ಆಗಿ ಹೋಗಿರುವುದು, ಆಗುತ್ತಿರುವುದು, ಆಗ ಬೇಕಿರುವುದು, ಎಲ್ಲವೂ…
ವಿಜ್ಞಾನದ ಮಹತ್ವ-ರುಚಿ ಇರುವುದು ಪ್ರಕೃತಿಯ ರಂಗಮಂಟಪದ ತೆರೆಗಳನ್ನು ಒಂದೊಂದಾಗಿ ಮೇಲೆತ್ತುತ್ತಾ ಮೂಲ ನಾಟಕವನ್ನು ತೋರಿಸಲೆತ್ನಿಸುವ ಅದರ ಪ್ರಯತ್ನದಲ್ಲಿ. ಈ ಪ್ರಯತ್ನ ಮುಂದುವರೆದಂತೆ, ಒಂದೊಂದೇ ತೆರೆ ಕಳಚಿದಂತೆ, ಅನುಭವದಿಂದಷ್ಟೇ ಪಡೆದ-ಪಡೆವ ಜ್ಞಾನಗಳ ಗಡಿ ದಾಟುತ್ತಿರುವಂತೆ, ಈ ಪ್ರಯತ್ನದಲ್ಲಿ ಸದಾ ನಮ್ಮೊಂದಿಗೆ ಇರುವವಾದರೂ ಯಾವುವು?
-ಶೇಷಾದ್ರಿ ಗಂಜೂರು ಬರೆಯುವ ವಿಜ್ಞಾನ ಸರಣಿ
ನಾನು ರಂಜಾನ್ ದರ್ಗಾ, ಎಪ್ಪತ್ತು ವರ್ಷಗಳ ಮುಗಿಸಿ ಎಪ್ಪತ್ತೊಂದನೇ ವರ್ಷಕ್ಕೆ ಕಾಲಿಟ್ಟಿರುವೆ…
”ಆ ಆಕಳುಗಳ ಹಿಂಡಿನಲ್ಲಿ ಗಂಗಾ ಎಂಬ ಆಕಳು ಇತ್ತು. ಅದು ನನ್ನನ್ನು ತಾಯಿಯಂತೆ ಪ್ರೀತಿಸುತ್ತಿತ್ತು. ನಾನು ಗೆಳೆಯರ ಜೊತೆ ಓಡಾಡುತ್ತ ಹಸಿವಾದಾಗ ಗಂಗಾ ಬಳಿ ಹೋಗುತ್ತಿದ್ದೆ. ನನ್ನನ್ನು ನೋಡಿದ ತಕ್ಷಣ ಅದು ಕಕ್ಕುಲತೆಯಿಂದ ಧ್ವನಿ ತೆಗೆಯುತ್ತಿತ್ತು. ನಾನು ಹೋಗಿ ಅದರ ಬಾಯಿ ಮುಂದೆ ಕೂಡುತ್ತಿದ್ದೆ. ಅದು ಬಹಳ ಪ್ರೀತಿಯಿಂದ ನನ್ನ ತಲೆ ನೆಕ್ಕುತ್ತಿತ್ತು.”
ಹಿರಿಯ ಪತ್ರಕರ್ತ, ಲೇಖಕ ರಂಜಾನ್ ದರ್ಗಾ ಅವರ ಜೀವನದ ಪುಟಗಳು ಇನ್ನು ಮುಂದೆ ವಾರಕ್ಕೊಮ್ಮೆ.
ಗಜಪಥದಲ್ಲಿ ಸಾಗಿದ ರಾಷ್ಟ್ರಕವಿ ಗೋವಿಂದ ಪೈ
ಗೋವಿಂದ ಪೈಗಳಿಗೆ 1949 ರಲ್ಲಿ ಮದರಾಸು ಸರಕಾರ ‘ರಾಷ್ಟ್ರಕವಿ’ ಬಿರುದು ನೀಡಿ ಗೌರವಿಸಿತು. ಅವರು 1950 ರಲ್ಲಿ ಮುಂಬಯಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರು. ಅವರು ಸನ್ಮಾನ, ಗೌರವಗಳನ್ನು ಸ್ವೀಕರಿಸಲು ಒಪ್ಪುತ್ತಿರಲಿಲ್ಲ. ಮೈಸೂರು ವಿಶ್ವವಿದ್ಯಾನಿಲಯ ಅವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ನೀಡಬೇಕೆಂದು ಬಯಸಿದಾಗ ಪೈಗಳು ವಿನಯದಿಂದ ನಿರಾಕರಿಸಿದರು. ‘ಕರಾವಳಿಯ ಕವಿರಾಜಮಾರ್ಗ’ ಸರಣಿಯಲ್ಲಿ ರಾಷ್ಟ್ರಕವಿ ಗೋವಿಂದ ಪೈಗಳ ಕುರಿತು ಬರೆದಿದ್ದಾರೆ
ಸಿಂಗರನ ಬಾಲ್ಯಕಾಲದ ಕಥನ: ಒಬ್ಬ ದಾರ್ಶನಿಕ ಹುಡುಗ
“ಈ ರೀತಿಯ ಚರ್ಚೆಗಳನ್ನ ನಾನು ಎಷ್ಟು ಬಾರಿ ಕೇಳಿದರೂ, ಪ್ರತಿ ಬದಿಯವರು ಪರಿಣಾಮಕಾರಿಯಾಗಿ ಇನ್ನೊಬ್ಬರ ವಾದಗಳನ್ನ ಉರುಳಿಸುತ್ತಿದ್ದರು! ಆದರೆ ಯಾವುದಾದರೂ ಪ್ರಕರಣವನ್ನು ಸಮರ್ಥಿಸುವಾಗ ಅವಲಂಬಿಸುತ್ತಿದ್ದದ್ದು ವಿವಾದಾಸ್ಪದ ಉಲ್ಲೇಖನಗಳಿಗೆ. ನಾನು ನನ್ನದೇ ಅಭಿಪ್ರಾಯಗಳನ್ನು ಮಾತನಾಡದೇ ಇಟ್ಟುಕೊಳ್ಳುತ್ತಿದ್ದೆ. ಅನ್ಯ ಧರ್ಮದವರು ವಿಗ್ರಹ ಆರಾಧಕರು ನಿಜ, ಆದರೆ ರಾಜ ಡೇವಿಡ್ ನಿಜಕ್ಕೂ ದುಷ್ಕರ್ಮ ಮಾಡಿದ್ದ.”
ಭಜನೆಯ ಮಂಗಗಳು ಹಾಗೂ ಸಂಗೀತದ ಮಾಮಿಯ ಮಕ್ಕಳು
“ಶನಿವಾರಗಳಲ್ಲಿ ಶ್ರದ್ಧೆಯಿಂದ ಭಜನೆ ಮಾಡುತ್ತಿದ್ದ ಯಾವ ಗಂಡುಮಗನೂ ಶ್ರೀಮಾತಾ ಭಜನಾ ಮಂಡಳಿಯ ಹೆಣ್ಣುಮಕ್ಕಳಿಗೆ ಎಂದೂ ಅವರ ಭಜನೆಯಲ್ಲಿ ಸಹಾಯ ಮಾಡಿದ್ದಿಲ್ಲ. ಹೆಂಗಳೆಯರೆಲ್ಲಾ ಭಜನೆಗೆ ಸೇರಿದರೆ ಗಂಡಸರು ಮನೆಯಲ್ಲಿ ಬೇಕಾದ ಚಾನೆಲ್ ತಿರುಗಿಸುತ್ತಾ ಟಿವಿ ನೋಡುವುದು ಮಠದ ಪ್ರಾಂಗಣದಲ್ಲಿ ಹರಟೆ ಕೊಚ್ಚುವುದೂ, ಸಾಬರ ಬೀದಿಯಲ್ಲಿ ಕೂತು ಸ್ನೇಹಿತರೊಟ್ಟಿಗೆ ಬೀಡಿ ಸೇದುವುದು ಮಾಡುತ್ತಿದ್ದರು.”
ಮಧುರಾಣಿ ಬರೆಯುವ ‘ಮಠದ ಕೇರಿ’ ಕಥಾನಕ
ಅಪರಾಧ ಮತ್ತು ಶಿಕ್ಷೆ: ಹಿಡಿವೆಯಾ ನೀನು… ನನ್ನಾ….?
ಪೋರ್ಫಿರಿ ಪೆಟ್ರೊವಿಚ್ ಒಂದೆರಡು ಕ್ಷಣ ಯೋಚನೆಯಲ್ಲಿ ಮುಳುಗಿದ್ದ. ಆಮೇಲೆ ಮತ್ತೆ ಎಚ್ಚರಗೊಂಡು, ಕರೆಯದೆ ಬಂದಿದ್ದ ಸಾಕ್ಷಿಗಳನ್ನೆಲ್ಲ ಕೈ ಬೀಸಿ ಹೊರಕ್ಕೆ ಕಳಿಸಿದ. ತಟ್ಟನೆ ಎಲ್ಲರೂ ಹೊರನಡೆದರು. ಬಾಗಿಲು ಮುಚ್ಚಿಕೊಂಡಿತು. ಆಮೇಲೆ ಅವನು ರಾಸ್ಕೋಲ್ನಿಕೋವ್ನತ್ತ ನೋಡಿದ. ರಾಸ್ಕೋಲ್ನಿಕೋವ್ ಮೂಲೆಯಲ್ಲಿ ನಿಂತು ನಿಕೊಲಾಯ್ನನ್ನು ನೋಡುತ್ತಿದ್ದ.”
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ ಅನುವಾದಿಸಿದ ಫ್ಯದೊರ್ ದಾಸ್ತಯೇವ್ಸ್ಕಿ ಬರೆದ ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಮುಂದುವರಿದ ಪುಟಗಳು
ಖಾನ್ ಕಾಂಪೌಂಡ್ ಸರಣಿಯಲ್ಲಿ ‘ದಿಲ್ಲಿಯ ರಾಜ ದರ್ಬಾರ್’
ರಹಿಮತ್ ಖಾನ್ ಅವರ ಸಂಗೀತ ಪ್ರಸ್ತುತಿ ಆಲಿಸಿ ಸಂತೋಷಪಟ್ಟ ಮಹಾರಾಜರು ‘ಸಿತಾರ್ ರತ್ನ’ ಬಿರುದು ನೀಡಿ ಸನ್ಮಾನಿಸಿದರು. ಕಛೇರಿ ಮುಗಿಸಿ ರಹಿಮತ್ ಖಾನ್ ತಮ್ಮೂರಿಗೆ ಹೋಗುತ್ತಿದ್ದಾಗ, ಧಾರವಾಡದ ಪ್ರಶಾಂತತೆಯನ್ನು ನೋಡಿ ಅಲ್ಲಿಯೇ ನೆಲೆಸಲು ನಿರ್ಧರಿಸಿದರು. ಹಾಗೆ ಅವರು ನೆಲೆಸಿದ ಮನೆಯ ಹೆಸರೇ ಖಾನ್ ಕಾಂಪೌಂಡ್. ರಹಿಮತ್ ಖಾನ್ ಅವರ ಮೊಮ್ಮಗ ಉಸ್ತಾದ್ ರಫೀಕ್ ಖಾನ್ ಅವರ ಜೀವನಚರಿತ್ರೆಗೆ ಲೇಖಕ ಶೇಣಿ ಮುರಳಿ ಇದೇ ಶೀರ್ಷಿಕೆ ನೀಡಿದ್ದಾರೆ. ಈ ಪುಸ್ತಕದ ಒಂದು ಅಧ್ಯಾಯ ದಿಲ್ಲಿಯ ರಾಜ ದರ್ಬಾರ್ ತೊರೆದು ಗುಜರಾತ್ ನತ್ತ …”
ವಿತ್ತಮಂತ್ರಿಗಳ ಜೊತೆ ಸೃಜನಾತ್ಮಕ ತಲ್ಲಣಗಳು
“ನನ್ನ ನೇಮಕಾತಿಯ ರೀತಿ ಮತ್ತು ಹಿನ್ನೆಲೆಯಿಂದ ನನ್ನನ್ನು ಯಾವುದೇ ರಾಜಕೀಯ ವಿಚಾರಧಾರೆ ಅಥವಾ ಪಕ್ಷಕ್ಕೆ ಜೋಡಿಸುವುದು ಸಾಧ್ಯವಿರಲಿಲ್ಲ. ನೀತಿಯ ಘೋಷಣೆಯನ್ನೂ ಹಾಗೇ ನೋಡುವರೆನ್ನುವ ನಂಬಿಕೆಯಿತ್ತು. ನಿರ್ಗಮಿಸುತ್ತಿರುವ ಸರ್ಕಾರದೊಂದಿಗೆ ಇದ್ದ ಸತ್ಸಂಬಂಧಗಳು ಹೊಸ ಸರ್ಕಾರದೊಂದಿಗೂ ಮುಂದುವರೆಯುವ ನಂಬಿಕೆಯಿತ್ತು.”
ಎಂ.ಎಸ್. ಶ್ರೀರಾಮ್ ಅನುವಾದಿಸಿದ ವೈ.ವಿ. ರೆಡ್ಡಿಯವರ ಆತ್ಮಕಥನದ ಆಯ್ದ ಭಾಗದ ಕೊನೆಯ ಕಂತು
ಡಾ. ಜನಾರ್ದನ ಭಟ್ ಬರೆಯುವ ‘ಕರಾವಳಿಯ ಕವಿರಾಜಮಾರ್ಗʼ ಸರಣಿ ಆರಂಭ
“ಪಂಜೆಯವರು ಕಹಿಯನ್ನೆಲ್ಲ ಉಂಡು ಸಾಹಿತ್ಯದ ರಸಪಾಕವನ್ನು ಜನತೆಗೆ ನೀಡಿದರು. ಅವರು ಬಾಸೆಲ್ ಮಿಷನಿನವರಿಗಾಗಿ ಕನ್ನಡ ಮೊದಲನೆಯ, ಎರಡನೆಯ ಮತ್ತು ಮೂರನೆಯ ಪದ್ಯಪುಸ್ತಕಗಳನ್ನು ಸಂಪಾದಿಸಿಕೊಟ್ಟರಲ್ಲದೆ ಹೊಸತನವುಳ್ಳ ಕವನಗಳನ್ನು ಸ್ವತಃ ಬರೆದರು. ಮಕ್ಕಳಿಗಾಗಿ ಆಕರ್ಷಕವಾದ ಕಥೆಗಳನ್ನು ಬರೆದರು.”
ಡಾ. ಬಿ. ಜನಾರ್ದನ ಭಟ್ ಬರೆಯುವ ಕಡಲ ತಡಿಯ ಕವಿಶ್ರೇಷ್ಠರ ಕುರಿತ…”









