Advertisement

ಸಾಹಿತ್ಯ

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಛಾಯಾ ಭಗವತಿ ಬರೆದ ಕತೆ

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಛಾಯಾ ಭಗವತಿ ಬರೆದ ಕತೆ

ಪ್ಯಾಟೀಗೆ ಬಂದಾಗ ಕರಬಸ್ಸಿಗೆ ನೆನಪಾದ್ರೂನೂ, ರೊಕ್ಕ ಕೊಡಲಾರದಂಗ ಹೊಳ್ಳಿ ಹೋಗಿರತಿದ್ದ. ಆದರ ಸಾವಕ್ಕನ ಗಂಡ ಹೇಮ್ಯಾನ್ನ ತಪ್ಪಿದ್ರ ಯಶವಂತನ್ನ ಕಳಿಸಿ ರೊಕ್ಕ ವಸೂಲ ಮಾಡಾತನಾ ಬಿಡ್ತಿರಲಿಲ್ಲ. ಈ ಮಾಬಾರ್ತದಾಗ ಗುದ್ದ್ಯಾಡಿ ಗುದ್ದ್ಯಾಡಿ ಸುಮ್ಮನಾಗಿಬಿಟ್ಟಿದ್ಲು ಸಾವಕ್ಕ. ನಡುಕ ತನಿಗೂ ಅರಿವಿ, ಪರಕಾರ ಹೊಲಸಿಗೆಣ ಹರಕತ್ತು ಇದ್ರೂನೂ ಹೊಳ್ಳಿ ಕೇಳಾದು ಬೇಶಿರಾದಿಲ್ಲ ಅನಿಸೇ ಅಕೀ ಹಿಂದಳ ಓಣಿ ಚನ್ನಮ್ಮಕ್ಕನ ಹತ್ರ ಅರಿವಿ ಕೊಟ್ಟು ತನಿಗೆ ಬೇಕಾದ್ದು ಹೊಲಸತಿದ್ಲು. ಇನ್ನ ಮಕ್ಕಳು ಅಂತೂ ಓದಾಕ….

read more
ಅಲಕಾ ಕಟ್ಟೆಮನೆ ಬರೆದ ಈ ಭಾನುವಾರದ ಕತೆ

ಅಲಕಾ ಕಟ್ಟೆಮನೆ ಬರೆದ ಈ ಭಾನುವಾರದ ಕತೆ

‘ನಮ್ಜಯು ಜಾಣೆ; ಮನೆ ಕೆಲಸಾನೂ ಮಾಡಿ, ಅಂಗಡೀನೂ ನಿಭಾಯಿಸ್ತಾಳೆ’ ಎಂದು ಮನೆಮಂದಿಯೆಲ್ಲಾ ಕೊಂಡಾಡಿದವರೇ, ಮೆಚ್ಚಿ ಮುದ್ದಾಡಿದವರೇ… ಎಲ್ಲವೂ ಸರಿಯಿದ್ದಾಗ. ಮೊದಲ ಬಾರಿಯ ಲಾಕ್ಡೌನ್ ಹೇಗೋ ಕಳೆಯಿತು. ಎರಡನೇ ಬಾರಿ ಲಾಕ್ಡೌನ್ ಆಗುವುದಕ್ಕೆ ಒಂದು ವಾರ ಮೊದಲೇ, ಸಹಾಯಕ್ಕಿದ್ದ ಹುಡುಗಿಗೆ ಎರಡು ತಿಂಗಳ ಮುಂಗಡ ಹಣ ನೀಡಿ, ಬುಟಿಕ್ ಬಾಗಿಲು ಹಾಕಿದ್ದೆ. ಆದರೆ ಮುಂದಿನ ನಾಲ್ಕೇ ದಿನದಲ್ಲಿ ಜ್ವರ ಆರಂಭವಾಗಿತ್ತು.

read more
ಎಂ.ಜಿ. ಶುಭಮಂಗಳ ಅನುವಾದಿಸಿದ ನಕ್ಷತ್ರಂ ವೇಣುಗೋಪಾಲ್ ತೆಲುಗು ಕತೆ

ಎಂ.ಜಿ. ಶುಭಮಂಗಳ ಅನುವಾದಿಸಿದ ನಕ್ಷತ್ರಂ ವೇಣುಗೋಪಾಲ್ ತೆಲುಗು ಕತೆ

ನಿಜ ಹೇಳಬೇಕೆಂದರೆ ಎಲ್ಲಿಕಾಟ್ ಸಿಟಿಯಲ್ಲಿ ಮನೆ ತೆಗೆದುಕೊಳ್ಳೋಣವೆಂದು ಪ್ರಸಾದ್ ಹೇಳಿದಾಗ ರಾಧಿಕಳೇ ಬೇಡ ಅದು ಮಿನಿ ಭಾರತ, ಎಲ್ಲಿ ನೋಡಿದರೂ ಮುಖ್ಯವಾಗಿ ತೆಲುಗಿನವರೇ. ಪ್ರತಿಯೊಂದಕ್ಕೂ ಮಕ್ಕಳು, ಮಹಿಳೆಯರು, ಗಂಡಸರ ನಡುವೆ ಅನಗತ್ಯ ಸ್ಪರ್ಧೆ. ಅದಕ್ಕೇ ಭಾರತೀಯರು ಕಡಿಮೆ ಇರುವ ಪ್ರದೇಶದಲ್ಲಿ ಮನೆ ತೆಗೆದುಕೊಳ್ಳೋಣ ಎಂದು ಪಟ್ಟುಹಿಡಿದು ಇಲ್ಲಿಗೆ ಬಂದಿದ್ದಾರೆ.

read more
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಕಾ. ಹು. ಚಾನ್‍ಪಾಷ ಬರೆದ ಕತೆ

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಕಾ. ಹು. ಚಾನ್‍ಪಾಷ ಬರೆದ ಕತೆ

ಅವ್ರು ಮಾಡ್ತಿರೋದು ಸರೀನಾ! ಇವ್ನು ಮಾಡ್ತಿರೋದು ಸರೀನಾ!.. ಬೀಜ-ವೃಕ್ಷದ ಪ್ರಶ್ನೆ ಇದ್ದಹಾಗೆ ಇದು ಬಿಡಿಸಲಾಗದ ಪ್ರಶ್ನೆ ಎನಿಸಿತು. ಪ್ರತಿ ತಂದೆ-ತಾಯಿಗಳೂ ಸಹ ಮೊದಲು ಮಕ್ಕಳಾಗಿರುತ್ತಾರೆ ತಾನೆ!… ‘ಬೆಳೆದ ಪರಿಸರ, ಪಡೆದ ಸಂಸ್ಕಾರಗಳೇ ಮುಖ್ಯ ಅದೇ ಎಲ್ಲದಕ್ಕೂ ಮೂಲ’ ಎಂದು ಹೇಳುತ್ತಿದ್ದ ರಿಯಾಜ್‌ನ ಮಾತು ನೂರಕ್ಕೆ ನೂರು ಸತ್ಯ ಎನಿಸಿತು. ಏನು ಹೇಳಬೇಕು ಎಂದು ನನಗೆ ತೋಚಲಿಲ್ಲ. ಅವನೂ ಸಹ ಏನೂ ಆಡಲಿಲ್ಲ.

read more
ದೀಪಾ ಫಡ್ಕೆ ಬರೆದ ಈ ಭಾನುವಾರದ ಕಥೆ

ದೀಪಾ ಫಡ್ಕೆ ಬರೆದ ಈ ಭಾನುವಾರದ ಕಥೆ

ಬೀಡಾಡಿ ದನವೊಂದು ನೆಟ್ಟಿದ್ದ ತರಕಾರಿ ಸಾಲಿಗೇ ಬಾಯಿ ಹಾಕಿ ಕುತ್ತಿಗೆ ಆಡಿಸುತ್ತಾ ಮೇಯುತ್ತಿದ್ದುದನ್ನು ನೋಡಿ ಅಲ್ಲೇ ಬಿದ್ದಿದ್ದ ಕೋಲೊಂದನ್ನು ತೆಗೆದುಕೊಂಡು `ಹೋಯ್ ಹೋಯ್’ ಎಂದು ಬೊಬ್ಬೆ ಹೊಡೆದುಕೊಂಡು ದಣಪೆಯಿಂದ ಹೊರಗಟ್ಟಲು ಪ್ರಯತ್ನಿಸಿದಳು. ನಾಲಗೆಯಿಂದ `ಹಡಬೆ ದನ’ ಎನ್ನುವ ಬೈಗಳೂ ಸುಲಭವಾಗಿ ಬಂದು ಹೋಯ್ತು. ಇಡೀ ಅಂಗಳ ಓಡಾಡಿಸಿಕೊಂಡು ನೆಟ್ಟಿದ್ದ ಪ್ರೀತಿಯ ಅಬ್ಬಲಿಗೆ ಸಾಲನ್ನೂ ಮೆಟ್ಟಿಕೊಂಡು ಗಿಡಗಳನ್ನು ಧರಾಶಾಯಿಯಾಗಿಸುತ್ತಾ ಕೊನೆಗೂ ದಣಪೆಯಿಂದ ಹೊರಗೆ ಹೋದಾಗ ಅದರ ಬೆನ್ನಿಗೆ…

read more
ಚಂದ್ರಪ್ರಭ ಕಠಾರಿ ಬರೆದ ಈ ಭಾನುವಾರದ ಕಥೆ

ಚಂದ್ರಪ್ರಭ ಕಠಾರಿ ಬರೆದ ಈ ಭಾನುವಾರದ ಕಥೆ

ಬೆಣ್ಣೆಯಲ್ಲಿ ಕೂದಲು ತೆಗೆದಂತೆ, ವಿನಯವೇ ಮೂರ್ತಿವೆತ್ತಂತೆ ಗಿಳಿ ಮಾತಾಡುವ ಜಿನೇಶನಲ್ಲಿ ಇಂಥ ರಾಕ್ಷಸನಿರುವ ಸಾಧ್ಯತೆ, ಈ ಆರದ ಗಾಯದ ಸಾಕ್ಷಿ ಇರದಿದ್ದರೆ ನಂಬಲು ಸಾಧ್ಯವಾಗುತ್ತಿರಲಿಲ್ಲ. ಅವಳ ಬಾಳು ಕನಸಲ್ಲಿ ನಡೆದಂತೆ ಸುಸೂತ್ರವಾಗಿ ಸೌಖ್ಯದಿಂದಿದೆ ಎಂದು ಭಾವಿಸಿದ್ದರೆ ಅದೆಷ್ಟು ನೋವುಗಳನ್ನು ಒಡಲಲ್ಲಿಟ್ಟು ಬೇಯುತ್ತಿದ್ದಾಳೆ ಎನಿಸಿ ಸುಮಾಳ ಹೊಟ್ಟೆಗೆ ಬೆಂಕಿ ಬಿದ್ದು, ಕಣ್ಣಲ್ಲಿ ನೀರು ತುಂಬಿತು.
ಚಂದ್ರಪ್ರಭ ಕಠಾರಿ ಬರೆದ ಈ ಭಾನುವಾರದ ಕಥೆ “ಹಾಡು ಗುಬ್ಬಿ ಪಾಡು!”

read more
ಸುಜಯ್‌ ಪಿ ಬರೆದ ಈ ಭಾನುವಾರದ ಕತೆ

ಸುಜಯ್‌ ಪಿ ಬರೆದ ಈ ಭಾನುವಾರದ ಕತೆ

ಭಾಗೀರಥನ ಕಾಲನ್ನು ಬಿಡಿಸಲು ಬೇಕಾಗಿ ಸಂಕದ ಎರಡು ಹಲಗೆಗಳನ್ನು ಕಡಿದು ತೆಗೆದು ಬೇರೆ ಹಲಗೆ ಹಾಕುವಷ್ಟರಲ್ಲಿ ಡೀಮಣ್ಣ ಕಡಿಮೆಂದರೂ ಹತ್ತರ ಮೇಲೆ ಬೀಡಿ ಸೇದಿದ್ದರು. ಬೀಡಿ ಸೇದಿದ ಮೇಲೆ ಉಳಿಯುವ ಬೀಡಿಯ ತುದಿಯನ್ನು ಕೂಡಾ ಜಗಿದು ತಿನ್ನುವ ಅಭ್ಯಾಸವಿದ್ದ ಡೀಮಣ್ಣ ಆವತ್ತು ಪ್ರತೀ ಬೀಡಿ ಮುಗಿಯುತ್ತಲೂ ಬಂಗಾಳದ ಭಾಗೀರಥನಿಗೆ ಬಯ್ಯದೆ ಅವನನ್ನು ಈ ಊರಿಗೆ ಕರೆದುಕೊಂಡು ಬಂದ ಮಣಿಕಂಠನಿಗೆ ಬಾಯಿ ಬಂದಂತೆ ಬಯ್ಯುತ್ತಲೇ ಇದ್ದರು.

read more
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ವಿ.ಆರ್.ಕಾರ್ಪೆಂಟರ್ ಬರೆದ ಕತೆ

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ವಿ.ಆರ್.ಕಾರ್ಪೆಂಟರ್ ಬರೆದ ಕತೆ

ಅಲ್ಲೇ ನಿಂತು ಇವರ ಗೋಳಾಟಗಳನ್ನು ನೋಡುತ್ತ ಲೊಚಗುಟ್ಟುತ್ತಿದ್ದ ಮಾಸಲು ಬಣ್ಣದ ಖಾಕಿ ನಿಕ್ಕರಿನ ವ್ಯಕ್ತಿಯು ‘ಗೌಡರು ಸೇಟ್‌ಕೇಕ್ ಆಟ ಆಡಕ್ಕೆ ಮೈದಾನುಕ್ಕೆ ಹೋಗೌರೆ’ ಎಂದ. ಇಷ್ಟೊತ್ತೂ ಮನೆಯ ಒಳಗಿದ್ದು, ಕನ್ನಡಕದ ಮೂಲಕ ಜಗವ ನೋಡುತ್ತಿದ್ದ ಪದವಿಧರ ವ್ಯಕ್ತಿಯು, ಅವನ ಇಂಗ್ಲಿಷಿಗೆ ಜೋರಾಗಿ ನಗುತ್ತಾ ಹೊರಬಂದು, ‘ಸೇಟ್‌ಕೇಕ್ ಆಟ ಅಲ್ಲವೋ, ಅದು ಶೆಟಲ್‌ಕಾಕ್’ ಎನ್ನಲು ಖಾರದಪುಡಿ ಮೆತ್ತಿಸಿಕೊಂಡಿದ್ದ ಸಣ್‌ರಾಮ ‘ಕುಯ್, ಕುಯ್’ ಎನ್ನುವುದಕ್ಕೂ…

read more
ಡಾ.ಕೆ. ಷರೀಫಾ ಬರೆದ ಈ ಭಾನುವಾರದ ಕಥೆ “ಹೀಗೊಂದು ಖುಲಾಹ್”

ಡಾ.ಕೆ. ಷರೀಫಾ ಬರೆದ ಈ ಭಾನುವಾರದ ಕಥೆ “ಹೀಗೊಂದು ಖುಲಾಹ್”

ಇತ್ತೀಚೆಗೆ ಅವನು ಯಾಕೆ ಮಾತು ಮಾತಿಗೆ ತಲ್ಲಾಖ್ ಕೊಡುತ್ತೇನೆಂದು ಹೆದರಿಸುತ್ತಲೇ ಇರುತ್ತಿದ್ದ. ನಾನೂ ಸುಮ್ಮನೇ ಮನೆಯಲ್ಲಿ ಸುಮ್ಮನೆ ಕೂಡುತ್ತಿರಲಿಲ್ಲ. ಟೇಲರಿಂಗ್ ಸೆಂಟರ್‌ನಲ್ಲಿ ಕೆಲಸ ಮಾಡಿ ಸಂಪಾದಿಸುತ್ತಿದ್ದೆ. ಅತ್ತೆಯವರು ಮಕ್ಕಳನ್ನು ನೋಡಿಕೊಳ್ಳತ್ತಿದ್ದರು. ಗಂಡ ಮಗಳು ಸಲ್ಮಾಗೆ ಒಳ್ಳೆಯ ಶಾಲೆಗೆ ಸೇರಿಸಿದ್ದನು. ಶೋಯೇಬ್‌ಗೆ ಇನ್ನೂ ಶಾಲೆಗೆ ಹಾಕಿರಲಿಲ್ಲ. ಮಾತು ಮಾತಿಗೆ ಹೊಡಿಬಡಿ ಮಾಡುವುದು, ಕೂಗಾಡುತ್ತಿದ್ದುದೇ ಅವಳಿಗೊಂದು ಸಮಸ್ಯೆಯಾಗಿತ್ತು.

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ