Advertisement
ಶಂಕರಾನಂದ ಹೆಬ್ಬಾಳ ಬರೆದ ಗಝಲ್

ಶಂಕರಾನಂದ ಹೆಬ್ಬಾಳ ಬರೆದ ಗಝಲ್

ಮರಳಿನಲಿ ಊರಿದ ಹೆಜ್ಜೆಗುರುತುಗಳು
ಮಾಸದಿರುವುದೇ ಹೇಳು
ಮರೆತಿರುವ ಮನಸಿನಲಿ ನೆನಪುಗಳು
ಈಸದಿರುವುದೇ ಹೇಳು

ಹೃದಯದಲಿ ಹಚ್ಚಿಟ್ಟಿಹ ಪ್ರೇಮಜ್ಯೋತಿ
ಉರಿಯುತ್ತಲೆ ಇದೆಯೇಕೆ
ಅದುರದಂತಹ ಸನ್ನುಡಿಗಳು ಎದೆಯಲಿ
ಬೀಸದಿರುವುದೇ ಹೇಳು

ಆಂತರ್ಯದ ಆರ್ತನಾದ ಕೇಳದೆಯೆ
ಹೋದೆಯಲ್ಲ ಸಖ
ಭ್ರಾಂತಿಯಲಿ ಮುಳುಗಿರುವ ಮನವಿದು
ಕಾಸದಿರುವುದೇ ಹೇಳು

ಘಾಸಿಗೊಂಡ ಕನಸುಗಳಿಗೆ ತೇಪೆಬಳಿವ
ಕಾಯಕವು ಬೇಕೆ
ಲೇಸಬಯಸಿದ ಒಡಲು ಒಪ್ಪಿಗೆಯನು
ಸೂಸದಿರುವುದೇ ಹೇಳು

ಶುಕ್ತಿಯಲಿ ಮುಚ್ಚಿಟ್ಟಿರುವ ಮುತ್ತಂತೆ
ಅಭಿನವನ ಮಾತು
ಯುಕ್ತಿಯಲಿ ತಂಗಾಳಿಯ ತಂಪಿದು
ಮೂಸದಿರುವುದೇ ಹೇಳು

ಶಂಕರಾನಂದ ಹೆಬ್ಬಾಳ ಬಾಗಲಕೋಟ ಜಿಲ್ಲೆಯ ಇಳಕಲ್‌ ತಾಲ್ಲೂಕಿನವರು.
ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
“ಶಂಕರ ಶತಕ” (ಚೌಪದಿ ಸಂಕಲನ) ಇವರ ಪ್ರಕಟಿತ ಕವನ ಸಂಕಲನ.
ಇದುವರೆಗೂ ಎರಡು ಸಾವಿರ ಗಝಲ್‌ಗಳನ್ನು ಬರೆದಿರುವ ಇವರಿಗೆ, ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಬರೆಯುವ ಹವ್ಯಾಸ

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ