ಬಿಡದೆ ಸುರಿವ ಮಳೆ ಮತ್ತು ಐಸ್ ಕ್ಯಾಂಡಿ ತಿಮ್ಮಪ್ಪಣ್ಣ: ಫಾತಿಮಾ ರಲಿಯಾ
“ಬೀದಿ ಬದಿಯ ಕನಸುಗಳನ್ನೂ ಹೆಕ್ಕಲು ಕಲಿಯುತ್ತಿದ್ದ ನಾವು ನಿಜಕ್ಕೂ ಮುಗಿ ಬೀಳುತ್ತಿದ್ದುದು ಅವನು ಮಾರುತ್ತಿದ್ದ ಕ್ಯಾಂಡಿಗೋ ಅಥವಾ ಅವನ ಕಥೆಗಳಿಗೋ ಅನ್ನುವುದೂ ಇವತ್ತಿಗೂ ಅರ್ಥವಾಗುವುದಿಲ್ಲ. ಮಂಗಳೂರಿನ ‘ಐಡಿಯಲ್’ನಲ್ಲಿ ಬೆಲ್ಲ ಕ್ಯಾಂಡಿ ಸಿಗುತ್ತೆ ಅಂತ ಸುದ್ದಿ ಆದಾಗ ತುಂಬ ಆಸೆ ಪಟ್ಟುಕೊಂಡಿದ್ದೆವು. ಎಳೆಯ ಮಗುವೊಂದು ಇದ್ದುದರಲ್ಲಿ ದೊಡ್ಡದನ್ನು ಆರಿಸಿ ತಿನ್ನುವಂತೆ ಅಲ್ಲಿದ್ದ ಅಷ್ಟೂ ಕ್ಯಾಂಡಿಗಳನ್ನು ಪರಿಶೀಲಿಸಿ, ಕೊಂಡು ಬಾಯಿಗಿಡುತ್ತಿದ್ದಂತೆ ಮುಖ ಹುಳ್ಳಹುಳ್ಳಗೆ.”
ಪದಗಳಾಗದ ಅವರ್ಣನೀಯ ಆನಂದ..: ಆಶಾ ಜಗದೀಶ್ ಅಂಕಣ
“ಅಕ್ಬರ್ ಅರಮನೆಗೆ ಮರಳಿ ಹಲವಾರು ದಿನಗಳಾದರೂ ಹರಿದಾಸರು ಅವರ ಸ್ಮೃತಿಯಿಂದ ದೂರವಾಗುವುದೇ ಇಲ್ಲ… ಕೂತರೂ ನಿಂತರೂ ಹರಿದಾಸರೇ… ಒಂದು ದಿನ ಅಕ್ಬರ್ “ತಾನಸೇನ್ ಅಂತಹಾ ಗುರುಗಳಿಂದ ಪಾಠ ಕಲಿತ ನಿಮ್ಮ ಗಾಯನವೇಕೆ ಆ ಮಟ್ಟಕ್ಕಿಲ್ಲ” ಎಂದು ಕೇಳುತ್ತಾರೆ. ಆಗ ತಾನಸೇನ್ ಹೇಳುತ್ತಾರೆ “ಜಹಾಪನಾ ನಾನು ನಿಮ್ಮನ್ನು ಮೆಚ್ಚಿಸಲಿಕ್ಕಾಗಿ ಹಾಡುತ್ತೇನೆ, ಹಾಗಾಗಿ ನನ್ನ ಕಲೆಗಾರಿಕೆ ಆ ದೈವತ್ವಕ್ಕೆ ಏರಲಿಲ್ಲ.”
ಪದ್ದಜ್ಜಿಯ ಕಣ್ಣಲಿ ಕಂಡ ನೆನಪುಗಳ ಜಲಪಾತ: ಪ್ರಸಾದ್ ಶೆಣೈ ಅಂಕಣ
“ಒಳ ಬಾಗಿಲಿಂದ ಇಣುಕಿದ ಪದ್ದಜ್ಜಿ ಈಗ ಹೊರಬಂದಳು. ಬೆನ್ನು ಬಾಗಿದ್ದರೂ, ಕೂದಲೆಲ್ಲಾ ಮುಪ್ಪಾಗಿದ್ದರೂ, ಮೈಯೆಲ್ಲಾ ಸುಕ್ಕುಗಟ್ಟಿದ್ದರೂ ಅವಳ ಕಣ್ಣುಗಳು ಫಳ್ಳನೇ ಹೊಳೆಯುತ್ತಿದ್ದವು. ಆ ಕಣ್ಣ ಬೆಳಕಿನಲ್ಲಿ ತಾನು ಕಂಡ ನೂರಾರು ಮಳೆಗಾಲ, ಹೊಳೆಯುವ ಬಿಸಿಲು, ಧಾರೆಯಾಗುವ ಮಂಜು, ಗುಡುಗು-ಸಿಡಿಲಿನ ಮೊರೆದಾಟಗಳು ಕಾಣಿಸುತ್ತಿತ್ತು. ಅವಳ ಸುಕ್ಕುಗಟ್ಟಿ ಭೂಮಿಗೂರಿದ ಪಾದಕ್ಕೆ ನಡೆದ ದಾರಿಯ ಮಣ್ಣಿನ, ಹುಲ್ಲಿನ, ಜಲಪಾತದ…”
ಭವಿಷ್ಯದಲ್ಲಿ ನಮ್ಮ ಅಡುಗೆ ಸಂಸ್ಕೃತಿ ಹೇಗಿರಬಹುದು?: ಮಧುಸೂದನ್ ಅಂಕಣ
“ಆಗಿನ ದಿನಗಳಲ್ಲಿ ಯಾರಾದರೂ ಬಹಿರಂಗವಾಗಿ ಹೋಟೆಲ್ಲಿನಲ್ಲಿ ಕಾಣಿಸಿಕೊಂಡರೆ ಒಂದೋ ಆತನೇ ಕೆಟ್ಟಿದ್ದಾನೆಂದರ್ಥ. ಅಥವಾ ಅವನ ಹೆಂಡತಿ ಕೆಟ್ಟಿದ್ದಾಳೆಂದರ್ಥ. ಮನೆಯಲ್ಲಿ ಸರಿಯಾಗಿ ಅಡಿಗೆ ಮಾಡಿದ್ದರೆ ಅವನು ಯಾಕೆ ಅಲ್ಲಿಗೆ ಹೋಗುತ್ತಿದ್ದ? ಅವನು ಹಣವನ್ನು ಪೋಲು ಮಾಡಲು ಬಿಟ್ಟು ಇವಳೇನು ಮಾಡುತ್ತಿದ್ದಾಳೆ? ಎಂಬುವಂಥ ಮಾತುಗಳು ಕೇಳಿಬರುತ್ತಿದ್ದವು.”
ಬ್ರಿಸ್ಬನ್ ನಗರದಲ್ಲಿ ಇಂಡಿಯನ್ ಇಂಡಿಪೆಂಡೆನ್ಸ್ ಡೇ ಆಚರಣೆ: ವಿನತೆ ಶರ್ಮ ಅಂಕಣ
“ಏರು ಮಧ್ಯಾಹ್ನದ ಬಿಸಿಲಲ್ಲಿ ಭಾಷಾಧಾರಿತ ಭಾರತ ದೇಶದ ರಾಜ್ಯಗಳನ್ನು ಪ್ರತಿನಿಧಿಸುತ್ತಾ ಸ್ಥಳೀಯ ಸಂಸ್ಥೆಗಳು ಪೆರೇಡ್ ನಡೆಸಿದವು. ಮರಾಠಿ ಸಂಸ್ಥೆಯವರು ಹೆಗಲ ಮೇಲೆ ದೊಡ್ಡದೊಡ್ಡ ಡೋಲುಗಳನ್ನು ಇಳಿಬಿಟ್ಟುಕೊಂಡು ಲಯಬದ್ಧವಾಗಿ ಬಾರಿಸುತ್ತಿದ್ದರು. ಬಿಳಿಯುಡುಪಿಗೆ ಹೊಂದುವಂತೆ ಬಿಳಿಬಣ್ಣದ ಡೋಲುಗಳು, ಬಿಸಿಲಿನ ಝಳವನ್ನು ತಡೆಹಿಡಿಯಲು ಕಣ್ಣಿಗೆ ತಂಪು ಕನ್ನಡಕ.”
ಹಲ್ಲಿ ಮೂತ್ರ ಕೈ ಸುಟ್ಟಿತೇ!: ಮುನವ್ವರ್ ಜೋಗಿಬೆಟ್ಟು ಅಂಕಣ
“ಕ್ರಿಕೆಟ್ ನೋಡಿ ಬರುವ ದಾರಿಯಲ್ಲಿ ಶೇನ್ ವಾರ್ನ್, ಅನಿಲ್ ಕುಂಬ್ಳೆ ಚೆಂಡು ತಿರುಗಿಸುವಂತೆ ಟಾರು ರೋಡು ಸೈಡಿಗೆ ಹಾಕಿದ್ದ ಜಲ್ಲಿ ಕಲ್ಲುಗಳನ್ನು ಸ್ಪಿನ್ ಮಾಡಿ ಎಸೆಯುತ್ತ ಊರವರಿಂದ ರಸ್ತೆಯಲ್ಲಿ ಬರುವ ವಾಹನದವರಿಂದ ಬೈಸಿಕೊಳ್ಳುವುದು ರೂಢಿಯಾಗಿತ್ತು. ಟಾರು ಬದಿಯ ಜಲ್ಲಿ ತೆಗೆದು ತೆಗೆದು ಅದು ಸಾಕಷ್ಟು ಬೇಗನೆ ಗುಳಿ ಬೀಳುವುದಕ್ಕೂ ನಾವು ಪರೋಕ್ಷ ಕಾರಣರಾಗಿ ಬಿಡುತ್ತಿದ್ದೆವು.”
“ಲಂಡನ್ ಡೈರಿ”ಯೊಳಗಿನಿಂದ ವಿಭಜನೆಯ ಕತೆಗಳು: ಯೋಗೀಂದ್ರ ಮರವಂತೆ ಅಂಕಣ
“ದೂರದ ಬ್ರಿಟನ್ನಿನಲ್ಲಿ ಹೀಗೊಂದು ಮೆಲುಕು ನಡೆದ ಹೊತ್ತಲ್ಲೇ ದೀರ್ಘ ಹೋರಾಟ ತ್ಯಾಗ ಬಲಿದಾನಗಳ ಫಲಶ್ರುತಿಯಾಗಿ ದೊರೆತ ಸ್ವಾತಂತ್ರ್ಯದ ಎಪ್ಪತ್ತೆರಡನೆಯ ಆಚರಣೆ ಭಾರತ ಪಾಕಿಸ್ತಾನಗಳಲ್ಲಿ ನಡೆದು ಹೋಗಿದೆ. ಸಂಭ್ರಮ ಸಡಗರ ಪತಾಕೆ, ಪಟಾಕಿ, ಭಾಷಣ, ಸಿಹಿ, ಕರತಾಡನ ಸೀಮೆಯ ಎರಡೂ ಕಡೆಗಳಲ್ಲಿ. ಈ ಎಲ್ಲ ಆಗುಹೋಗುಗಳ ಪ್ರಧಾನ ಪಾತ್ರಧಾರಿಯಾಗಿದ್ದ…”
ಕಡಲಿಗೆ ಬಂತು ಶ್ರಾವಣಾ ಕುಣಿದ್ಹಾಂಗ ರಾವಣಾ!: ಡಾ.ಲಕ್ಷ್ಮಣ ವಿ.ಎ. ಅಂಕಣ
“ಇದೆಲ್ಲ ಇವತ್ತು ಯಾಕೆ ನೆನಪಾಯಿತೆಂದರೆ ಹೀಗೆ ಕಲಿತು ಬೆರೆತು ಆಟವಾಡಿದ ನಮ್ಮ ಬಯಲು ಸೀಮೆಯ ಶಾಲೆಗಳೆಲ್ಲ ಇಂದು ಸ್ವಾತಂತ್ರ್ಯ ದಿನ ಬರುವ ಹೊತ್ತಿಗೆ ಸರಿಯಾಗಿ ನೆರೆ ನೀರು ತುಂಬಿ, ಮುಳುಗಿ, ಶಾಲೆಯ ಮುಂದಿನ ಧ್ವಜದ ಕಂಬವೂ ಮುಳುಗಿ, ಕಡಲಿಗೆ ಬಂದ ಶ್ರಾವಣ ಶಾಲೆಯ ಅಂಗಳಕ್ಕೂ ಬಂದು ರಾವಣನಂತೆ ಕುಣಿದಿದ್ದಾನೆ. ಪುಟ್ಟ ತನ್ನ ಪಾಟಿ, ಪೆನ್ಸಿಲು, ತನ್ನ ಪ್ರೀತಿಯ ಹಸು ಕರು ಅಂಗಳಕ್ಕೇ ಬಿಟ್ಟು..”
ನಾದಾನುಸಂಧಾನ…: ಆಶಾ ಜಗದೀಶ್ ಅಂಕಣ
“ಸಂಗೀತ ಗಂಧರ್ವ ಲೋಕದ ಕೊಡುಗೆಯಿರಬೇಕು. ಯಾರದೇ ಮನಸು ಎಷ್ಟೇ ದುಃಖದಲ್ಲಿರಲಿ ಎಂಥದೇ ನೋವಿರಲಿ ಅದನ್ನು ಮಾಯಿಸುವ ಶಕ್ತಿ ಸಂಗೀತಕ್ಕಿದೆ. ಹಾಡುತ್ತಾ ಕುಳಿತರೆ ಪ್ರಪಂಚವೇ ಮರೆತು ಹೋಗುತ್ತದೆ. ಒಂದೊಂದು ರಾಗವೂ ವಿಶಿಷ್ಟ. ಕೆಲ ರಾಗಗಳಿಗೆ ರೋಗಗಳನ್ನು ವಾಸಿಮಾಡುವ ಚಿಕಿತ್ಸಕ ಶಕ್ತಿಯೂ ಇದೆ. ನನ್ನಿಷ್ಟದ ಬಹಳ ಚಂದದ ರಾಗಗಳ ದೊಡ್ಡದೊಂದು ಪಟ್ಟಿಯೇ ಇದೆ.”









