ಯುವಸಂಧಾನಕಿ ಅನಲೆ ಮತ್ತು ಯುದ್ಧವಿರೋಧಿ ಆ್ಯನ್: ಸುಮಾವೀಣಾ ಬರಹ
ನಮಗಿಲ್ಲಿ ಅನಲೆ ಯುದ್ಧದ ನೇರ ಭಾಗಿತ್ವದಿಂದ ನೋವನ್ನು ಅನುಭವಿಸಿ ಹೆಣ್ಣಿನ ಸಲುವಾದ ಹೋರಾಟವನ್ನು ಮಾಡಲು ಆಲೋಚಿಸಿ ಯುದ್ಧವನ್ನು ನಿಲ್ಲಿಸುವ ಪ್ರಯತ್ನ ಮಾಡುತ್ತಾಳೆ. ಆ್ಯನ್ ಫ್ರಾಂಕ್ ನೇರವಾಗಿ ಯುದ್ಧಕ್ಕೆ ಮುಖಾಮುಖಿಯಾಗದೆ ಇದ್ದರು ಎರಡನೆ ಮಹಾಯುದ್ಧದ ದುಷ್ಟಪರಿಣಾಮಕ್ಕೆ ಮುಖಾಮುಖಿಯಾಗುತ್ತಾಳೆ. ತನ್ನ ಜನಾಂಗಕ್ಕಾದ ಶೋಷಣೆಯನ್ನು ತನಗಾದ ಯಾತನೆಯನ್ನು ಅಳಿಸಲಾಗುವ ನಾಶಪಡಿಸಬಹುದಾದ ಕಾಗದದ ಮೆಲೆ ಭರವಸೆ ಇಟ್ಟು ಬರೆಯುವುದು ಸಾಧನೆಯೇ ಅನ್ನಿಸುತ್ತದೆ.
ಅನಲೆ ಹಾಗೂ ಆನ್ ಫ್ರಾಂಕ್ ಎಂಬ ಇಬ್ಬರು ವಿಶಿಷ್ಟ ವ್ಯಕ್ತಿಗಳ ಕುರಿತು ಸುಮಾವೀಣಾ ಬರಹ
“ಅವಳು….”: ಮಹಾಲಕ್ಷ್ಮೀ. ಕೆ. ಎನ್. ಬರಹ
ಅವಳಿಗೂ ಬುದ್ಧನಾಗುವ ಆಸೆ. ವೃಷ್ಟಿ ಅವಳು ಸಮಷ್ಟಿ, ಸೃಷ್ಟಿ ಉತ್ಪತ್ತಿಯ ಕಾರಣಕರ್ತೆ ಬುದ್ಧನಾದರೆ ಜಗವ ಪೋಷಿಸುವವರ್ಯಾರು? ತ್ಯಜಿಸಿ ಹೊರಟರೆ ಅಮ್ಮನಾಗಿ ಪಾಲಿಸುವವರ್ಯಾರು? ಒತ್ತಾಸೆಯಾಗುವ ಅವಳು ಹೊರಟುಬಿಟ್ಟರೆ ಭೂಮಿ ಬಂಜರಲ್ಲವೇ?
ಮಹಾಲಕ್ಷ್ಮೀ ಕೆ.ಎನ್. ಬರಹ ನಿಮ್ಮ ಓದಿಗೆ
ಸೋಲೋ, ಗೆಲುವೋ ಸಾಗುವುದೇ ಹಾದಿ: ಡಿ. ಯಶೋದಾ ಬರಹ
ಅವಳ ರಜೆ ಒಂದು ತಿಂಗಳು ಮುಗಿಯುತ್ತಿದ್ದಂತೆ ಕಚೇರಿಯಿಂದ ಫೋನ್ ಬರಲು ಶುರುವಾಯಿತು, ನೀವು ತಕ್ಷಣ ಬಂದು ಕೆಲಸಕ್ಕೆ ಸೇರಿಕೊಳ್ಳಬೇಕು ಎಂಬ ಆದೇಶ. ಇವಳಿಗೆ ಆಶ್ಚರ್ಯ ತನ್ನ ಎರಡು ತಿಂಗಳ ರಜೆ ಇನ್ನೂ ಮುಗಿದಿಲ್ಲ, ಮಗುವಿಗೆ ಕೇವಲ ಒಂದೇ ಒಂದು ತಿಂಗಳು, ಈ ಪರಿಸ್ಥಿತಿಯಲ್ಲಿ ಮಗುವನ್ನು ಬಿಟ್ಟು ಹೋಗೋದು ಹೇಗೆ? ಕಡೇಪಕ್ಷ ಇನ್ನೊಂದು ತಿಂಗಳು ಕಳೆದರೆ ಅಷ್ಟರಲ್ಲಿ ತಾನು ಮಗುವಿನ ಆರೈಕೆಗೆ ಬೇರೆ ವ್ಯವಸ್ಥೆ ಮಾಡಿ ಕೆಲಸಕ್ಕೆ ಬರಬಹುದು ಎಂದುಕೊಂಡು ಅದನ್ನೇ ಕಂಪೆನಿಯ ಮುಖ್ಯಸ್ಥರಿಗೆ ತಿಳಿಸಿದಳು. ಆದರೆ ಅವರು ಒಪ್ಪಲಿಲ್ಲ.
ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಉದ್ಯೋಗಸ್ಥ ಮಹಿಳೆಯರ ಪಾಡಿನ ಕುರಿತು ಡಿ. ಯಶೋದಾ ಬರಹ
Managing assets with :Ledger Live software :on desktop
Protecting Your Ledger Seed Phrase from Security Threats Ledger seed phrase security Store your Ledger seed phrase in a secure, offline location. Use a safe or a fireproof box to keep it away from potential theft or damage. Avoid situations where someone can access...
ಅನಾಯಾಸೇನ ಮರಣಂ……: ವಸಂತಕುಮಾರ್ ಕಲ್ಯಾಣಿ ಪ್ರಬಂಧ
ಹೊರಗೆ ಬಂದು, ರಿಸೆಪ್ಷನಿಸ್ಟ್ ಲೆಕ್ಕ ಹಾಕಿ, “ಇನ್ನು ಎಂಟುನೂರು ಕಟ್ಟಿ ಸಾಕು” ಎಂದು ಔದಾರ್ಯ ತೋರಿ, ಅದರಂತೆ ಮಾಡಿ ಹೊರ ಬಂದಾಗ ನನ್ನ ಹೆಂಡತಿ ತುಂಬಾ ಖುಷಿಯಲ್ಲಿದ್ದಳು. “ಸದ್ಯ ದೇವರು ಕಾಪಾಡಿದ, ನೀವು ಸುಮ್ಮನೆ ಟೆನ್ಶನ್ ಮಾಡಿಕೊಳ್ಳುತ್ತೀರಾ. ಡಾಕ್ಟರ್ ತುಂಬಾ ಒಳ್ಳೆಯವರು, ಬೇರೆಯವರಿಗೂ ರೆಕಮೆಂಡ್ ಮಾಡಬಹುದು. ಇನ್ನು ನೀವು ಸುಮ್ಮನೆ ತಲೆ ಕೆಡಿಸಿಕೊಳ್ಳದೆ ಆರಾಮಾಗಿರಿ.” ಹೀಗೆ ಸತತವಾಗಿ ಹೇಳಿ, ನಾನು ಎಲ್ಲದಕ್ಕೂ ತಲೆಯಾಡಿಸಿ “ಆರು ಸಾವಿರ ಅಂದಿದ್ದರೆ ಸುಮ್ಮನೆ ಕೊಡುತ್ತಿದ್ದೆವು, ಇನ್ನೂರು ಉಳಿದಿದೆಯಲ್ಲ ಅದರಲ್ಲಿ ಸ್ವೀಟ್ ತಗೊಂಡು ಹೋಗೋಣ” ಎಂದಾಗ ಅದಕ್ಕೂ ತಲೆಯಾಡಿಸಿದೆ.
ವಸಂತಕುಮಾರ್ ಕಲ್ಯಾಣಿ ಪ್ರಬಂಧ “ಅನಾಯಾಸೇನ ಮರಣಂ…”
ನಮ್ಮೂರ ಮಳೆಗಾಲದ ರಸದೌತಣ: ಭವ್ಯ ಟಿ.ಎಸ್. ಬರಹ
ವಿದ್ಯುತ್ ಇಲ್ಲದ ರಾತ್ರಿಗಳು, ನೆಟ್ವರ್ಕ್ ಇಲ್ಲದೆ ಲೋಕದ ಸಂಪರ್ಕ ಕಡಿದುಕೊಂಡ ಹಗಲುಗಳು. ಇದ್ದಕ್ಕಿದ್ದಂತೆ ಬೀಸುವ ಬಿರುಗಾಳಿ, ಉರುಳಿ ಬೀಳುವ ಮರಗಳು. ಕುಸಿದು ಬೀಳುವ ಗುಡ್ಡ. ಹೀಗೆ ಮಳೆ ಎಂದರೆ ಸಂತಸ, ಸೌಂದರ್ಯಗಳ ಜೊತೆಗೆ ಭಯಾನಕತೆಗಳ ಸಂಮಿಶ್ರಣ. ಕೆಲವೊಮ್ಮೆ ಈ ಮಳೆ ಜಿಗುಪ್ಸೆ ಬೇಸರವೆನಿಸಿದ್ದೂ ಇದೆ. ಆದರೆ ಮತ್ತೆ ಮತ್ತೆ ಈ ಮನ ಪ್ರತಿ ವರ್ಷದ ವರ್ಷಧಾರೆಗೆ ಹಪಹಪಿಸುತ್ತದೆ.
ಮಲೆನಾಡಿನ ಮಳೆಯ ದಿನಗಳ ಕುರಿತು ಭವ್ಯ ಟಿ.ಎಸ್. ಬರಹ ನಿಮ್ಮ ಓದಿಗೆ
ಹಿಮಾಲಯದಲ್ಲಿ ಹಕ್ಕಿಗಳ ಚಿಲಿಪಿಲಿ: ಡಾ. ಖಂಡಿಗೆ ಮಹಾಲಿಂಗ ಭಟ್ ಅನುವಾದಿತ ರಸ್ಕಿನ್ ಬಾಂಡ್ ಬರಹ
ಈ ಹಾಡು ನನ್ನನ್ನು ಯಾವಾಗಲೂ ಮರುಳುಗೊಳಿಸುತ್ತದೆ. ಈ ಪಕ್ಷಿಯು ಅನುಮಾನದಿಂದ ಕೂಗಿ, ಸರಿಯಾದ ರಾಗವನ್ನು ಪ್ರಯತ್ನಿಸುವಂತೆ, ಅನಂತರ ಆತ್ಮವಿಶ್ವಾಸದಿಂದ ಇಂಪಾಗಿ ಪೂರಾ ಹಾಡನ್ನು ಲಯ ಬದ್ಧವಾಗಿ ಬೆಟ್ಟದ ಸುತ್ತಲೂ ಕೇಳುವಂತೆ ಹಾಡಿತು. ಇದ್ದಕ್ಕಿದ್ದಹಾಗೇ ಸಂಗೀತವು ನಿಲ್ಲುವುದು, ಸ್ವರ ಆರೋಹಣದ ಮಧ್ಯೆ; ಮತ್ತು ನಾನು ಆಶ್ಚರ್ಯದಿಂದ ಹಕ್ಕಿ ಹಾಡುವುದನ್ನು ನಿಲ್ಲಿಸುವುದಕ್ಕೆ ಏನಾಗಿರಬಹುದು ಎಂಬುದಾಗಿ ಚಿಂತಿಸಿದೆ.
ಡಾ. ಖಂಡಿಗೆ ಮಹಾಲಿಂಗ ಭಟ್ ಅನುವಾದಿಸಿದ ರಸ್ಕಿನ್ ಬಾಂಡ್ ಅವರ “ರೇನ್ ಇನ್ ದ ಮೌಂಟೇನ್ಸ್” ಕೃತಿಯ ಒಂದು ಬರಹ ನಿಮ್ಮ ಓದಿಗೆ
‘ದಿ ಫೈಯರ್’….: ಡಾ. ಶ್ರೀಪಾದ ಭಟ್ ಬರಹ
ವಸಾಹತುಶಾಹಿಯ ದೌರ್ಜನ್ಯಕ್ಕೆ ತೀವ್ರ ಬಲಿಯಾಗಿ ಅದರಿಂದ ಹೊರಬಂದು ಸ್ವತಂತ್ರ ವ್ಯಕ್ತಿತ್ವಕ್ಕಾಗಿ ನಡೆಸಿದ ಪ್ರಯತ್ನದ ಭಾಗವಾಗಿ ಇಂತಹ ಬರಹಗಳನ್ನು ನಾವು ಮುಖಾಮುಖಿಯಾಗುವುದು ಸಾಂಸ್ಕೃತಿಕ ಸ್ವರೂಪದಲ್ಲಿ ವಸಾಹತುಶಾಹಿಗೆ ಎದುರಾಗುವ ಒಂದು ಬಗೆ ಎಂದೇ ಈ ಪ್ರಯತ್ನವನ್ನು ನೋಡಬಹುದಾಗಿದೆ. ನಮ್ಮ ಸಂಸ್ಕೃತಿ, ಜೀವನ ವಿಧಾನಗಳನ್ನು ಸಂರಕ್ಷಿಸಿಕೊಳ್ಳುವ ಹೋರಾಟದ ನೆಲೆ ಭಾರತಕ್ಕೂ, ಲ್ಯಾಟಿನ್ ಅಮೇರಿಕಕ್ಕೂ ಒಂದೇ ಆಗಿದೆ ಎಂಬುದನ್ನು ತಜ್ಞರು ಈಗಾಗಲೇ ತಿಳಿಸಿಯಾಗಿದೆ.
ಸಂತೋಷ ಪಟ್ಲ ನಿರ್ದೇಶನದ ‘ದಿ ಫೈಯರ್’ ರಂಗ ಪ್ರಯೋಗದ ಕುರಿತು ಡಾ. ಶ್ರೀಪಾದ ಭಟ್ ಬರಹ
ಶಾಲೆ ಕಳ್ಳ: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಬರಹ
ಎಷ್ಟೋ ಸಲ ಗೇಟ್ ಹತ್ತಿರ ಹೋಗುವಾಗಲೇ ಶಾಲೆಯ ಪ್ರಾರ್ಥನೆ ಶುರುವಾಗುತ್ತಿತ್ತು. ಪ್ರಾರ್ಥನೆ ಹೇಳುವ ಮಕ್ಕಳ ಸಮೂಹ ಗಾಯನದಲ್ಲಿ, “ಮಂಗಳವನು ಕರೆಯುತಿರುವ ದೇವ ಶುಭವ ನೀಡಲಿ…” ಅಂತ ಕೇಳುವಾಗಲೇ ಅಳು ಉಕ್ಕಿ ಉಕ್ಕಿ ಬರುತ್ತಿತ್ತು. ತಡ ಆಯ್ತು, ಇನ್ನು ಟೀಚರ್ ಹೊಡಿತಾರೆ, ಅಮ್ಮ ಬಿಟ್ಟು ಹೋದ್ರು ಅನ್ನೋದು ಮಾತ್ರವಲ್ಲದೇ ಎದೆಯಲ್ಲಿ ಯಾವುದೋ ಏಕಾಂಗಿ ಭಾವ ಉಕ್ಕಿ ದುಃಖ ಉಮ್ಮಳಿಸಿ ಬರುತ್ತಿತ್ತು. ಅದು ಆ ಪ್ರಾರ್ಥನೆಯ ರಾಗದಿಂದ ಹಾಗಾಗುತ್ತಿತ್ತೋ ಅಥವಾ ಬೇರಾವುದರಿಂದಲೋ ಗೊತ್ತಾಗುತ್ತಿರಲಿಲ್ಲ. ನಿಂತಲ್ಲಿಯೇ ಜೋರಾಗಿ ಅತ್ತು ಬಿಡುತ್ತಿದ್ದೆ.
ಶಾಲೆಗೆ ಹೋಗುವುದನ್ನು ತಪ್ಪಿಸಲು ನೋಡುವ ಶಾಲೆ ಕಳ್ಳರ ಕುರಿತು ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಬರಹ








