Advertisement

Month: May 2024

ಕನ್ನಡವ ಪೊರೆದ ಚೇತನಗಳ ನೆನಪಿನಲ್ಲಿ…

‘ಸಿರಿಸಂಪಿಗೆ’ ನಾಟಕದಲ್ಲಿ ಬಹಳ ಹಾಡುಗಳಿವೆ. ಅಲ್ಲಿಯೇ ಹಾರ್ಮೋನಿಯಂ ಹಿಡಿದುಕೊಂಡು ರಾಗ ಹಾಕುತ್ತಿದ್ದರು ಬಸವಲಿಂಗಯ್ಯನವರು. ಅವರದು ಅದ್ಭುತ ಶಾರೀರ. ನಾಟಕದಲ್ಲಿ ಎಲ್ಲ ಹಾಡುಗಳನ್ನು ರಿಹರ್ಸಲ್ ಸಮಯದಲ್ಲೇ ನಮ್ಮ ಕಣ್ಣೆದುರೇ ರಾಗ ಹಾಕಿದರು, ಹಾಡಿಸಿದರು. ನಾವೆಲ್ಲ ಎಲ್ಲ ಹಾಡುಗಳನ್ನೂ ತಾಲೀಮು ಕೂಡ ಮಾಡಿದ್ದೆವು. ಒಂದು ಸಂಜೆ ಅದೇನೆನಿಸಿತೋ, ‘ಇದು ಯಾಕೋ ಸರಿ ಇಲ್ಲ. ನಾಟಕದ ಕಡೀ ಹಾಡು, ಭೈರವಿ ರಾಗದಾಗs ಇರಬೇಕು,’ ಎಂದು ಮತ್ತೆ ಪೇಟಿ ಹಿಡಕೊಂಡು ಭೈರವಿ ರಾಗದಲ್ಲಿ ನಾಟಕದ ಕೊನೆಯ ಹಾಡಿಗೆ ಇನ್ನೊಂದು ಧಾಟಿ ಹಚ್ಚಿದರು.
ಕೇಶವ ಕುಲಕರ್ಣಿ ಬರೆಯುವ ‘ಇಂಗ್ಲೆಂಡ್‌ ಪತ್ರ’

Read More

ಗುರುದತ್ ಅಮೃತಾಪುರ ಬರೆವ ಹೊಸ ಸರಣಿ ಇಂದು ಆರಂಭ

ಹೊಸ ಊರಿಗೆ ಪ್ರವಾಸ ಹೋಗುವ ಖುಷಿ ಇಮ್ಮಡಿಯಾಗುವುದು ಆ ಸ್ಥಳದ ಪೂರ್ವಾಪರವನ್ನು ತಿಳಿದಾಗ. ಗುರುದತ್ ಅಮೃತಾಪುರ ಅವರು ಪ್ರವಾಸವನ್ನು ಇಷ್ಟಪಡುವವರು. ಜೊತೆಗೆ ಆ ಜಾಗಗಳ  ಇತಿಹಾಸವನ್ನೂ ಅರಿಯುವ ಕುತೂಹಲ  ಹೊಂದಿದವರು. ಯುರೋಪ್ ಖಂಡದ ಈಶಾನ್ಯ ಭಾಗದಲ್ಲಿರುವ ಒಂದು ಪುಟ್ಟ ರಾಷ್ಟ್ರ. ಭಾರತದಂತೆಯೇ ಅಹಿಂಸಾತ್ಮಕ ಹೋರಾಟದ ಹಾದಿಯನ್ನು ಹಿಡಿದ ದೇಶವದು. ಎಲೆಮರೆಯ ಕಾಯಿ ಎಸ್ಟೋನಿಯಾದ ರಾಜಧಾನಿ ತಾಲಿನ್ ಕುರಿತ ಬರಹದೊಂದಿಗೆ ತಮ್ಮ ಸರಣಿಯನ್ನು ಅವರು ಆರಂಭಿಸಿದ್ದಾರೆ.

Read More

ನೂರು ಕಲ್ಲುಗಳಲ್ಲಿ ಒಂದು ಮುತ್ತು ಹುಡುಕುವ ಬಿರ್ಜು ಮಹಾರಾಜ್

ಸಿನೆಮಾ ರಂಗಕ್ಕೆ ಹೋಗಬೇಡ ಎಂದ ತಾಯಿಯ ಮಾತನ್ನು ಪಕ್ಕಕ್ಕಿಟ್ಟು ಮುಂಬೈಗೆ ಬಂದಾಗ ಜೇಬಿನಲ್ಲಿ ಕಿರುಗಾಸು ಇಲ್ಲದ ಬಿರ್ಜು ಮಹಾರಾಜ್ ಮಾಧುರಿ ದೀಕ್ಷಿತ್ ರಿಂದ ಹಿಡಿದು  ದೀಪಿಕಾಳವರೆಗೂ ನೂರಕ್ಕೂ ಹೆಚ್ಚು ಸಿನೆಮಾಗಳಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. ಆದರೂ ಪ್ರೀತಿ ಮಾಡುವುದು ಮಾತ್ರ ಕಮಲಹಾಸನ್‌ನನ್ನು. ವಿಶ್ವರೂಪಂ ಸಿನೆಮಾ ಸಮಯದಲ್ಲಿ ‘ಆತ ತರಬೇತಿ ಸಮಯದಲ್ಲಿ ನೃತ್ಯ ಮಾಡುತ್ತಿದ್ದನ್ನು ನೋಡಿ ಎಷ್ಟೋ ಬಾರಿ ನಾನೇ ನರ್ತಿಸುತ್ತಿದ್ದೇನೆ ಎನ್ನಿಸಿಬಿಡುತ್ತಿತ್ತು’ ಎನ್ನುವಾಗ ಬಿರ್ಜು ಅವರ ಉಸಿರಿನಲ್ಲಿ ಜೀವ ಆಡಿದಂತೆನಿಸಿತು.

Read More

ಯಕ್ಷಗಾನ ಪಠ್ಯ: ಕಲೆಗೆ ತೊಡಕುಂಟು ಮಾಡುವ ಪ್ರಮಾದಗಳು

ಕರ್ನಾಟಕದ ಕರಾವಳಿಯುದ್ಧಕ್ಕೂ ಸೊಂಪಾಗಿ ವಿಕಾಸಗೊಂಡಿರುವ ಯಕ್ಷಗಾನ ಕಲೆಯು ಅಪಾರ ವೈವಿಧ್ಯವನ್ನು ಹೊಂದಿದೆ. ಈ ವೈವಿಧ್ಯತೆಯ ಕಾರಣದಿಂದಲೇ, ಅದರ ವ್ಯಾಖ್ಯಾನವನ್ನು ಸರಳವಾಗಿ ಮಾಡುವುದು ಕಷ್ಟವಾಗಿಬಿಟ್ಟಿದೆ. ಆಯಾ ಪ್ರದೇಶಗಳ ಪ್ರಭಾವದೊಂದಿಗೆ ವಿಕಾಸ ಹೊಂದಿರುವ ಈ ಕಲೆಯನ್ನು ಏಕರೂಪವಾಗಿ ನೋಡುವುದು ಸಾಧ್ಯವಾಗುತ್ತಿಲ್ಲ. ಇದೀಗ ಯಕ್ಷಗಾನ ಕಲೆಗೊಂದು ಪಠ್ಯಪುಸ್ತಕ ರಚನೆಯಾಗಿದೆ. ಹಾಗಿದ್ದರೆ ಪಠ್ಯಪುಸ್ತಕವು  ಈ ಬೃಹತ್ ಕಲಾಪ್ರಕಾರವನ್ನು ಸಾಂದ್ರವಾಗಿ ಗ್ರಹಿಸಿದೆಯೇ ಎನ್ನುವ ಪ್ರಶ್ನೆ ಎದುರಾಗಿದೆ. 

Read More

ಹಲವು ಮೇಳಗಳಲ್ಲಿ ಭಾಗವತರಾಗಿ ಬಲಿಪರು

ಕಲ್ಲಾಡಿ ಕೊರಗ ಶೆಟ್ಟರ ಯಜಮಾನಿಕೆಯ ಕುಂಡಾವು ಮೇಳದಲ್ಲಿ ಬಲಿಪ ನಾರಾಯಣ ಭಾಗವತರು ನಾಲ್ಕು ವರುಷಗಳ ತಿರುಗಾಟವನ್ನು ಮಾಡಿದರು. ಮುಂದೆ ತಮ್ಮ ಮೇಳ ತಿರುಗಾಟದ ಕೊನೆಯವರೆಗೂ ಶ್ರೀ ಕಟೀಲು ಮೇಳದಲ್ಲೇ ಇದ್ದರು.  ಹಣಕಾಸಿನ ಮುಗ್ಗಟ್ಟು, ಮೇಳ ನಡೆಸಲು ಎದುರಾದ ಕಷ್ಟಗಳನ್ನು ದಾಟುತ್ತ ಬದುಕು ಸಾಗಿದರೂ, ಭಾಗವತಿಕೆಯೆಂಬ ಪ್ರೀತಿ ಅವರಿಂದ ದೂರಾಗಲಿಲ್ಲ. ಕೃಷ್ಣ ಪ್ರಕಾಶ ಉಳಿತ್ತಾಯ ಬರೆಯುವ ‘ಬಲಿಪ ಮಾರ್ಗ’ ಸರಣಿಯಲ್ಲಿ ಹೊಸ ಬರಹ. 

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ