Advertisement
ಮಾಲಾ ಮ. ಅಕ್ಕಿಶೆಟ್ಟಿ ಬರೆದ ಈ ದಿನದ ಕವಿತೆ

ಮಾಲಾ ಮ. ಅಕ್ಕಿಶೆಟ್ಟಿ ಬರೆದ ಈ ದಿನದ ಕವಿತೆ

ಪೂಜಿಸಿದರೆ…

ವಿಭೂತಿ ಹಚ್ಚಿ, ಹಾರ ಹಾಕಿ,
ಧೂಪ ದೀಪ ಬೆಳಗಿ, ಫೋಟೋ
ಪೂಜಿಸಿ, ಪ್ರತಿ ವರ್ಷ
ತರತರ ಖಾದ್ಯ ತಯಾರಿಸಿ,
ನೈವೇದ್ಯ ಹಿಡಿದು, ಕಣ್ಣೀರಲಿ ಮಿಂದು

ಹೋದವರ ನೆನಸಿ
ತೊಲಾಡಿ ಹಳೇ ನೆನಪುಗಳ ಜ್ವಾಲಾಮುಖಿ ಉಳಿಸಿಕೊಳ್ಳಲಾರದ ಘಟನೆಗಳು
ಹಿಂಸಿಸಿ, ದುಃಖ ಹೆಚ್ಚಿಸಿ

ಯಾವ ಧೂಪ ದೀಪ ಶಕ್ತಿ
ಮರಳಿಸಬಹುದು ಗೋರಿಗಳ ಜೀವ
ಅಳಿಸಬಹುದು ಸತ್ತ ನಂತರ
ಆದ ತೊಂದರೆಗಳ

ಸಮವಯಸ್ಕರು ಇನ್ನೂ
ಅಡ್ಡಾಡುವ, ಕಣ್ಣು ತಾಕದಿರಲಿ
ಅಪ್ಪನಿದ್ದಿದ್ದರೆ……..
ಶಪಿಸಿ ಕರ್ಮಗಳ

ಆ ಖಾಲಿತನ…
ಆ ನೋವು…
ಭರಿಸಲಾರರು
ಯಾರೂ……

About The Author

ಮಾಲಾ ಮ. ಅಕ್ಕಿಶೆಟ್ಟಿ

ಮಾಲಾ ಅಕ್ಕಿಶೆಟ್ಟಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿ. ಲೇಖನ, ಕವಿತೆ, ಕಥೆ, ಲಲಿತ ಪ್ರಬಂಧ, ಮಕ್ಕಳ ಕಥೆಗಳನ್ನು ಬರಿಯೋದು ಹವ್ಯಾಸ. ಹಲವು ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ

Leave a comment

Your email address will not be published. Required fields are marked *

ಜನಮತ

ಬದುಕಲು ನಿಮಗೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ