ಉಳಿದ ಪಾಲು: ಸುನೈಫ್ ವಿಟ್ಲ ಬರೆದ ಕತೆ
“ಕನಸಿನ ವ್ಯಾಖ್ಯಾನ ಹೇಳಬಲ್ಲ ಪಂಡಿತರೆಲ್ಲ ಆಳಿಗೊಂದು ಕತೆ ಕಟ್ಟತೊಡಗಿದರು. ವರ್ಷಗಳು ಉರುಳಿದಂತೆ ಕನಸುಗಳು ನೆನಪಿನ ಯಾವುದೊ ಮೂಲೆಗೆ ಸೇರಿಬಿಡಬೇಕು. ಆದರೆ ನನ್ನ ಕತೆ ಹಾಗಾಗಲಿಲ್ಲ. ಒಂದಲ್ಲ ಒಂದು ರೀತಿಯಲ್ಲಿ ನೆನಪಿನ ಮನೆಯ ಆ ಮೂಲೆಗೆ ಯಾರಾದರೂ ಬೆಳಕು ಹರಿಸುತ್ತಾರೆ. ಆಗ ಮತ್ತೆ ಕೆಲವು ದಿನಗಳು ಕೈ ಜಾರುತ್ತವೆ. ಕೈ ಜಾರುತ್ತವೆ ಎಂದರೆ ಮೋಸದ ಮಾತಾಗಬಹುದು.”
ಕಪಿಲ ಕಾದಂಬರಿಗೆ ಬಾಳಾಸಾಹೇಬ ಲೋಕಾಪೂರ ಮತ್ತು ಕೇಶವ ಮಳಗಿ ಮಾತುಗಳು
“`ಹಾಣಾದಿ’ ಕಾದಂಬರಿ ತನ್ನ ಕಥಾವಸ್ತು, ನಿರೂಪಣಾ ವಿಧಾನ ಮತ್ತು ಲೇಖಕ ಹೀಗೆ ಹಲವು ಕಾರಣಗಳಿಂದ ಗಮನ ಸೆಳೆಯುವ ಕೃತಿ. ವರ್ತಮಾನ ಮತ್ತು ಭೂತಕಾಲ ಜತೆಜತೆಗೆ ಸಾಗುವ, ನೆನಪುಗಳ ಸಿಕ್ಕುಗಳಲ್ಲಿ ಓದುಗನನ್ನು ಸಿಲುಕಿಸುವ ಕಾದಂಬರಿ. `ಗಾರುಡಿ ವಾಸ್ತವತೆ’ಯ ತಂತ್ರವನ್ನು ಬಳಸುತ್ತದೆ. ಕಥೆಯೊಳಗೆ ಕಥೆ, ಅದರೊಳಿನ್ನೊಂದು ಕಥೆ ಎಂಬಂತೆ ಇದರ ನಿರೂಪಣೆ. ಕಾದಂಬರಿಯಲ್ಲಿ…”
ಓಬೀರಾಯನ ಕಥಾಸರಣಿಯಲ್ಲಿ ಎಸ್. ವೆಂಕಟರಾಜ ಅವರ ಕತೆ “ಹಾಲು ಕುಡಿದ ಹಾವು”
“ಪಾಪ! ಇಂತಹ ಯೋಚನೆ ಬಂದಾಗಲೇ ಅದನ್ನು ಹೇಗಾದರೂ ಒಳ್ಳೆದರಲ್ಲೋ ಕೆಟ್ಟದರಲ್ಲೋ ಮುಗಿಸಿಬಿಡುತಿದ್ದರೆ ಎಷ್ಟು ಚೆನ್ನಾಗುತಿತ್ತು! ನಿಜವಾಗಿಯಾದರೆ ಕಲಿತವರು ಇಂತಹ ಸಂದರ್ಭದಲ್ಲೇ ಜಾರಿಬೀಳುವುದು. ನಾವು ಹಳ್ಳಿಯವರು ಹೀಗೆಲ್ಲ ಸುಲಭವಾಗಿ ಸಿಕ್ಕಿಬೀಳುವುದಿಲ್ಲ. ನಮಗೆ ಮೈಮೇಲೆ ಅಂಗಿ ಅರಿವೆಯೇ ಇರುವುದಿಲ್ಲ. ಆದುದರಿಂದ ನಮ್ಮ ನಮ್ಮ ದೋಷ ನಮಗೆ ಚೆನ್ನಾಗಿ ಕಂಡುಬಂದು ಅದಕ್ಕೆ ಕೂಡಲೇ ಮದ್ದುಮಾಡುತ್ತೇವೆ.’
ಸೀರೆಯುಡುವ ಗೋಧಾಳ ಮಗ: ಕೆ.ಸತ್ಯನಾರಾಯಣ ಕಾದಂಬರಿ “ಲೈಂಗಿಕ ಜಾತಕ”ದ ಆಯ್ದ ಭಾಗ
“ಗೋದಾ ಸಾಯುವ ಹಿಂದಿನ ವರ್ಷ ಮಗ-ಸೊಸೆ ಬಂದಿದ್ದಾಗ ದೊಡ್ಡ ರಾದ್ಧಾಂತವೇ ಆಗಿಹೋಯಿತು. ಒಂದು ದಿನ ಸೊಸೆ ಗೊಲೇಚಾ ಮಧ್ಯಾಹ್ನ ನಾಲ್ಕು- ನಾಲ್ಕೂವರೆ ಘಂಟೆ ಹೊತ್ತಿನಲ್ಲಿ ರೂಮಿಂದ ಈಚೆಗೆ ಬಂದ(ಳು). ಸಾಲಂಕೃತ ವಧು. ನೋಡಿದರೆ ಕಣ್ಣು ತುಂಬಿ ಬರುವ ಹಾಗೆ. ನಮ್ಮ ಶ್ರೀ ವೈಷ್ಣವ ಹುಡುಗಿಯರ ರೀತಿಯೇ. ಕೆಂಪಂಚು ಇರುವ ಹಸಿರು ಸೀರೆ, ಬಿಳಿ ಬಣ್ಣದ ತುಂಬು ತೋಳಿನ ರವಿಕೆ, ಲೋಲಾಕು, ದೊಡ್ಡ ಹೆರಳು, ಹೀಗೆ.”
ಮೋಕ್ಷ ಸ್ನಾನ ಇಂಗ್ಲಿಷ್ ಮೂಲ: ಆರ್.ಪಿ. ಸಿಸೋಡಿಯಾ ಕನ್ನಡಕ್ಕೆ: ಎಂ.ಜಿ. ಶುಭಮಂಗಳ
“ಕಿಕ್ಕಿರಿದಿದ್ದ ಗುಡಾರದಲ್ಲಿ ಬೆವರಿನಿಂದ ತೊಪ್ಪೆಯಾಗಿದ್ದ ದೇಹಗಳಿಂದ ಬರುವ ವಾಸನೆಯಿಂದ ಹೊಟ್ಟೆಯಲ್ಲಿ ತೊಳೆಸಿದಂತಾಗಿ, ನನಗೆ ನಿದ್ದೆ ಹತ್ತಲಿಲ್ಲ. ಮರುದಿನ ಪವಿತ್ರ ಸಂಗಮಸ್ನಾನದ ನೆನಪಿನಲ್ಲಿ ಪುಳಕಿತಳಾದ ಅಮ್ಮ ಪ್ರಶಾಂತವಾಗಿ ನಿದ್ದೆ ಮಾಡಿದಳು; ಆ ಸ್ನಾನ ತನ್ನ ಪಾಪಗಳನ್ನು ತೊಳೆದು, ಮುಂದಿನ ಜೀವನದಲ್ಲಿ ಸುಖಜೀವನವನ್ನು ಪ್ರಸಾದಿಸುತ್ತದೆಯೆಂಬುದು…”
‘ಅಜಂತಾ’ ಕಾವ್ಯದ ಕುರಿತು ಚಿದಾನಂದ ಸಾಲಿ ಮಾತುಗಳು
“ಗದ್ಯಾನುವಾದದಲ್ಲಿ ಪದದ ಅರ್ಥ ಸೀಮಿತವಾಗಿದ್ದು, ಎಷ್ಟೋ ಅರ್ಥವಾಗದ ಪದಗಳ ಅರ್ಥವು ಆ ವಾಕ್ಯ, ಆ ಪ್ಯಾರಾ, ಆ ಸಂದರ್ಭಗಳು ಹೊರಡಿಸುವ ಅರ್ಥಗಳಲ್ಲೇ ಅಡಕವಾಗಿರುತ್ತದೆ. ಆದರೆ ಕಾವ್ಯಾನುವಾದದಲ್ಲಿ ಹಾಗಲ್ಲ. ಪ್ರತಿ ಪದವೂ ಒಂದು ವಾಕ್ಯದ, ಒಂದು ನುಡಿಯ ಘಟಕವಾಗಿರುತ್ತಲೇ; ತನ್ನ ಸ್ವತಂತ್ರ ಅಸ್ತಿತ್ವವನ್ನು, ಅಸ್ಮಿತೆಯನ್ನು ಬಿಟ್ಟುಕೊಡದೆ ಅನನ್ಯತೆಯನ್ನೂ ಉಳಿಸಿಕೊಂಡಿರುತ್ತದೆ. ಎರಡು ಭಾಷೆಗಳ ನಡುವೆ ಸುಲಭ ಗೋಚರವಾದ…”
ಓಬಿರಾಯನ ಕಾಲದ ಕತೆ: ಮಾ. ವರ್ಧಮಾನ ಹೆಗ್ಡೆಯವರು ಬರೆದ ಕತೆ “ಸುಕುಮಾರ’ ಯಾ `ಅಣ್ಣೀ”
“ಆತನ ವಿಚಿತ್ರ ಡ್ರೆಸ್ಸ್, ಮುಖದಲ್ಲಿ ಫ್ರೆಂಚ್ ಕಟ್ ಮೀಸೆಯನ್ನು ನೋಡಿ ಆರಿಗರಿಗೆ ಪ್ರಥಮ ಆತನ ಪರಿಚಯವೇ ಆಗಲಿಲ್ಲ. ಬರುತ್ತಲೇ `ಗುಡ್ ಮಾರ್ನಿಂಗ್ ಫಾದರ್’ ಎಂದು ಹೇಳಿದ್ದನ್ನು ಕೇಳಿ ಸ್ವರದಿಂದ ಅಣ್ಣಿ ಎಂದು ತಿಳಿದು, `ಸಾವಿರಾರು ರೂಪಾಯಿ ಖರ್ಚು ಮಾಡಿ ಇಷ್ಟಾದರೂ ಇಂಗ್ಲೀಷ್ ಓದಿದಿಯಲ್ಲಾ ಸಾಕು’ ಎಂದರು.”
ಡಾ. ಕೆ. ಚಿನ್ನಪ್ಪ ಗೌಡರ ಕವನಸಂಕಲನಕ್ಕೆ ಡಾ. ಬಿ.ಎ. ವಿವೇಕ ರೈ ಮುನ್ನುಡಿ
“ಕಲ್ಕುಡ-ಕಲ್ಲುರ್ಟಿ ಪಾಡ್ದನದಲ್ಲಿನ ಕಲ್ಲುರ್ಟಿಯ ಕತೆ ಒಂದು ಅಮಾನುಷ ದೌರ್ಜನ್ಯದ ವಿರುದ್ಧದ ಸೇಡಿನ ಹೋರಾಟದ ಗಾಥೆ. `ಕಲ್ಲಲ್ಲಿ ಉರಿವ ಬೆಂಕಿ’ ಕವನವು ಕಲ್ಲುರ್ಟಿಯ ರೋಷದ ಪ್ರತಿಕಾರದ ಕಥನ. ಅಣ್ಣ ಬೈರಕಲ್ಕುಡನ ಕೈ ಕಾಲನ್ನು ಕಾರ್ಕಳದ ಭೈರರಸ ಅನ್ಯಾಯವಾಗಿ ಕತ್ತರಿಸಿದ ಸೇಡನ್ನು ತಂಗಿ ಕಲ್ಲುರ್ಟಿ ತೀರಿಸಿ ಸತ್ಯದೇವತೆಯಾಗುತ್ತಾಳೆ.”
ಅಸ್ಪೃಶ್ಯರು : ಆಶಾ ಜಗದೀಶ್ ಅನುವಾದಿಸಿದ ರಸ್ಕಿನ್ ಬಾಂಡ್ ಬರೆದ ಮೊದಲ ಕತೆ.
“ಕಸಗುಡಿಸುವ ಹುಡುಗ ಇಡೀ ದಿನ ತನ್ನ ಮೊಣಕಾಲಿಗೆ ತಗುಲುವ ಬಕೇಟ್ ಹಿಡಿದು ಮನೆಗೂ ಕೆರೆಗೂ ಓಡಾಡಿಕೊಂಡಿರುತ್ತಿದ್ದ. ಹಾಗೆ ಪ್ರತಿ ಸಾರಿ ಹೋಗುವಾಗ ಬರುವಾಗ ಅವನ ಮುಖದಲ್ಲೊಂದು ದೊಡ್ಡ ಸ್ನೇಹಪೂರ್ವಕ ನಗೆ ಇಣುಕುತ್ತಿತ್ತು. ಆದರೆ ನಾನವನನ್ನು ದುರುಗುಟ್ಟಿ ನೋಡುತ್ತಿದ್ದೆ. ಅವನಿಗೆ ನನ್ನದೇ ವಯಸ್ಸು… ಹತ್ತು ವರ್ಷ. ಅವನಿಗೆ ಸಣ್ಣಗೆ ಕತ್ತರಿಸಿದ ಕ್ರಾಪ್ ಇತ್ತು.”









