ನರಭಕ್ಷಕ ಹೆಜ್ಜೆಗಳ ಸಪ್ಪಳ
ಇವನೇನಾ ಆ ಸಾಹೇಬ… ಕುದುರೆ ಗಾಡಿಯ ಮೇಲೆ ಬಂದು ದಿಕ್ಕೆಟ್ಟವರಿಗೆ ಹೊಸ ಬಟ್ಟೆ ದಾನ ಮಾಡುತ್ತಿದ್ದವನು ಎನಿಸಿ ಅಚ್ಚರಿಗೊಂಡೆ. ಆ ಕಾಲಕ್ಕೇ ಆತ ವಿಪರೀತ ಲಂಚಕೋರನಾಗಿ ಹಲವು ಬಾರಿ ಸಸ್ಪೆಂಡ್ ಆಗಿದ್ದ. ಡಿಸ್ಮಿಸ್ ಒಂದೇ ಬಾಕಿ ಇದ್ದದ್ದು. ಆ ಮನೆಯೂ ಅವನದಾಗಿರಲಿಲ್ಲ. ಬಾಡಿಗೆ ಮನೆ ಅದು. ಅದರ ಅಳತೆಯೊ ಹತ್ತು ಬೈ ಹತ್ತು ಅಡಿ ಮಾತ್ರ. ಮೇಲೆ ತಗಡು ಹಾಸಿದ್ರು. ಸಾಲಾಗಿ ಅದೇ ತರದ ಇನ್ನೂ ನಾಲ್ಕು ಮನೆಗಳಿದ್ದವು.
ಮೊಗಳ್ಳಿ ಗಣೇಶ್ ಬರೆಯುವ ಸರಣಿ
ಔಚಿತ್ಯ ಅಂದ್ರೆ ಬೇಸಿಕ್ ರೂಲ್ಸ್ : ಎಮ್ ಎಲ್ ಭಟ್
ಯಕ್ಷಗಾನ ಪ್ರದರ್ಶನವೊಂದರಲ್ಲಿ ಪೂರ್ವರಂಗವು ಕಲಿಕೆಗಾಗಿ ಇರುವ ಅವಕಾಶ. ತೆಂಕು ತಿಟ್ಟಿನಲ್ಲಿ ಅದನ್ನು ಇನ್ನೂ ಉಳಿಸಿಕೊಳ್ಳಲಾಗಿದೆ. ಬಡಗು ತಿಟ್ಟಿನಲ್ಲಿಯೂ ತಕ್ಕಮಟ್ಟಿಗಾದರೂ ಪೂರ್ವರಂಗವನ್ನು ಉಳಿಸಿಕೊಳ್ಳಬೇಕು ಎಂದು ಹೇಳುವ ಎಂ.ಎಲ್. ಭಟ್ ಅವರು, ಯಕ್ಷಗಾನದ ಜೊತೆಗೆ ದೀರ್ಘವಾದ ನಂಟು ಹೊಂದಿದವರು. ಕೃತಿ. ಆರ್. ಪುರಪ್ಪೇಮನೆ ಅವರು ಯಕ್ಷಾರ್ಥ ಚಿಂತಾಮಣಿ ಸರಣಿಯಲ್ಲಿ ಅವರೊಡನೆ ನಡೆಸಿದ ಮಾತುಕತೆಯನ್ನು ಬರಹರೂಪಕ್ಕಿಳಿಸಿದ್ದಾರೆ.
ಸಂತೋಷ ಪಡುತ್ತಾ ಕಲಿಯುವುದೂ ಸಾಧ್ಯ
ಬೇಸಿಗೆ ರಜೆಯ ಕುರಿತು ಅನೇಕ ಅಭಿಪ್ರಾಯಗಳಿವೆ. ವರ್ಷ ಪೂರ್ತಿ ಬಿಡುವಿಲ್ಲದೇ ಪಾಠ ಪ್ರವಚನಗಳು ನಡೆದು, ಕೊನೆಗೆ ಪರೀಕ್ಷೆಗಳು ಬರುತ್ತವೆ, ಈ ಪರೀಕ್ಷೆಯಲ್ಲಿ ಉತ್ತಮ ಅಂಕ ಗಲಿಸಿದರೆ ಮಾತ್ರ ಮಗು ಮುಂದಿನ ಹಂತಕ್ಕೆ ಪ್ರವೇಶ ಪಡೆಯುತ್ತದೆ. ಅದೇನೇ ಇರಲಿ, ರಜೆಯ ಖುಷಿಯೇ ಶಾಲೆಯೊಳಗೇಕೆ ಬರಬಾರದು ಎಂದು ಅಚ್ಚರಿಪಡುತ್ತಾರೆ ಅರವಿಂದ ಕುಡ್ಲ. ಗಣಿತ ಮೇಷ್ಟರ ಶಾಲಾ ಡೈರಿಯಲ್ಲಿ ಹೊಸ ಬರಹ ಇಲ್ಲಿದೆ.
ಕ್ರಿಯಾಶೀಲ ಸಂಘಟನೆಗಳು ಮತ್ತು ಆಗ್ರಹಗಳು
ಗಂಟಿಚೋರರ ಸಂಘಟನೆಗಳು ಆಯಾ ಭಾಗದ ಸಮಸ್ಯೆಗಳನ್ನು ಗುರುತಿಸುವ ಮತ್ತು ಆ ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತರುವ ಕೆಲಸ ಮಾಡಬೇಕಿದೆ. ಸಮುದಾಯದ ಸಮಸ್ಯೆಗಳು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿರುತ್ತವೆ. ಲಿಂಗದ ನೆಲೆಯಲ್ಲಿ ಮಹಿಳೆಯರ ಸಮಸ್ಯೆಗಳು ಬೇರೆಯೇ ಆಗಿರುತ್ತವೆ. ಗಂಟೀಚೋರರ ಕಥನಗಳು ಸರಣಿಯಲ್ಲಿ ಗಂಟಿಚೋರರ ಸಂಘಟನೆಗಳ ಕುರಿತು ಅರುಣ್ ಜೋಳದ ಕೂಡ್ಲಿಗಿ ಬರೆದ 22ನೆಯ ಕಂತು ಇಂದಿನ ಓದಿಗಾಗಿ
ಅಧಿಕಾರವೆಂಬ ಮುಳ್ಳಿನ ಹಾದಿಯಲ್ಲಿ..
ಡಾ. ವೈ.ವಿ. ಅವರು ತೆಲುಗಿನಲ್ಲಿ ಬರೆದ ‘ನಾ ಜ್ಞಾಪಕಾಲು’ ಅನ್ನುವ ಆತ್ಮಕಥೆಯಲ್ಲಿ ತಮ್ಮ ಜೀವನದ ಬಗ್ಗೆ ಹೆಚ್ಚಿನ ಬೆಳಕು ಚೆಲ್ಲಿದ್ದಾರೆ. ಆಂಗ್ಲ ಭಾಷೆಯಲ್ಲಿ ಬರೆದ ಪುಸ್ತಕವು, ದೇಶದ ಆರ್ಥಿಕತೆಯ ಬಗೆಗಿನ ಸಂಕೀರ್ಣ ವಿಷಯಗಳನ್ನು ಒಳಗೊಂಡಿದೆ. ಇವೆರಡನ್ನು ಒಟ್ಟುಗೂಡಿಸಿ, ಹಣಕಾಸು ವಿಷಯದಲ್ಲಿ ಜ್ಞಾನ ಇಲ್ಲದವರಿಗೂ ಅರ್ಥವಾಗುವಂತೆ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸುವುದು ಖಂಡಿತವಾಗಿಯೂ ಸುಲಭದ ವಿಷಯವಲ್ಲ. ಎಂ.ಎಸ್. ಶ್ರೀರಾಮ್ ಈ ಕೆಲಸವನ್ನುಯಶಸ್ವಿಯಾಗಿ ಮಾಡಿದ್ದಾರೆ. ಓದುವ ಸುಖ ಅಂಕಣದಲ್ಲಿ ಗಿರಿಧರ್ ಗುಂಜಗೋಡು ಬರಹ
ಜಪಾನ್ ನ ʻಡ್ರೈವ್ ಮೈ ಕಾರ್ʼ: ವಿಷಾದ ಪ್ರಧಾನ ಚಿತ್ರ
ಹಿರೋಶಿಮಾಗೆ ಆ ನಾಟಕವನ್ನು ನಿರ್ದೇಶಿಸಲು ಹೊರಟವನಿಗೆ ಪ್ರಾರಂಭದಲ್ಲಿಯೇ ಅನಿರೀಕ್ಷಿತ ಪ್ರಸಂಗ ಎದುರಾಗುತ್ತದೆ. ನಾಟಕ ಸಂಸ್ಥೆಯವರು ಕಫುಕುನ ಕಾರಿಗೆ ಡ್ರೈವರೊಬ್ಬಳನ್ನು ಏರ್ಪಾಡು ಮಾಡಿರುತ್ತಾರೆ. ಆದರೆ ಕಫುಕುಗೆ ಇಷ್ಟವಾಗುವುದಿಲ್ಲ. ಏಕಾಂಗಿಯಾಗಿ ಕಾರಲ್ಲಿ ಓಡಾಡುವುದು ಇಷ್ಟವೆನಿಸಿ ಬೇಡವೆಂದರೂ ಕೇಳದೆ ಮಿಸಕಿ ವಕಾರಿ ಎಂಬ ಯುವತಿಯನ್ನು ಗೊತ್ತು ಮಾಡುತ್ತಾರೆ.
ಎ.ಎನ್. ಪ್ರಸನ್ನ ಬರೆಯುವ ‘ಲೋಕ ಸಿನಿಮಾ ಟಾಕೀಸ್’ನಲ್ಲಿ ಜಪಾನೀ ಚಿತ್ರದ ಕುರಿತ ಹೊಸ ಬರಹ
ಬದುಕಿಗೆ ಸಾವಿರ ತಿರುವುಗಳು
ಹೊಸದಾಗಿ ಬಂದ ಕೃಷ್ಣಾ ಜಾಣನೂ ಮೃದು ಸ್ವಭಾವದವನೂ ಆಗಿದ್ದ. ಹೆಣ್ಣು ಧ್ವನಿಯ ಆತ ‘ಬ್ಯೂಟಿಫುಲ್’ ಆಗಿದ್ದ. ಆತ ಬಂದ ಹೊಸದರಲ್ಲಿ ಜಗ್ಗು ಒಂದು ಸಲ ಕೃಷ್ಣಾಗೆ ಮತ್ತು ನನಗೆ ಐಸ್ಕ್ರೀಮ್ ತಿನ್ನಲು ಪಾರ್ಲರ್ಗೆ ಕರೆದುಕೊಂಡು ಹೋದ. ವಿಜಾಪುರದಲ್ಲಿ ಇದ್ದುದರಲ್ಲೇ ಅದು ಬಹಳ ಪಾಶ್ ಆಗಿತ್ತು. ಒಳಗೆ ಕ್ಯಾಬಿನ್ಗಳಿದ್ದವು. ಒಂದು ಕ್ಯಾಬಿನ್ನಲ್ಲಿ ಹೋಗಿ ಕುಳಿತೆವು. ನನಗೆ ಅಂಥ ಅನುಭವ ಮೊದಲನೆಯದಾಗಿತ್ತು. ಒಂದು ಪೆಗ್ ತುಂಬ ಐಸ್ಕ್ರೀಮ್ ಕೂಡ ಮೊದಲ ಬಾರಿಗೆ ತಿಂದದ್ದು. ಕೃಷ್ಣಾ ಬಹಳ ಮುಜುಗರದಿಂದ ತಿನ್ನುತ್ತಿದ್ದ.
ರಂಜಾನ್ ದರ್ಗಾ ಬರೆಯುವ “ನೆನಪಾದಾಗಲೆಲ್ಲ” ಸರಣಿಯ ಇಪ್ಪತ್ತೆಂಟನೆಯ ಕಂತು
ನರಕದಲ್ಲಿ ಕ್ಷಣ ಬೆರಳದ್ದಿ ಬಂದಿದ್ದೆ
ನನ್ನ ಇತಿ ಮಿತಿಯಲ್ಲಿ ಅವುಗಳಲ್ಲಿ ಬೇಕಾದವನ್ನು ಆಯ್ದುಕೊಂಡೆ. ಬರೆವ ಬಣ್ಣಗಳು ಆಗಲೇ ಹೈಸ್ಕೂಲು, ಪಿಯು ಕಾಲೇಜಿನಲ್ಲೆ ಅಂಟಿಕೊಂಡಿದ್ದವು ಎಂದು ಹೇಳಿದ್ದೆ. ಲೈಬ್ರರಿಯ ತರಾವರಿ ಗ್ರಂಥಗಳ ಬೆಟ್ಟ ಕಂಡ ಕೂಡಲೆ ಬರೆಯುವುದನ್ನೆ ಮರೆತುಬಿಟ್ಟಿದ್ದೆ. ಹಾದಿ ಬೀದಿಯಲ್ಲಿ ಅಲೆವಾಗ ಎಷ್ಟೊಂದು ಚೆಲುವೆಯರ ಕಂಡೆ; ನಗರದ ಮೂಲೆ ಮೂಲೆಯ ನರಕವ ಕಂಡೆ…
ಮೊಗಳ್ಳಿ ಗಣೇಶ್ ಬರೆಯುವ ಆತ್ಮಕತೆ ‘ನನ್ನ ಅನಂತ ಅಸ್ಪೃಶ್ಯ ಆಕಾಶ’ ಸರಣಿ
ಬೆಂಕಿಯಲ್ಲಿ ಅರಳಿದ `ಹೂ’ “ಗೋದಾವರಿ ಗಂಟಿಚೋರ”
ಗಂಟಿಚೋರ ಸಮುದಾಯವನ್ನು ಬ್ರಿಟೀಶ್ ಆಡಳಿತದಲ್ಲಿ ಕ್ರಿಮಿನಲ್ ಟ್ರೈಬ್ಸ್ ಪಟ್ಟಿಗೆ ಸೇರಿಸಿ ಇವರನ್ನು ನಿಯಂತ್ರಿಸಲು `ಸೆಟ್ಲಮೆಂಟ್’ ಎಂಬ ದೊಡ್ಡ ಜೈಲಲ್ಲಿ ಬಂಧಿಸಿದ್ದರು. ಇವರನ್ನು ಹದ್ದಿನ ಕಣ್ಣಿನಲ್ಲಿ ಕಾವಲು ಕಾಯುತ್ತಾ ಚಿತ್ರ ಹಿಂಸೆಗೆ ಒಳಗುಮಾಡಿದ್ದರು. ಪೌಜುದಾರ, ಪೋಲಿಸರಿಂದ ನಿರಂತರ ಹಿಂಸೆಗೆ ಒಳಗಾದ ಈ ಪುಟ್ಟ ಗಂಟಿಚೋರ ಸಮುದಾಯ ಕಾಲಾನಂತರದಲ್ಲಿ ಯಾರೇ ಕಳ್ಳತನ ಮಾಡಿದರೂ ಇವರನ್ನೇ ಹಿಂಸಿಸುತ್ತಿದ್ದ ಪೋಲಿಸರ ದಬ್ಬಾಳಿಕೆಗೆ ನಲುಗಿತು. ಡಾ. ಅರುಣ್ ಜೋಳದಕೂಡ್ಲಿಗಿ ಬರೆಯುವ ಸರಣಿ










