Advertisement
ಮಾಲಾ.ಮ.ಅಕ್ಕಿಶೆಟ್ಟಿ ಬರೆದ ಈ ದಿನದ ಕವಿತೆ

ಮಾಲಾ.ಮ.ಅಕ್ಕಿಶೆಟ್ಟಿ ಬರೆದ ಈ ದಿನದ ಕವಿತೆ

ಒಣ ನೆಲ್ಲಿಕಾಯಿ ಗಿಡ

ಮೈತುಂಬ ಹಣ್ಣು ತೊಟ್ಟು
ನಳನಳಿಸುತ್ತಿದ್ದ ಗಿಡ
ಪ್ರತಿ ವರ್ಷವೂ ಎರಡು ಸಲ

ಎಲೆ ಉದುರಿ
ಮೈಯಲ್ಲಾ ಕರ್ರಗಾಗಿ
ಒರಟು ಬರೀ ಬೋಳಾದ
ಟೊಂಗೆಗಳು ಕಾಣಿಸಿ
ಭೂಮಿಯೂ ಆಶ್ಚರ್ಯಪಟ್ಟಿತ್ತು
ಅಕ್ಕಪಕ್ಕದ ಗಿಡಗಳೂ

ಮತ್ತೆ ಚಿಗುರಬಹುದೆಂದು
ಗಾಳಿ ಮಾತಾಡಿತ್ತು ಭೂಮಿಯೊಂದಿಗೆ

ತೊಗಟೆಯ ಮೇಲ್ಮೈ
ಉದುರಿ, ಟೊಂಗೆಗಳು
ಕಟ್ ಕಡಲ್ ಎಂದು ಬಿದ್ದು
ಸೂಚಿಸಲಿಲ್ಲ ಮತ್ತೆ
ಚಿಗುರುವ ಸಂದೇಶ

ಮನೆ ಮಾಲೀಕ
ಕಾಯ್ದು, ಬೇಸರಿಸಿ,
ಕಡಿಸಿದ ಒಣಗಿದ
ಗಿಡ, ಮತ್ತೊಂದನ್ನು
ಹಚ್ಚಲು

ಅನುಭವಿಸಿ, ತೃಪ್ತಿ
ಹೊಂದಿದ ನಂತರ
ಜಾಗ ಖಾಲಿ
ಮಾಡುತ್ತಲಿರಬೇಕು
ಹೊಸದಕ್ಕಾಗಿ ಚಿಗುರಲು

About The Author

ಮಾಲಾ ಮ. ಅಕ್ಕಿಶೆಟ್ಟಿ

ಮಾಲಾ ಅಕ್ಕಿಶೆಟ್ಟಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿ. ಲೇಖನ, ಕವಿತೆ, ಕಥೆ, ಲಲಿತ ಪ್ರಬಂಧ, ಮಕ್ಕಳ ಕಥೆಗಳನ್ನು ಬರಿಯೋದು ಹವ್ಯಾಸ. ಹಲವು ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ