ರಾಜಕೀಯದಾಗೆ ಅಪ್ಪನ ಕಸರತ್ತು: ಸುಮಾ ಸತೀಶ್ ಸರಣಿ
ಊರಿನ ಜನರಿಗೆಲ್ಲ ಸರಕಾರ ಉಚಿತವಾಗಿ ಕೊಡೋ ಎಲ್ಲಾ ಸವಲತ್ತುಗಳು ತಲುಪೋ ತರ ಮಾಡಿದ್ರು. ಯಾವ್ಯಾವ್ದು ಫ್ರೀಯಾಗಿ ಸಿಕ್ತೈತೆ ಅಂತ ಅಧಿಕಾರಿಗಳ ತಾವ್ಕೆ ಹೋಗಿ ತಿಳ್ಕಂಬರಾರು. ಅದ್ರ ಬಗ್ಗೆ ಓದ್ಕಣಾರು. ಕಾನೂನು ತಿಳ್ಕಂಬಾದ್ರಾಗೆ ಸೈ ಅನ್ನುಸ್ಕೊಂಡಿದ್ರು. ಎಲ್ಲಾ ಓದ್ಕಂಡು ಮುಂದ್ಕೆ ಹೋಗೋರು. ಅಧಿಕಾರಿಗುಳ ಪ್ರೀತಿ, ವಿಶ್ವಾಸ ಗಳಿಸಾಕೆ ಅವುರ್ಗೆ ಊಟ, ತಿಂಡಿ ಕೊಡ್ಸೋದು, ಹೊಲದಾಗೆ ಬೆಳೆದ ಫಸಲು, ತರಕಾರಿ, ಕಾಯಿ, ಎಳನೀರು ಉಡುಗೊರೆ ಕೊಡೋರು.
ಸುಮಾ ಸತೀಶ್ “ರಂಗಿನ ರಾಟೆ” ಸರಣಿ
ಪಿಯುಸಿಯ ಕಡುಕಷ್ಟದ ಆ ದಿನಗಳು….: ಬಸವನಗೌಡ ಹೆಬ್ಬಳಗೆರೆ ಸರಣಿ
ನನ್ನ ರೂಮಿನಲ್ಲಿ ಬೇರೆ ಬೇರೆ ಕಾಲೇಜಿನ ಹುಡುಗರು ಇದ್ದರು. ನಾವು ಮಧ್ಯಾಹ್ನ ಹಸಿವನ್ನು ನೀಗಿಸಿಕೊಳ್ಳಲು ಸಾಮಾನ್ಯವಾಗಿ ಕ್ರೀಂ ಬನ್ ತಿನ್ನುತ್ತಿದ್ದೆವಾದರೂ ಕೆಲವೊಮ್ಮೆ ಸುಖ ಸಾಗರ ಹೋಟೆಲ್ಲಿಗೆ ಇಡ್ಲಿ ತಿನ್ನೋಕೆ ಹೋಗ್ತಿದ್ವಿ. ಇಲ್ಲಿನ ಸಾಂಬಾರ್ ತುಂಬಾ ಚೆನ್ನಾಗಿರೋದು. ನಮಗೆ ಜಾಸ್ತಿ ಇಡ್ಲಿ ತಿನ್ನೋಕೆ ದುಡ್ಡು ಇಲ್ಲದೇ ಇರುತ್ತಿದ್ದರಿಂದ ಎರಡೇ ಇಡ್ಲಿ ತಿನ್ತಾ ಇದ್ದೆವು. ಆದರೆ ಸಾಂಬಾರನ್ನು ನಾವೇ ಹಾಕಿಕೊಳ್ಳುವ ವ್ಯವಸ್ಥೆ ಅಲ್ಲಿದ್ದುದ್ದರಿಂದ ಇಡ್ಲಿಗಿಂತ ಸಾಂಬಾರನ್ನೇ ನಾವು ಹೆಚ್ಚು ಬಡಿಸಿಕೊಂಡು ತಿನ್ನುತ್ತಿದ್ದೆವು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿ
ಕಿಶೋರಿ ತರಬೇತಿಯ ಸುತ್ತಮುತ್ತ: ಅನುಸೂಯ ಯತೀಶ್ ಸರಣಿ
ಕಿಶೋರಿ ತರಬೇತಿಯ ಪ್ರಮುಖ ಆಶಯ ಹದಿಹರೆಯದ ಹೆಣ್ಣು ಮಕ್ಕಳಿಗೆ ಲೈಂಗಿಕ ಕಿರುಕುಳದ ವಿವಿಧ ರೂಪಗಳನ್ನು ಪರಿಚಯಿಸುವುದು ಮತ್ತು ಮಕ್ಕಳ ಸಾಗಾಟದ ಬಗ್ಗೆ ಎಚ್ಚರಿಕೆ ಮೂಡಿಸುವುದು. ಆ ವಯೋಮಾನದ ಮಕ್ಕಳಿಗೆ ಏನು ತಿಳಿದಿರುವುದಿಲ್ಲ ಎಂದು ಭಾವಿಸಿದ್ದೆವು. ಆದರೆ ನಮ್ಮೆಲ್ಲರ ನಿರೀಕ್ಷೆಗಳು ಸುಳ್ಳಾದವು. ಮಕ್ಕಳ ಸಾಗಾಟ ಏಕೆ ಮಾಡುತ್ತಾರೆ ಎಂದಾಗ ಬಂದು ಉತ್ತರಗಳು ಇಂದಿನ ಮಕ್ಕಳು ತುಂಬಾ ಪ್ರಬುದ್ಧರಾಗಿದ್ದಾರೆ ಎಂಬ ಸಂದೇಶ ನೀಡುತ್ತಿದ್ದವು.
ಅನುಸೂಯ ಯತೀಶ್ “ಬೆಳೆಯುವ ಮೊಳಕೆ” ಸರಣಿ
ಸ್ವಾಭಿಮಾನದ ಸಂಕೇತ “ವಿ. ಶ್ರೀನಿವಾಸಪ್ರಸಾದ”: ರಂಜಾನ್ ದರ್ಗಾ ಸರಣಿ
12ನೆಯ ಶತಮಾನದ ಬಸವಾದಿ ಶರಣರು ಈ ಹಿಂಸಾಯಂತ್ರಕ್ಕೆ ನೇರವಾದ ಸವಾಲೆಸೆದರು. ಕಾಯಕ ಸಿದ್ಧಾಂತದ ಮೂಲಕ ಇದರ ಮರ್ಮವನ್ನು ಹೊರಗೆಳೆದರು. ಈ ಹಿಂಸಾಯಂತ್ರದ ಬಿಡಿ ಉಪಕರಣಗಳಾದ ಜಾತಿ, ಅಸ್ಪೃಶ್ಯತೆ, ಅಸಮಾನತೆ ಮತ್ತು ಲಿಂಗಭೇದದ ವಿರುದ್ಧ ಶರಣರು ಹೋರಾಡಿದರು. ತನ್ನ ಎಲ್ಲ ಸಾಮರ್ಥ್ಯವನ್ನು ಬಳಸಿಕೊಂಡು ತಮ್ಮ ಸವರ್ಣೀಯ ಚಾಲಕರ ಆರ್ಥಿಕ ವ್ಯವಸ್ಥೆಯನ್ನು ಸದೃಢಗೊಳಿಸುತ್ತ ಅದನ್ನು ಕಾಪಾಡುವುದಲ್ಲೇ ಹಿಂಸಾಯಂತ್ರ ತಲ್ಲೀನವಾಗಿತ್ತು.
ರಂಜಾನ್ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿ
ಎಂ.ಎಸ್. ರಾಮಯ್ಯ ಕುರಿತು ಮತ್ತಷ್ಟು…: ಎಚ್. ಗೋಪಾಲಕೃಷ್ಣ ಸರಣಿ
ಇನ್ನೊಂದು ಪ್ರಚಲಿತ ಇದ್ದ ಗಾಳಿಮಾತು ಎಂದರೆ ಅವರು ಕಟ್ಟಡ ನಿರ್ಮಾಣಕ್ಕೆ ಸಿಮೆಂಟ್ ಬೇಕು ಅಂದರೆ ಸಿಮೆಂಟ್ ಕಾರ್ಖಾನೆಯನ್ನು ಶುರುಮಾಡುತ್ತಾರೆ, ಕಬ್ಬಿಣ ಬೇಕು ಅಂದರೆ ಕಬ್ಬಿಣ ತಯಾರಿಕೆ ಫ್ಯಾಕ್ಟರಿ ಶುರುಮಾಡ್ತಾರೆ ಎನ್ನುವಂತಹ ರೆಕ್ಕೆ ಪುಕ್ಕ ಹುಟ್ಟಿಸಿಕೊಂಡ ಸುದ್ದಿಗಳು. ಬಿಲ್ಡಿಂಗ್ ಕಟ್ಟಲು ಇಟ್ಟಿಗೆ ಬೇಕು ತಾನೇ ಇವರದ್ದು ಇಟ್ಟಿಗೆ ಉದ್ಯಮ ಇತ್ತು ಮತ್ತು ಇದರಿಂದ ಈ ಸುದ್ದಿ ಹುಟ್ಟಿತೋ ತಿಳಿಯದು. ಇದಕ್ಕೆ ಪರ್ಯಾಯವಾಗಿ ಒಂದು ಜೋಕು ಹುಟ್ಟಿತ್ತು….
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ನಲವತ್ತೈದನೆಯ ಕಂತು ನಿಮ್ಮ ಓದಿಗೆ
ಕೂರಾಪುರಾಣ ೮: ಸ್ವಪ್ರೇಮ ಮತ್ತು ನಾಯಿಪ್ರೇಮ ಎಂಬ ಪರಿಶುದ್ಧ ಪ್ರೇಮಗಳು
ಎಲ್ಲರಿಗು ಪರಮಶ್ರೇಷ್ಟರಾಗುವುದು ಸಾಧ್ಯವಿಲ್ಲ ಆದರೆ ಶ್ರೇಷ್ಟರಾಗುವುದು ಖಂಡಿತ ಸಾಧ್ಯವಿದೆ ಎಂದು ನನ್ನ ನಂಬಿಕೆ. ನಿಮಗೆ ನಾಯಿಯ ಬಗ್ಗೆ ಭಯ ಅಥವಾ ಅನಾದರ ಅಥವಾ ಮತ್ತೇನೋ ಇದ್ದರೂ ನಾಯಿಯೊಂದನ್ನು ಹತ್ತಿರದಿಂದ ನೋಡಲು ಶುರು ಮಾಡಿದಾಗ ಅದು ಖಂಡಿತ ದೂರವಾಗಿ ಶುದ್ಧವಾದ ಅಂತಃಕರಣವೊಂದು ಹುಟ್ಟುತ್ತದೆ. ಇದಕ್ಕೆ ನಾನೇ ಉದಾಹರಣೆ. ನಾನೊಬ್ಬಳು ನಾಯಿಪ್ರೇಮಿಯಾಗುತ್ತೇನೆ, ಆಗಬಲ್ಲೆ ಎಂದು ನಾನು ಯಾವತ್ತು ಯೋಚಿಸಿರಲಿಲ್ಲ.
ಸಂಜೋತಾ ಪುರೋಹಿತ ಬರೆಯುವ “ಕೂರಾಪುರಾಣ” ಸರಣಿಯ ಎಂಟನೆಯ ಕಂತು
ಬೇಸಾಯ ಬದಲಾದದ್ದು: ಸುಮಾ ಸತೀಶ್ ಸರಣಿ
ಇದೊಂದು ಕಾರು ಎಲ್ಲಾರ ಕಣ್ಗೂ ಬಿತ್ತು. ಪುಸುಕ್ ಅಂತ ಕಾರು ಕೇಳೋಕೆ ಶುರು ಆತು. ದಾಕ್ಷಿಣ್ಯ ಬ್ಯಾರೆ. ಕೊಡದಿದ್ರೆ ಕೆಲ್ಸ ಮಾಡದೆ ಸತಾಯಿಸ್ತಾರೆ. ಒಳ್ಳೆ ಪೀಕಲಾಟ ಆಯ್ತು. ಥತ್ ತೇರಿಕೆ ಯಾಕಾನಾ ಕಾರು ಅಂತ ಆಸೆ ಬಿದ್ನೋ… ಯಾಕೆ ಬೇಕಿತ್ತು ಈ ಉಸಾಬರಿ ಅಂತ ಬ್ಯಾಸ್ರ ಬಂದೋತು ಅಪ್ಪಂಗೆ. ಕಾರೂ ಪುಗ್ಸಟ್ಟೆ ಕೊಡಾದಲ್ದೆ, ಪೆಟ್ರೋಲ್ ಹಾಕ್ಸಿ, ಡ್ರೈವರ್ ಇಕ್ಕಿ ಕಳ್ಸೋದು ಬ್ಯಾರೆ. ಅದೋ ಬಿಳೇ ಆನೆ.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ಹೊಸ ಬರಹ ಇಲ್ಲಿದೆ
‘ಹಿಮಾಲಯ’ದೆದುರಿನ ಜ್ಞಾನೋದಯ!: ಪೂರ್ಣೇಶ್ ಮತ್ತಾವರ ಸರಣಿ
ಈ ನಮ್ಮ ಶೋಕತಪ್ತತೆಯು ಸಹಜವಾಗಿಯೇ ಕಡಿಮೆಯಾಗುತ್ತಿತ್ತೇನೋ. ಆದರೆ, ಹಾಗಾಗಲು ಬಿಡದಂತ ತೀರ್ಮಾನವನ್ನು ನಮ್ಮ ಪ್ರಾಂಶುಪಾಲರೇ ತೆಗೆದುಕೊಂಡಿದ್ದರು. ನಮಗೆ ಅನುಮತಿಯನ್ನು ನಿರಾಕರಿಸಿದವರು ಹನ್ನೊಂದು ಹನ್ನೆರಡನೇ ತರಗತಿಯ ಹುಡುಗರಿಗಾದರೋ ತಮ್ಮ ನಿರಾಕರಣೆಯನ್ನು ಪ್ರದರ್ಶಿಸಿರಲಿಲ್ಲ. ಅದರ ಫಲವಾಗಿ ಅವರು ರಾತ್ರಿ ಊಟದ ನಂತರ ಗುರು ವೃಂದದವರೊಡನೆ ಮತ್ತದೇ ಗ್ರೀನ್ ರೂಮ್ ಸೇರಿ, ಕಿಟಕಿ ಬಾಗಿಲುಗಳನ್ನೆಲ್ಲಾ ಹಾಕಿ, ಸಂದುಗೊಂದುಗಳಿಗೆಲ್ಲಾ ಮುಚ್ಚಿಕೆ ಹಾಕಿಕೊಂಡು ವಿಶ್ವ ಸುಂದರಿಯರ ದರ್ಶನ ಪಡೆಯತೊಡಗಿದ್ದರು.
ಪೂರ್ಣೇಶ್ ಮತ್ತಾವರ ಬರೆಯುವ “ನವೋದಯವೆಂಬ ನೌಕೆಯಲ್ಲಿ…” ಸರಣಿ
ಯುದ್ಧದ ಬಿಸಿ ನೀಗಿಕೊಂಡು ತಂಪಗಾಗಬೇಕಿದೆ ರಷ್ಯಾ: ಡಾ. ವಿಶ್ವನಾಥ ಎನ್ ನೇರಳಕಟ್ಟೆ ಸರಣಿ
ಕಮ್ಯುನಿಸ್ಟ್ ಆಳ್ವಿಕೆಯ ಸಮಯದಲ್ಲಿ ರಷ್ಯನ್ ಬರಹಗಾರರು ನಿರ್ಬಂಧಕ್ಕೆ ಒಳಗಾದರು. ಮುಕ್ತವಾಗಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಲಾಗದ ದುಃಸ್ಥಿತಿಗೆ ಸಿಲುಕಿಕೊಂಡರು. ಮರೀನಾ ಟ್ವೆಟೇವಾ ಅವರು ರಷ್ಯಾದ ಹೊರಗಡೆ ಇದ್ದುಕೊಂಡೇ ಕಾವ್ಯರಚನೆ ಮಾಡಿದ್ದು, ರಷ್ಯಾಕ್ಕೆ ಮರಳಿ ಬಂದು ಎರಡೇ ವರ್ಷಗಳಲ್ಲಿ ಆತ್ಮಹತ್ಯೆ ಮಾಡಿಕೊಂಡದ್ದು ಇವೆಲ್ಲಾ ಸಾಹಿತ್ಯ ಕ್ಷೇತ್ರದ ಮೇಲೆ ಕಮ್ಯುನಿಸ್ಟ್ ಪ್ರಾಬಲ್ಯವನ್ನು ಸೂಚಿಸುತ್ತವೆ. ಸ್ಟಾಲಿನ್ ಮರಣದ ಬಳಿಕ ರಷ್ಯನ್ ಸಾಹಿತ್ಯದಲ್ಲಿ ಹೊಸ ಬಗೆಯ ಬರಹಗಳು ಮತ್ತು ಪ್ರವೃತ್ತಿಗಳು ಕಾಣಿಸಿಕೊಂಡವು.
ಡಾ. ವಿಶ್ವನಾಥ ಎನ್. ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿ










