ಮಡಿಕೇರಿ ಮೇಲ್ ಮಂಜು: ಸುಮಾವೀಣಾ ಸರಣಿ
ಮಳೆಗಾಲದಲ್ಲಿ ದಟ್ಟ ಮಂಜು ಆವರಿಸಿಬಿಟ್ಟರೆ ಐದಾರು ಮೀಟರುಗಳು ಸ್ಪಷ್ಟವಾಗಿ ಕಂಡರೆ ಹೆಚ್ಚು. ಉಳಿದಂತೆ ಮಂಜನ್ನೆ ಸೀಳಿಕೊಂಡು ಹೋಗಬೇಕಾಗಿರುತ್ತಿತ್ತು ಆಗ ಒಂಥರಾ ಥ್ರಿಲ್ ಆಗಿರುತ್ತಿತ್ತು. ವಾಹನ ಅಪಘಾತಗಳು ಸಂಭವಿಸುತ್ತಿದ್ದವು. ಮಳೆ ಜೋರಾಗಿ ಬಂದರೆ ಮಂಜು ಎಲ್ಲಿ ಹೋಗುತ್ತಿತ್ತೋ? ಬಹುಶಃ ಮಳೆಯ ರಭಸಕ್ಕೆ ಎಲ್ಲಿಯಾದರೂ ಅಡಗುತ್ತಿತ್ತೋ ತಿಳಿಯದು ರಣ ಮಳೆ ಚಚ್ಚಿ ಹೋದನಂತೆ ಯಾವುದೋ ಬಿಲದಿಂದ ಮೆಲ್ಲನೆ ಆಚೆ ಬಂದು ತಾಯಿ ಮಗುವನ್ನು ತಬ್ಬುವಂತೆ ಇಡೀ ಮಡಿಕೇರಿ ನಗರವನ್ನು ತಬ್ಬಿಬಿಡುತ್ತಿತ್ತು.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿಯ ಇಪ್ಪತ್ತೇಳನೆಯ ಕಂತು ನಿಮ್ಮ ಓದಿಗೆ
ರಾಗಿಮುದ್ದೆಗೆ ಬಾದಾಮಿ ಹಾಲು ಎಕ್ಸ್ಚೇಂಜ್ ಆಫರ್!: ಬಸವನಗೌಡ ಹೆಬ್ಬಳಗೆರೆ ಸರಣಿ
ಇವರು ಎಂಟರಿಂದ ಪಿಯೂಸಿ, ಡೈರಿ ಡಿಪ್ಲೊಮೋ ಹುಡುಗರ ವಾರ್ಡನ್ ಆಗಿದ್ದರು. ಇವರು ವಾಲಿಬಾಲನ್ನು ಕಿರುಬೆರಳಲ್ಲಿ ತಿರುಗಿಸುತ್ತಿದ್ದರು. ಕಳ್ಳತನ ಮಾಡಿದ ಕಳ್ಳರನ್ನು ಕಂಡುಹಿಡಿಯೋದ್ರಲ್ಲಿ ಇವರು ಎಕ್ಸ್ ಪರ್ಟ್. ಹಾಸ್ಟೆಲ್ಲಿನಲ್ಲಿ ಯಾರೇ ಕಳ್ಳತನ ಮಾಡಲಿ ಪರ್ಫೆಕ್ಟ್ ಆಗಿ ಇವರೇ ಅಂತಾ ಕಂಡುಹಿಡಿಯುತ್ತಿದ್ದರು. ಒಂದೊಮ್ಮೆ ಕಳ್ಳತನ ಮಾಡಿ ಅವರ ಕೈಗೆ ಸಿಕ್ಕಿ ಬಿದ್ರೆ ಮುಗೀತು ಚಟ್ನಿ ಅರೆದಂತೆ ರುಬ್ಬಿಬಿಡ್ತಾ ಇದ್ರು! ಒಂದು ರೂಮಲ್ಲಿ ಕೂಡಿ ಹಾಕಿಕೊಂಡು ಹೊಡಿತಾ ಇದ್ರೆ ಆ ಶಬ್ದ ನಮ್ಮನ್ನು ಸ್ಥಂಭೀಭೂತರನ್ನಾಗಿಸುತ್ತಿತ್ತು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿ
ಬೆಂಗಳೂರು ವಸತಿ ಪುರಾಣ-1: ರಂಜಾನ್ ದರ್ಗಾ ಸರಣಿ
ಮೊದಲ ದಿನವಾದ ಕಾರಣ ಲೈಟ್ ಹಚ್ಚಿಕೊಂಡೇ ಮಲಗಿದೆ. ಬೇಗ ನಿದ್ರೆ ಬರಲಿಲ್ಲ. ಆ ಮೇಲೆ ಮಧ್ಯರಾತ್ರಿ ಎಚ್ಚರವಾಯಿತು. ಕಣ್ಣು ತೆರೆದಾಗ ಗಾಢಾಂಧಕಾರ ಆವರಿಸಿದ್ದು ಗಾಬರಿ ಹುಟ್ಟಿಸಿತು. ಕರೆಂಟ್ ಹೋಗಿರಬಹುದು ಎಂದು ಭಾವಿಸಿ ಹಾಗೆ ಮಲಗಿದೆ. ಬೆಳಿಗ್ಗೆ ಬಹಳ ಹೊತ್ತಿನವರೆಗೆ ಎಚ್ಚರಾಗಲಿಲ್ಲ. ಕೊನೆಗೆ ಎಚ್ಚರವಾದಾಗ ಸೊಳ್ಳೆಪರದೆ ಮೇಲೆಲ್ಲ ಸೊಳ್ಳೆಗಳು ಸುತ್ತಿಕೊಂಡಿದ್ದರಿಂದ ಕತ್ತಲು ಆವರಿಸಿದ್ದು ಗೊತ್ತಾಯಿತು!
ರಂಜಾನ್ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿ
ಕೆಂಪು ಬಣ್ಣ ಬಳಿದ ಭಾವಗೀತೆ: ರಾಮ್ ಪ್ರಕಾಶ್ ರೈ ಕೆ ಸರಣಿ
ಮಳೆಯ ಜೊತೆಗೆ ಸಾದಾ ಸೀದಾ ಎಂಬಂತೆ ಹಾರಿ ಬರುವ ತಂಗಾಳಿ, ಪ್ರತಿ ಬೆಳಗು ಖಾಲಿ ಬೇಲಿಯ ಭೇಟಿಯಾಗುವ ದಾಸವಾಳ, ಆಕಳಿಸುವ ಚಂದಿರನಿಗೆ ಸದಾ ಕಾಣುವ ಟ್ರಕ್ಕಿನ ಟಾರ್ಪಲ್ ಮುಂಡಾಸು, ಚೆಂಡೆಗೆ ದಣಿವಾಗುವಷ್ಟು ಕುಣಿಯುವ ಪುಂಡು ವೇಷಧಾರಿ ಹೀಗೆ ಯಾವುದು ಮಾಮೂಲು ಎಂದು ವಿಭಾಗಿಸಿಕೊಂಡಿರುವ ಸಂಗತಿಗಳಿವೆಯೋ ಅದೇ ತೆರನಾದ ಬಂಧ ಅವರದು.
ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿ
ಮಿಸ್ ಜೊತೆಗೆ ಆಪ್ತರಾಗುವ ಸಾಹಸಗಳು: ಅನುಸೂಯ ಯತೀಶ್ ಸರಣಿ
ಕೆಡುಕನ್ನೇ ಕಾಣದ ಮುಗ್ಧ ಮನಸ್ಸುಗಳ ಜೊತೆ ನಾವು ಮಕ್ಕಳಾಗಿ ನಲಿಯುವುದಿದೆಯಲ್ಲ ಅಂತಹ ಖುಷಿಯನ್ನ ಯಾವುದರಿಂದಲೂ ಪಡೆಯಲು ಸಾಧ್ಯವಿಲ್ಲ. ಶಾಲಾ ಗೇಟಿನಿಂದ ಟೀಚರ್ ಬ್ಯಾಗ್ ಶಾಲೆಗೆ ತೆಗೆದುಕೊಂಡು ಹೋಗಿ ತರಗತಿಯೊಳಗೆ ಇಡುವುದರಲ್ಲಿ, ಟೀಚರ್ಗೆ ಹಾಜರಾತಿ ತಂದು ಕೊಡುವುದರಲ್ಲಿ ಮಕ್ಕಳ ನಡುವೆ ಪೈಪೋಟಿ ನಡೆಯುತ್ತಿರುತ್ತದೆ.
ಅನುಸೂಯ ಯತೀಶ್ “ಬೆಳೆಯುವ ಮೊಳಕೆ” ಸರಣಿ
ಮಿತವಚನದ ಸುಂದರ ಕವಿತೆಗಳು: ಎಸ್. ಜಯಶ್ರೀನಿವಾಸ ರಾವ್ ಸರಣಿ
“ಈ ಮಿತವಚನದ, ಸುಂದರ ಕವನಗಳು, ಕಲ್ಪನಾತ್ಮಕವಾಗಿ ಸಮೃದ್ಧವಾದ ಮತ್ತು ಪರಿಣಿತಿಯಿಂದ ಆಸವಿಸಿದ ಕವನಗಳು, ಪ್ರಕ್ಷುಬ್ಧ ತೇಜಸ್ಸಿನಿಂದ ಕಂಪಿಸುತ್ತವೆ. ಈ ಕವನಗಳನ್ನು ಓದುವಾಗ, ಅವುಗಳನ್ನು ರಚಿಸಿದ ಮೌನಗಳನ್ನು, ಮತ್ತು ಈ ಮೌನಗಳು ಹೇಗೆ ಒಂದೊಂದಾಗಿ ಬಂದು ಅಸಲಾದ ಮತ್ತು ಅಗತ್ಯವಾದ ಪದಗಳಾಗಿ ಒಟ್ಟು ಸೇರುವುದನ್ನು ನಾನು ಕೇಳಿಸಿಕೊಂಡಂತೆ ಅನಿಸಿತು ನನಗೆ.”
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿ
ಸೊಪ್ಪು-ತರಕಾರಿ ಎನ್ನುವ ಕಿರುವೈದ್ಯ: ಚಂದ್ರಮತಿ ಸೋಂದಾ ಸರಣಿ
ನಾವು ದಿನನಿತ್ಯ ಬಳಸುವ ಕೆಲವು ತರಕಾರಿ ಸೊಪ್ಪುಗಳಲ್ಲಿ ನಮ್ಮ ಕೆಲವು ಚಿಕ್ಕಪುಟ್ಟ ಕಾಯಿಲೆಗಳನ್ನು ಗುಣಪಡಿಸುವ ಅಂಶಗಳಿವೆ ಎನ್ನವುದನ್ನು ಹಿಂದಿನವರು ಬಲ್ಲವರಾಗಿದ್ದರು. ʻಅಗ್ಗಾರು ಬ್ಯಾಸಿಗೆ, ಇನ್ನೊಂದಿಷ್ಟು ದಿವ್ಸ ಒಂದೆಲಗದ ತಂಬುಳಿ ಮಾಡದೆʼ ಎನ್ನುತ್ತಿದ್ದರು. ʻಈ ಚಳಿಗಾಲದಲ್ಲಿ ಕನ್ನೆಕುಡಿ ಕಟ್ನೆ ಮಾಡಿಕ್ಯಂಡು ಬಿಸಿಬಿಸಿ ಕಟ್ನೆಗೆ ತುಪ್ಪ ಹಾಕಿ ಉಂಡು ಹೊದ್ದು ಮಲಗಿದ್ರೆ ಚಳಿಯೆಲ್ಲ ಹೆದ್ರಿ ಓಡ್ಹೋಗ್ತುʼ ಎನ್ನುವ ಮಾತು ಕೇಳಿಬರುತಿತ್ತು.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯ ಇಪ್ಪತ್ತನೆಯ ಕಂತು ನಿಮ್ಮ ಓದಿಗೆ
ಎವರೆಸ್ಟ್ನಲ್ಲಿ ಹೃದಯ ಬಡಿತ ನಿಂತಾಗ!: ಗುರುಪ್ರಸಾದ ಕುರ್ತಕೋಟಿ ಸರಣಿ
ಎರಡು ನಿಮಿಷ ಕಳೆಯಿತು. ನಮ್ಮ ಗಾಡಿ ಚಲಿಸುವ ಲಕ್ಷಣ ಕಾಣಲಿಲ್ಲ. ಎಲ್ಲರೂ ಒಬ್ಬರ ಮುಖ ಒಬ್ಬರು ನೋಡತೊಡಗಿದೆವು. ಏನೋ ತಾಂತ್ರಿಕ ಸಮಸ್ಯೆ ಆಗಿದೆ ಅಂತ ಗೊತ್ತಾಯ್ತು. ಆದರೂ ಇಳಿದು ಹೋಗಲೂ ಆಗಲ್ಲವಲ್ಲ. ನಾವು ಕೂತಾಗಲೇ ಹಿಂದಿನಿಂದ ಇನ್ನೊಂದು ಟ್ರೈನ್ ಬಂದು ಡಿಕ್ಕಿ ಹೊಡೆದುಬಿಟ್ಟರೆ ಏನು ಗತಿ ಎಂಬ ಯೋಚನೆ ಬಂದು ಬೆವರು ಹರಿಯಲು ಶುರು ಆಗಿತ್ತು! ನನ್ನ ಪಕ್ಕದಲ್ಲಿ ಕೂತಿದ್ದ ಒಂದು ಸಣ್ಣ ಹುಡುಗಿ ಆಗಲೇ ಅಳಲು ಶುರು ಮಾಡಿದಳು.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿ
ವಿಭಿನ್ನ ಜಗತ್ತು: ಸುಮಾವೀಣಾ ಸರಣಿ
ಇದಕ್ಕೆ ವ್ಯತಿರಿಕ್ತ ಎನ್ನುವಂತೆ ವಕೀಲರು ಹಾಗು ಜನನಾಯಕರಾಗಿದ್ದ ವ್ಯಕ್ತಿಯೊಬ್ಬರು ತಾವು ಕಾರಿನಲ್ಲಿ ಪ್ರಯಾಣಿಸುವ ವೇಳೆಯಲ್ಲಿ ಯಾರಾದರೂ ಮಳೆಯಲ್ಲಿ ಚಂಡಿಯಾಗಿ ಹೋಗುತ್ತಿದ್ದರೆ ಕಾರ್ ನಿಲ್ಲಿಸಿ ಅವರನ್ನು ಪರಿಚಯಿಸಿಕೊಂಡು ಅವರ ಮನೆವರೆಗೂ ಬಿಡುತಿದ್ದರು. ಇದಲ್ಲವೆ ನಿಜವಾದ ಮಾದರಿ ವ್ಯಕ್ತಿತ್ವ. ಇನ್ನೂ ಖೇದಕರವಾದ ಸಂಗತಿಯೆಂದರೆ ಬೇರೆ ಮನೆಯಿಂದ ತಪ್ಪಿಸಿಕೊಂಡು ಬಂದಿದ್ದ ನಾಯಿಯೊಂದು ಅಲ್ಲಲ್ಲಿ ಅಡ್ಡಾಡುತ್ತಿತ್ತು ಎನ್ನುವ ಕಾರಣಕ್ಕೆ ಬಿಸಿ ಗಂಜಿಯನ್ನು ಅದರ ಮೇಲೆ ಎರಚಿದವರೂ ಇದ್ದರು.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿ









