Advertisement
ಚೈತ್ರಾ ಶಿವಯೋಗಿಮಠ

ಚೈತ್ರಾ ಶಿವಯೋಗಿಮಠ ಮೂಲತಃ ವಿಜಯಪುರದವರು. ಪ್ರಸ್ತುತ ಬೆಂಗಳೂರಿನ ನಿವಾಸಿ. ವೃತ್ತಿಯಲ್ಲಿ ಸಾಫ್ಟವೇರ್ ಇಂಜಿನಿಯರ್ ಆಗಿರುವ ಇವರಿಗೆ ಓದು, ಬರಹ, ಕಾವ್ಯ ಅಚ್ಚುಮೆಚ್ಚು. ಇವರ ಮೊದಲ ಪ್ರಕಟಿತ ಕವನ ಸಂಕಲನ "ಪೆಟ್ರಿಕೋರ್"(ಪ್ರಾರ್ಥನಾ ಕಾವ್ಯ ಪುರಸ್ಕಾರ, ಅಮ್ಮ ಪ್ರಶಸ್ತಿ ಸಂದಿದೆ). ಹಲವಾರು ಪತ್ರಿಕೆಗಳಲ್ಲಿ ಇವರ ಕವನಗಳು/ ಬರಹಗಳು ಪ್ರಕಟವಾಗಿವೆ.

ಪೇರಳೆಯ ಸಿಹಿ ಕೊಡುವ ಕಾಡಿನೊಡಲ ಜೀವ

ಈ ಮಾಯಾಲೋಕವೇ ತನ್ನ ನೂರಾರು ಕನಸುಗಳನ್ನೇ ನನಸಿನ ತಟ್ಟೆಯಲ್ಲಿಟ್ಟು ತಿನ್ನಿಸುವ ಮೃಷ್ಟಾನ್ನವಾಗಿತ್ತು ಚಂದ್ರಮ್ಮನಿಗೆ. ಆದರೆ 2005 ರಲ್ಲಿ ನೂರಾರು ಜೀವಗಳಿಗೆ ಉಸಿರು ಕೊಡುತ್ತಿದ್ದ ಕಂಪೆನಿಯ ಉಸಿರೇ ನಿಂತು ಹೋದಾಗ ಚಂದ್ರಮ್ಮನ ಕುಟುಂಬ ತತ್ತರಿಸಿತು. ತನ್ನೊಳಗೆ ಇಳಿದುಹೋದ, ತನ್ನದೇ ಹುಟ್ಟು ಮಗು ಎನ್ನುವ ಪ್ರಾಮಾಣಿಕತೆಯಲ್ಲೇ, ಪ್ರೀತಿಯಿಂದಲೇ ಪೊರೆದ ಕಂಪೆನಿ ಕಣ್ಣು ಮುಚ್ಚಿದಾಗ ಅರೆಕ್ಷಣ ಮುಂದೇನು ಮಾಡೋದು? ಅನ್ನೋ ಚಿಂತೆ ಚಂದ್ರಮ್ಮನನ್ನು ಆವರಿಸಿತಾದರೂ ಅದಾಗಲೇ ಕುದುರೆಮುಖ ಅವಳನ್ನು ಪೊರೆದಿತ್ತು.

Read More

ಕಣ್ಣೆದುರು ಸಾಯುತ್ತಿರುವ ದೇವರುಗಳು

ಮೊನ್ನೆ ಮೊನ್ನೆಯಷ್ಟೇ ದಷ್ಟ ಪುಷ್ಟವಾದ ರೆಂಬೆ ಕೊಂಬೆಗಳನ್ನು ಅಗಲಿಸಿ ಸಾವಿರಾರು ಹಕ್ಕಿಗಳ ಹಕ್ಕಿನ ಮನೆಯಾಗಿದ್ದ ಆಲದ ಮರ, ಹುಣಸೆ ಮರ, ಹೊಸದಾಗಿ ನಿರ್ಮಾಣವಾದ ದೇಗುಲದ ಕಾಲಬುಡದಲ್ಲಿ ದಿಕ್ಕಾಪಾಲಾಗಿ ಬಿದ್ದಿರುವುದನ್ನು ನೋಡಿದರೆ ಕಣ್ಣು ತುಂಬಿ ಬರುತ್ತದೆ. ನಿಜವಾದ ದೇವರು ಹೀಗೆ ಅನಾಥವಾಗಿ ಬಿದ್ದಿರುವುದನ್ನು, ಆ ದೇವರು ಅಳುತ್ತಿರುವುದನ್ನು…”

Read More

ದೂರ ಅನ್ನುವ ಹತ್ತಿರ ಭಾವವಿದು…

ದೂರ ಎನ್ನುವ ಪದ ಕೆಲವರಿಗೆ ತುಂಬಾ ದೂರ, ಕೆಲವರ ಹೃದಯಕ್ಕೆ ತೀರಾ ಹತ್ತಿರ. ‘ದೂರ’ ಪದ ಕೇಳಿದಾಗಲೆಲ್ಲ ನಿಮಗೆ ಯಾವ ಭಾವ ಮೂಡುತ್ತದೋ ನಂಗೆ ಗೊತ್ತಿಲ್ಲ. ಆದರೆ ದೂರ ಎನ್ನುವುದು ನಿಮಗೆ ಹತ್ತಿರದಲ್ಲಿ ಕಾಣಿಸದಿದ್ದದ್ದನ್ನು ಕಾಣಿಸುವ ಬೈನಾಕ್ಯುಲರ್‌ನಂತೆ. ಹತ್ತಿರ ಇರುವಾಗ ಕಾಣಿಸದ್ದು ದೂರದಲ್ಲಿ ಬೇರೊಂದು ರೀತಿಯಲ್ಲೇ ಕಾಣಿಸುತ್ತದೆ. ನಂಗ್ಯಾಕೋ ದೂರ ಅನ್ನುವ ಪದ ತೀರಾ ಕಾಡುತ್ತಿರುವುದು ಆ ಒಂದು ಪದ ನನ್ನಲ್ಲಿ ಕುತೂಹಲ…”

Read More

ಲಾಕ್ ಡೌನ್ ನಿಂದ ತುಂಬಿಕೊಂಡ ಗಂಧ: ಪ್ರಸಾದ್ ಶೆಣೈ ಅಂಕಣ

“ಕೊರೋನಾ ಬಂದ ಈ ದುರಿತ ಕಾಲದಲ್ಲೇ ಆಳುವವರು ಬುದ್ದಿ ಕಲಿಯದೇ ನಮ್ಮ ಕಾಡು, ಬೆಟ್ಟ, ನದಿಗಳನ್ನು ನಮ್ಮಿಂದ ಕಸಿಯುವ ಅಂಕೋಲ-ಹುಬ್ಬಳಿ ರೈಲ್ವೇ ಯೋಜನೆಗೆ ಅನುಮತಿ ಕೊಟ್ಟಿದ್ದಾರೆ. ಭದ್ರಾ ನದಿಗೂ ಕಂಟಕ ತರುವ ಯೋಜನೆಯೂ ನಡೆಯುತ್ತಿದೆ. ನಮ್ಮ ಪರಿಸರವನ್ನು ಕಸಿದರೆ ಭವಿಷ್ಯದಲ್ಲಿ ಕೊರೋನಾಕ್ಕಿಂತಲೂ ಭೀಕರ ಸ್ಥಿತಿ ನಿರ್ಮಾಣವಾಗಬಹುದು. ಭೂಕುಸಿತ, ಪ್ರವಾಹಕ್ಕೆ ನಾವೇ ಕಂಬಳಿಹಾಸು ಹಾಸಿದಂತಾಗಬಹುದು…”

Read More

ಪದ್ದಜ್ಜಿಯ ಕಣ್ಣಲಿ ಕಂಡ ನೆನಪುಗಳ ಜಲಪಾತ: ಪ್ರಸಾದ್ ಶೆಣೈ ಅಂಕಣ

“ಒಳ ಬಾಗಿಲಿಂದ ಇಣುಕಿದ ಪದ್ದಜ್ಜಿ ಈಗ ಹೊರಬಂದಳು. ಬೆನ್ನು ಬಾಗಿದ್ದರೂ, ಕೂದಲೆಲ್ಲಾ ಮುಪ್ಪಾಗಿದ್ದರೂ, ಮೈಯೆಲ್ಲಾ ಸುಕ್ಕುಗಟ್ಟಿದ್ದರೂ ಅವಳ ಕಣ್ಣುಗಳು ಫಳ್ಳನೇ ಹೊಳೆಯುತ್ತಿದ್ದವು. ಆ ಕಣ್ಣ ಬೆಳಕಿನಲ್ಲಿ ತಾನು ಕಂಡ ನೂರಾರು ಮಳೆಗಾಲ, ಹೊಳೆಯುವ ಬಿಸಿಲು, ಧಾರೆಯಾಗುವ ಮಂಜು, ಗುಡುಗು-ಸಿಡಿಲಿನ ಮೊರೆದಾಟಗಳು ಕಾಣಿಸುತ್ತಿತ್ತು. ಅವಳ ಸುಕ್ಕುಗಟ್ಟಿ ಭೂಮಿಗೂರಿದ ಪಾದಕ್ಕೆ ನಡೆದ ದಾರಿಯ ಮಣ್ಣಿನ, ಹುಲ್ಲಿನ, ಜಲಪಾತದ…”

Read More

ಜನಮತ

ಕಾಲಗಳಲ್ಲಿ ನನಗೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಹಳ್ಳಿಗಾಡಿನ ಹೊಸ ಕತೆಗಳು: ಸಂಗೀತ ರವಿರಾಜ್ ಬರಹ

ಇಲ್ಲಿರುವ ನಾಲ್ಕು ಕಥೆಗಳು ಕಟ್ಟುಕಥೆಗಳೆಂದು ನಮಗನಿಸುವುದೇ ಇಲ್ಲ. ಗ್ರಾಮ ಜೀವನವೇ ಹೀಗೆ.... ನೀರಿಗೆಂದು ಮೈಲುದೂರ ಕೊಡಪಾನ ಹಿಡಿದು ಸಾಗಿ ಮನೆಗೆ ನೀರು ತುಂಬಬೇಕು. ಮತ್ತೆ ಮನೆಯಿಂದ ಚೆಂಬು…

Read More

ಬರಹ ಭಂಡಾರ