ಹೊಸಹೊಳಲಿನ ಲಕ್ಷ್ಮೀನಾರಾಯಣ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ
“ಇದೊಂದು ತ್ರಿಕೂಟಾಚಲ ದೇಗುಲ. ಆದರೆ ನಡುವಣ ಗರ್ಭಗುಡಿಯ ಮೇಲೆ ಮಾತ್ರವೇ ಶಿಖರ ಕಂಡುಬರುತ್ತದೆ. ನಾಲ್ಕು ಸ್ತರದ ಅಲಂಕರಣಗಳು, ಅದರ ಮೇಲೆ ಮೊಗುಚಿದ ಕಮಲದಂತಹ ಶಿಖರ, ಎಲ್ಲಕ್ಕೂ ಮೇಲೆ ಕಳಶ- ಆಕರ್ಷಕವಾಗಿ ಕಾಣುತ್ತವೆ, ಗೋಪುರದ ಅಲಂಕರಣಗಳ ನಡುವೆ ಕಾಳಿಂಗಮರ್ದನ ಲಕ್ಷ್ಮೀನಾರಾಯಣ ಮೊದಲಾದ ಮೂರ್ತಿಗಳನ್ನು ಕಾಣಬಹುದು. ದೇವಾಲಯದ ಹಿಂಬದಿಯ ಮೂರು ದಿಕ್ಕುಗಳಲ್ಲಿ..”
ಆದಿಚುಂಚನಗಿರಿಯ ಕಾಲಭೈರವ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ
“ಮಂಡ್ಯಜಿಲ್ಲೆಯ ನಾಗಮಂಗಲ ತಾಲ್ಲೂಕಿಗೆ ಸೇರಿದ ಈ ಆದಿಚುಂಚನಗಿರಿ ಕ್ಷೇತ್ರ ನಾಥಪಂಥದ ಪ್ರವರ್ತಕನಾದ ಸಿದ್ಧಯೋಗಿಯಿಂದ ಸ್ಥಾಪಿತವಾದುದೆಂದು ಪ್ರತೀತಿ. ಸುದೀರ್ಘ ಗುರುಪರಂಪರೆಯ ಕೃಪೆಗೆ ಪಾತ್ರವಾದ ಈ ಕ್ಷೇತ್ರದ ಪೀಠವು ಈವರೆಗೆ ಎಪ್ಪತ್ತೊಂದು ಗುರುವರೇಣ್ಯರ ಆರೋಹಣದಿಂದ ಪಾವನವೆನಿಸಿಕೊಂಡಿದೆ. ಚೋಳರಿಂದ ಮೊದಲುಗೊಂಡು ಹೊಯ್ಸಳ, ಸಾಳ್ವ, ವಿಜಯನಗರ, ಯಲಹಂಕ ಮೊದಲಾದ ಅರಸುಮನೆತನಗಳವರೆಗೆ ಶತಶತಮಾನಗಳ ಕಾಲ…”
ನಾಡಕಲಸಿಯ ಜೋಡಿ ದೇಗುಲಗಳು: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ
“ಮಲ್ಲಿಕಾರ್ಜುನ ದೇವಾಲಯಕ್ಕೆ ಶಿಖರವಿಲ್ಲ. ರಾಮೇಶ್ವರ ಗುಡಿಗಿಂತ ವಿಸ್ತೀರ್ಣದಲ್ಲಿ ದೊಡ್ಡದಾದ ಈ ಗುಡಿ ನಕ್ಷತ್ರಾಕಾರದ ತಳಹದಿ ಹೊಂದಿದ್ದು ತೆರೆದ ಮಂಟಪದ ಕಕ್ಷಾಸನವೂ ನಕ್ಷತ್ರದ ಆಕಾರದಲ್ಲೇ ಮುಂದುವರೆದಿದೆ. ಮೂರು ಕಡೆ ತೆರೆದ ಬಾಗಿಲು. ಮುಂಭಾಗದ ಬಾಗಿಲಲ್ಲೇ ದೊಡ್ಡ ನಂದಿ ಶಿವನಿಗೆ ಅಭಿಮುಖನಾಗಿ ಕುಳಿತಿದ್ದಾನೆ. ನಂದಿಯ ಸಾಲಂಕೃತ ಶಿಲ್ಪ ಮುದ್ದಾಗಿದೆ. ನಂದಿಯ ಕಣ್ಣು, ಕಿವಿ, ಮುಖ…”
ಸೋಂದೆಯ ರಮಾ ತ್ರಿವಿಕ್ರಮ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ
“ಸೋಂದೆಯ ಶ್ರೀವಾದಿರಾಜಮಠದ ಆವರಣದಲ್ಲಿ ವಾದಿರಾಜ ಮತ್ತಿತರ ಯತಿಗಳ ವೃಂದಾವನಗಳಲ್ಲದೆ ಅನೇಕ ಪ್ರಾಚೀನ ಗುಡಿಗಳಿದ್ದು ಅವುಗಳಲ್ಲಿ ಶ್ರೀವಾದಿರಾಜರೇ (ಕ್ರಿ.ಶ.1585) ಸ್ಥಾಪಿಸಿದ ರಮಾ ತ್ರಿವಿಕ್ರಮದೇಗುಲವು ಪ್ರಮುಖವಾಗಿದೆ. ಮಠದ ಆವರಣದ ನಡುವೆ ಸ್ಥಿತವಾಗಿರುವ ಈ ಪ್ರಾಚೀನ ದೇಗುಲಕ್ಕೆ ಚಾಲುಕ್ಯಶೈಲಿಯ ಸರಳವಾದ ಶಿಖರ. ಆರು ಸ್ತರಗಳ ಮೇಲೆ ಲೋಹದ ಕಳಶ.”
ಶಾಲ್ಮಲಿಯ ಸಹಸ್ರಲಿಂಗ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ
“ನೀರಿನಿಂದ ಮೇಲೆದ್ದ ದೊಡ್ಡ ಬಂಡೆಯೊಂದು ಶಿಲ್ಪಿಯೋರ್ವನಿಗೆ ಬಸವಣ್ಣನಂತೆ ತೋರಿ ಒಂದೆಡೆ ಮುಖಭಾಗವನ್ನೂ ಬಂಡೆಯ ಅಂಚಿಗೆ ಬೆನ್ನುಭಾಗವನ್ನೂ ಕೆತ್ತಿದ್ದಾನೆ. ನಡುವಣ ಬಂಡೆ ಯಥಾರೂಪದಲ್ಲೇ ಇದೆ. ಸಾಮಾನ್ಯವಾಗಿ ಶಿವಾಲಯಗಳ ಬಾಗಿಲಲ್ಲಿ ಕಂಡುಬರುವ ಪುರುಷಾಮೃಗಕ್ಕೂ ಇಲ್ಲಿ ಸ್ಥಾನ ಕಲ್ಪಿಸಲಾಗಿದೆ. ಮನುಷ್ಯನ ಮುಖ, ಪ್ರಾಣಿಯ ದೇಹವಿದ್ದು ಘಂಟಾನಾದ ಮಾಡುವ ಕಾಯಕದಲ್ಲಿ ಈ ಪುರುಷಾಮೃಗ…”
ದೊಡ್ಡಗದ್ದವಳ್ಳಿಯ ಲಕ್ಷ್ಮೀದೇವಾಲಯ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ
“ಕಾಳಿಕಾದೇವಿ ಅಷ್ಟಭುಜಗಳಲ್ಲಿ ಬಗೆಬಗೆಯ ಆಯುಧಗಳನ್ನು ಧರಿಸಿ ತಾನು ಸಂಹರಿಸಿದ ದೈತ್ಯನ ಮೇಲೆ ಕುಳಿತಿದ್ದಾಳೆ. ಶಿಲ್ಪದ ಪ್ರಭಾವಳಿಯಲ್ಲಿ ಬೇತಾಳಗಣಗಳು ಆಯುಧಗಳನ್ನು ಹಿಡಿದು ನರ್ತಿಸುತ್ತಿರುವಂತೆ ರೂಪಿಸಿರುವುದು ಸ್ವಾರಸ್ಯಕರವಾಗಿದೆ. ಗರ್ಭಗುಡಿಯ ಬಾಗಿಲವಾಡದ ಮೇಲೆ ಕಾಳಿಯ ಮುಖವನ್ನು ಚಿತ್ರಿಸಿದೆ. ಉಳಿದ ಗರ್ಭಗುಡಿಗಳಲ್ಲಿ ಭೈರವನ ಮೂರ್ತಿಯನ್ನೂ ಶಿವಲಿಂಗವನ್ನೂ ಇರಿಸಲಾಗಿದೆ. ಶಿವಲಿಂಗದ ಎದುರಿಗೆ ನವರಂಗದಲ್ಲಿ….”
ಬಾಣಾವರದ ದೇವಾಲಯಗಳು: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ
“ಬಾಣಾವರವು ನಿರಂತರ ಯುದ್ಧ ಹಾಗೂ ಸೈನಿಕ ಚಟುವಟಿಕೆಗಳ ಕೇಂದ್ರವಾಗಿದ್ದುದರಿಂದಲೋ ಏನೋ ಇಲ್ಲಿ ಹೊಯ್ಸಳ ಶಿಲ್ಪಕಲೆಯ ವೈವಿಧ್ಯವನ್ನು ಬಿಂಬಿಸುವ ದೊಡ್ಡ ದೇಗುಲಗಳ ನಿರ್ಮಾಣವಾಗಿಲ್ಲ. ಆದರೆ ಇತಿಹಾಸವನ್ನು ನೆನಪಿಸುವ ಅನೇಕ ದೇವಾಲಯಗಳು ಇಲ್ಲಿ ಕಂಡುಬರುತ್ತವೆ. ಬಾಣಾವರದ ಬಾಗಿಲಲ್ಲಿರುವೋನೆ ಬಾಲೆಯ ಮಗನೆ ಬೆನವಣ್ಣಾ ಎಂದು ಜನಪದರ ಸ್ತುತಿಗೆ ಪಾತ್ರನಾದ ಗಣಪತಿಯ ಗುಡಿ ಈಗ ಊರಿನ ನಡುಭಾಗದಲ್ಲಿರುವ ಬಾಣೇಶ್ವರನ ಗುಡಿಯ ಪಕ್ಕದಲ್ಲಿದೆ.”
ಬೆಳ್ಳೂರಿನ ಆದಿಮಾಧವ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ
“ಪ್ರಧಾನ ಗರ್ಭಗುಡಿಯ ಹೊರಗೆ ನವರಂಗದ ಎರಡು ಬದಿಗಳಲ್ಲಿ ಗಣೇಶ ಹಾಗೂ ಮಹಿಷಾಸುರ ಮರ್ದಿನಿಯರ ಸೊಗಸಾದ ವಿಗ್ರಹಗಳಿವೆ.. ಪಾಶಾಂಕುಶಧಾರಿಯಾಗಿ ಸರ್ವಾಲಂಕೃತನಾದ ಗಣೇಶನ ವಿಗ್ರಹ ಮುದ್ದಾಗಿದೆ. ಕುಸಿದ ಮಹಿಷನ ದೇಹದಿಂದ ಹೊರಬಂದ ರಕ್ಕಸನನ್ನು ಮೆಟ್ಟಿ ಗೋಣ್ಮುರಿಯುತ್ತಿರುವ ದುರ್ಗೆಯ ಶಿಲ್ಪವೂ ಈ ಮಾದರಿಯ ಇತರ ಹೊಯ್ಸಳ ಶಿಲ್ಪಗಳಂತೆ ಅಧ್ಯಯನ ದೃಷ್ಟಿಯಿಂದಲೂ ಗಮನಾರ್ಹವಾಗಿದೆ.”
ನಾಗಲಾಪುರದ ದೇಗುಲಗಳು: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ
“ಪೂರ್ವಕಾಲದಲ್ಲಿ ಅಗ್ರಹಾರವಾಗಿದ್ದ ನಾಗಲಾಪುರ ಗ್ರಾಮದ ನಡುವೆ ಇರುವ ಕೇಶವ ದೇಗುಲವಾಗಲಿ ಹೊರವಲಯದಲ್ಲಿರುವ ಕೇದಾರೇಶ್ವರ ದೇಗುಲವಾಗಲಿ ಪೂರ್ಣಪ್ರಮಾಣದ ಶಿಲ್ಪಕಲಾಸಂಪನ್ನವಾದ ಗುಡಿಗಳೇನೂ ಅಲ್ಲ. ಕುಸಿತದ ಅಪಾಯದಲ್ಲಿದ್ದು ಪುರಾತತ್ವ ಇಲಾಖೆಯ ಸಮರ್ಥ ಮಾರ್ಗದರ್ಶನದಲ್ಲಿ ಪುನರ್ಜೋಡಣೆಗೊಂಡು ಸುಸ್ವರೂಪ ತಾಳಿರುವ ಈ ಎರಡೂ ಗುಡಿಗಳಿಗೆ…”










