ತಪ್ಪು ಲೆಕ್ಕಗಳ ಮೇಲೆ ಬೆಳಕು ಬೀಳೋದು ಯಾವಾಗ?
ಹತ್ತೊಂಬತ್ತೆಯ ಶತಮಾನದ ಬ್ರಿಟನ್ನಿಗೂ, ಇಂದಿನ ಭಾರತಕ್ಕೂ ಹಲವಾರು ವ್ಯತ್ಯಾಸಗಳಿರಬಹುದು. ಆದರೆ, ಯಾವುದೇ ಶತಮಾನದ ಯಾವುದೇ ಸರ್ಕಾರಕ್ಕೂ ಅಂಕಿ-ಅಂಶಗಳೆಂದರೆ ಒಂದು ರೀತಿಯ ಅಲರ್ಜಿಯೇ. ಸರ್ಕಾರಗಳಿಗೆ ವಿವರವಾದ ಅಂಕಿ-ಅಂಶಗಳನ್ನು ನೀಡಲು ಭಯವಾದರೂ ಏತಕ್ಕೆ?!
-ಶೇಷಾದ್ರಿ ಗಂಜೂರು ಬರೆಯುವ ವಿಜ್ಞಾನ ಸರಣಿ
ಅಣಶಿ ಎಂಬ ಮಳೆ ಹಾಡಿನ ಊರು
ಕಾಳೀ ನದಿ ಎಂದರೆ ಕಪ್ಪು ಸುಂದರಿ. ಆಕೆಯದು ಸುಲಲಿತ ಸಲಿಲ ಹರಿವಲ್ಲ. ಏಳುಬೀಳು, ತಿರುವು ಮುರುವುಗಳ ನಡಿಗೆ. ಸೂಪಾ, ಬೊಮ್ಮನಳ್ಳಿ, ಕೊಡಸಳ್ಳಿ, ಕದ್ರಾ ಅಣೆಕಟ್ಟೆಗಳನ್ನು ಆಕೆ ದಾಟಬೇಕು. ಉತ್ತರ ಕನ್ನಡ ಜಿಲ್ಲೆಯ ಜನರ ಕೃಷಿಗೆ ಜೀವನಾಡಿಯಾದವಳು. ಆಕೆ ಕೊಟ್ಟ ಅಂತರ್ಜಲದಿಂದಲೇ ಜೋಯಿಡಾ ತಾಲ್ಲೂಕಿನ ದಟ್ಟಕಾಡುಗಳು ಹೆಮ್ಮೆಯಿಂದ ನಿಂತಿವೆ. “
ʻಲೋಕ ಸಿನಿಮಾ ಟಾಕೀಸ್ʼನಲ್ಲಿ ಚಿಲಿಯ ʻದ ಮೇಡ್ʼ ಸಿನಿಮಾ
”ಈಗೀಗ ರಾಕ್ವಿಲಾಳಿಗೆ ತನಗೆ ಆರೋಗ್ಯ ಅಷ್ಟು ಸರಿ ಇಲ್ಲ ಎನ್ನುವುದರ ಅರಿವಾಗುತ್ತದೆ. ಕೆಲಸದ ಒತ್ತಡದಿಂದ ಉಂಟಾದ ಶಕ್ತಿಯ ಕೊರತೆ. ಇದರಿಂದ ಒಮ್ಮೊಮ್ಮೆ ಅವಳು ತಲೆನೋವು ಬಂದು, ಸರಿರಾತ್ರಿಯಲ್ಲಿ ಎದ್ದು, ತನ್ನಷ್ಟಕ್ಕೆ ಗುಳಿಗೆಗಳನ್ನು ನುಂಗುತ್ತಾಳೆ. ಸಣ್ಣ ಬೆಳಕಿನ ಸುತ್ತ ಆವರಿಸಿರುವ ಕತ್ತಲು ಅವಳ ತಲೆಭಾರಕ್ಕೆ ರೂಪಕವಾಗುತ್ತದೆ…”
ಎ.ಎನ್. ಪ್ರಸನ್ನ ಬರೆಯುವ ‘ಲೋಕ ಸಿನಿಮಾ ಟಾಕೀಸ್’ನಲ್ಲಿ ಚಿಲಿಯ ʻದ ಮೇಡ್ʼ ಸಿನಿಮಾದ ವಿಶ್ಲೇಷಣೆ
ಅಜ್ಜಿಯೀಗ ಅಗಸಿ ಬಾಗಿಲ ದಾಟಿರಬಹುದೆ?
ಮೊದಲ ಸಲ ನನ್ನ ಅಜ್ಜಿಯ ಜೊತೆ ರವಿವಾರ ಸಂತೆ ದಿನ ನಡೆಯುತ್ತ ವಿಜಾಪುರಕ್ಕೆ ಹೋಗುವಾಗ ಬಹಳ ದೂರದಿಂದಲೆ ಬೃಹತ್ತಾದ ಗೋಲಗುಂಬಜವನ್ನು ನೋಡಿ ಆಶ್ಚರ್ಯಚಕಿತನಾಗಿದ್ದೆ. ಆಗೊಮ್ಮೆ ಈಗೊಮ್ಮೆ ಕಾಣಿಸುವ ಕಾರುಗಳು, ಲಾರಿಗಳು ಮುಂತಾದವುಗಳ ಜೊತೆ ನಮೂನೆ ನಮೂನೆ ವೇಷಭೂಷಣದ ಜನರು ಮಜವಾಗಿ ಕಾಣುತ್ತಿದ್ದರು. ನಮ್ಮ ಹಳ್ಳಿಯಲ್ಲಾದರೆ ಬಹುಪಾಲು ಜನರು ಧೋತರ ಮತ್ತು ಮಾಂಜರಪಾಟ್ ಬಟ್ಟೆಯಿಂದ ಹೊಲಿದ ಕುಂಬಳಛಾಟಿ…”
ಮುನವ್ವರ್ ಬರೆಯುವ ʼಡರ್ಬನ್ ಇದಿನಬ್ಬʼ ಕಾದಂಬರಿ ಇಂದಿನಿಂದ…
ನೇತ್ರಾವತಿ ದಂಡೆಯ ಅಜಿಲಮೊಗರು ಎಂಬ ಊರಿನ ಇದಿನಬ್ಬನಿಗೆ, ಆಫ್ರಿಕಾದ ಡರ್ಬನ್ ನಂಟು ಅಂಟಿದ ಕತೆಯಿದು. ನದಿಯ ಹರಿವಿನಂತೆ ಸಾಗುವ ಈ ಕಥೆಯಲ್ಲಿ ಅನಿರೀಕ್ಷಿತ ತಿರುವುಗಳು ಓದಿನ ಕುತೂಹಲವನ್ನು ಹೆಚ್ಚಿಸುತ್ತವೆ. ಕಥೆ ಹೇಳುತ್ತ ಗುಲಾಮ ಪದ್ಧತಿಯಲ್ಲಿರುವ ಕ್ರೌರ್ಯದ ಅನಾವರಣ ಮಾಡಿರುವ ಕಾದಂಬರಿಕಾರ ಮುನವ್ವರ್ ಜೋಗಿಬೆಟ್ಟು, ಬರವಣಿಗೆಯನ್ನು ಬಹಳ ಪ್ರೀತಿಸುತ್ತಾರೆ.”
ಭಕ್ತಿ-ವಿರಕ್ತಿ–ಅನುರಕ್ತಿಗಳ ಸಂಗಮ ಹರಿದಾಸ ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಹರಿದಾಸರು ಹೀಗೆ ಅಲೆದದ್ದು ಸುಮಾರು ಎಂಟು ವರ್ಷಗಳ ಕಾಲ. ಆ ದುರ್ದಿನಗಳು ಕಳೆದ ಮೇಲೆ ಹರಿದಾಸರು ಸುಮಾರು 1905 ರಲ್ಲಿ ಊರಿಗೆ ಮರಳಿದರು. ಬಂದವರು ಮತ್ತೆ ಕಾರ್ಕಳ ವೆಂಕಟರಮಣನ ಸನ್ನಿಧಿಯಲ್ಲಿ ಎಂಟು ತಿಂಗಳುಗಳ ಕಾಲ ಇದ್ದರು. ಹಿಂದೆ ಅವರು ತಾನೇ ಶನಿವಾರ ಶನಿವಾರ ತಿರುಪತಿಗೆಂದು ಕಾಣಿಕೆ ಹಾಕುತ್ತ ಕಟ್ಟಿಟ್ಟ ಮುಡಿಪನ್ನೇ ಬಡತನದ ಕಾರಣ ತೆಗೆದು ಖರ್ಚು ಮಾಡುವ ಪ್ರಸಂಗವೂ…”
ಆಕೆ ಹಗಲ್ಹೊತ್ತು ಬಯಲಿಗೆ ಹೋದದ್ದೇ ತಪ್ಪಾಯ್ತು!
ಹೈನುಳ್ಳವರು ದೊಡ್ಡ ಪಾತ್ರೆಯಲ್ಲಿ ಮೊಸರು ಕಡೆಯುತ್ತ ಬೆಣ್ಣೆ ತೆಗೆಯುವುದನ್ನು ನೋಡುವುದೇ ನನಗೆ ಸೋಜಿಗವಾಗಿತ್ತು. ಮೊಸರು ಮಜ್ಜಿಗೆಯಾಗಿ ಅದರೊಳಗಿಂದ ಬೆಣ್ಣೆ ಬರುವುದನ್ನು ನೋಡಲಿಕ್ಕೆ ಮಜಾ ಅನಿಸುತ್ತಿತ್ತು. ದೊಡ್ಡ ಕಡೆಗೋಲನ್ನು ಕಂಬದ ಆಧಾರದ ಮೇಲೆ ದೊಡ್ಡ ಪಾತ್ರೆಯಲ್ಲಿ ಇಳಿಬಿಟ್ಟು ಅದಕ್ಕೆ ಸಣ್ಣ ಹಗ್ಗ ಸುತ್ತಿ ಎರಡೂ ಕೈಯಿಂದ ಮಥಿಸುತ್ತಿದ್ದರು. ಮಜ್ಜಿಗೆಯನ್ನು ಎಂದೂ ಮಾರುತ್ತಿರಲಿಲ್ಲ..”
ಅಪರಾಧ ಮತ್ತು ಶಿಕ್ಷೆ: ತಪ್ಪಿಹೋದುದನ್ನು ನೆನೆಯುತ್ತಾ…
ಮನೆಗೆ ಮರಳುವ ಹೊತ್ತಿಗೆ ಈ ತೀರ್ಮಾನ ಅವನ ಕೋಪವನ್ನೂ ಕಹಿಯನ್ನೂ ಮನೆ ಬಿಡುವಾಗ ಇದ್ದುದಕ್ಕಿಂತ ಎರಡು ಪಟ್ಟು ಹೆಚ್ಚಿಸಿತು. ಕ್ಯಾತರೀನ ಇವಾನೋವ್ನಾ ಮನೆಯಲ್ಲಿ ನಡೆಯುತ್ತಿದ್ದ ಅಂತ್ಯ ಸಂಸ್ಕಾರದ ಊಟದ ಏರ್ಪಾಟು ಅವನ ಕುತೂಹಲವನ್ನು ಕೆರಳಿಸಿತು.”
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ ಅನುವಾದಿಸಿದ ಫ್ಯದೊರ್ ದಾಸ್ತಯೇವ್ಸ್ಕಿ ಬರೆದ ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಮುಂದುವರಿದ ಪುಟಗಳು.
ಖಾನ್ ಕಾಂಪೌಂಡ್: ಮೈಸೂರು ಮಹಾರಾಜರು ಮೆಚ್ಚಿದ ದರ್ಬಾರಿ ಕಾನಡ
‘”ರಹಿಮತ್ ಖಾನ್ ಅವರು ಸಿತಾರ್ ನ ತಂತಿವಿನ್ಯಾಸವನ್ನು ಬದಲಿಸಿದ ಖ್ಯಾತಿಗೆ ಪಾತ್ರರಾದವರು. ಸಿತಾರ್ ನಲ್ಲಿ ರುದ್ರವೀಣೆಯ ನಾದಸುಖವನ್ನು ಅರಸುತ್ತ, ಅವರು ಪ್ರಯೋಗಶೀಲತೆಯತ್ತ ಮುಖಮಾಡಿದರು. ಜನಪದ ಸಂಗೀತ ಉಪಕರಣ ಎನಿಸಿದ್ದ ಸಿತಾರ್ ಗೆ ಶಾಸ್ತ್ರೀಯತೆಯ ಮನ್ನಣೆ ದೊರೆಯಲು ರಹಿಮತ್ ಖಾನ್ ಅವರ ಈ ಆವಿಷ್ಕಾರವೂ ಕಾರಣ.”ಶೇಣಿ ಮುರಳಿ ಬರೆದ ಉಸ್ತಾದ್ ರಫೀಕ್ ಖಾನ್ ಜೀವನಚರಿತ್ರೆ ‘ಖಾನ್ ಕಾಂಪೌಂಡ್’ನ ಅಧ್ಯಾಯವೊಂದು, ಈ ಆವಿಷ್ಕಾರದ ವಿವರ ನೀಡುತ್ತದೆ









