Advertisement

ಪ್ರವಾಸ

ಅಂಡಮಾನ್-ನಿಕೋಬಾರ್ ದ್ವೀಪಗಳ ಅನುಭವಗಳು: ಡಾ. ಎಂ. ವೆಂಕಟಸ್ವಾಮಿ ಪ್ರವಾಸ ಕಥನ

ಅಂಡಮಾನ್-ನಿಕೋಬಾರ್ ದ್ವೀಪಗಳ ಅನುಭವಗಳು: ಡಾ. ಎಂ. ವೆಂಕಟಸ್ವಾಮಿ ಪ್ರವಾಸ ಕಥನ

ಪೋರ್ಟ್ ಬ್ಲೇರ್ ನಿಲ್ದಾಣದಲ್ಲಿ ಇಳಿದು ಹೊರಕ್ಕೆ ಬರುತ್ತಿದ್ದಂತೆ ಹಾರಾಡುತ್ತ ಬಂದ ಮೋಡಗಳು ಸಣ್ಣದಾಗಿ ಮಳೆ ಹನಿಯತೊಡಗಿದವು. ಇಬ್ಬರೂ ಓಡೋಡಿ ಹೋಗಿ ನಿಲ್ದಾಣದ ಒಳಕ್ಕೆ ಸೇರಿಕೊಂಡೆವು. ವಿಮಾನ ಮತ್ತು ವಿಮಾನ ನಿಲ್ದಾಣದ ಫೋಟೋಗಳನ್ನು ತೆಗೆದುಕೊಳ್ಳುತ್ತಿದ್ದ ಜನರು ಕೆಲವೇ ಕ್ಷಣಗಳಲ್ಲಿ ತೊಯ್ದು ತೊಪ್ಪೆಯಾಗಿದ್ದರು.
ಅಂಡಮಾನ್-ನಿಕೋಬಾರ್‌ ದ್ವೀಪಗಳ ಪ್ರವಾಸದ ಕುರಿತು ಡಾ. ಎಂ. ವೆಂಕಟಸ್ವಾಮಿ ಬರಹ

read more
ನೀರ ನೆಲದ ಮೇಲೆ ನೂರಾರು ಮನೆ – ಧೊದಿಯಾ: ಹೇಮಾ ನಾಯಕ ಬರಹ

ನೀರ ನೆಲದ ಮೇಲೆ ನೂರಾರು ಮನೆ – ಧೊದಿಯಾ: ಹೇಮಾ ನಾಯಕ ಬರಹ

ಹೀಗೆ ನೆಲದಿಂದ ಎತ್ತರಿಸಿ ಕಟ್ಟಿದ ಚಿಕ್ಕ ಚಿಕ್ಕ ಗೂಡುಗಳು ಅಲ್ಲಲ್ಲಿ ಚದುರಿಕೊಂಡಂತೆ ಇದ್ದು, ನೀರೇ ಬುಡಕ್ಕೆ ಕೈ ಹಾಕಿ ಎಬ್ಬಿಸಿ ಕೂರಿಸಿದಂತೆ ಕಾಣಿಸುತ್ತವೆ. ಹೆಚ್ಚುಕಮ್ಮಿ ಎಲ್ಲ ತೊಳೆದುಕೊಂಡು ಹೋಗುವಂತೆ ಕಾಣುತ್ತಿದ್ದ ಊರಿನಲ್ಲಿ, ಅಟ್ಟದ ಕೋಣೆಗಳಿಗೆ ಹೊಂದಿಕೊಂಡಂತೆ ಹೂವಿನ ಕುಂಡಗಳನ್ನು ಸುಂದರವಾಗಿ ಜೋಡಿಸಿದ್ದು ನೋಡಿ ಅಚ್ಚರಿಯ ಜೊತೆ ಖುಷಿಯೂ ಆಯಿತು. ಧೊದಿಯಾದಲ್ಲಿ ಒಂದೇ ಒಂದು ಕಿರಾಣಿ ಅಂಗಡಿಯಿದೆ. ಅದರ ಮಾಲೀಕ ನನ್ನನ್ನು ಕರೆದು ತನ್ನ ಮೊಟ್ಟಮೊದಲ ಅಂಗಡಿ ಅದೋ ಅಲ್ಲಿಯೇ ಇತ್ತೆಂದು ದಿಬ್ರು ನದಿಯ ನಡುವೆ ಕಾಣದ ಯಾವುದೋ ಬಿಂದುವಿನತ್ತ ಬೆರಳು ತೋರಿಸಿದ.
ಅಸ್ಸಾಮ್ ರಾಜ್ಯದ ಧೊದಿಯಾ ಹಳ್ಳಿಗೆ ನೀಡಿದ ಭೇಟಿಯ ಕುರಿತು ಹೇಮಾ ನಾಯಕ ಬರಹ

read more
ನೆದರ್‌ಲ್ಯಾಂಡ್ಸ್ ರಾಜಕಾರಣ- ಒಂದು ಅಪೂರ್ಣ ಅನುಬಂಧ: ಕೆ. ಸತ್ಯನಾರಾಯಣ ಪ್ರವಾಸ ಸರಣಿ

ನೆದರ್‌ಲ್ಯಾಂಡ್ಸ್ ರಾಜಕಾರಣ- ಒಂದು ಅಪೂರ್ಣ ಅನುಬಂಧ: ಕೆ. ಸತ್ಯನಾರಾಯಣ ಪ್ರವಾಸ ಸರಣಿ

ನಾಗರಿಕರನ್ನು ಸಾಕಬೇಕು, ಪೋಷಿಸಬೇಕು ಎನ್ನುವುದಕ್ಕಿಂತ ಹೆಚ್ಚಾಗಿ, ಅವರನ್ನು ಸಬಲಗೊಳಿಸಬೇಕು, ಅವರು ಸರ್ಕಾರ, ರಾಜ್ಯದ ಮೇಲೆ ಅವಲಂಬಿತರಾಗದ ಹಾಗೆ ನೋಡಿಕೊಳ್ಳಬೇಕು, ಹಾಗಾದಾಗ ಮುಂದೆ ಅವರೇ ದೇಶದ ಆರ್ಥಿಕ-ಸಾಮಾಜಿಕ ಅಭಿವೃದ್ಧಿಯ ಕಡೆ ಗಮನ ಹರಿಸುತ್ತಾರೆ ಎಂಬುದು ಈ ಸಮಾಜದ ನಿಲುವು. ಉನ್ನತ ಮಟ್ಟದ ರಾಷ್ಟ್ರೀಯ ಆದಾಯ, ತಲಾವಾರ್ಷಿಕ ಆದಾಯದ ಹಂತವನ್ನು ತಲುಪಿದ ದೇಶದಲ್ಲಿ ಮಾತ್ರ ಇದು ಸಾಧ್ಯ. ಶ್ರೀಮಂತರು, ಚಕ್ರವರ್ತಿಗಳು ಇಲ್ಲವೆಂದಿಲ್ಲ.
ಕೆ. ಸತ್ಯನಾರಾಯಣ ಬರೆಯುವ ಪ್ರವಾಸ ಪ್ರಬಂಧಗಳ “ನೆದರ್‌ಲ್ಯಾಂಡ್ಸ್ ಬಾಣಂತನ” ಸರಣಿಯ ಕೊನೆಯ ಬರಹ

read more
ಗೋಬಿ ಮರುಭೂಮಿ ಡೈನೋಸಾರ್ ತೊಟ್ಟಿಲು: ಡಾ. ವೆಂಕಟಸ್ವಾಮಿ ಪ್ರವಾಸ ಕಥನ

ಗೋಬಿ ಮರುಭೂಮಿ ಡೈನೋಸಾರ್ ತೊಟ್ಟಿಲು: ಡಾ. ವೆಂಕಟಸ್ವಾಮಿ ಪ್ರವಾಸ ಕಥನ

ದಿಢೀರನೆ ನನ್ನಲ್ಲಿ ಆರನೇ ಪ್ರಜ್ಞೆ ಎಚ್ಚೆತ್ತುಕೊಂಡಿತು, ಬಾಗಿಲು ಮುಚ್ಚಲು ಒಂದೆಜ್ಜೆ ಹಿಂದಕ್ಕೆ ಸರಿದಿದ್ದೆ ಆಕೆ ಒಳಗೆ ಬರಲು ಒಂದೆಜ್ಜೆ ಮುಂದಕ್ಕಿಟ್ಟಳು. ನಾನು ಎಡಗೈಯನ್ನು ಅಡ್ಡವಿಟ್ಟಿದ್ದೆ ಆಕೆ ನ್ನ ಕೈಕೆಳಗೆ ನುಗ್ಗಲು ಬಗ್ಗಿದಳು. ಬಾಗಿಲು ಮುಚ್ಚಿಬಿಟ್ಟೆ. ಅಬ್ಬಾ! ತಪ್ಪಿಸಿಕೊಂಡೆ ಎಂದುಕೊಂಡೆ.
ಚೀನಾ ದೇಶದ ಓಡಾಟದ ಕುರಿತು ಡಾ. ವೆಂಕಟಸ್ವಾಮಿ ಬರಹದ ಮುಂದುವರಿದ ಭಾಗ

read more
ಪೀಪಲ್ಸ್ ರಿಪಬ್ಲಿಕ್ ಚೀನಾದಲ್ಲಿ….: ಡಾ. ವೆಂಕಟಸ್ವಾಮಿ ಪ್ರವಾಸ ಕಥನ

ಪೀಪಲ್ಸ್ ರಿಪಬ್ಲಿಕ್ ಚೀನಾದಲ್ಲಿ….: ಡಾ. ವೆಂಕಟಸ್ವಾಮಿ ಪ್ರವಾಸ ಕಥನ

ಸುತ್ತಲೂ ಆಕಾಶದ ಒಳಗೆ ಮೋಡಗಳ ಜೊತೆಗೆ ಸಾಗರದ ಅಲೆಗಳಂತೆ ಕಣ್ಣು ಹಾಯುವವರೆಗೂ ಬೆರೆತುಹೋಗಿರುವ ಅನಂತ ಗಿರಿ ಶಿಖರ ಶ್ರೇಣಿಗಳು. ತಣ್ಣನೆ ರಾತ್ರಿಯಲ್ಲಿ ಚಳಿಯ ರಗ್ಗನ್ನೊದ್ದು ಕಣ್ಣುಜ್ಜಿಕೊಂಡು ಪೂರ್ವದಲ್ಲಿ ಬೆಟ್ಟಗಳ ಕಡೆಗೆ ಸೂರ್ಯನು ನೋಡುತ್ತಿದ್ದನು. ನಡುವೆ ಬಿಳಿ ಮುಗಿಲು ಮತ್ತು ಮಂಜಿನ ತೆರೆಗಳ ಸರಸ. ಎಲ್ಲವನ್ನು ಸೀಳಿಕೊಂಡು ಆಕಾಶವನ್ನೇ ಮೆಟ್ಟಿಲು ಮಾಡಿಕೊಂಡು ಗಿರಿ ಶಿಖರಗಳ ಮೇಲೆ ಎದ್ದು ಬಿದ್ದು ಚಾಚಿ ಮಲಗಿರುವ ಡ್ರ್ಯಾಗನ್ ಮಹಾಗೋಡೆಗಳು.
ಚೀನಾ ಪ್ರವಾಸದ ಕುರಿತು ಡಾ. ಎಂ. ವೆಂಕಟಸ್ವಾಮಿ ಬರಹ

read more
ನೆದರ್‌ಲ್ಯಾಂಡ್ಸ್ ಸಂಕೀರ್ಣತೆ: ಕೆ. ಸತ್ಯನಾರಾಯಣ ಪ್ರವಾಸ ಸರಣಿ

ನೆದರ್‌ಲ್ಯಾಂಡ್ಸ್ ಸಂಕೀರ್ಣತೆ: ಕೆ. ಸತ್ಯನಾರಾಯಣ ಪ್ರವಾಸ ಸರಣಿ

ಗ್ರಂಥಾಲಯಕ್ಕೆ ಇಡೀ ಕುಟುಂಬ ಭೇಟಿ ಕೊಡುತ್ತದೆ. ಸದಸ್ಯರು ತಮ್ಮ ತಮ್ಮ ಆಸಕ್ತಿಗನುಗುಣವಾಗಿ ಬೇರೆ ಬೇರೆ ಭಾಗಗಳಿಗೆ ಹೋಗಬಹುದು. ಗ್ರಂಥಾಲಯದೊಳಗೆ ಶಿಶುಪಾಲನಾ ಕೇಂದ್ರವೂ ಇದೆ. ಮಕ್ಕಳ ವಿಭಾಗದಲ್ಲಿ ಎಷ್ಟೊಂದು ಅನುಕೂಲಗಳು, ಆಟದ ಸಾಮಾನು, ಚಿತ್ರಕಲೆ ರಚಿಸುವ ವಿಭಾಗ, ಸ್ಟುಡಿಯೋ, ಮಕ್ಕಳ ಎತ್ತರಕ್ಕನುಗುಣವಾದ ಕುರ್ಚಿ, ಮೇಜು, ಬೇರೆ ಬೇರೆ ವಯಸ್ಸಿನ ಮಕ್ಕಳು ಓದಬಹುದಾದ ಪುಸ್ತಕಗಳು, ನಿಯತಕಾಲಿಕೆಗಳು, ನೆಲದ ಮೇಲೆ ಕುಳಿತುಕೊಂಡು, ಅಡ್ಡ ಮಲಗಿಕೊಂಡು ಕೂಡ ಓದುವ ಅನುಕೂಲ, ಬಣ್ಣ ಬಣ್ಣದ ಪೆನ್ಸಿಲ್‌ಗಳ ರಾಶಿ.
ಕೆ. ಸತ್ಯನಾರಾಯಣ ಬರೆಯುವ ಪ್ರವಾಸ ಪ್ರಬಂಧಗಳ “ನೆದರ್‌ಲ್ಯಾಂಡ್ಸ್ ಬಾಣಂತನ” ಸರಣಿಯ ಹದಿಮೂರನೆಯ ಬರಹ

read more
ದುಬೈನ ಬುರ್ಜ್ ಖಲೀಫಾ ಎಂಬ ಸ್ಕೈಸ್ಕ್ರಾಪರ್: ಡಾ. ಎಂ. ವೆಂಕಟಸ್ವಾಮಿ ಬರಹ

ದುಬೈನ ಬುರ್ಜ್ ಖಲೀಫಾ ಎಂಬ ಸ್ಕೈಸ್ಕ್ರಾಪರ್: ಡಾ. ಎಂ. ವೆಂಕಟಸ್ವಾಮಿ ಬರಹ

ವಾಸ್ತುಶಿಲ್ಪ ಮತ್ತು ಎಂಜಿನಿಯರಿಂಗ್ ಪ್ರಕ್ರಿಯೆಯ ಒಂದು ನಿರ್ದಿಷ್ಟ ಹಂತದಲ್ಲಿ, ಮೂಲ ಎಮಾರ್ ಡೆವಲಪರ್‌ಗಳಿಗೆ ಹಣಕಾಸಿನ ಸಮಸ್ಯೆ ಎದುರಾಗಿ ಹೆಚ್ಚಿನ ಹಣದ ಅಗತ್ಯಬಿದ್ದಾಗ ಆಗಿನ ಯುಎಇ’ಯ ಆಡಳಿತಗಾರ ಶೇಖ್ ಖಲೀಫಾ ಅವರು ಹಣದ ನೆರವು ನೀಡಿದರು. ಆದ್ದರಿಂದ ಕಟ್ಟಡದ ಮೊದಲ `ಬುರ್ಜ್ ದುಬೈ’ ಹೆಸರನ್ನು `ಬುರ್ಜ್ ಖಲೀಫಾ’ ಎಂದು ಬದಲಾಯಿಸಲಾಯಿತು.
ದುಬೈ ಪ್ರವಾಸದ ಕುರಿತು ಡಾ. ಎಂ. ವೆಂಕಟಸ್ವಾಮಿ ಬರಹ ನಿಮ್ಮ ಓದಿಗೆ

read more
ಚರ್ಚ್, ಸಂಜೀವ, ಫ್ರೆಂಚ್ ಕನ್ನಡತಿ: ಕೆ. ಸತ್ಯನಾರಾಯಣ ಪ್ರವಾಸ ಸರಣಿ

ಚರ್ಚ್, ಸಂಜೀವ, ಫ್ರೆಂಚ್ ಕನ್ನಡತಿ: ಕೆ. ಸತ್ಯನಾರಾಯಣ ಪ್ರವಾಸ ಸರಣಿ

ನಾವು ನಮ್ಮ ಬೆಂಗಳೂರಿನ ಮನೆಯ ಬಗ್ಗೆ ತಿಳಿಸಿದಾಗ, ನಾನು HSR ಬಡಾವಣೆಯಲ್ಲಿ ನಾಲ್ಕು ವರ್ಷ ಇದ್ದೆ. ಕನ್ನಡಿಗನನ್ನೇ ಮದುವೆ ಆಗಿದ್ದೇನೆ. ಆತ ಯೋಗ ಶಿಕ್ಷಕ ಎಂದು ತುಂಬಾ ಖುಷಿಯಿಂದ ಹೇಳಿದಳು. ಅವಳ ಮುಖದಲ್ಲಿ ಭಾರತೀಯ ಕಳೆ ಇದೆ ಎಂದು ನನಗೂ ಅನ್ನಿಸಿತು. ಹಾಗಾದರೆ, ನೀವು ಅರ್ಧ ಕನ್ನಡಿಗರಲ್ಲವೇ ಅಂದರೆ. ಬಾಯಿ ತುಂಬಾ ನಗುತ್ತಾ, ಇಲ್ಲ ನಾನು French, ನನ್ನ ಹೊಟ್ಟೆಯಲ್ಲಿರುವ ಮಗು ಅರ್ಧ ಕನ್ನಡಿಗ ಎಂದು ತನ್ನ ಉಬ್ಬಿದ ಹೊಟ್ಟೆಯ ಮೇಲೆ ಕೈ ಹೊಡೆದುಕೊಂಡು ನಕ್ಕಳು.
ಕೆ. ಸತ್ಯನಾರಾಯಣ ಬರೆಯುವ ಪ್ರವಾಸ ಪ್ರಬಂಧಗಳ “ನೆದರ್‌ಲ್ಯಾಂಡ್ಸ್ ಬಾಣಂತನ” ಸರಣಿ

read more
ಆರ್ಥಿಕ ಬಿಕ್ಕಟ್ಟಿನ ಆಂತರಿಕ ಗಲಭೆಯಲ್ಲಿ ಶ್ರೀಲಂಕಾ ಪ್ರವಾಸ: ಡಾ. ವೆಂಕಟಸ್ವಾಮಿ ಪ್ರವಾಸ ಕಥನ

ಆರ್ಥಿಕ ಬಿಕ್ಕಟ್ಟಿನ ಆಂತರಿಕ ಗಲಭೆಯಲ್ಲಿ ಶ್ರೀಲಂಕಾ ಪ್ರವಾಸ: ಡಾ. ವೆಂಕಟಸ್ವಾಮಿ ಪ್ರವಾಸ ಕಥನ

ಶ್ರೀಲಂಕಾದಲ್ಲಿರುವ ಪರಿಸ್ಥಿತಿಯಿಂದ ಗೈಡ್ ಬರಲಿಲ್ಲವೇ? ಅಥವಾ ತಪ್ಪಿಸಿಕೊಂಡನೆ? ಸ್ವಲ್ಪ ಗಾಬರಿಯಾಯಿತು. ಮತ್ತೆ ನಾವಿಬ್ಬರು ಸುಶೀಲ ಮತ್ತು ಶಾಂತಮ್ಮ ಹತ್ತಿರಕ್ಕೆ ಹೋದೆವು. ಅಷ್ಟರಲ್ಲಿ ನಮ್ಮ 12 ಜನರ ಗುಂಪಿನ ಒಂದಷ್ಟು ಜನರು ನಮ್ಮಂತೆ ಗೈಡ್‌ಗಾಗಿ ಹುಡುಕಾಡುತ್ತಿದ್ದರು. ಕೊನೆಗೂ ಒಬ್ಬಾತ ತಮಿಳಿನಲ್ಲಿ ಮಾತನಾಡುತ್ತ ಚಾರಿಯಟ್ ವರ್ಲ್ಡ್‌ ಟೂರ್ ಎಂದು ಹತ್ತಿರಕ್ಕೆ ಬಂದ. ನಾನು, `ಏಯ್ ಎಲ್ಲಿ ಹೋಗಿದ್ದೆಯೊ ಮಹರಾಯ ಇಷ್ಟೊತ್ತು? ನಾವೆಲ್ಲ ಹುಡುಕಿ ಹುಡುಕಿ ಸಾಕಾಯಿತು’ ಎಂದೆ. ಆತ ಇಂಗ್ಲಿಷ್ ಮತ್ತು ತಮಿಳು ಮಾತನಾಡತೊಡಗಿದ.
ಶ್ರೀಲಂಕಾ ಪ್ರವಾಸದ ಕುರಿತು ಡಾ. ವೆಂಕಟಸ್ವಾಮಿ ಬರಹ

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ಬದುಕಿನಲ್ಲಿ....

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ