Advertisement

ಸರಣಿ

ರಷ್ಯಾದ ʻಸಿಂಪಲ್‌ ಥಿಂಗ್ಸ್ʼ: ಕತೆ ಹೇಳುವ ಕಣ್ಣುಗಳು

ರಷ್ಯಾದ ʻಸಿಂಪಲ್‌ ಥಿಂಗ್ಸ್ʼ: ಕತೆ ಹೇಳುವ ಕಣ್ಣುಗಳು

ಜು಼ರಾವ್ಲೊಫ್‌ಗೆ ಸೆರ್ಗಿಯನ್ನು ಕಂಡರೆ ವಿಶೇಷ ಬಗೆಯ ಪ್ರೀತಿ. ಸಹಜ ಹಾಗೂ ಸಾಮಾನ್ಯ ಮನುಷ್ಯನಾಗಿ ಯಾವ ಬಗೆಯ ಹಿಂಸೆ ಕೊಡದೆ ನಡೆದುಕೊಳ್ಳುವ ಅವನ ಸ್ವಭಾವ ಇಷ್ಟವಾಗುತ್ತದೆ. ಹಾಗಾಗಿಯೇ ಅವನು ತನ್ನ ಬಳಿ ಇರುವ ಅಗಾಧ ಬೆಲೆಯ ಕಲಾಕೃತಿಯನ್ನು ಗಿಫ್ಟ್ ಕೊಡುವುದಾಗಿ ಹೇಳಿ ಬರೆದುಕೊಡುತ್ತಾನೆ. ಅದನ್ನು ಮಾರಿದರೆ ಉತ್ತಮವಾದ ಫ್ಲಾಟ್‌ ಕೊಂಡುಕೊಳ್ಳಬಹುದು ಎನ್ನುತ್ತಾನೆ. ಆದರೆ ಅದಕ್ಕೆ ಪ್ರತಿಕ್ರಿಯೆಯಾಗಿ ಸೆರ್ಗಿ ಜು಼ರಾವ್ಲೊಫ್‌ ತನ್ನ ಆರ್ಥಿಕ ಪರಿಸ್ಥಿತಿಯನ್ನು ಲೇವಡಿ ಮಾಡುತ್ತಿದ್ದಾನೆ ಎಂದು ಉದ್ವಿಗ್ನಗೊಂಡು ಅಬ್ಬರಿಸುತ್ತಾನೆ.

read more
ಒಡಲ ಕುಡಿಯ ಕಿತ್ತುಕೊಳ್ಳಲು ತಾಯ ಹಂಗೇ

ಒಡಲ ಕುಡಿಯ ಕಿತ್ತುಕೊಳ್ಳಲು ತಾಯ ಹಂಗೇ

ಆ ಮಂಗಾಡಳ್ಳಿಯವನ ನಿಮ್ಮಪ್ಪ ಹಿಡಿಸಿ ಕಡಿಸಿಬಿಟ್ಟನಂತಲ್ಲಾ… ಪ್ರಾಣ ಮಿತ್ರಾ ಅಂತಿದ್ದ. ಪ್ರಾಣ ಮಿತ್ರನೇ ಪ್ರಾಣ ತಿಂದು ಬಿಟ್ಟನಲ್ಲಾ… ತಂದೆ ತಾಯಿ ಮಾಡಿದ ಪಾಪ ಮಕ್ಕಳಿಗೆ ಶಾಪವಾಗಿ ಬಡಿಯುತ್ತದಂತೇ… ಯಾರ ತಪ್ಪಿಗೆ ಯಾರ ಶಿಕ್ಷೆಯೋ ನಿನ್ನ ನೋಡಿದರೆ ಅಯ್ಯೋ ಅನಿಸುತ್ತದೆ. ನಿಮ್ಮಪ್ಪನ ಮೇಲಿನ ಸಿಟ್ಟಿಗೆ ನಿಮ್ಮಜ್ಜಿಯೆ ಕತ್ತು ಮುರಿಯಲು ಮುಂದಾಗಿದ್ದಳಂತಲ್ಲಾ… ನಿಮ್ಮಜ್ಜಿಯೇ ನನ್ನ ಜೊತೆ ಹೇಳಿಕೊಂಡು ಕಣ್ಣೀರು ಹಾಕಿದ್ದಳು. ಸಂತೆಗೆ ಹೋದರೆ ನಿಮ್ಮಜ್ಜಿಯ ಮಾತಾಡಿಸೂ.
ಮೊಗಳ್ಳಿ ಗಣೇಶ್ ಬರೆಯುವ ‘ನನ್ನ ಅನಂತ ಅಸ್ಪೃಶ್ಯ ಆಕಾಶʼ ಸರಣಿಯ ಒಂಭತ್ತನೇ ಕಂತು. 

read more
ಹಾರಿ ಹೋದ ಗುಂಡು, ಜಾರಿ ಹೋದ ನ್ಯಾಯ

ಹಾರಿ ಹೋದ ಗುಂಡು, ಜಾರಿ ಹೋದ ನ್ಯಾಯ

ಅದೊಂದು ದಿನ ಅಲ್ಲಿಗೆ ಗುಂಡೇಟಿನಿಂದ ಗಾಯಗೊಂಡ ಓರ್ವ ವ್ಯಕ್ತಿಯನ್ನು ಕೆಲವರು ಕರೆದುಕೊಂಡು ಬಂದಿದ್ದರು. ಕರ್ತವ್ಯದಲ್ಲಿ ಇದ್ದ ವೈದ್ಯರು ಆಗಷ್ಟೇ ಸರಕಾರೀ  ಕೆಲಸಕ್ಕೆ ಸೇರಿಕೊಂಡಿದ್ದರು. ತಮ್ಮ ಶಿಕ್ಷಣದ ದಿನಗಳಲ್ಲಿ ಕೆಲವು ಅಪಘಾತದ ಕೇಸುಗಳನ್ನು ನೋಡಿದ್ದರೂ, ಗುಂಡೇಟಿನ ಗಾಯಾಳುವನ್ನು ಅವರು ಎಂದೂ ನೋಡಿರಲಿಲ್ಲ.  ರೋಗಿಯನ್ನು ಪರೀಕ್ಷಿಸಿದಾಗ, ಆತನ ಎದೆಯ ಎರಡೂ ಭಾಗದ ಮೇಲೆ ಒಂದೊಂದು ಗಾಯದ ಗುರುತುಗಳು ಕಂಡು ಬಂದು ಅವುಗಳಿಂದ ರಕ್ತಸ್ರಾವವಾಗುತ್ತಿತ್ತು. ಡಾ.ಕೆ.ಬಿ. ಸೂರ್ಯಕುಮಾರ್ ಬರೆಯುವ ‘ನೆನಪುಗಳ ಮೆರವಣಿಗೆ’ ಸರಣಿಯ ಬರಹ:

read more
ನಮ್ಮ ಭೂಮಿಯ ವಯಸ್ಸೆಷ್ಟು?

ನಮ್ಮ ಭೂಮಿಯ ವಯಸ್ಸೆಷ್ಟು?

ಪ್ರಾಚೀನ ಗ್ರೀಕ್ ತತ್ವಶಾಸ್ತ್ರಜ್ಞರಿಂದ ಹಿಡಿದು, ಧಾರ್ಮಿಕ ಗುರುಗಳೂ, ಮೇಧಾವಿಗಳೂ ಈ ಪ್ರಶ್ನೆಗೆ ತಮ್ಮದೇ ವಿಧಾನಗಳಲ್ಲಿ ಉತ್ತರ ನೀಡಲು ಪ್ರಯತ್ನಿಸಿದ್ದಾರೆ.  ಉದಾಹರಣೆಗೆ, ಬೈಬಲ್ ಆಧಾರದ ಮೇಲೆ, “ಆದಿ ಮಾನವ” ಆಡಂ ನ ವರೆಗಿನ ತಲೆಮಾರುಗಳ ಲೆಕ್ಕದಲ್ಲಿ, ನಮ್ಮ ಭೂಮಿಗೆ, ಕೇವಲ ಆರರಿಂದ ಹತ್ತು ಸಾವಿರ ವರ್ಷದ ಹರೆಯ. ಆದರೆ, ಹತ್ತೊಂಬತ್ತನೆಯ ಶತಮಾನದ ಖ್ಯಾತ ಭೌತಶಾಸ್ತ್ರಜ್ಞ ಲಾರ್ಡ್ ಕೆಲ್ವಿನ್ನನ ಲೆಕ್ಕಾಚಾರದ ಪ್ರಕಾರ, ಭೂಮಿಗೆ ಸುಮಾರು ಹತ್ತು ಕೋಟಿ ವರ್ಷ ವಯಸ್ಸು. ಕೆಲ್ವಿನ್ನನ ಲೆಕ್ಕಾಚಾರ, ಅವನ ಸಮಕಾಲೀನನಾಗಿದ್ದ…

read more
ಭಟ್ಟಿ ಇಳಿಸುವಿಕೆ ಮತ್ತು ಕಾರ್ಪೆಂಟರಿ ಕೆಲಸಗಾರರಾದುದು

ಭಟ್ಟಿ ಇಳಿಸುವಿಕೆ ಮತ್ತು ಕಾರ್ಪೆಂಟರಿ ಕೆಲಸಗಾರರಾದುದು

ಸಾಮಾನ್ಯವಾಗಿ ಎಲ್ಲಾ ಅರಣ್ಯವಾಸಿ ಬುಡಕಟ್ಟುಗಳಲ್ಲಿ ಭಟ್ಟಿ ಇಳಿಸುವ ಕ್ರಿಯೆ ಸಾಮಾನ್ಯವಾಗಿರುವಂಥದ್ದು. ಅದರಲ್ಲೂ ಕ್ರಿಮಿನಲ್ ಟ್ರೈಬ್ಸ್ ಎಂದು ಹಣೆಪಟ್ಟಿಕಟ್ಟಿಕೊಂಡ ಸಮುದಾಯಗಳಲ್ಲಂತೂ ಈ ಪ್ರಕ್ರಿಯೆ ಸಹಜವಾಗಿತ್ತು. ಭಟ್ಟಿಸೆರೆ ಅಥವಾ ಕಳ್ಳು ಆಯಾ ಸಮುದಾಯದ ಆಚರಣೆ ಮತ್ತು ನಂಬಿಕೆಗಳ ಭಾಗವಾಗಿ ಬರೆತುಹೋಗಿತ್ತು. ಇದಕ್ಕೆ ಆಚರಣಾತ್ಮಕ ಮೌಲ್ಯವೂ ಬಂದಿತ್ತು. ಈ ಎಲ್ಲಾ ಕಾರಣದಿಂದಾಗಿ ಭಟ್ಟಿ ಸೆರೆ ತೆಗೆಯುವುದು ಗಂಟಿಚೋರ ಸಮುದಾಯಕ್ಕೆ ಸಹಜವಾದ ಕಸುಬಾಗಿತ್ತು.
ಡಾ.ಅರುಣ್ ಜೋಳದ ಕೂಡ್ಲಿಗಿ ಬರೆಯುವ ‘ಗಂಟಿಚೋರರ ಕಥನಗಳು’ ಸರಣಿಯ ಹನ್ನೊಂದನೆಯ ಕಂತು.

read more
ಡೈರಿ ಆಫ್‌ ಅ ವಿಂಪಿ ಕಿಡ್ : ನಮ್ಮಂತೆಯೇ ಅವರು, ಅವರಂತೆಯೇ ನಾವು

ಡೈರಿ ಆಫ್‌ ಅ ವಿಂಪಿ ಕಿಡ್ : ನಮ್ಮಂತೆಯೇ ಅವರು, ಅವರಂತೆಯೇ ನಾವು

ಅವನು ಒಂದು ದಿನ ಹೀಗೆ ಯೋಚಿಸುತ್ತಾನೆ: ತಾನು ಮಂದೆ ದೊಡ್ಡವನಾದಮೇಲೆ ಬಹಳ ಪ್ರಸಿದ್ಧ ವ್ಯಕ್ತಿಯಾದರೆ ಹೇಗಿರಬಹುದು, ಜನರೆಲ್ಲಾ ತನ್ನನ್ನು ಗುರುತಿಸುತ್ತಾರೆ, ಎಲ್ಲರಿಗೂ ತಾನೆಂದರೆ ಯಾರು ಅಂತ ತಿಳಿದಿರುತ್ತದೆ. ಹಾಗೆ ತನ್ನ ಹುಟ್ಟಿದ ಹಬ್ಬದಂದು ರಜಾ ದಿನ ಕೂಡಾ ಘೋಷಣೆಯಾಗಬಹುದು. ಅದು ಸಂತಸದ ವಿಷಯವೇ ಆದರೂ ಕೆಲವು ತನಗೆ ಮುಜುಗರ ತರಿಸಬಹುದು. ಉದಾಹರಣೆಗೆ – ‘ಗ್ರೆಗ್ ದಿನದ ಮೆಗಾ ಸೇಲ್. ಕಾಚಾ ಬನಿಯನ್ ಮೇಲೆ ಎಷ್ಟೋ ಪ್ರತಿಶತ ಕಡಿತ’ ಅನ್ನೋ ತರಹದ ಜಾಹಿರಾತುಗಳು ಬಂದು ತನ್ನ ಹುಟ್ಟುಹಬ್ಬಕ್ಕೆ ಬೆಲೆಯೇ ಇರದ ಸನ್ನಿವೇಶ ಬರಬಹುದು ಎಂದೂ ಚಿಂತಿಸುತ್ತಾನೆ.
‘ಓದುವ ಸುಖ’ ಅಂಕಣದಲ್ಲಿ “ಡೈರಿ ಆಫ್‌ ಅ ವಿಂಪಿ ಕಿಡ್ಸ್‌” ಸರಣಿಯ ಕುರಿತು ಗಿರಿಧರ್ ಗುಂಜಗೋಡು ಬರಹ

read more
ಅಳುವ ಕಡಲಿನ ನಗೆಯ ದೋಣಿ

ಅಳುವ ಕಡಲಿನ ನಗೆಯ ದೋಣಿ

ಕರ್ನೊ ಕಂಪೆನಿ ಒದಗಿಸಿದ ಅವಕಾಶ ಚಾಪ್ಲಿನ್ ನ ಬದುಕಿಗೆ ದೊಡ್ಡ ತಿರುವು ಆಧಾರ ನೀಡಿತು. ಲಂಡನ್ನಿನ ಲಾಂಬೆತ್ ಪ್ರದೇಶದ “ಗ್ಲೇನ್ ಷಾ ಮ್ಯಾನ್ಷನ್ಸ್” ಎನ್ನುವ ಬಹುಮಹಡಿ ವಸತಿಯ 15 ನೆಯ ನಂಬ್ರದ ಫ್ಲಾಟ್ ಮೊದಲ ಸ್ವಂತದ ಬಿಡಾರವಾಯಿತು. ಚಾರ್ಲಿಯ ತಾಯಿಯ ಮೊದಲ ಸಂಗಾತಿಯ ಮಗ ಸಿಡ್ನಿ ಹಾಗು ಚಾರ್ಲಿ ಇಲ್ಲಿ ಜೊತೆಗೆ ಇರಲಾರಂಭಿಸಿದರು. ಮೂರನೆಯ ಮಹಡಿಯಲ್ಲಿದ್ದ ಈ ಮನೆಯನ್ನು “ಬದುಕಿನುದ್ದಕ್ಕೂ ಮೆಲುಕುಹಾಕುವ ಸ್ವರ್ಗ” ಎಂದು ಚಾರ್ಲಿ ಚಾಪ್ಲಿನ್ ಹೇಳಿಕೊಂಡದ್ದಿದೆ.

read more
ದಂಡ ಮೊಂಡರಿಂದ ದೇವರಿಗೆ ದಂಡವೆ

ದಂಡ ಮೊಂಡರಿಂದ ದೇವರಿಗೆ ದಂಡವೆ

ತಾತ ಎಂದೆ, ಭಂಗವಾದಂತೆ ಎದ್ದುನಿಂತ. ಅವನ ಪರಮಾಪ್ತ ಪ್ರಿಯ ತಿನಿಸು ಎಂದರೆ ಎಲೆ ಅಡಿಕೆ ಹೊಗೆಸೊಪ್ಪು. ಊರವರು ತಾವಾಗಿಯೆ ಅವನಿಗೆ ನೀಡುತ್ತಿದ್ದರು. ಯಾರನ್ನೂ ಕೇಳುತ್ತಿರಲಿಲ್ಲ. ಹಾಗೆ ಕೊಡುವುದು ಗೌರವ ಸೂಚಕವಾಗಿತ್ತು. ಅವನ ಬಳಿ ಬಿಡಿಗಾಸು ಕೂಡ ಇರಲಿಲ್ಲ. ಬರಿಗಾಲ ನಡಿಗೆಯವನು ಅವನು. ಒಮ್ಮೆಯೂ ವಾಹನ ಏರಿ ಕೂತಿದ್ದವನಲ್ಲ. ಹಣದ ಬಗ್ಗೆ ಅಸಹ್ಯ. ಅದನ್ನು ಮುಟ್ಟುತ್ತಿರಲಿಲ್ಲ. ದೊಡ್ಡ ತಾತ ದುಡ್ಡು ಕೊಡಲು ಮುಂದಾದಾಗಲೆಲ್ಲ ವಿಷಾದ ಪಡುತ್ತಿದ್ದ. ನಿರಾಕರಿಸಿದ್ದ.
‘ನನ್ನ ಅನಂತ ಅಸ್ಪೃಶ್ಯ ಆಕಾಶ’ ಸರಣಿಯಲ್ಲಿ ಮೊಗಳ್ಳಿ ಗಣೇಶ್‍ ಬರಹ.

read more
ಅಗರಿ ಶೈಲಿ, ಬಲಿಪ ಶೈಲಿಗಳ ಕುರಿತು..

ಅಗರಿ ಶೈಲಿ, ಬಲಿಪ ಶೈಲಿಗಳ ಕುರಿತು..

ಅಗರಿ ಮತ್ತು ಬಲಿಪ ಶೈಲಿಗಳು ಯಕ್ಷಗಾನದ ಅತ್ಯಂತ ಪ್ರಮುಖ ಹಾಡಿಕೆಯ ಘರಾನಾ ಎಂದು ಹೇಳಬಹುದು. ಈಗಲೂ ಇದು ಪ್ರಸ್ತುತದಲ್ಲಿದ್ದು ಯಕ್ಷಗಾನದ ಸಾಂಪ್ರದಾಯಿಕ ಹಾಡಿಕೆಗೆ ಕಲಾವಿದರು ಕೊಡುತ್ತಿರುವ ಗೌರವದ ಪ್ರತೀಕ ಎಂದೇ ಹೇಳಬಹುದು. ಈ ಎರಡು ಶೈಲಿಯ ಹಾಡಿಕೆಯಲ್ಲಿ ಹೊರನೋಟಕ್ಕೆ ಭೇದ ಇದ್ದರೂ ಅದರ ಅಂತರ್ಯದಲ್ಲಿ ಮೂಲಭೂತ ಅಂಶಗಳಲ್ಲಿ ಯಾವುದೇ ವ್ಯತ್ಯಾಸವಿಲ್ಲ.
ಕೃಷ್ಣ ಪ್ರಕಾಶ್ ಉಳಿತ್ತಾಯ ಬರೆಯುವ ಬಲಿಪ ಮಾರ್ಗ ಸರಣಿಯಲ್ಲಿ ಹೊಸ ಬರಹ

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ