Advertisement

ಸರಣಿ

ಏಷ್ಯಾದ ಕಳೆದುಹೋದ ಜಗತ್ತು ಇಂಡೋನೇಷ್ಯಾ: ಡಾ. ವಿಶ್ವನಾಥ ನೇರಳಕಟ್ಟೆ ಸರಣಿ

ಏಷ್ಯಾದ ಕಳೆದುಹೋದ ಜಗತ್ತು ಇಂಡೋನೇಷ್ಯಾ: ಡಾ. ವಿಶ್ವನಾಥ ನೇರಳಕಟ್ಟೆ ಸರಣಿ

ಇಂಡೋನೇಷ್ಯಾವು ನೂರಕ್ಕೂ ಹೆಚ್ಚು ಅಳಿವಿನಂಚಿನಲ್ಲಿರುವ ಜೀವಿಗಳಿಗೆ ನೆಲೆಯಾಗಿದೆ. ಏಷ್ಯಾದ ಕಳೆದುಹೋದ ಜಗತ್ತು ಎನ್ನುವ ವಿಶೇಷ ಹೆಸರನ್ನು ಹೊಂದಿದೆ ಇಂಡೋನೇಷ್ಯಾ. ಬೇರೆ ಕಡೆಗಳಲ್ಲಿ ಕಂಡುಬರದ, ಈಗಾಗಲೇ ಅಳಿದುಹೋದ ಅಪರೂಪದ ಜೀವಿಗಳು ಇಲ್ಲಿ ಕಂಡುಬರುತ್ತವೆ. ಸುಮಾತ್ರನ್ ಘೇಂಡಾಮೃಗ, ಒರಾಂಗ್-ಉಟಾನ್ಸ್, ಅನೋವಾ, ಸುಮಾತ್ರಾನ್ ಹುಲಿ, ಸಮುದ್ರ ಆಮೆಗಳು, ಟಾರ್ಸಿಯಸ್ ಟಾರ್ಸಿಯರ್, ಕೊಮೊಡೊ ಡ್ರ‍್ಯಾಗನ್, ಮೆರಾಕ್ ಮೊದಲಾದವು ಇಲ್ಲಿ ಕಾಣಸಿಗುವ, ಬೇರೆಲ್ಲೂ ಹೆಚ್ಚಾಗಿ ಕಾಣಸಿಗದ ಜೀವಿಗಳು.
ಡಾ. ವಿಶ್ವನಾಥ ಎನ್. ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿಯಲ್ಲಿ ಇಂಡೋನೇಷ್ಯಾ ದೇಶದ ಕುರಿತ ಬರಹ ನಿಮ್ಮ ಓದಿಗೆ

read more
ಸೌದಿ ಡೇಟ್ಸ್ – 2: ದರ್ಶನ್‌ ಜಯಣ್ಣ ಸರಣಿ

ಸೌದಿ ಡೇಟ್ಸ್ – 2: ದರ್ಶನ್‌ ಜಯಣ್ಣ ಸರಣಿ

ಸೌದಿ ಆಧುನಿಕತೆಯನ್ನ ಎಲ್ಲರಂತೆ ಅಪ್ಪಿಕೊಂಡರೂ ಅದನ್ನ ಒಪ್ಪಿಕೊಂಡಿರಲಿಲ್ಲ. ಸಂಪ್ರದಾಯ ಮತ್ತು ಆಧುನಿಕತೆ, ಇಸ್ಲಾಂ ಮತ್ತು ಇತರೆ ಧಾರ್ಮಿಕ ಪದ್ಧತಿಗಳು, ಹಣ ಗಳಿಕೆ ಮತ್ತು ಜಾಗತಿಕ ಪ್ರಭಾವ, ಶಿಕ್ಷಣ ಮತ್ತು ಧರ್ಮ, ಸಂಪನ್ಮೂಲಗಳು ಮತ್ತು ನುರಿತ ಕೆಲಸಗಾರರು, ಕಮಾಂಡ್ ಅಂಡ್ ಕಂಟ್ರೋಲ್ ಇವೇ ಮುಂತಾದ ವಿಷಯಗಳನ್ನ ಎರಡು ದೋಣಿಯ ಪಯಣ ಅಂತಲೇ ಬಹುಶ ಭಾವಿಸಿತ್ತು ಅನ್ನಿಸುತ್ತದೆ. ಇತರೇ ಅರಬ್ ರಾಷ್ಟ್ರಗಳು ಇಲ್ಲಿಗೆ ಬಂದು ನೆಲಸಿ ನೌಕರಿ ಮಾಡುವವರನ್ನು ಮುಕ್ತವಾಗಿ ನಮ್ಮ ದೇಶವನ್ನ ಕಟ್ಟಿದವರಲ್ಲಿ ಇವರ ಪಾಲೂ ಹೆಚ್ಚಿದೆ ಎಂದು ಹೇಳಿದರೆ ಸೌದಿ ಅಂತಾ ಯಾವ ಹೇಳಿಕೆಯನ್ನೂ ಕೊಡುವುದಿಲ್ಲ.
ದರ್ಶನ್‌ ಜಯಣ್ಣ ಬರೆಯುವ “ಸೌದಿ ಡೇಟ್ಸ್”‌ ಸರಣಿ

read more
ಮಹಾಮಾತೆ ನನ್ನತ್ತೆ: ಸುಮಾ ಸತೀಶ್ ಸರಣಿ

ಮಹಾಮಾತೆ ನನ್ನತ್ತೆ: ಸುಮಾ ಸತೀಶ್ ಸರಣಿ

ಅವರ ಜೀವನ ಪ್ರೀತಿ ಬಲು ಹಿತವಾಗಿತ್ತು.‌ ಮನೆತುಂಬ ಮಕ್ಕಳಿದ್ದಾಗ ತರಾವರಿ ಅಡುಗೆ ಮಾಡುತ್ತಿದ್ದರು.‌ ಕೊನೆಗೆ ತಾವಿಬ್ಬರೇ ಇರುವಾಗಲೂ ಯಾವೊಂದು ತಿಂಡಿಯನ್ನೂ ಬಿಡದೆ ಮಾಡುತ್ತಿದ್ದರು. ಇಡ್ಲಿ, ದೋಸೆ, ಕಡುಬು, ಒಬ್ಬಟ್ಟು ಊಹೂ ಯಾವುದೂ ಬಿಡುತ್ತಿರಲಿಲ್ಲ. ಸೋಮಾರಿತನ ಇವರನ್ನು ಕದ್ದು ನೋಡಲೂ ಹೆದರಿ ಓಡುತ್ತಿತ್ತು. ಕೊನೆಗೆ ಮಾಮ ಹೋದ ಮೇಲೆ ಸುಮಾರು ವರ್ಷಗಳು ಒಬ್ಬರೇ ಇದ್ದಾಗಲೂ ಅದೇ ಆಹಾರ ಪದ್ಧತಿಯಿತ್ತು. ತಾವೊಬ್ಬರೇ ತಿನ್ನದೆ ಅಕ್ಕಪಕ್ಕದವರಿಗೆ, ಹತ್ತಿರದ ಬಡಮಕ್ಕಳಿಗೆ, ಕೂಲಿ ಕೆಲಸದವರಿಗೆ‌ ಕೊಟ್ಟು ತಿನ್ನುತ್ತಿದ್ದರು.
ಸುಮಾ ಸತೀಶ್ “ರಂಗಿನ ರಾಟೆ” ಸರಣಿ ಬರಹ

read more
ಚಾಲೆಂಜ್ ಗೆಲ್ಲೋಕೆ ತಿನ್ನುತ್ತಿದ್ದ ರೋಚಕ ಪ್ರಸಂಗಗಳು!!: ಬಸವನಗೌಡ ಹೆಬ್ಬಳಗೆರೆ ಸರಣಿ

ಚಾಲೆಂಜ್ ಗೆಲ್ಲೋಕೆ ತಿನ್ನುತ್ತಿದ್ದ ರೋಚಕ ಪ್ರಸಂಗಗಳು!!: ಬಸವನಗೌಡ ಹೆಬ್ಬಳಗೆರೆ ಸರಣಿ

ನಾನು ಮೆಸ್ ಬಿಲ್ ಕೊಡುವುದು ಒಂದೆರಡು ತಿಂಗಳು ತಡವಾಯ್ತು. ಆಗ ಚೆನ್ನಕೇಶವಣ್ಣನ ಸಿಟ್ಟು ನನ್ನ ಮೇಲೆ ತಾರಕಕ್ಕೇರಿತ್ತು. ಈ ವಿಷಯವನ್ನು ಚೆನ್ನಕೇಶನಣ್ಣನ ಮನೆಯವರ ಬಳಿ ಹೇಳಿದೆ. ಆಗ ಅವರು ಅವರ ಬಳಿ ಇದ್ದ ಹಣವನ್ನೇ ಕೊಟ್ಟು ಮೆಸ್ ಬಿಲ್ ಕೊಡು ಎಂದು ತಿಳಿಸಿದ್ದರು. ಹೀಗೆ ಅವರು ಮಾತೃಹೃದಯಿಯಾಗಿದ್ದರು. ಅವರು ಕೋಪ ಮಾಡಿಕೊಂಡಿದ್ದನ್ನು ನಾನು ನೋಡಿಯೇ ಇರಲಿಲ್ಲ. ತುಂಬಾ ತಾಳ್ಮೆ ಇತ್ತು. ನಗುಮೊಗದ ಸ್ವಭಾವ.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಮೂವತ್ತೇಳನೆಯ ಕಂತು ನಿಮ್ಮ ಓದಿಗೆ

read more
ಚಿತ್ರಹಿಂಸೆ ಮತ್ತು ಹೆಡ್ ಕುಕ್: ಸುಮಾವೀಣಾ ಸರಣಿ

ಚಿತ್ರಹಿಂಸೆ ಮತ್ತು ಹೆಡ್ ಕುಕ್: ಸುಮಾವೀಣಾ ಸರಣಿ

ಸೀನರಿ ಅಂದರೆ ನಮ್ಮ ಚಿತ್ರವನ್ನು ಇನ್ನೊಮ್ಮೆ ನೋಡುವ ಸೀನ್ ಇರುತ್ತಲೇ ಇರಲಿಲ್ಲ. ಅದೇ ಸೊರಗಿದ ಮರಗಿಡಬಳ್ಳಿ, ಕೊರಕಲು ನದಿ, ಒಂಟಿ ಕಿಟಕಿಯ ಮನೆ, ರೆಕ್ಕೆ ಸುಟ್ಟಂಥ ಹಕ್ಕಿ, ಸೊಟ್ಟ ರಸ್ತೆ ಹೀಗೆ ಒಂದೇ ಎರಡೇ…. ಸ್ಪುರದ್ರೂಪಿ ಮನುಷ್ಯ ಎಂದೂ ನಮ್ಮಿಂದ ರೂಪುಗೊಳ್ಳಲೇ ಇಲ್ಲ ಬಿಡಿ…. ಅಂತೂ ಚಿತ್ರ -ವಿಚಿತ್ರ ಚಿತ್ರಗಳನ್ನು ಬಿಡಿಸುತ್ತಲೇ ಇದ್ದ ನಮಗೆ ಅನಿವಾರ್ಯವಾಗುತ್ತಿದ್ದುದು ಸೈನ್ಸಿನ ಗಿಡದ ಚಿತ್ರಬಿಡಿಸಿ ಭಾಗಗಳನ್ನು ಗುರುತಿಸಿ ಮತ್ತು ಸೋಷಿಯಲ್ ಸೈನ್ಸಿನ ಭಾರತ ಭೂಪಟ ಬಿಡಿಸಿ ಸ್ಥಳ ಗುರುತಿಸಿ ಎನ್ನುವ ಪ್ರಶ್ನೆ. ಸೈನ್ಸಿನ ಪ್ರಶ್ನೆಯನ್ನು ಎದುರಿಸಿ ಮಾರ್ಕ್ಸ್ ತೆಗೆಯುತ್ತಿದ್ದೆವಾದರೂ ಬೇರು, ಕಾಂಡ, ಎಲೆಗಳು ಕೆಂಪು ಇಂಕಿನಲ್ಲಿ ತಿದ್ದುಪಡಿಯಾಗುತ್ತಿದ್ದವು.
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿಯ ಹದಿನೇಳನೆಯ ಬರಹ ನಿಮ್ಮ ಓದಿಗೆ

read more
ಮಗುವಿನ ಮೌನ ಹಸಿವಿನಂಥ ಕಾವ್ಯ: ಎಸ್. ಜಯಶ್ರೀನಿವಾಸ ರಾವ್ ಸರಣಿ

ಮಗುವಿನ ಮೌನ ಹಸಿವಿನಂಥ ಕಾವ್ಯ: ಎಸ್. ಜಯಶ್ರೀನಿವಾಸ ರಾವ್ ಸರಣಿ

ಪಾಕ್ ಚೇಯ್ಸಾಮ್ ಅವರ ಕವಿತೆಗಳು ನೇರ ಆಕ್ರಮಣ ಮಾಡುವುದಿಲ್ಲ, ಆದರೆ ವಿಷಯಗಳ ಸುತ್ತ ಸುತ್ತಾಡುತ್ತಾ ಇರುತ್ತವೆ. ಈ ಕಾವ್ಯಾತ್ಮಕ ಸುತ್ತಾಡುವಿಕೆ ಅನಿವಾರ್ಯವಾಗಿ ಅಂತರವನ್ನು ಸೃಷ್ಟಿಸುತ್ತದೆ, ಇದು ಪ್ರಿಯತಮೆಗಾಗಿ ಹಂಬಲದಂತಹ ಅನ್ಯೋನ್ಯ ವಿಷಯದ ಬಗ್ಗೆಯೂ ಸಹ ಕವಿತೆಗಳು ಮಾತನಾಡುವದರಿಂದ ಬೇರ್ಪಡುವಿಕೆಯ ನೋವನ್ನು ಸೂಚಿಸುತ್ತದೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ದಕ್ಷಿಣ ಕೊರೆಯಾ ದೇಶದ ಹೆಸರಾಂತ ಕವಿ ಪಾಕ್ ಚೇಯ್ಸಾಮ್ -ರವರ
(Pak Chaesam, 1933-1997) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ

read more
ಕೋಟಿಕೋಟಿ ಕೈಜಾರಿದ ದುಃಖ…: ಎಚ್.ಗೋಪಾಲಕೃಷ್ಣ ಸರಣಿ

ಕೋಟಿಕೋಟಿ ಕೈಜಾರಿದ ದುಃಖ…: ಎಚ್.ಗೋಪಾಲಕೃಷ್ಣ ಸರಣಿ

ಇಡೀ ಬೆಂಗಳೂರಿನ ಉಳ್ಳವರು ಅಂದರೆ ರಿಚ್ ಜನ ಇವರ ಮೋಡಿಗೆ ಒಳಗಾದರು. ಇಡೀ ಬೆಂಗಳೂರು ಒಂದು ರೀತಿಯ ಸಾಮೂಹಿಕ ಸನ್ನಿಗೆ ಒಳಗಾಯಿತು, ಐದು ಹತ್ತು ವರ್ಷ ಹಿಂದೆ ಮನೆ ಕಟ್ಟಿಸಿದವರೂ ಕೊಂಡವರೂ ಸೇರಿದಹಾಗೆ ಹಲವು ತಲೆಮಾರುಗಳಿಂದ ಇದ್ದ ಮನೆಗಳು ನೆಲಸಮ ಆದವು. ವಾಸ್ತು ಸರಿ ಇಲ್ಲ ಎಂದು ವಾಸ್ತು ಶಿಲ್ಪಿ ಹೇಳುವುದು ಮತ್ತು ಅಂತಹ ತಜ್ಞರ ಸಲಹೆ ಮೇರೆಗೆ ಮನೆ ಕೆಡವಿ ಕಟ್ಟುವ ಆಟ ಸುಮಾರು ಎರಡು ದಶಕ ನಡೆಯಿತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಐವತ್ತೊಂಭತ್ತನೆಯ ಕಂತು

read more
ಮುದ ತುಂಬಿದ ಮಲೆನಾಡಿನ ಮದ್ವೆಮನೆ:‌ ಭವ್ಯ ಟಿ.ಎಸ್. ಸರಣಿ

ಮುದ ತುಂಬಿದ ಮಲೆನಾಡಿನ ಮದ್ವೆಮನೆ:‌ ಭವ್ಯ ಟಿ.ಎಸ್. ಸರಣಿ

ಗಂಡು ಮತ್ತು ಹೆಣ್ಣಿನ ಮನೆಯ ಒಂದು ಗೋಡೆಯ ಮೇಲೆ ಹಸೆ ಕಲಾವಿದರು ಚಿತ್ತಾರ ಬಿಡಿಸಿ ಗಂಡು ಮತ್ತು ಹೆಣ್ಣಿನ ಹೆಸರು ಬರೆದಿರುತ್ತಾರೆ. ಇದನ್ನು ಹಸೆಗೋಡೆ ಎನ್ನುತ್ತಾರೆ. ಚಪ್ಪರದ ದಿನ, ಮದುವೆ ಮಂಟಪಕ್ಕೆ ಹೊರಡಿಸುವ ಮೊದಲು, ಮದುವೆಯ ನಂತರ ಮದುಮಕ್ಕಳನ್ನು ಈ ಗೋಡೆಯ ಕೆಳಗೆ ಕೂರಿಸಿ ಬಂಧುಗಳೆಲ್ಲರೂ ಅಕ್ಷತೆ ಹಾಕಿ ಹರಸುತ್ತಾರೆ. ಈ ಹಸೆ ಚಿತ್ತಾರವು ಮದುವೆಯ ಸವಿನೆನಪಾಗಿ ಶಾಶ್ವತವಾಗಿ ಆ ಮನೆಯ ಗೋಡೆಯ ಮೇಲೆ ಉಳಿದಿರುತ್ತದೆ.
ಭವ್ಯ ಟಿ.ಎಸ್. ಬರೆಯುವ “ಮಲೆನಾಡಿನ ಹಾಡು-ಪಾಡು” ಸರಣಿ

read more
ಫ್ರೆಂಚ್ ಹಸ್ತದಿಂದ ಮುಕ್ತವಾದ ಗಿಣಿ ಗಿನಿಯಾ: ಡಾ. ವಿಶ್ವನಾಥ ನೇರಳಕಟ್ಟೆ ಸರಣಿ

ಫ್ರೆಂಚ್ ಹಸ್ತದಿಂದ ಮುಕ್ತವಾದ ಗಿಣಿ ಗಿನಿಯಾ: ಡಾ. ವಿಶ್ವನಾಥ ನೇರಳಕಟ್ಟೆ ಸರಣಿ

ಈ ದೇಶದಲ್ಲಿ ತೀವ್ರವಾದ ಬಡತನವಿದೆ. ಯುವಜನತೆ ಹೆಚ್ಚಿರುವ ದೇಶವಾದ ಕಾರಣ ಜನಸಂಖ್ಯೆ ಈಚೀಚೆಗೆ ಹೆಚ್ಚಾಗುತ್ತಿದೆ. ಇಂತಹ ಸನ್ನಿವೇಶದಲ್ಲಿಯೂ ಸಹ ಗಿನಿಯಾ ದೇಶವು ಅರಣ್ಯ ಪ್ರದೇಶಗಳನ್ನು ಹಾಗೆಯೇ ಉಳಿಸಿಕೊಂಡಿದೆ. ಗಿನಿಯಾ ದೇಶವು ವಿಸ್ತೃತವಾದ ಕರಾವಳಿ ಪ್ರದೇಶವನ್ನು ಹೊಂದಿದೆ. ಸುಮಾರು ಮುನ್ನೂರ ಇಪ್ಪತ್ತು ಕಿಲೋಮೀಟರ್‌ಗಳಷ್ಟು ಉದ್ದದ ಕರಾವಳಿಯನ್ನು ಹೊಂದಿದ ದೇಶವಿದು. ಇದರ ರಾಜಧಾನಿ ಕೊನಾಕ್ರಿ ನೆಲೆನಿಂತಿರುವುದೇ ಕರಾವಳಿಯಲ್ಲಿ. ಎಲ್ಲರ ಕಣ್ಮನ ಸೆಳೆಯುವ ಸುಂದರವಾದ ಕಡಲತೀರಗಳನ್ನು ಹೊತ್ತುನಿಂತಿದೆ ಕರಾವಳಿ.
ಡಾ. ವಿಶ್ವನಾಥ ಎನ್. ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿಯಲ್ಲಿ ಗಿನಿಯಾ ದೇಶದ ಕುರಿತ ಬರಹ ನಿಮ್ಮ ಓದಿಗೆ

read more

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ