Advertisement
ಮಾಲಾ.ಮ.ಅಕ್ಕಿಶೆಟ್ಟಿ ಬರೆದ ಈ ದಿನದ ಕವಿತೆ

ಮಾಲಾ.ಮ.ಅಕ್ಕಿಶೆಟ್ಟಿ ಬರೆದ ಈ ದಿನದ ಕವಿತೆ

ಒಣ ನೆಲ್ಲಿಕಾಯಿ ಗಿಡ

ಮೈತುಂಬ ಹಣ್ಣು ತೊಟ್ಟು
ನಳನಳಿಸುತ್ತಿದ್ದ ಗಿಡ
ಪ್ರತಿ ವರ್ಷವೂ ಎರಡು ಸಲ

ಎಲೆ ಉದುರಿ
ಮೈಯಲ್ಲಾ ಕರ್ರಗಾಗಿ
ಒರಟು ಬರೀ ಬೋಳಾದ
ಟೊಂಗೆಗಳು ಕಾಣಿಸಿ
ಭೂಮಿಯೂ ಆಶ್ಚರ್ಯಪಟ್ಟಿತ್ತು
ಅಕ್ಕಪಕ್ಕದ ಗಿಡಗಳೂ

ಮತ್ತೆ ಚಿಗುರಬಹುದೆಂದು
ಗಾಳಿ ಮಾತಾಡಿತ್ತು ಭೂಮಿಯೊಂದಿಗೆ

ತೊಗಟೆಯ ಮೇಲ್ಮೈ
ಉದುರಿ, ಟೊಂಗೆಗಳು
ಕಟ್ ಕಡಲ್ ಎಂದು ಬಿದ್ದು
ಸೂಚಿಸಲಿಲ್ಲ ಮತ್ತೆ
ಚಿಗುರುವ ಸಂದೇಶ

ಮನೆ ಮಾಲೀಕ
ಕಾಯ್ದು, ಬೇಸರಿಸಿ,
ಕಡಿಸಿದ ಒಣಗಿದ
ಗಿಡ, ಮತ್ತೊಂದನ್ನು
ಹಚ್ಚಲು

ಅನುಭವಿಸಿ, ತೃಪ್ತಿ
ಹೊಂದಿದ ನಂತರ
ಜಾಗ ಖಾಲಿ
ಮಾಡುತ್ತಲಿರಬೇಕು
ಹೊಸದಕ್ಕಾಗಿ ಚಿಗುರಲು

About The Author

ಮಾಲಾ ಮ. ಅಕ್ಕಿಶೆಟ್ಟಿ

ಮಾಲಾ ಅಕ್ಕಿಶೆಟ್ಟಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿ. ಲೇಖನ, ಕವಿತೆ, ಕಥೆ, ಲಲಿತ ಪ್ರಬಂಧ, ಮಕ್ಕಳ ಕಥೆಗಳನ್ನು ಬರಿಯೋದು ಹವ್ಯಾಸ. ಹಲವು ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ