಲ…”
ಸೊಕ್ಕಿನವಳು ಕಲಿಸಿದ ಸಮಾಜವಾದ: ಶ್ರೀಹರ್ಷ ಸಾಲಿಮಠ ಅಂಕಣ
“ಲೋಹಿಯಾ, ತೇಜಸ್ವಿ, ಶಾಂತವೇರಿ, ಲಂಕೇಶ್ ಅವರಂಥ ವ್ಯಕ್ತಿಗಳು ಬರೆದಿಟ್ಟಿದ್ದ ಥಿಯರಿಗಳು ಈ ಸೊಕ್ಕಿನವಳು ಕಲಿಸಿದಷ್ಟು ಮನಕ್ಕೆ ಅಚ್ಚೊತ್ತುವಂತೆ ಕಲಿಸಲಿಲ್ಲ. ಮತ್ತೆ ನನಗೆ ಸಮಾಜವಾದದ ಪ್ರಾಯೋಗಿಕ ಬದುಕು ಅಂತ ಕಂಡುಬಂದದ್ದು ಬೇರೆ ದೇಶಗಳನ್ನು ಸುತ್ತಿದಾಗಲೇ! ಆದರೆ ಅದು ಸಂಪೂರ್ಣ ಸಮಾಜವಾದವಲ್ಲ. ಕ್ಯಾಪಿಟಲಿಸಂ ಜನರು ಉದ್ಯಮಿಗಳ ಮೇಲೆ ಹೆಚ್ಚು ಖರ್ಚು ಮಾಡುವಂತೆ ಮಾಡಲು ತೆರಿಗೆ ದುಡ್ಡನ್ನೇ ಸರಕಾರದ ಮೂಲಕ…”
ಗುಜರಿ ಕಥೆಗಳು: ವಿನತೆ ಶರ್ಮಾ ಅಂಕಣ
“ನಾನು ಪ್ರತಿವಾರವೂ ಹೋಗುವುದು ಮಾರುಕಟ್ಟೆಗೆ ತಂದು ಮಾರುವ ಪ್ರತಿಯೊಂದು ಗಿಡಮರ, ಬಳ್ಳಿ, ಕೊಂಬೆಗಳನ್ನು ನೋಡುವುದಕ್ಕೆ. ಅದರ ಮಧ್ಯದಲ್ಲಿ ಸಮಯವಿದ್ದರೆ, ಚೀಲದಲ್ಲಿ ಇನ್ನೂ ಕ್ಯಾಶ್ ಉಳಿದಿದ್ದರೆ ಈ ಗುಜರಿ ಮಳಿಗೆಯತ್ತ ಕಣ್ಣಾಡಿಸುತ್ತಿದ್ದೆ. ಆಗಾಗ ಬಹು ಚೆಂದದ ಕೆಲ ವಸ್ತುಗಳು ಕಣ್ಣಿಗೆ ಬೀಳುತ್ತಿದ್ದವು. ಅವು ಏನು, ಅವುಗಳ ಹುಟ್ಟಿನ ರಹಸ್ಯವೇನು, ನಿಮಗೆ ಹೇಗೆ ಸಿಕ್ಕಿತು, ಎಂದೆಲ್ಲ ಅವುಗಳನ್ನು ಚೆಂದನೆ ಜೋಡಿಸಿ ಮಾರಲು…”
ಇನ್ನುವೇಂ ಸೈಪೊಳವೆ: ಆರ್. ದಿಲೀಪ್ ಕುಮಾರ್ ಅಂಕಣ
“ಕವಿಯೊಬ್ಬನ ಮನಸ್ಸಿನ ಮೇಲೆ ಬೀರುವ ಹೊರಜಗತ್ತಿನ ಘಟನೆಗಳು ಪ್ರಭಾವವು ಬಹು ಪರಿಣಾಮವನ್ನು ಮನಸ್ಸಿನ ಮೇಲೆ ಬೀರಿಯೇ ಇರುತ್ತದೆ. ಈ ಪ್ರಭಾವದ ಪ್ರೇರಣೆಯಿಂದ ಆದ ಪರಿಣಾಮವು ಬಹು ದಟ್ಟವಾಗಿರುತ್ತದೆ. ಇವು ಪದರ ಪದರಗಳಾಗಿ ಬಿಡಿಸಿಕೊಳ್ಳಲು ಪ್ರಯತ್ನಿಸಿದಷ್ಟು ಅದು ನೆನಪಾಗುತ್ತಲೇ ಇರುತ್ತದೆ. ಇದರಿಂದ ಬಿಡುಗಡೆಗೆ ಮಹಾಮರೆವಿನ ಅಗತ್ಯ ಕವಿಗಿದೆ ಅನಿಸದೆ. “









