ಪೂಜಿಸಿದರೆ…

ವಿಭೂತಿ ಹಚ್ಚಿ, ಹಾರ ಹಾಕಿ,
ಧೂಪ ದೀಪ ಬೆಳಗಿ, ಫೋಟೋ
ಪೂಜಿಸಿ, ಪ್ರತಿ ವರ್ಷ
ತರತರ ಖಾದ್ಯ ತಯಾರಿಸಿ,
ನೈವೇದ್ಯ ಹಿಡಿದು, ಕಣ್ಣೀರಲಿ ಮಿಂದು

ಹೋದವರ ನೆನಸಿ
ತೊಲಾಡಿ ಹಳೇ ನೆನಪುಗಳ ಜ್ವಾಲಾಮುಖಿ ಉಳಿಸಿಕೊಳ್ಳಲಾರದ ಘಟನೆಗಳು
ಹಿಂಸಿಸಿ, ದುಃಖ ಹೆಚ್ಚಿಸಿ

ಯಾವ ಧೂಪ ದೀಪ ಶಕ್ತಿ
ಮರಳಿಸಬಹುದು ಗೋರಿಗಳ ಜೀವ
ಅಳಿಸಬಹುದು ಸತ್ತ ನಂತರ
ಆದ ತೊಂದರೆಗಳ

ಸಮವಯಸ್ಕರು ಇನ್ನೂ
ಅಡ್ಡಾಡುವ, ಕಣ್ಣು ತಾಕದಿರಲಿ
ಅಪ್ಪನಿದ್ದಿದ್ದರೆ……..
ಶಪಿಸಿ ಕರ್ಮಗಳ

ಆ ಖಾಲಿತನ…
ಆ ನೋವು…
ಭರಿಸಲಾರರು
ಯಾರೂ……