Advertisement
ಭವ್ಯ ಟಿ.ಎಸ್. ಬರೆದ ಈ ದಿನದ ಕವಿತೆ

ಭವ್ಯ ಟಿ.ಎಸ್. ಬರೆದ ಈ ದಿನದ ಕವಿತೆ

ಬೇಗುದಿ

ಅವಳೆದೆಯ ಬೇಗುದಿ
ಆರದೊಲೆಯ ಕೆಂಡದಂತೆ
ದಹಿಸಿದೆ ಭಾವಗಳ ಇಂಚಿಂಚಾಗಿ
ಕಣ್ಣೀರಿನ ಒರತೆಯೂ ಬತ್ತಿರುವಾಗ
ಅವಳಿಗೀಗ ಜಗವೇ ಬರಡು
ಎದೆಯ ಭೂಮಿಯಲ್ಲಿ ಬರಿಯ
ಬಿರುಕುಗಳು…
ಅವಳ ದನಿಯೇಕೋ
ಈಗ ಗುನುಗುಲಾರದು
ಹಾಡಿಗೆ ನೋವು ಬಿಡಿಸಲಾರದ ಅಂಟು
ಆಸೆಯ ಹಕ್ಕಿಗಳು
ಹಾರಲಾರವೀಗ
ಮನವೇ ಪಂಜರದ ಗೂಡು
ಮಾಸಬಾರದು ಮುಖವೆಂದು
ಜನರ ಮೆಚ್ಚಿಸಲು
ಹುಸಿ ನಗೆಯ ಲೇಪಿಸುತ್ತಾಳೆ ತುಟಿಗೆ
ತನ್ನ ನಗುವಿಗೆ‌ ತಾನೇ
ಶಪಿಸಿ ಸುಮ್ಮನಾಗುವಂತೆ
ಪ್ರೀತಿಯ ಮೊಗೆಮೊಗೆದು
ಎರೆದವಳೀಗ ಅನಾಥೆ
ಬದುಕಾಗಿದೆ ಒಂಟಿ ಸಂತೆ
ಬಿಕರಿಗೆ ಭಾವಗಳಿಲ್ಲದೆ….

ಭವ್ಯ ಟಿ.ಎಸ್. ಕನ್ನಡ ಶಿಕ್ಷಕರು
ಸರ್ಕಾರಿ ಪ್ರೌಢಶಾಲೆ ಕಾನುಗೋಡು
ಹೊಸನಗರ, ಶಿವಮೊಗ್ಗ

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಜನಮತ

ಬದುಕಲು ನಿಮಗೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ