Advertisement

ಸಾಹಿತ್ಯ

ಓಬೀರಾಯನ ಕಾಲದ ಕತೆಗಳ ಸರಣಿಯಲ್ಲಿ  ತುದಿಯಡ್ಕ ವಿಷ್ಣ್ವಯ್ಯ ಬರೆದ ಕತೆ: ಶ್ಯಾನುಭಾಗ ಶ್ಯಾಮಣ್ಣನವರು

ಓಬೀರಾಯನ ಕಾಲದ ಕತೆಗಳ ಸರಣಿಯಲ್ಲಿ ತುದಿಯಡ್ಕ ವಿಷ್ಣ್ವಯ್ಯ ಬರೆದ ಕತೆ: ಶ್ಯಾನುಭಾಗ ಶ್ಯಾಮಣ್ಣನವರು

” ಶ್ಯಾನುಭಾಗ ಶ್ಯಾಮಣ್ಣನವರದ್ದು ಆನುವಂಶಿಕ ಶ್ಯಾನುಭಾಗತಿಕೆಯಾಗಿದ್ದುದರಿಂದ ಅವರ ಹಿರಿಯರು ಮನೆಯ ಪಕ್ಕದಲ್ಲೇ ಸರಕಾರಿ ಅಧಿಕಾರಿಗಳು ಉಳಿದುಕೊಳ್ಳಲೆಂದೇ ಒಂದು ಕಟ್ಟಡವನ್ನು ಕಟ್ಟಿಸಿದ್ದರು. ಅದರಲ್ಲಿ ಒಂದು ಅಡುಗೆ ಕೋಣೆ, ಮಲಗುವ ಕೋಣೆ, ಬರವಣಿಗೆ ನಡೆಸಲು ಮೇಜು ಕುರ್ಚಿಗಳಿರುವ ಮೊಗಸಾಲೆ ಮುಂತಾದ ಎಲ್ಲಾ ಅನುಕೂಲತೆಗಳು ಇದ್ದವು.”

read more
ಕಥನಗಾರಿಕೆಯ ಬೈನಾಕ್ಯುಲರ್ ನಲ್ಲಿ ಕಂಡ ಗತ ಮತ್ತು ವರ್ತಮಾನಗಳು:ವಿಕ್ರಮ್  ಕಥೆಗಳ ಕುರಿತು ಗೀತಾ ವಸಂತ

ಕಥನಗಾರಿಕೆಯ ಬೈನಾಕ್ಯುಲರ್ ನಲ್ಲಿ ಕಂಡ ಗತ ಮತ್ತು ವರ್ತಮಾನಗಳು:ವಿಕ್ರಮ್ ಕಥೆಗಳ ಕುರಿತು ಗೀತಾ ವಸಂತ

ಹಮಾರಾ ಬಜಾಜ್ ನ ಕತೆಗಳಲ್ಲಿ ಅಸ್ತಿತ್ವ ಶೋಧದ ಆಯಾಮವು ಅಂತರಗಂಗೆಯಂತೆ ಒಳಗೊಳಗೇ ಹರಿಯುತ್ತ ಎಲ್ಲ ಕತೆಗಳನ್ನು ಒಂದು ಹರಿವಿನಲ್ಲಿ ಬೆಸೆಯುತ್ತದೆ. ದೇಹ, ಪ್ರಜ್ಞೆಗಳಲ್ಲಿ ಯಾವುದು ನಿಜ ಎಂಬ ತೊಡಕುಗಳನ್ನು ಅನುಭವಿಸುತ್ತಲೇ ಅದನ್ನು ನಿಧಾನವಾಗಿ ಬಿಡಿಸುವ ತರ್ಕದ ನಾಜೂಕು ಹೆಣಿಗೆಯನ್ನು ಕತೆಗಳು ನಿರ್ಮಿಸುತ್ತವೆ. ದೇಹದ ಐಂದ್ರಿಕ ಅನುಭವಗಳನ್ನು ಕಾಮದ ಮೂಲಕ ಶೋಧಿಸುವ ಕತೆಗಳು ಪ್ರಜ್ಞೆಯ ಅನುಭವವನ್ನು ವಿಶ್ಲೇಷಿಸಲು ತರ್ಕದ ಮೊರೆ ಹೋಗುತ್ತವೆ.

read more
ಆವನಾವನು ಕಾಯ್ವ : ಸರಿತಾ ನವಲಿ ಬರೆದ ಕತೆ

ಆವನಾವನು ಕಾಯ್ವ : ಸರಿತಾ ನವಲಿ ಬರೆದ ಕತೆ

ಪರದೇಶದ ಪ್ರಜೆ ಅಂತಾದ ಮಾತ್ರಕ್ಕ ಹುಟ್ಟಿನ ಮೂಲ ಬದಲಾಯಿಸಿಕ್ಕೆ ಆಗ್ತದೇನು? ಇಲ್ಲ ಮೈ ಬಣ್ಣ ಬದಲು ಆಗ್ತದೇನು?” ಪವಮಾನನಿಗೆ ತನ್ನ ಬದುಕಿನ ಅಸ್ತಿತ್ತ್ವಕ್ಕ ಕಾರಣರಾದವರನ್ನು ಬಿಟ್ಟು ಅಮೆರಿಕಾದ ಪ್ರಜೆ ಅನ್ನೋ ಅಸ್ತಿತ್ವವನ್ನು ಪಡೆಯೋದೇ ಮುಖ್ಯ ಆದಂಗಿತ್ತು. ರಾಮಾಚಾರರ ಆರೋಗ್ಯ ಸುಧಾರಿಸೊ ಹಂಗ ಕಾಣಲಿಲ್ಲ. ಮುಂದೇನು? ಅನ್ನೋ ಸೀತಾಬಾಯಿಯ ಯೋಚನಿಕಿಂತ, ಊರಿನ ಮಂದಿ ಮಾತೇ ಜಾಸ್ತಿಯಾಯಿತು.

read more
ಭಾರವಿಲ್ಲದ ಸಹಜತೆಯಲ್ಲಿ ಮನುಷ್ಯರ ಸಾಮಾನ್ಯತನವನ್ನು ಹೇಳುವ ಕಥೆಗಳು

ಭಾರವಿಲ್ಲದ ಸಹಜತೆಯಲ್ಲಿ ಮನುಷ್ಯರ ಸಾಮಾನ್ಯತನವನ್ನು ಹೇಳುವ ಕಥೆಗಳು

“ಇವರ ಕತೆಗಳಲ್ಲಿ ಬರುವ ಪಾತ್ರಗಳು ಹೆಚ್ಚು ಸಾಚಾ ಆಗಿ, ರೊಮ್ಯಾಂಟಿಸಂ ಇಲ್ಲದ ಒರಟುತನದಿಂದ, ಒಬ್ಬ ಹಳ್ಳಿಗನ ಇವಿಲ್ ಕೂಡ ಸಹಜ ಎಂದು ಅನಿಸುವಂತೆ ಮೂಡಿ ಬರುತ್ತವೆ. ಇಲ್ಲಿ ಕೊಲೆ ಮಾಡಬಲ್ಲ ಭಾವ, ಮೈದುನರು, ಯಕ್ಷಗಾನ ಬಯಲಾಟದ ಟೆಂಟಿಗೆ ಬೆಂಕಿ ಹಚ್ಚಬಲ್ಲ ಕಟ್ಟಾ ಜಿದ್ದಿನ ಊರ ಮಂದಿ, ಕಳ್ಳನಾಟ ಸಾಗಿಸುವ ದಂಧೆಯನ್ನು ಹೊಟ್ಟೆಪಾಡಿನ ಅನಿವಾರ್ಯ ಎಂದು ಕಂಡುಕೊಳ್ಳುವ ಮತ್ತು …”

read more
ಓಬೀರಾಯನ ಕಾಲದ ಕತೆಗಳು: ಪಂಜೆ ಮಂಗೇಶರಾವ್  ಬರೆದ ಕತೆ “ನನ್ನ ಚಿಕ್ಕತಂದೆಯವರ ಉಯಿಲ್”

ಓಬೀರಾಯನ ಕಾಲದ ಕತೆಗಳು: ಪಂಜೆ ಮಂಗೇಶರಾವ್ ಬರೆದ ಕತೆ “ನನ್ನ ಚಿಕ್ಕತಂದೆಯವರ ಉಯಿಲ್”

“ಹೆಣದ ಎಂಜಲನ್ನು ಬಯಸುವವನು ಪಾಪಿ ಎಂದು ಪಾಠಕ ಮಹಾಶಯರಲ್ಲಿ ಅನೇಕರು ಮೇಲೆ ಹೇಳಿದ ನನ್ನ ಅವಸ್ಥೆಯನ್ನು ನೋಡಿ ಬಾಯೊಳಗೆನೇ ನಗಾಡಬಹುದು. ಅಂತಹರಿಗೆ ನಾನು ಒಂದು ಮಾತನ್ನು ಹೇಳಬೇಕೆಂದಿರುವೆನು. ಮನುಷ್ಯನ ಮರಣಕ್ಕೋಸ್ಕರವೇ ಮನಮರುಗುವವರು ಈ ಕಾಲದಲ್ಲಿ ಕಡಿಮೆ. ಸತ್ತವನು ನಮಗೇನೂ ಬಿಟ್ಟಿಲ್ಲ, ಕೊಟ್ಟಿಲ್ಲ, ಮುಂದೆ ನಮಗೇನು ಗತಿ?”

read more
ದೀಪ್ತಿ ಭದ್ರಾವತಿ ಕಥಾಸಂಕಲನಕ್ಕೆ ಎಸ್.ಎನ್.ಸೇತುರಾಮ್ ಬರೆದ ಮುನ್ನುಡಿಯ ಮಾತುಗಳು

ದೀಪ್ತಿ ಭದ್ರಾವತಿ ಕಥಾಸಂಕಲನಕ್ಕೆ ಎಸ್.ಎನ್.ಸೇತುರಾಮ್ ಬರೆದ ಮುನ್ನುಡಿಯ ಮಾತುಗಳು

“ಕಾಲಕಾಲಕ್ಕೆ ಸನ್ನಿವೇಶಕ್ಕೆ ಅನುಗುಣವಾಗಿ ಸಾಹಿತಿಯ ಬಣ್ಣ, ಭಾಷೆ ಬದಲಾಗಬಾರದು ಅನ್ನುವುದಾದ್ರೆ ಪ್ರದರ್ಶನಕ್ಕೆ ಇಟ್ಟ ಸರಕೇ ಒಳಗೂ ತುಂಬಿರಬೇಕಾಗುತ್ತದೆ. ಅಲ್ಲದಿದ್ರೆ ಅಭಾಸ ಖಂಡಿತ. ದೀಪ್ತಿಯವರ ಕಥೆಗಳಲ್ಲಿ ಸಾಹಿತಿ ಮತ್ತು ಸಾಹಿತ್ಯ ಬೇರೆ ಅನ್ನಿಸಲ್ಲ. ಗುಮಾನಿಗಳಿಲ್ಲದೆ ಓದಿ ದಿಕ್ಕು ತಪ್ಪುವ ಭಾವನೆಗಳಿಲ್ಲದೆ ಸ್ವಂತವೆಂದು ಅಪ್ಪಿಕೊಳ್ಳಬಹುದಾದಂತಹ ಪಾತ್ರಗಳು. ಇಲ್ಲಿಯ ಹೆಣ್ಣು ಪಾತ್ರಗಳು ಸೋತು ನಶಿಸಿದಾಗ ಅಪರಾಧಿ ಮನೋಭಾವ…”

read more
ತಬ್ಬಲಿಗಳು: ಎಂ.ಜಿ. ಶುಭಮಂಗಳ ಅನುವಾದಿಸಿದ ಪೆದ್ದಿಂಟಿ ಅಶೋಕ್ ಕುಮಾರ್ ಅವರ ತೆಲುಗು ಕತೆ

ತಬ್ಬಲಿಗಳು: ಎಂ.ಜಿ. ಶುಭಮಂಗಳ ಅನುವಾದಿಸಿದ ಪೆದ್ದಿಂಟಿ ಅಶೋಕ್ ಕುಮಾರ್ ಅವರ ತೆಲುಗು ಕತೆ

“ಧೂಳು ಎಬ್ಬಿಸಿ ದಾಟಿದ ಹತ್ತಿಯ ಲಾರಿಯನ್ನು ದಾಟಿ ಮುಂದೆ ಸರಿಯುತ್ತಿದ್ದಂತೆ ಮತ್ತೆ ಶುರುಮಾಡಿದಳು. “ಈ ಹತ್ತಿಯೇ ಅಣ್ಣಾ, ಅವಳ ಕೊಂಪೆ ಮುಳುಗಿಸಿದ್ದು. ನೀರಿಲ್ಲದೆ ಬರ ಬಂದುಬಿಟ್ಟಿತು. ಸುಮ್ಮನಿರಲಾರದೆ ಹತ್ತಿ ಇಟ್ಟಿದ್ದಳು. ಹತ್ತಿ ಮನೆ ಹಾಳಾಗ. ಕೇಳಕ್ಕೇ ಹೊರತು ಮೇಲೇರಲೇ ಇಲ್ಲ. ಬೆಳೆದಾಗ ಬೆಲೆಯಿಲ್ಲ. ಬೆಲೆಯಿದ್ದಾಗ ಬೆಳೆಯಿಲ್ಲ. ಹಾಕಿದ ಬಂಡವಾಳವೆಲ್ಲ ವ್ಯರ್ಥವೇ. ಇರುವ ಭೂಮಿ ಮಾರಿದಳು. ಮಾರಿದ ಭೂಮಿಯನ್ನೇ ಬಾಡಿಗೆಗೆ ತೆಗೆದುಕೊಂಡಳು.”

read more
ಮೋಹದ ಪಥದಲ್ಲಿ ರಿಂಗಣಿಸುವ ಇಹಲೋಕ: ಶ್ರೀದೇವಿ ಕೆರೆಮನೆ ಬರಹ

ಮೋಹದ ಪಥದಲ್ಲಿ ರಿಂಗಣಿಸುವ ಇಹಲೋಕ: ಶ್ರೀದೇವಿ ಕೆರೆಮನೆ ಬರಹ

“ಕೆಲವೊಮ್ಮೆ ಆತ್ಮ ಸಾಕ್ಷಿಯನ್ನು ಕೊಂದುಕೊಂಡು ಪ್ರಭುತ್ವದ ಆಯುಧವಾಗಬೇಕಾಗುತ್ತದೆ. ಹೀಗಾದಾಗ ಸಹಜವಾಗಿಯೇ ಒಂದು ಪ್ರಭುತ್ವದ ಜೊತೆ ಹೊಂದಾಣಿಕೆ ಮಾಡಿಕೊಂಡು ಸುಖದ ಬದುಕಿರಲಿ ಎಂದು ಹೊರಡಬೇಕು ಅಥವಾ ಪ್ರಭುತ್ವವನ್ನು ಎದುರು ಹಾಕಿಕೊಂಡು ಕೊಡುವ ಕಿರುಕುಳವನ್ನು ಸಹಿಸಿಕೊಳ್ಳಬೇಕು. ಪ್ರಾಣಾಂತಕ ಕಿರಿಕಿರಿಯನ್ನು ಅನುಭವಿಸಲಾಗದೇ ಸೋತು ಸುಣ್ಣವಾಗಬೇಕು.”

read more
ಓಬೀರಾಯನ ಕಾಲದ ಕತೆಗಳು: ಪಂಜೆ ಮಂಗೇಶರಾವ್  ಬರೆದ ಕತೆ “ನನ್ನ ಚಿಕ್ಕ ತಂದೆ”

ಓಬೀರಾಯನ ಕಾಲದ ಕತೆಗಳು: ಪಂಜೆ ಮಂಗೇಶರಾವ್ ಬರೆದ ಕತೆ “ನನ್ನ ಚಿಕ್ಕ ತಂದೆ”

“ದಾರಿಯಲ್ಲಿ ಬರುತ್ತಿದ್ದಾಗ ನನ್ನ ಮನಸ್ಸಿನಲ್ಲಿದ್ದ ಪೂರ್ವ ಸಂಶಯಗಳೆಲ್ಲಾ ನಿಜವಾಗಿ ಕಂಡುಬಂದುವು. ಅಡಿಗೆಯವನು ಚಿಕ್ಕತಂದೆಯ ಗಂಟಿನ ಆಸೆಗೆ ಒಳಗಾಗಿ, ಊಟ ಉಪಚಾರಗಳಲ್ಲಿ ನಮ್ಮಿಬ್ಬರಿಗೆ ಬರಿದಾದ ಪಾತ್ರೆಗಳನ್ನು ಮಾತ್ರ ನಿಲ್ಲಿಸುವನು ಎಂದು ನನ್ನ ಹೆಂಡತಿಗೂ ಅವನಿಗೂ ದಿನಂಪ್ರತಿ ಕಾಳಗವಾಗುತ್ತಿತ್ತು. ಇವೆಲ್ಲವು ಅಲ್ಪ ಸಂಗತಿಗಳೆಂದು ಬಗೆದು ಅಡಿಗೆಮನೆಯ ಕಲಹವನ್ನು ನನ್ನ ಆಫೀಸ್ ಚಾವಡಿಗೆ ತರಲು ಬಿಡುತ್ತಿರಲಿಲ್ಲ.”

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ