‘ಮಗಳ ಮದುವೆ’: ಪೂರ್ಣ ಮತ್ತು ಅಪೂರ್ಣ ಬದುಕಿನ ಮಾದರಿಗಳು
ರತ್ನಾಕರನ ಗೆಳೆಯನೂ ಸರಳ ಸಜ್ಜನನೂ ಆಗಿರುವ ರಂಗಣ್ಣನ ತಮ್ಮ ವೆಂಕಣ್ಣನಲ್ಲಿ ಸ್ವಲ್ಪ ಒಳ್ಳೆಯ ಗುಣಗಳು ಇದ್ದರೂ ಚಳುವಳಿಗಾರರಾಗಿರುವ ಅವನ ಸಂಗಡಿಗರು ಪೋಲೀಸರೊಂದಿಗೆ ಕೈಜೋಡಿಸಿ ರತ್ನಾಕರನನ್ನು ಸೆರೆಮನೆಗೆ ತಳ್ಳುವಂತೆ ಮಾಡಲು ಹೇಸದಷ್ಟು ಧೂರ್ತರಾಗಿದ್ದಾರೆ. ಕುಮುದಳನ್ನು ಮದುವೆಯಾಗಲು ಯೋಗ್ಯನಾಗಿದ್ದ ರತ್ನಾಕರನು ತನ್ನ ಗೆಳೆಯರ ಕುಮ್ಮಕ್ಕಿನಿಂದಾಗಿ ಸೆರೆಮನೆಗೆ ತೆರಳಬೇಕಾಗುವ ಸಂದರ್ಭವು ಇದಕ್ಕೊಂದು ನಿದರ್ಶನ.
ಆನಂದಕಂದರ ‘ಮಗಳ ಮದುವೆ’ ಕಾದಂಬರಿಯ ಕುರಿತು ಡಾ. ಸುಭಾಷ್ ಪಟ್ಟಾಜೆ ಬರಹ
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಕಾದಂಬಿನಿ ಬರೆದ ಕತೆ
ಅಲಾ.. ಒಂದ್ ಜಾಕೀಟ್ ಬಟ್ಟೆ ಅರ್ಸಕ್ಕೆ ವರ್ಸ ಪೂರ್ತಿ ದುಡ್ ವಟ್ಮಾಡಿ ಬಟ್ಟೆ ಅಂಗ್ಡಿಗ್ ವೋಗಿದೀನಿ. ಕದಿಯದಾಗಿದ್ರೆ ಇಷ್ಟು ಕಸ್ಟ ತಗೀಬೇಕಾ? ಆ ದೇವ್ರೂ ಈ ಅನ್ಯಾಯ ನೋಡ್ಕ್ಯಂತ ಸುಮ್ಕಿದಾನಾ ಅಂಗಾರೆ? ಅಲಾ ಈ ಸೀರೆ ವಯರ್ ಬುಟ್ಟಿಲಿ ಯಾವಾಗ್ ಬಂದ್ ಸರ್ಕಂತು ಅಂತ? ಬವುಶ್ಯ ನನ್ ಇಂದ್ಗಡೀಕೇ ನಿಂತ್ಕಂದಿದ್ನಲ್ಲ ಇವ್ನು.. ಇವ್ನೇ ಎಲ್ಲಾರೂ.. ಇವ್ನೇ ಇವ್ನೇ! ಇನ್ಯಾರ್ ಇಂತಾ ಕ್ಯಲ್ಸ ಮಾಡ್ತರೆ? ಅಲಾ.. ಅದ್ಯಾ ಮಾಯ್ಕದಲ್ಲಿ ವಯರ್ ಬುಟ್ಟಿಗೆ ಸೀರೆ ತಗ್ದು ಆಕಿಬುಟ್ಟಿದ್ನೋ ಅಂತ!
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಕಾದಂಬಿನಿ ಬರೆದ ಕಥೆ “ತಲೆ ಮ್ಯಾಕೆ ವೂದ ನೀರು” ನಿಮ್ಮ ಈ ಭಾನುವಾರದ ಓದಿಗೆ
ವಸಂತಕುಮಾರ್ ಕಲ್ಯಾಣಿ ಬರೆದ ಈ ಭಾನುವಾರದ ಕತೆ
ಆನಂದನಿಗೆ ತಾನು ಅಭ್ಯಸಿಸುತ್ತಿದ್ದ ಕೆಲವು ಪುಸ್ತಕಗಳಲ್ಲಿ ‘ವೀರ್ಯನಾಶವೇ ಮೃತ್ಯು, ಬ್ರಹ್ಮಚರ್ಯವೇ ಜೀವನ’ ಎಂಬ ಉಕ್ತಿಗಳು ಪ್ರಭಾವ ಬೀರಿದವು. ಆದರೆ ‘ಎಲ್ಲ ಹೆಣ್ಣುಮಕ್ಕಳನ್ನು ಸೋದರಿಯರಂತೆ ಕಾಣುವುದು ದುಸ್ಸಾಧ್ಯ’ ಎಂಬ ಅನುಭವೂ ಕಾಡುತ್ತಿತ್ತು. ಅನೇಕ ಟೀಚರ್ಗಳಿಗೆ ಅಚ್ಚರಿಯಾಗುವಂತೆ ಪಿ.ಯು.ಸಿಯಲ್ಲಿ ಕಾಮರ್ಸ್ ತೆಗೆದುಕೊಂಡ. ಬಿ.ಕಾಂ. ಮಾಡಲು ಖರ್ಚು ಕಡಿಮೆ. ಬೇಗ ಕೆಲಸ ಸಿಗುವುದು. ತಮ್ಮನಾದ ಶೃಂಗ ಬೇಕಾದರೆ ಬಿ.ಇ. ಮಾಡಲಿ. ಅಪ್ಪನಿಗೆ ವಿ.ಆರ್.ಎಸ್. ಸಾಧ್ಯತೆ ಹೆಚ್ಚಿರುವುದರಿಂದ ತಾನು ಬೇಗನೆ ದುಡಿದು ಮನೆ ನೋಡಿಕೊಳ್ಳಬೇಕು.
ವಸಂತಕುಮಾರ್ ಕಲ್ಯಾಣಿ ಬರೆದ ಕತೆ
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಡಾ. ಎಸ್.ಬಿ.ಜೋಗುರ ಬರೆದ ಕತೆ
ಸಾತಪ್ಪಗ ಇಕಾಡಿದಿಕಾಡಿ ಕುಡಿಯೂ ಚಟಾ ಬಿದ್ದಂಗಿತ್ತು. ಮೊದ ಮೊದಲ ಅಪರೂಪಕ್ಕೊಮ್ಮ ಹೊಲದೊಳಗ ರಾಶಿ ಇದ್ದಾಗ… ಯಾರದರೇ ಕಣಕ್ಕ ಹೋದರ, ಇಲ್ಲಾಂದ್ರ ಭಜನಾಕ ಹೋದರ ಅಷ್ಟೇ ಕುಡೀತಿದ್ದ. ಈಗೀಗ ಎರಡು ದಿನಕ್ಕೊಮ್ಮ ಕುಡಿಯಾಕ ಸುರು ಮಾಡಿದ್ದ. ರೊಕ್ಕ ಈಡಾಗಲಿಲ್ಲಂದ್ರ ಅಲ್ಲಿ ಇಲ್ಲಿ ಸಾಲಾ ತಗೊಂತಿದ್ದ. ವಿಜಯಪುರದೊಳಗ ಒಂದಿಬ್ಬರು ಅಡತ ಅಂಗಡಿಯವರಿದ್ದರು. ಸಾತಪ್ಪನ ಅಪ್ಪ ಬೋಜಪ್ಪ ಇದ್ದಾಗಿನಿಂದಲೂ ಅಲ್ಲೇ ವ್ಯವಹಾರ ಮಾಡಕೊಂಡು ಬಂದವರು. ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಡಾ. ಎಸ್.ಬಿ.ಜೋಗುರ ಬರೆದ ಕಥೆ “ಕೇಡುಗಾಲದ ಕುದುರೆ”
ಲಿಂಗರಾಜ ಸೊಟ್ಟಪ್ಪನವರ್ ಬರೆದ ಈ ಭಾನುವಾರದ ಕತೆ
ಮಜೀದ್ ಕ್ಯಾಷಲ್ನ ಭಾರಕ್ಕಿಂತಲೂ ಭಾರವಾದ ಹೃದವನ್ನಿಟ್ಟುಕೊಂಡು ನಾನು ಬಾಳುತ್ತಿರುವುದನ್ನು ಅವರಿಗೆ ಹೇಳಲು ಆಗುತ್ತಿಲ್ಲ. ಮುಂದೆ ಹೇಳದಲೆ ಹೋಗಬಹುದು. ಅವರು ಅದನ್ನು ನಂಬುತ್ತಾರೋ ಇಲ್ಲವೋ. ನಾನು ಯಾರು ಎಂಬುದನ್ನು ಅಷ್ಟಾಗಿ ವಿಚಾರಿಸಲೂ ಹೋಗಲೇ ಇಲ್ಲ. ಅವರೊಂದಿಗೆ ನಾನು ಇರಲು ಅಷ್ಟು ಸಹಜವಾಗಿ ಒಪ್ಪಿಕೊಂಡುಬಿಟ್ಟರು. ನಾನು ಪ್ರಾಗ್ನಿಂದ ಬರುವ ಮುನ್ನ ಅವರೊಂದಿಗೆ ಬಾಂಬೆಯ ನಜ್ಮಾ ಎಂಬ ಚಾಕರಿಯವಳು ಮತ್ತು ಅವಳ ಸಂಸಾರ ಇತ್ತು.
ಲಿಂಗರಾಜ ಸೊಟ್ಟಪ್ಪನವರ್ ಬರೆದ ಕತೆ “ಪಾತ್ರ” ನಿಮ್ಮ ಭಾನುವಾರದ ಓದಿಗೆ
ಎಸ್. ಗಂಗಾಧರಯ್ಯ ಅನುವಾದಿಸಿದ ಹೆಮಿಂಗ್ವೆ ಕಥೆ “ಕನೇರಿ”
ಕನೇರಿ ತನ್ನ ಪುಕ್ಕಗಳನ್ನೊಮ್ಮೆ ಕೊಡವಿತು. ನಂತರ ಅವುಗಳನ್ನು ಕುಕ್ಕತೊಡಗಿತು. `ನಂಗೆ ಯಾವಾಗಲೂ ಹಕ್ಕಿಗಳೆಂದರೆ ಪಂಚ ಪ್ರಾಣ. ನಾನು ಈ ಕನೇರಿ ಹಕ್ಕೀನಾ ನನ್ನ ಪುಟ್ಟ ಮಗಳಿಗಾಗಿ ತಗಂಡು ಹೋಗ್ತಿದೀನಿ. ಹಾ, ಅಲ್ಲಿ ನೋಡಿ. ಅವನು ಈಗ ಹಾಡ್ತಾ ಇದಾನೆ,’ ಅಂದಳು ಅಮೇರಿಕನ್ ಹೆಂಗಸು. ಕನೇರಿ ಚಿಲಿಪಿಲಿಗುಟ್ಟತೊಡಗಿತು. ಅದರ ಗಂಟಲ ಮೇಲಿನ ಪುಕ್ಕಗಳು ನಿಮಿರಿ ನಿಂತವು. ನಂತರ ಅದು ತನ್ನ ಕೊಕ್ಕನ್ನು ಕೆಳಕ್ಕಾಕಿಕೊಂಡು ಪುಕ್ಕಗಳನ್ನು ಹೆಕ್ಕತೊಡಗಿತು.
ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ನೆಸ್ಟ್ ಹೆಮಿಂಗ್ವೆಯ ಒಂದಷ್ಟು ಕಥೆಗಳನ್ನು ಎಸ್. ಗಂಗಾಧರಯ್ಯ ಕನ್ನಡಕ್ಕೆ ತಂದಿದ್ದು, ಈ ಸಂಕಲನದ ಒಂದು ಕಥೆ “ಕನೇರಿ” ನಿಮ್ಮ ಓದಿಗೆ
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಜಯಶ್ರೀ ಕಾಸರವಳ್ಳಿ ಬರೆದ ಕತೆ
ಹಾಗೆ ನೋಡಿದರೆ, ಅವನು ಇರುವೆ ತಿಂದಿದ್ದು ಇಂದೇ ಮೊದಲಿರಲಿಕ್ಕಿಲ್ಲ. ಈ ಮೊದಲೇ ಅವನಿಗೆ ಅರಿವಿಲ್ಲದಂತೆ ಅದೆಷ್ಟು ಇರುವೆ ಅವನ ಹೊಟ್ಟೆಯೊಳಗೆ ಹೊಕ್ಕು ಹೊರ ಹೋಗಿದ್ದವೋ ಯಾರಿಗೆ ಗೊತ್ತು? ಅವನೂರಿನ ಆಲೆಮನೆ ಸಂದರ್ಭದಲ್ಲಂತೂ ಇರುವೆ ಜೊತೆ ದೊಡ್ಡ ದೊಡ್ಡ ಗೊದ್ದಗಳೆಲ್ಲಾ ಮನೆ ತುಂಬಾ ಹರಿದಾಡುತ್ತಿದ್ದವು. ಉಪ್ಪರಿಗೆಯಲ್ಲಿ ಜೋಡಿಸಿಟ್ಟ ಬೆಲ್ಲದ ತಗಡಿನ ಡಬ್ಬಗಳಿಗೆ ರಾಶಿ ಇರುವೆಗಳು ಮುತ್ತಿಕೊಳ್ಳುತ್ತಿದ್ದರಿಂದ, ಅವನಪ್ಪ ಇರುವೆಗಳನ್ನು ಓಡಿಸಲು ಡಬ್ಬದ ಸುತ್ತಲೂ ಡಿ.ಡಿ.ಟಿ. ಪುಡಿಯನ್ನು ದುಂಡಗೆ ಚೆಲ್ಲಿರುತ್ತಿದ್ದರು.
ಶ್ರೀ ಡಿ. ಎನ್. ಬರೆದ ಈ ಭಾನುವಾರದ ಕತೆ
ಅವಳಮ್ಮ ಅಂದುಕೊಂಡಂತೆ ಅವ ಅವಳಿಗೆ ಬರೀ ಕ್ಲಾಸ್ ಮೇಟ್ ಮಾತ್ರವಾಗಿರಲಿಲ್ಲ. ಅವನೆಂದರೆ ಮಿಠಾಯಿ. ಅವನೆಂದರೆ ಬಲೂನು. ಅವಳು ಮೋಞಿಯವರ ಅಂಗಡಿಗೆ ಮನೆಸಾಮಾನಿಗಂತ ಹೋಗಲಾರಂಭಿಸಿದ್ದು ಎಂಟನೇ ಕ್ಲಾಸಿರಬೇಕಾದರೆ. ಅಬೂಬಕರ್ ಅಂಗಡಿ ಕೌಂಟರಲ್ಲಿದ್ದರೆ ಅವಳಿಗೊಂಥರಾ ಖುಷಿ. ಅವನು ಇರುವ ಹೊತ್ತು ನೋಡಿಯೇ ಅವಳು ಅಂಗಡಿಗೆ ಹೋಗುತ್ತಿದ್ದುದೂ ಇದೆ. ಹಾಗೆ ಹೋದಾಗ ಮನೆ ಸಾಮಾನು ಜತೆ ಅವಳಿಗಿಷ್ಟದ ಮಿಠಾಯಿ ನಾಕು ಬೇಕಂತ ಕೇಳಿದರೆ ಅವನು ಆರು ಹಾಕಿರುತ್ತಿದ್ದ. ಅವಳಿಗೆ ಬುಗ್ಗೆಯೆಂದರೆ ಇಷ್ಟ ಅಂತ ಅವನಿಗೆ ಅದು ಹೇಗೆ ಗೊತ್ತಾಯ್ತೋ, ಒಂದೊಂದು ಸಲ ಬಲೂನು ಕೂಡ ಹಾಕಿರುತ್ತಿದ್ದ.
ಶ್ರೀ ಡಿ. ಎನ್. ಬರೆದ ಈ ಭಾನುವಾರದ ಕತೆ “ಬಲೂನು”
ನವೀನ ಗಣಪತಿ ಬರೆದ ಈ ಭಾನುವಾರದ ಕತೆ
ಮಧ್ಯಾಹ್ನ ಒಂದು ಘಂಟೆಗೇ ತಾನು ಮನೆಯಲ್ಲಿ ಮಾಡಬಹುದಾದ ಎಲ್ಲ ಕೆಲಸಗಳೂ ಮುಗಿದು ಮತ್ತೆಲ್ಲ ಮನಸ್ಸಿಗೆ ಕಿರಿಕಿರಿಯಾಗ ಹತ್ತಿತ್ತು. ನಾಲ್ಕು ದಿನ ದಾವಣಗೆರೆಗೆ ಹೋಗಿ ಮಗಳೊಟ್ಟಿಗೆ ಇದ್ದು ಬರೋಣವೆನಿಸುತ್ತಿತ್ತು. ಆದರೆ ಶಂಭಣ್ಣನನ್ನು ಬಿಟ್ಟು ಎಲ್ಲಿಯೂ ಹೋಗುವಂತಿರಲಿಲ್ಲ. ಮಗಳೂ ವಾರ ವಾರ ಬರುವವಳಲ್ಲ. ಅವಳಿಗೆ ಭಾನುವಾರ ರಜಾದಿನಗಳು ಇದ್ದಾಗಲೇ ಜೋರು ವ್ಯಾಪಾರ. ಇನ್ನು ಆಚೀಚೆ ಎರಡು ಹೆಂಗಸರೊಟ್ಟಿಗೆ ಹರಟೆ – ಮಾತು – ಒಡನಾಟ ಮಾಡೋಣವೆಂದರೆ, ಒಬ್ಬರ ವ್ಯವಹಾರವಾದರೂ ಚೊಕ್ಕಟವಾಗಿದೆಯೇ?
ನವೀನ ಗಣಪತಿ ಬರೆದ ಈ ಭಾನುವಾರದ ಕತೆ “ಧನಲಕ್ಷ್ಮಿ”










