Advertisement

Month: April 2024

ಚಕ್ರವ್ಯೂಹ: ಕುರಸೋವ ಆತ್ಮಕತೆಯ ಕಂತು

“ಸಾಹಿತ್ಯ ಮತ್ತು ಸಿನೆಮಾ ಕುರಿತ ಒಳನೋಟಗಳನ್ನು ನನಗೆ ಒದಗಿಸಿದ್ದು ನನ್ನ ದೊಡ್ಡಣ್ಣ. ಅವನು ಹೇಳುತ್ತಿದ್ದ ಪ್ರತಿ ಸಿನಿಮಾವನ್ನು ತಪ್ಪದೇ ನೋಡುತ್ತಿದ್ದೆ. ಅವನು ಚೆನ್ನಾಗಿದೆ ಎಂದು ಹೇಳಿದ ಸಿನಿಮಾ ಎಷ್ಟೇ ದೂರವಿರಲಿ ಹೋಗಿ ನೋಡುತ್ತಿದ್ದೆ. ಅಸೂಕಾವರೆಗೂ ನಡೆದು ಸಿನಿಮಾ ನೋಡಿಬರುತ್ತಿದ್ದೆ. ಅಲ್ಲಿ ಏನು ನೋಡಿದೆ ಎನ್ನುವುದು ನೆನಪಿಲ್ಲ. ಆದರೆ ಅದೊಂದು ಒಪೆರ ಥಿಯೇಟರ್ ಅನ್ನುವುದು ನೆನಪಿದೆ. ತಡರಾತ್ರಿಯ ಶೋಗಳಿಗೆ ಸಿಗುತ್ತಿದ್ದ ರಿಯಾಯ್ತಿ ಟಿಕೇಟು ಕೊಳ್ಳಲು ಉದ್ದ ಸಾಲುಗಳಲ್ಲಿ ನಿಲ್ಲುತ್ತಿದ್ದದ್ದು ನೆನಪಿದೆ.”

Read More

ರಂಗನಬೆಟ್ಟದ ಕುಸುಮಾಲೆಯರ ಖುಷಿಗಳ ಕುರಿತು:ಮಧುರಾಣಿ ಅಂಕಣ

“ಪೋಡಿಗೆ ಹೋಗುವ ದಾರಿಯಲ್ಲಿನ ಇಚ್ಚಿಮರದ ಬಸಪ್ಪನ ದೇಗುಲವು ತಪಸ್ಸಿಗೆ ಕುಳಿತಂತೆ ತೋರುತ್ತಿತ್ತು. ಆ ಒಂಟಿ ಗುಡಿಯ ಮೇಲೆ ನನಗೋ, ಇನ್ನಿಲ್ಲದಷ್ಟು ಮೋಹ ಹುಟ್ಟಿತು. ಬಸಪ್ಪನಿಗೆ ಗದ್ದಲ ಆಗುವುದಿಲ್ಲವಂತೆ. ಹಾಗಾಗಿ ಹೆಂಗಳೆಯರ್ಯಾರೂ ಅಲ್ಲಿ ತಮ್ಮ ಮನದ ಹಾಡು ಬಿಚ್ಚಿಡುವುದಿಲ್ಲ. ಹಾಗಾಗಿ ಹಾಡಿಯ ಎದೆಯೊಳಗಿನ ಹಾಡುಗಳು ರಂಗನಿಗೆ ಕೇಳಿದ್ದು ಹೇಗೋ ನನಗೆ ಆಶ್ಚರ್ಯವಾಯ್ತು. ಮುಕ್ತವಾಗಿ ಗಾಳಿ-ಬೆಳಕಿಗೆ ತೆರೆದುಕೊಂಡು ಬದುಕುವ ಜನರ…”

Read More

ನಾಗರಾಜ್.ವೈ.ಕಾಂಬಳೆ ಬರೆದ ಗಝಲ್

“ವ್ಯರ್ಥವಾಗಿ ಹೋದ ಎಲ್ಲ ರಾತ್ರಿಗಳ ನೆನಪಿನ ಹಾವಳಿ ಎದ್ದಿದೆ
ಈ ರಾತ್ರಿ ಅದಕ್ಕೊಂದು ಸಾಂತ್ವನದ ಕತೆಯನ್ನು ಮುಟ್ಟಿಸಿಬಿಡು”- ನಾಗರಾಜ್.ವೈ.ಕಾಂಬಳೆ ಬರೆದ ಗಝಲ್

Read More

ಕಾರ್ತಿಕ್ ಎ.ಕೆ. ತೆಗೆದ ಡೆಕ್ಕನ್ ಬ್ಯಾಂಡೆಡ್ ಗೆಕೋ(ಹಲ್ಲಿ)ದ ಕಣ್ಣಿನ ಚಿತ್ರ

ಡೆಕ್ಕನ್ ಬ್ಯಾಂಡೆಡ್ ಗೆಕೋ(ಹಲ್ಲಿ)ದ ಕಣ್ಣಿನ  ಚಿತ್ರವನ್ನು ಕ್ಲಿಕ್ಕಿಸಿದವರು ಕಾರ್ತಿಕ್ ಎ. ಕೆ. ಉದ್ಯೋಗ ನಿಮಿತ್ತ ಸದ್ಯ ಅಮೇರಿಕದಲ್ಲಿ ನೆಲೆಸಿರುವ ಕಾರ್ತಿಕ್ ಸಾಫ್ಟವೇರ್ ಉದ್ಯೋಗಿ. ಪ್ರಕೃತಿ ಹಾಗೂ ಮ್ಯಾಕ್ರೋ ಛಾಯಾಗ್ರಹಣದಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಕೀಟಹಾರಿ ನಾಚಿಕೆ ಮುಳ್ಳು ಮತ್ತು ಘಾಟಿ ಕೋಳಿ: ಮುನವ್ವರ್ ಜೋಗಿಬೆಟ್ಟು ಬರೆವ ಪರಿಸರ ಕಥಾನಕ

“ಒಮ್ಮೆ ಹೊರ ಜಗಲಿಯಲ್ಲಿ ಕುಳಿತು ಸುಮ್ಮನೆ ರಸ್ತೆ ನೋಡುತ್ತಿರಬೇಕಾದರೆ ಅಚಾನಕ್ಕಾಗಿ ಕೋಳಿ ವಿಚಿತ್ರವಾಗಿ ಶಬ್ದ ಹೊರಡಿಸಲಾರಂಭಿಸಿತು. ನೋಡ ನೋಡುತ್ತಿದ್ದಂತೆ ಅನತಿ ದೂರದಲ್ಲೇ ಹದ್ದೊಂದು ನೆಲದ ಮಟ್ಟಕ್ಕೆ ಹಾರಿದ್ದು ಕಂಡಿತು. ಮರಿಗಳು ಅವಕ್ಕಾಗಿ ಹೇಂಟೆಯ ಹೊಟ್ಟೆಯೊಳಗಡೆ ಮುದುಡಿಕೊಂಡವು. ಎರಡು ಮರಿಗಳು ತುಂಬಾ ದೂರದಲ್ಲಿದ್ದರಿಂದ ಅವುಗಳಿಗೆ ಕೂಡಿಕೊಳ್ಳಲಾಗಲಿಲ್ಲ.”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ