ಅಣಶಿ ಘಟ್ಟದ ಮೇಲಿನ ಹಾದಿ
ಈ ಘಟ್ಟದ ಮಾರ್ಗದಲ್ಲಿ ಸಾಗುತ್ತಿದ್ದರೆ ಯಾರೋ ಹಿಂಬದಿಯಿಂದ ನಮ್ಮನ್ನು ಗಮನಿಸುತ್ತ ಅನುಸರಿಸುತ್ತ ಬಂದ ಹಾಗೆ ಅನಿಸುತ್ತದೆ. ಪಡ್ಡೆ ಹುಡುಗರ ಹಾಗೆ ಸೀಟಿ ಹಾಕುತ್ತ ನಮ್ಮ ಬೆನ್ನ ಹಿಂದೆಯೇ ಯಾರೋ ಬಂದಂತೆ ಅನಿಸಿ, ತಿರುಗಿ ನೋಡಿದರೆ ಯಾರೂ ಕಾಣುವುದಿಲ್ಲ. ಇದ್ದಕ್ಕಿದ್ದಂತೆ ಸೀಟಿಯ ಸದ್ದು ನಿಲ್ಲುತ್ತದೆ. ಹೀಗೆ ಕಾಡುವ ಪಡ್ಡೆ ಹುಡುಗನ ಹೆಸರು ‘ನೀಲಿ ಸಿಳ್ಳಾರ’. ಈ ವಿಶಿಷ್ಟ ಹಕ್ಕಿರಾಯ ಕಾಡಿನ ಸೊಬಗು ಹೆಚ್ಚಿಸುವವ. -ಅಕ್ಷತಾ ಕೃಷ್ಣಮೂರ್ತಿ ಬರೆಯುವ ‘ಕಾಳಿಯಿಂದ ಕಡಲಿನವರೆಗೆ’ ಸರಣಿಯಲ್ಲಿ ಕಾಡಿನ ವಿಸ್ಮಯಗಳ ವಿವರ.
ʻಲೋಕ ಸಿನೆಮಾ ಟಾಕೀಸ್ʼ ನಲ್ಲಿ ಪೋಲೆಂಡ್ ನ ʻಇಡಾʼ ಸಿನಿಮಾ
ಆನ್ನಾ ಕ್ರಿಸ್ತನ ವಿಗ್ರಹವನ್ನು ಪೂರ್ಣಗೊಳಿಸುವ ಆನ್ನಾಳ ಪರಿಚಯವಾಗುತ್ತದೆ. ಹದಿನೆಂಟರ ಅವಳಿಗೆ ಮದರ್ ಸುಪೀರಿಯರ್ ಪ್ರಮಾಣ ವಚನ ಸ್ವೀಕರಿಸುವ ಮುಂಚೆ ‘ನಿನ್ನೂರಿಗೆ ಹೋಗಿ ದೂರದ ಸಂಬಂಧಿ ವಾಂಡಾ ಕ್ರುಜ್ಳನ್ನು ಭೇಟಿ ಮಾಡಿ ಬಾ’ ಎನ್ನುತ್ತಾಳೆ.
ಅವಳನ್ನು ಭೇಟಿಯಾಗುವ ಸಂದರ್ಭವು ಅವಳ ಮೇಲೆ ಬೀರಿದ ಪ್ರಭಾವಗಳನ್ನು ಇಡಾ ಸಿನಿಮಾ ಕಟ್ಟಿಕೊಡುವ ರೀತಿ ವಿಭಿನ್ನವಾದುದು. ʻಲೋಕ ಸಿನೆಮಾ ಟಾಕೀಸ್ʼ ನಲ್ಲಿ ಪೋಲೆಂಡ್ ನ ʻಇಡಾʼ ಸಿನಿಮಾ ಕುರಿತು ಬರೆದಿದ್ದಾರೆ ಎ.ಎನ್. ಪ್ರಸನ್ನ.
‘ದೇವರು ಹೆಚ್ಚಿಗೆ ಕೊಟ್ಟದ್ದು ನನ್ನದಲ್ಲ’
ಹೊಸಬರು ಹಳ್ಳಿಗೆ ಬಂದರೆ ಕಟ್ಟೆಯ ಮೇಲೆ ಕುಳಿತ ಹಿರಿಯರು ಅವರಿಗೆ ಅನೇಕ ಪ್ರಶ್ನೆಗಳನ್ನು ಕೇಳುತ್ತಿದ್ದರು. ಅವರು ಎಲ್ಲಿಂದ ಬಂದಿದ್ದಾರೆ, ಯಾರ ಮನೆಗೆ ಹೋಗುತ್ತಿದ್ದಾರೆ. ಬಂದ ಕಾರಣವೇನು, ಅವರ ಕುಲಗೋತ್ರ ಯಾವುದು, ಆ ಆಗಂತುಕರ ಊರಿನಲ್ಲಿ ತಮಗೆ ಪರಿಚಯವಿದ್ದವರ ಕುರಿತು ತಿಳಿದುಕೊಳ್ಳುವುದು, ಆ ಊರಿನ ಜೊತೆಗಿನ ತಮ್ಮ ಸಂಬಂಧವನ್ನು ನೆನಪಿಸಿಕೊಳ್ಳುವುದು ಮುಂತಾದವು ನಡೆದೇ ಇರುತ್ತಿದ್ದವು.
ರಂಜಾನ್ ದರ್ಗಾ ಬರೆಯುವ ‘ನೆನಪಾದಾಗಲೆಲ್ಲ’ ಸರಣಿಯ ಏಳನೆಯ ಕಂತು.
ನೀಲಕಡಲನು ಸೀಳಿ ತೇಲುತ ಸಾಗಿದ ಪಯಣ
ಹಡಗು ಮುಂದೆ ಹೋದಂತೆ ದೋಣಿಯ ಹಾಗೆ ಓಲಾಡಲು ಶುರುವಿಟ್ಟುಕೊಂಡಿತು. ಕಡಲಿನ ಅಲೆಗಳಿಗೆ ಲಯಬದ್ಧವಾಗಿ ಚಲಿಸಿದರೂ ಒಮ್ಮೊಮ್ಮೆ ಮುಗ್ಗರಿಸಿದಂತೆ ಅನಿಸುತ್ತಿತ್ತು. ಯಾರೋ ಒಂದಿಬ್ಬರು ಅಚ್ಚರಿಯಾಗಿ ಆ ದೃಶ್ಯ ನೋಡುತ್ತಿದ್ದರೂ ಅವರೊಂದಿಗೆ ಚರ್ಚಿಸಲು ಭಾಷೆ ಅರಿಯದೆ ಇದಿನಬ್ಬ ತನ್ನ ಗತ ಬದುಕನ್ನು ಮೆಲುಕು ಹಾಕತೊಡಗಿದ. ತಾನು ಬದುಕಿನ ಯಾವ ಹಂತದಲ್ಲಿ ಇದ್ದೇನೆ ಎಂದು ಅರಿವಾಗುತ್ತಲೇ ದುಃಖ ಉಮ್ಮಳಿಸಿ ಬಂತು. ದುಃಖದಲ್ಲಿ ಅವನು ತಲೆಯಲ್ಲಿ ಹಾದು ಹೋದ ಯೋಚನೆಗಳೇನು?”
ಕ್ಲಾಸ್ಮೇಟ್..! ಗೋವಿಂದ ಗೋವಿಂದಾ..!!
ಬಾಲ್ಯದಲ್ಲಿ ನಮ್ಮ ಜೊತೆ ಆಟವಾಡುತ್ತಿದ್ದ ಅನೇಕರ ಹೆಸರು ಈಗಲೂ ನೆನಪಿಗೆ ಬಂದಾಗ, ಪ್ರತಿಯೊಬ್ಬರು ಆಗ ಮಾಡಿದ ಕೆಲವು ವಿಶೇಷ ಕಾರ್ಯಗಳನ್ನು ನೆನೆಸಿಕೊಂಡರೆ ನಗು ಕೂಡ ಬರುತ್ತಾ ಇರುತ್ತದೆ.. ಹೆಸರು ಮನಸ್ಸಿನ ಮೇಲೆ ಅಚ್ಚಾಗಿ ನಿಂತಿದ್ದರೂ, ಅವರು ಈಗ ಹೇಗಿರುತ್ತಾರೆ ಎಂದು ಗೊತ್ತಿರುವುದಿಲ್ಲ. ಹಾಗಾಗಿ ಕೆಲವೊಮ್ಮೆ ಅವರು ಬಂದು ನಮ್ಮ ಮುಂದೆ ನಿಂತರೂ ಅವರು ಯಾರು ಎಂಬುದು ತಿಳಿಯುವುದು ಅನೇಕ ಸರ್ತಿ ಕಷ್ಟಸಾಧ್ಯ.
ಡಾ. ಕೆ.ಬಿ. ಸೂರ್ಯಕುಮಾರ್ ಬರೆಯುವ ‘ನೆನಪುಗಳ ಮೆರವಣಿಗೆ’
ಆಂಗ್ಲ ಸಾಹಿತ್ಯ ವಿಹಾರಿ ಹಟ್ಟಿಯಂಗಡಿ ನಾರಾಯಣ ರಾವ್
ಹ. ನಾ. ರಾ. ಅವರ ಅನುವಾದದ ಮಹತ್ವವನ್ನು ಆ ಕಾಲದಲ್ಲಿ ಅಷ್ಟಾಗಿ ಗುರುತಿಸಲಿಲ್ಲವೆಂದೇ ಅನಿಸುತ್ತದೆ. ಅದಕ್ಕೆ ಕಾರಣ ಮುಖ್ಯವಾಗಿ ಬೆಂಗಳೂರು- ಮೈಸೂರು ಕೇಂದ್ರದ ಸಾಹಿತಿಗಳಿಗೆ ಅವರ ಅನುವಾದಗಳು ಅಲಭ್ಯವಾಗಿದ್ದವು ಎಂದು ಊಹಿಸಬಹುದು. ದಕ್ಷಿಣ ಕನ್ನಡದವರು ಅವರನ್ನು ಮುಖ್ಯ ಕವಿ-ಚಿಂತಕ ಎಂದು ಪರಿಗಣಿಸಿದ್ದರು. ಪಂಜೆಯವರು ‘ವಾಗ್ಭೂಷಣ’ದ ಸಂಚಿಕೆಯಲ್ಲಿ ಬಂದ ‘ಶೇಕ್ಸ್ಪಿಯರಿನ ಸುಭಾಷಿತ ಕಲಾಪಗಳ’ ಚೌಪದಿಗಳನ್ನು ಪಠ್ಯ ಪುಸ್ತಕಗಳಲ್ಲಿ ಬಳಸಿಕೊಂಡಿದ್ದರು. ‘ಕರಾವಳಿಯ ಕವಿರಾಜಮಾರ್ಗ’ ಸರಣಿಯಲ್ಲಿ ಹಟ್ಟಿಯಂಗಡಿ ನಾರಾಯಣ ರಾವ್ ಕುರಿತು ಬರೆದಿದ್ದಾರೆ ಡಾ.ಬಿ. ಜನಾರ್ದನ ಭಟ್.
‘ಆನೆಗೆ ಬಂದ ಮಾನ’ ಶೇಷಾದ್ರಿ ಗಂಜೂರು ಹೊಸ ಸರಣಿ ಆರಂಭ
ಕೇರಳದ ಕೊಚ್ಚಿಯಿಂದ ವ್ಯಾಟಿಕನ್ ಸಿಟಿಯವರೆಗೆ ಪ್ರಯಾಣ ಮಾಡಿದ ಆನೆ, ‘ಹ್ಯಾನೋ’ ಪಾಲಿಗೆ ರಾಜಕೀಯ ಮನ್ನಣೆ, ಪ್ರತಿಷ್ಠೆ-ಗೌರವಗಳ ಸುರಿಮಳೆಯೇ ಆಯಿತು. ಸ್ವತಃ ಪೋಪ್ ಅವನ ಕಾಳಜಿ ಮಾಡುತ್ತಿದ್ದರು. ಆದರೆ ಅವನು ಒಂಟಿಯಾಗಿ ಬಾಳಿ ತೀರಿಕೊಂಡ. ಆನೆಗಳ ಜೀವನ ವಿಧಾನ, ಅವುಗಳ ಯೋಚನೆ, ಆಕಾಂಕ್ಷೆಗಳು ಬಹಳ ಕುತೂಹಲಕಾರಿಯಾದವು. ಈ ಕುರಿತು ಶೇಷಾದ್ರಿ ಗಂಜೂರು ‘ಆನೆಗೆ ಬಂದ ಮಾನ’ ಎಂಬ ಹೊಸ ಸರಣಿ ಬರೆಯಲಿದ್ದಾರೆ. ಅವರ ಮೊದಲ ಬರಹ ಇಲ್ಲಿದೆ.
ಅಲ್ಲೀಬಾದಿಯ ಮೃಗಶಿರ ಮಳೆಹಾಡ ನೆನಪು
ಮಣ್ಣೆತ್ತಿನ ಅಮಾವಾಸೆ ದಿನ ಗುಳ್ಳವ್ವ ಕೂಡುತ್ತಾಳೆ. ಇವಳು ಐದು ವಾರ ಇರುತ್ತಾಳೆ. ಹದಿಹರೆಯದ ಹುಡುಗಿಯರು ಇದರಲ್ಲಿ ಹೆಚ್ಚಾಗಿ ಪಾಲ್ಗೊಳ್ಳುವರು. ಅವರ ಜೊತೆ ಗುಳ್ಳವ್ವ ಐದು ವಾರ ಇರುವುದರಿಂದ ಭಾವನಾತ್ಮಕ ಸಂಬಂಧ ಬೆಳೆದಿರುತ್ತದೆ. ವಾರದ ಕೊನೆಯ ದಿನ ಹೊಲದಲ್ಲಿ ಹುಗಿಯುವಾಗ ಇಲ್ಲವೇ, ಗಿಡದ ಮೇಲೆ ಕೂಡಿಸಿ ಬರುವಾಗ ಬಿಕ್ಕಿಬಿಕ್ಕಿ ಅಳುತ್ತಾರೆ. ಗುಳ್ಳವ್ವ ಕೂಡ ಮಳೆಗೆ ಸಂಬಂಧಿಸಿದ ದೇವತೆಯಾಗಿದ್ದಾಳೆ.
ರಂಜಾನ್ ದರ್ಗಾ ಬರೆಯುವ ‘ನೆನಪಾದಾಗಲೆಲ್ಲ’ ಸರಣಿ
ಡರ್ಬನ್ ಇದಿನಬ್ಬ: ಗುಲಾಮಗಿರಿಯ ಗಾಡಿ ಏರಿ..
ಆಗಂತುಕ ಗಾಡಿಯೆಡೆಗೆ ಸಾಗಿದ. ಗಾಡಿ ಚಾಲಕ ಮತ್ತು ಆಗಂತುಕ ಮಾತನಾಡಿದರು. ಇದಿನಬ್ಬನಿಗೆ ಗಾಡಿಯೇರಲು ಆಗಂತುಕ ಹೇಳಿದ. ಎತ್ತಿನ ಗಾಡಿ ಆಗಂತುಕ ಸೂಚಿಸಿದ ಒಂದು ದಾರಿ ಹಿಡಿದು ‘ಗಡ- ಗಡ’ ಸದ್ದನ್ನು ಮಾಡುತ್ತಾ ಮುಂದೆ ಸಾಗಿತು. ಮೈಲುಗಳು ಮೈಲುಗಳನ್ನು ದಾಟಿ ಆ ಧೂಳಿನಿಂದಾವೃತಗೊಂಡ ಮಣ್ಣಿನ ರಸ್ತೆಯಲ್ಲಿ ಕುಳಿತಿದ್ದವರನ್ನೆಲ್ಲಾ ಅಲ್ಲಾಡಿಸಿ ಎಸೆದೆಸೆದು ಗಾಡಿ ಬಹಳಷ್ಟು ದೂರ ಸಾಗಿತು. -ಮುನವ್ವರ್ ಜೋಗಿಬೆಟ್ಟು ಬರೆಯುವ ‘ಡರ್ಬನ್ ಇದಿನಬ್ಬ’ ಕಿರು ಕಾದಂಬರಿಯ ನಾಲ್ಕನೇ ಕಂತು.








