ಪ್ರಕಾಶ್ ಪೊನ್ನಾಚಿ ಬರೆದ ಈ ವಾರದ ಕಥೆ “ಪರಿಧಿ”
“ಬೆಳಗೆದ್ದರೆ ಯುಗಾದಿ ಹಬ್ಬ, ಊರಲ್ಲೆಲ್ಲಾ ಎತ್ತುಗಳನ್ನ ಸಿಂಗರಿಸಿ ನೇಗಿಲು ನೊಗವನ್ನೆಲ್ಲಾ ಸ್ವಚ್ಚಗೊಳಿಸಿ ಭೂಮಿ ತಾಯಿಗೆ ಒಂದೆರಡು ಸುತ್ತು ಉಳುಮೆ ಮಾಡಿ ಪೂಜೆ ಸಲ್ಲಿಸಿ ಆ ವರ್ಷದ ವ್ಯವಸಾಯಕ್ಕೆ ಪಾದಾರ್ಪಣೆಗೆ ಅಡಿಗಲ್ಲು ಹಾಕುವುದು ಮಾಮೂಲು. ಅಪ್ಪ ಎಂದಿನಂತೆ ಕೆಬ್ಬೆ ಹೊಲದಲ್ಲಿ ಎತ್ತುಗಳನ್ನು ಕೆಬ್ಬೆ ಹೊಲದಲ್ಲಿ ಎತ್ತುಗಳನ್ನು ಸಿಂಗರಿಸಿ ಹೊನ್ನೇರು ಕಟ್ಟಲು ಅಣಿ ಮಾಡುತ್ತಿದ್ದರು. ನಾನು, ಅಕ್ಕ ಹೂ, ವಿಭೂತಿ, ನೀರುಗಳನ್ನು ಹಿಡಿದು ಅಪ್ಪನ ಪೂಜೆ, ಮೊದಲ ಏರಿನ ಸುತ್ತು ನೋಡಲು ಕಾತುರದಿಂದ ಅಪ್ಪನ ..”
ದೀಪಾ ಫಡ್ಕೆ ಬರೆದ ಈ ಭಾನುವಾರದ ಕಥೆ: ಸಂವಾದಿ
“ಸಂಜನಾಳ ಬೆಳಗುಗಳು ನಂತರ ಮನೋಹರನ ಮೆಸೇಜುಗಳಿಲ್ಲದೇ ಆರಂಭವಾಗುತ್ತಿರಲಿಲ್ಲ. ಬೆಳ್ಬೆಳಿಗ್ಗೆ ಗುಲಾಬಿಗಳ ಗುಛ್ಛ ಬಂದರೆ ನಂತರ ಮೆಸೇಜುಗಳ ಸುರಿಮಳೆ. ಇಡೀ ಪುರಾಣ ಯಾವುದೇ ಮುಚ್ಚು ಮರೆಯಿಲ್ಲದೇ ಹೇಳಿಕೊಳ್ಳುತ್ತಿದ್ದ. ಐಐಎಸ್ಸಿಯ ಮೈಕ್ರೋಬಯಾಲಜಿ ವಿಭಾಗದಲ್ಲಿದ್ದ. ಎಂಥ ಸೆಮಿನಾರೇ ಇರಲಿ, ಲೆಕ್ಚರ್ ಡೆಮಾನ್ಸ್ಟ್ರೇಷನ್ ಇರಲಿ. ಮೆಸೇಜು ತಪ್ಪುತ್ತಿರಲಿಲ್ಲ. ಸಂಜನಾಳೇ ಶೂಟಿಂಗ್ ಎಂದೊ ಎಡಿಟಿಂಗ್ ಎಂದೊ ಒಮ್ಮೊಮ್ಮೆ ಬೇಕೂಂತಲೇ ಉತ್ತರಿಸಲು ನಿಧಾನಿಸಿದರೂ ಬೇಸರವಿಲ್ಲದೆ ಇರುತ್ತಿದ್ದ. `”
ಓಬಿರಾಯನ ಕಾಲದ ಕಥಾಸರಣಿಯಲ್ಲಿ ಗೋಪಾಲಕೃಷ್ಣ ಪೈ ಬರೆದ ಕಥೆ
“ವೆಂಕು ಹೆಂಗ್ಸಿಗೆ ತನಗಾಗದ ಮಂದಿ ಯಾರೆಂದು ಊಹಿಸುವುದು ಸುಲಭವಾಗಿತ್ತು. ಅವರುಗಳು ಆಗಾಗ ಆ ಹೋಟೇಲಿಗೆ ಬರುವುದು ಕ್ರಮ. ಬರುವುದು ಕತ್ತಲಾದ ಮೇಲೆಯೇ. ಒಂದು ದೋಸೆ ತಿಂದು ಬೇಕೆಂದೇ ಆ ಗಂಡನಿಲ್ಲದವಳೊಡನೆ ಮಾತು ತೆಗೆಯುವುದು ರೂಢಿ. ಹೆಣ್ಣು ಹಸಿದಿದ್ದಾಳೆಂದು ವಾಸನೆ ಹಿಡಿಯುವ ಬೀಜದ ಹೋರಿಗಳವು.”
ಕೆ. ಸತ್ಯನಾರಾಯಣ ಬರೆದ ‘ಚಿನ್ನಮ್ಮನ ಲಗ್ನ’ ಪುಸ್ತಕದಿಂದ ಒಂದು ಟಿಪ್ಪಣಿ
“ಮುಕುಂದಯ್ಯ ಗದ್ದೆ ಕೊಯ್ಲಿಗೆ ಜನರನ್ನು ಗೊತ್ತುಮಾಡಬೇಕು, ಸುಮ್ಮನೆ ಕೂತರೆ ಆಗುವುದಿಲ್ಲ ಎಂದೆಲ್ಲ ಮುಂದೆ ಆಗಬೇಕಾದ ಕೆಲಸಗಳ ಬಗ್ಗೆ ಐತನೊಡನೆ ಚರ್ಚಿಸುತ್ತಿದ್ದಾನೆ. ಚಳಿಗೆ ಬೆಂಕಿಯ ಹತ್ತಿರ ಕಾಯಿಸಿಕೊಳ್ಳುತ್ತಾ ಸಂಸಾರದ ಜವಾಬ್ದಾರಿ ಹೊರಲು ತಯಾರಾಗುವುದು, ವೃತ್ತಿ ಜೀವನದ ಮುಂದಿನ ಕೆಲಸಗಳ ಬಗ್ಗೆ ಕಾಳಜಿ ವಹಿಸುವುದು…”
ಪ್ರಜ್ಞಾ ಮತ್ತಿಹಳ್ಳಿ ಬರೆದ ಈ ವಾರದ ಕಥೆ “ಸೈಡ್ ವಿಂಗ್”
“ಮೂರನೆಯ ಮಹಡಿಯ ಮೇಲಿನ ಮನೆ ಬಾಗಿಲ ಕರೆಗಂಟೆಯೊತ್ತಿ ನಿಂತಾಗಲೂ ಪಾರಿಜಾತಾಳ ಎದೆಬಡಿತ ನಿಂತಿರಲಿಲ್ಲ. ಅದ್ಯಾರದ್ದೊ ಜೊತೆಗೆ ಬೇರೆ ಇರುತ್ತಾಳಂತಲ್ಲ, ಅವನೂ ಈಗ ಅಲ್ಲೇ ಇದ್ದಾನೋ ಏನೋ, ಹಾಗಿದ್ದರೆ ತುಂಬಾ ಮುಜುಗರವೇ ಸರಿ, ಪರಪುರುಷನನ್ನು ಇಷ್ಟಪಡುವಂಥ ಬುದ್ಧಿ ಈ ತುಳಸಿಗಾದರೂ ಯಾಕೆ ಬಂತಪ್ಪ ಎಂದುಕೊಳ್ಳುತ್ತಲೇ ನಿಂತಿದ್ದಳು. …”
ಆಶಾ ಜಗದೀಶ್ ಕಥಾಸಂಕಲನಕ್ಕೆ ಮಾಲಿನಿ ಗುರುಪ್ರಸನ್ನ ಬರೆದ ಮಾತುಗಳು
“ಶೋಷಣೆಗಳಿಗೆ ಹತ್ತುಹಲವು ಮುಖಗಳಿವೆ. ಅವುಗಳಿಂದ ಪಾರಾಗಲೂ ಹತ್ತುಹಲವು ದಾರಿಗಳನ್ನು ಹುಡುಕುತ್ತೇವೆ. ಆ ಶೋಷಣೆಗಳ ವಿರುದ್ಧ ಹೋರಾಡಲು ಯತ್ನಿಸುತ್ತೇವೆ. ಹಾಗಿರುವ ಅನೇಕ ಕಥೆಗಳು ಆಶಾ ಜಗದೀಶ್ ಹೊರತರುತ್ತಿರುವ ಈ ಸಂಕಲನದಲ್ಲಿವೆ. ಸಮಾಜದ ಶ್ರೇಣೀಕೃತ ವ್ಯವಸ್ಥೆ, ಹೆಣ್ಣು ಎಂಬ ಕಾರಣಕ್ಕೆ ಅವಳಿಗೆ ದಕ್ಕಿರುವ…”
ಓಬಿರಾಯನ ಕಾಲದ ಕಥಾಸರಣಿಯಲ್ಲಿ ವ್ಯಾಸರಾವ್ ನಿಂಜೂರು ಬರೆದ ಕಥೆ
“ನರ್ಸಪ್ಪಯ್ಯ ಹಳೆಯ ಫೆವರ್ಲೂಬಾ ಅಲಾರಾಮ್ ಗಡಿಯಾರ ನೋಡುತ್ತಾರೆ, ನಾಲ್ಕು ಗಂಟೆ ಹತ್ತು ನಿಮಿಷ ತೋರಿಸುತ್ತಿತ್ತದು. ತಾನು ಎದ್ದಾಗಲೂ ಅದು ಅದೇ ಟೈಮ್ ತೋರಿಸುತ್ತಿದ್ದುದ್ದು ನೆನಪಾಗಿ, ಹಿಂದಣ ದಿನ ಸಂಜೆಯೇ ಅದು ನಿದ್ರಾಪರವಶವಾಗಿದೆ ಎಂದೂ, ತಾನು ಕೀ ಕೊಡಲು ಮರೆತು ಹೋಗಿದ್ದೂ ನೆನಪಾಗಿ ಒಲೆಗಳ ಕಟ್ಟಿಗೆ ಹಿಂದೆ ಮಾಡಿ ಗ್ಯಾಸ್ ಲೈಟ್ ಆರಿಸಿ ತಗಣೆಗಳ ಸೈನ್ಯವಿರುವ ಬೆಂಚಿಗೆ ತನ್ನ ಬೆನ್ನು ಬಲಿಕೊಟ್ಟರು.”
ಲಾರ್ಡ್ ಕಾರ್ನ್ ವಾಲಿಸ್ ಮತ್ತು ಕ್ವೀನ್ ಎಲಿಜಬೆತ್: ಅಬ್ದುಲ್ ರಶೀದ್ ಬರೆದ ಹೊಸ ಕಥೆಯ ಪೂರ್ಣರೂಪ
“ಈಗಲೂ ಹಾಗೆಯೇ. ಅವಳು ಮಣಿಸಬೇಕು. ನಾನು ತಣಿಯಬೇಕು. ಅವಳಿಗೆ ಅಷ್ಟೇ ಸಾಕು. `ನಾನು ಬೇಟೆಯ ನಾಯಿ, ನೀನು ಓಡುತ್ತಿರುವ ಜಿಂಕೆ’ ಎಂದು ಮೂವತ್ತು ವರ್ಷಗಳಿಂದ ಅಟ್ಟಿಸಿಕೊಂಡು ಬೇಟೆಯಾಡುತ್ತಲೇ ಇರುತ್ತಾಳೆ. ಅವಳು ನನ್ನ ಪಾಲಿನ ದೇವರು. ಇಷ್ಟು ಹೇಳಿದ ಮೇಲೆ ನನ್ನ ಮತ್ತು ಅವಳ ಹುಚ್ಚು ಬೇಟೆಯ ಕುರಿತು ಓದುಗರಾದ ನಿಮಗೆ ಕುತೂಹಲವೂ ಉದ್ರೇಕವೂ ಏಕಕಾಲದಲ್ಲಿ ಉಂಟಾಗುತ್ತಿರಬಹುದು.”
ಅಕ್ಷತಾ ಕೃಷ್ಣಮೂರ್ತಿ ಪುಸ್ತಕಕ್ಕೆ ಡಾ. ಸರಜೂ ಕಾಟ್ಕರ್ ಬರೆದ ಮಾತುಗಳು
“ಅಕ್ಷತಾ ನದಿ ಹಾಗೂ ಸಮುದ್ರ ಎರಡನ್ನು ಕಂಡವರು. ಕಾಳಿ ನದಿಯಲ್ಲಿ ಈಜಾಡಿದವರು. ಅರಬ್ಬೀ ಸಮುದ್ರವನ್ನು ಅಪ್ಪಿಕೊಂಡಿದ್ದವರು. ಕಾಳಿ ಅಣೆಕಟ್ಟು ಒಡೆದಿದೆ ಎಂಬ ಗಾಳಿ ಸುದ್ದಿ ಹರಡಿದಾಗ ಜನರಲ್ಲಿ ಎದ್ದ ಕೋಲಾಹಲವನ್ನು ಬಹಳ ಸಮರ್ಥವಾಗಿ ಕವಿತೆಯೊಂದರಲ್ಲಿ ಕಟ್ಟಿಕೊಟ್ಟಿದ್ದಾರೆ. ಅದೇ ಕಾಳಿಯನ್ನು ಅಣೆಕಟ್ಟಿನಲ್ಲಿ ಬಂಧಿಸಿ ಖೈದಿ ಮಾಡಿದ್ದನ್ನು ಅವರು ಇನ್ನೊಂದು ಕವಿತೆಯಲ್ಲಿ ಚಿತ್ರಿಸಿದ್ದಾರೆ.”









