ಶಾಂತಿ ಮರದ ಬಳಿ ಜಂಗಮ ಮುಳ್ಳು ಪೊದೆ: ಮುನವ್ವರ್ ಜೋಗಿಬೆಟ್ಟು ಅಂಕಣ
“ನಾನು ಅಗರಿನ ಕಡೆಗೆ ತಿರುಗಿದ್ದೆ. ಇನ್ನೇನು ಹೆಜ್ಜೆ ಇಡಬೇಕೆನ್ನುವಷ್ಟರಲ್ಲಿ ಎದುರಿಗೆ ಚಲಿಸುವ ಮುಳ್ಳು ಪೊದೆ. ಹೆದರಿ ನಾನು ಹಿಂದೆ ಹೆಜ್ಜೆ ಇಡುವ ತುರಾತುರಿಯಲ್ಲಿ ಒಣ ಕಟ್ಟಿಗೆ ತುಂಡೊಂದು ಕಾಲಿಗೆ ಸಿಕ್ಕಿ ಲಟ್ಟೆಂದು ಮುರಿಯಿತು. ಸದ್ದು ಕೇಳಿದೊಡನೆ ಆ ಮುಳ್ಳು ಪೊದೆಯತ್ತ ಓಡುತ್ತಾ ಕಾಡಿನೊಳಗೆ ಅಂತರ್ಧಾನವಾಯಿತು. ಸುಮಾರು ಹೊತ್ತು ಹಾಗೆಯೇ ಕಲ್ಲಾಗಿ ನಿಂತೆ. ಮುಂದೆ ಹೋಗಲೂ ಹೆದರಿಕೆ…”
ಶರತ್ಕಾಲದ ಇಂಗ್ಲಿಷ್ ದಸರಾ: ಯೋಗೀಂದ್ರ ಮರವಂತೆ ಅಂಕಣ
“ನವರಾತ್ರಿ ಆರಂಭ ಆದಾಗಿನಿಂದಲೂ ಭಾರತೀಯ ಜನರ ಅಸ್ತಿತ್ವ ಇರುವ ಇಲ್ಲಿನ ಊರುಗಳೆಲ್ಲೆಲ್ಲ ದೇವಿಯರಿಗೆ ಹೂವು ಹಾರ ಅಲಂಕಾರ ಆರತಿಯ ಅರ್ಚನೆ ಆಗುತ್ತಿದೆ. ಬಣ್ಣ ಬಣ್ಣದ ಉಡುಗೆ ಉಟ್ಟ, ಆಕರ್ಷಕ ಸಿಂಗಾರ ಮಾಡಿಸಿಕೊಂಡ ದುರ್ಗೆ, ಶಾರದೆ, ಲಕ್ಷ್ಮಿ, ಸರಸ್ವತಿಯರು ಬ್ರಿಟನ್ನಿನ ಊರೂರುಗಳಲ್ಲಿ ಪೂಜೆ ಸ್ವೀಕರಿಸುತ್ತಿದ್ದಾರೆ. ಬ್ರಿಟನ್ನಿನ ಪ್ರತಿ ಪಟ್ಟಣದಲ್ಲೂ ಭಾರತೀಯರಿದ್ದಾರೆ ಮತ್ತು ಅಲ್ಲೆಲ್ಲ ದಸರಾದ ಸಂಭ್ರಮ ಕಂಡಿದೆ.”
ಯುವ ವಿಜ್ಞಾನಿಗಳ ಕತೆಗಳು: ಡಾ.ಲಕ್ಷ್ಮಣ ವಿ.ಎ ಅಂಕಣ
“ಆ ವರ್ಷ ತಡವಾಗಿ ಬಂದ ಮಳೆ, ತದನಂತರದ ಬಂದ ನೆರೆ ಈ ಮಲವಾಯಿ ಎಂಬ ನತದೃಷ್ಟ ಊರನ್ನು ಅಕ್ಷರಶಃ ಬೆಂಕಿಯಲ್ಲಿ ಬೇಯಿಸುತ್ತದೆ. ಒಂದು ಹಿಡಿ ಕಾಳಿಗಾಗಿ ಕೊಲೆಗಳಾಗುತ್ತಿವೆ. ಕಣ್ಣೀರ ಬಾವಿಗಳೂ ಬತ್ತಿ ಹೋಗಿವೆ. ಬಾವಿಯ ಅಳಿದುಳಿದ ನೀರು ಎಳೆಯಲು ದೇಹದಲ್ಲಿ ಕಸುವಿಲ್ಲ. ಆದರೆ ವಿಲಿಯಮ್ ಸುಮ್ಮನಿರಬೇಕಲ್ಲ. ತಾನು ಶಾಲೆಯಲ್ಲಿ ಕಲಿತ ಅಲ್ಪ ಸ್ವಲ್ಪ ಜ್ಞಾನದಲ್ಲೇ ಒಂದು ವಿಂಡ್ ಮಿಲ್ ತಯಾರಿಸಿ ಅದರಿಂದ ಉತ್ಪನ್ನವಾದ ವಿದ್ಯುತ್ ಬಳಸಿ…”
ಹೆಣ್ಮನಗಳ ಕಾವ್ಯದ ಜಾಡು ಹಿಡಿದು: ಆಶಾ ಜಗದೀಶ್ ಅಂಕಣ
“ಹೆಣ್ಣು ತನ್ನ ಸಂಪರ್ಕಕ್ಕೆ ಬರುವ ಎಲ್ಲರನ್ನೂ ತೆಕ್ಕೆಗೆಳೆದುಕೊಳ್ಳುತ್ತಾಳೆ. ಸೂಕ್ಷ್ಮವಾಗಿ ಅರ್ಥೈಸಿಕೊಳ್ಳುತ್ತಾಳೆ ಎನ್ನುವುದಕ್ಕೆ ನಿದರ್ಶನ. ಆ ಅವನ ಕೋಪವನ್ನು ಅವ ಹೇಳದೆಯೇ ಅವಳು ಗ್ರಹಿಸುತ್ತಾಳೆ. ಮೊದಲಿಗೆ ಹೆಣ್ಣೊಬ್ಬಳು ಗಂಡನ್ನು ಬಯಸುವುದು ಒಂದು ರೀತಿ ಬಂಡಾಯದ ದನಿ ಎನಿಸುತ್ತದೆಯಾದರೂ ಪದ್ಯ ಮಧ್ಯಭಾಗದಿಂದ ಬೇರೊಂದು ಮಜಲಿಗೆ ಹೊರಳಿಕೊಳ್ಳುತ್ತದೆ. ಗಂಡನ್ನು ವರ್ಣಿಸುತ್ತಾ ಸಾಗುವ ಕವಿತೆ, ಅದನ್ನು ಲೋಕ ಗ್ರಹಿಸುವ ರೀತಿಯನ್ನು ವಿಡಂಬನೆ ಮಾಡುತ್ತದೆ.”
ವ್ಯವಸ್ಥೆಯನ್ನೊಮ್ಮೆ ರೀಬೂಟ್ ಮಾಡಬಹುದೆ?: ಮಧುಸೂದನ್ ವೈ.ಎನ್ ಅಂಕಣ
“ಒಂದು ಮೊಬೈಲೋ ಲ್ಯಾಪ್ ಟಾಪೋ ಆದರೆ ರೀಬೂಟ್ ಮಾಡಿ ಸರಿಮಾಡಿಕೊಳ್ಳುವುದು ಸುಲಭ. ಅದೇ ಒಂದು ಸೈನ್ಯದ, ಸ್ಪೇಸ್ ಸ್ಟೇಷನ್ನಿನ, ಅಥವಾ ಪೇಮೆಂಟ್ ಕಂಪನಿಯ ಸಿಸ್ಟಂಗಳನ್ನು ರೀಬೂಟ್ ಮಾಡಬೇಕೆಂದರೆ ತೆರಬೇಕಾದ ಬೆಲೆ ದುಬಾರಿ! ಆ ಕ್ಷಣವನ್ನೆ ಹೊಂಚು ಹಾಕಿ ವೈರಿ ಕ್ಷಿಪಣಿ ಹಾರಿಸಬಹುದು, ಬಹುಮುಖ್ಯ ಆಸ್ಟರಾಯ್ಡ್ ಕಣ್ತಪ್ಪಿಸಿಕೊಳ್ಳಬಹುದು…”
ರಾಣಿರಾಜ್ಯದಲ್ಲಿ ಬೆಂಕಿ ವಿಕೋಪ, ಪ್ರವಾಹ ತಾಪ: ವಿನತೆ ಶರ್ಮ ಅಂಕಣ
“ಬೆಂಕಿ ಬಂದಾಗ ಮನೆ ತೊರೆಯುವುದಿಲ್ಲ, ಸತ್ತರೆ ಇಲ್ಲೇ ಎನ್ನುತ್ತಾ ಹಠಹಿಡಿದು ಕುರ್ಚಿ ಹಾಕಿಕೊಂಡು ಮನೆಮುಂದೆ ಕುಳಿತು ಬೆಂದುಹೋದ ಪತ್ನಿಯ ಬಗ್ಗೆ ರೋಧಿಸುತ್ತಿದ್ದ ವೃದ್ಧ, ತನ್ನ ಪುಟ್ಟ ನಾಯಿಯನ್ನ ಕಳೆದುಕೊಂಡ ಬಾಲಕಿಯ ಆಕ್ರಂದನ, ಮನೆ, ಆಸ್ತಿಪಾಸ್ತಿ, ಕುದುರೆಗಳನ್ನು ಕಳೆದುಕೊಂಡ ನಿರ್ಗತಿಕರಾದ ಆರು ಜನರಿದ್ದ ಕುಟುಂಬ, ಪ್ರವಾಹ ಬಂದಾಗ ತನ್ನ ಕಾರಿನ ಮೇಲೇರಿ ನಿಂತು ಫೋಟೋ ಹಿಡಿಯುತ್ತಾ ರೋಮಾಂಚಿತನಾದ ಯುವಕ, ಬೇರೆ ದೇಶದಿಂದ ಬಂದು ಇಲ್ಲಿ ಬದುಕುತ್ತಾ ಬಾಳುತ್ತಿದ್ದರೂ ಕೂಡ ನೆರೆ ಬಂದಾಗ ಸಹಾಯ ಮಾಡದೆ….”
ತೊರೆದು ಜೀವಿಸಬಹುದೇ ನಿಮ್ಮ ಚರಣಗಳ: ಕೃಷ್ಣ ದೇವಾಂಗಮಠ ಅಂಕಣ
“ದೇಹವೇ ಮಣ್ಣು ಹಾಗಾಗಿಯೇ ಮಣ್ಣಿಂದ ಕಾಯ ಮಣ್ಣಿಂದ ಅಂತ ದಾಸರು ಹಾಡಿದ್ದು. ಅಕ್ಕಿ ಬೆಂದು ಹೇಗೆ ತನ್ನ ರೂಪ ಬದಲಿಸುತ್ತದೋ ಹಾಗೆಯೇ ಅನ್ನ ದೇಹವಾಗಿ ಮಾರ್ಪಾಡಾಗುತ್ತದೆ ಅದೇ ಪೃಥ್ವೀ ತತ್ವ. ಇನ್ನು ನಮ್ಮೊಳಗಿರುವ ನೀರು, ಹೊರಬರುವ ಮೂತ್ರ, ವೀರ್ಯ ಎಲ್ಲವೂ ಜಲ ಸ್ವರೂಪವೇ ಆಗಿದ್ದು ಅದನ್ನೇ ಜಲತತ್ವ ಅಂತಾರೆ. ಅಗ್ನಿಯಿಲ್ಲದೆ ನಾವು ತಿಂದ ಅನ್ನ ಹೊಟ್ಟೆಯಲ್ಲಿ ಅರಗುವುದಿಲ್ಲ. ನಮ್ಮೊಳಗಿನ ಜಠರಾಗ್ನಿಯೇ ತಿಂದದ್ದನ್ನು ಕರಗಿಸುವುದು. ಅದೇ ಅಗ್ನಿ ತತ್ವ. “
ಭೂತದ ತೋಟದಲ್ಲಿ ಬಾಯಿಬಡುಕ ಹಕ್ಕಿ: ಮುನವ್ವರ್ ಜೋಗಿಬೆಟ್ಟು ಕಥನ
“ಅವುಗಳ ತಹತಹಿಕೆ ನೋಡುವಾಗಲೇ ಅಲ್ಲೆಲ್ಲೋ ಗೂಡಿರುವ ಸಂಶಯ ಇನ್ನಷ್ಟು ದಟ್ಟವಾಯಿತು. ಮುಳ್ಳುಗಳೇ ತುಂಬಿ ಹೋಗಿದ್ದ ಆ ಪೊದೆಯಲ್ಲಿ ಗೂಡು ಹುಡುಕುವುದು ಸುಲಭವಿರಲಿಲ್ಲ. ಅಷ್ಟರಲ್ಲೇ ತಾಯಿ ಹಕ್ಕಿಯೊಂದು ಮುಳ್ಳುಗಳೆಡೆಯಿಂದ ಹೊರಬಂತು. ಸಣ್ಣ ರೆಂಬೆಯೊಂದು ಕವಲೊಡೆಯುವ ಮಧ್ಯಕ್ಕೆ ಆಧಾರವಾಗಿ ಕಟ್ಟಿದ ಗೂಡೊಂದು ಕಂಡಿತು. ಅದಾಗಲೇ ಸಣ್ಣ ಕಡಲೆಯಾಕೃತಿಯ ಸಣ್ಣ ಮೊಟ್ಟೆಗಳಿದ್ದವು.”
ಸುಳಿಗಾಳಿಯಂತಿದ್ದ ಸುಧೀರನ ನೆನಪುಗಳು: ಯೋಗೀಂದ್ರ ಮರವಂತೆ ಅಂಕಣ
“ಕೈಯಲ್ಲಿ ಯಾವ ಆಟಿಕೆ ಅಥವಾ ಅಂತಹ ವಸ್ತು ಇಲ್ಲದೆಯೂ ಮೈಮರೆತು ಆಡುತ್ತಿದ್ದ ಆ ಕಾಲದ ಎಲ್ಲ ಮಕ್ಕಳಂತೆ ನಾವು ಕೂಡ…. ಯಾರಿಂದಲೋ ಕಲಿತ ಆಟಗಳು ನಾವೇ ಕಲ್ಪಿಸಿದ ನೋಟಗಳು ಎಲ್ಲವೂ ಅಲ್ಲಿ ಪ್ರಯೋಗಕ್ಕೆ ಬರುತ್ತಿದ್ದವು. ಹೆಚ್ಚು ಎತ್ತರ ಬೆಳೆಯದ ಕಸೆ ಮಾವಿನ ಮರದ ಗೆಲ್ಲನ್ನು ಏರಿ ಕುಳಿತು ಕಾಲು ಹಿಂದೆ ಮುಂದೆ ಆಡಿಸುತ್ತಾ ಗಂಟೆಗಟ್ಟಲೆ ಪುರಾಣ ಹರಟೆ ಕೊಚ್ಚುತ್ತಿದ್ದೆವು. ಯಸ್ಸಿನಲ್ಲಿ ನನಗಿಂತ ಮೂರು ವರ್ಷ ದೊಡ್ಡವನೂ ಪೇಟೆ ಊರು ಹೆಚ್ಚು ತಿರುಗಿದವನೂ ಆದ ಸುಧೀರ….”










