Advertisement

Month: May 2024

ಎರಡು ತೀರಗಳ ಸೇರಿಸಿದ ಹಿರಿಯಜ್ಜ

ಮೂರು ದಶಕಗಳ ರಾಜಕೀಯ ಜೀವನದಲ್ಲಿ ದಾದಾಬಾಯಿ ನವರೋಜಿ ಏಳು ಬಾರಿ ಬ್ರಿಟನ್‌ಗೆ ಭೇಟಿ ನೀಡಿದರು, ಐದು ಬಾರಿ ಲಂಡನ್ ನ ಬೇರೆ ಬೇರೆ ವಿಳಾಸಗಳಲ್ಲಿ ಉಳಿದರು. ಭಾರತದಲ್ಲಿ ಬ್ರಿಟಿಷ್ ಆಡಳಿತದ ಬಗ್ಗೆ ಬ್ರಿಟನ್ನಿನ ಬೇರೆ ಬೇರೆ ಭಾಗಗಳಿಗೆ ತನ್ನ ಯೋಚನೆಗಳನ್ನು ತಿಳಿಸಲು ತಿರುಗಾಡಿದರು. 1906, ಎಂಭತ್ತರ ವಯಸ್ಸಿನಲ್ಲಿ ಮತ್ತೆ ಸಂಸತ್ತಿಗೆ ಮರಳುವ ಯತ್ನ ಮಾಡಿದರು. ಆದರೆ ಚುನಾವಣೆಯಲ್ಲಿ ಸೋತರು. ಲಂಡನ್‌ನ ಲಾಂಬೆತ್ ಪ್ರದೇಶದಲ್ಲಿ, ಒಂದು ಕಾಲಕ್ಕೆ ತಾವು ಸಮರ್ಥಿಸುತ್ತಿದ್ದ ಲಿಬರಲ್ ಪಕ್ಷದ ಅಭ್ಯರ್ಥಿಯ ಎದುರು ಅವರು ನಿಂತಿದ್ದರು.
ʻನೀಲಿ ಫಲಕಗಳಲ್ಲಿ ನೆನಪಾಗಿ ನಿಂದವರುʼ ಸರಣಿಯಲ್ಲಿ ದಾದಾಬಾಯಿ ನವರೋಜಿ ಅವರ ಕುರಿತು ಬರೆದಿದ್ದಾರೆ ಯೋಗೀಂದ್ರ ಮರವಂತೆ

Read More

ಚಂಬಲ್‌ನ ಡಕಾಯಿತರು ಕಾಪಾಡಿದ ವಿಗ್ರಹಗಳು

ನಮ್ಮ ದೇಶವನ್ನು ನೋಡಲು ಸರಿಯಾಗಿ ಒಂದು ಜನ್ಮ ಸಾಕಾಗಲ್ಲ. ಅಲೆದಾಡಲು ಇನ್ನೂ ಅದೆಷ್ಟು ಜನ್ಮಗಳು ಬೇಕೋ. ಅದರಲ್ಲೂ ಈ ಮಧ್ಯಪ್ರದೇಶ ರಾಜ್ಯವನ್ನು ನೋಡಲು ಅರ್ಧ ಜನ್ಮವೇ ಬೇಕೇನೋ. ಪ್ರಸ್ತುತ ನಾನು ಗ್ವಾಲಿಯರ್‌ನಿಂದ ೨೫ ಕಿ. ಮೀ ದೂರದಲ್ಲಿರುವ ಮೊರೇನಾ ಅನ್ನೋ ಜಿಲ್ಲೆಗೆ ಸೇರಿದ ಬಟೇಶ್ವರ ಗುಡಿಗಳು ಜೀವ ತಳೆದ ಕಥೆಯ ಬಗ್ಗೆ ಹೇಳಬೇಕು.  ಇವು ೮ ರಿಂದ ೧೦ ನೇ ಶತಮಾನದಲ್ಲಿ ನಿರ್ಮಾಣ ಆಗಿರಬಹುದು ಎನ್ನುತ್ತಾರೆ ಪುರಾತತ್ವಜ್ಞರು. ಆದರೆ ಇದು ಬೆಳಕಿಗೆ ಬಂದಿದ್ದು ೨೦೦೫ ರಿಂದ ಈಚೆಗೆ. ಅಲ್ಲೀ ತನಕ ಏನಾಗಿತ್ತು? ಯಾಕೆ ಯಾರೂ ಇಲ್ಲಿರುವ ವಿಗ್ರಹಗಳನ್ನು ಕಳುವು ಮಾಡಲಿಲ್ಲ? ಅವುಗಳನ್ನು ಚಂಬಲ್‌ ನ ಡಕಾಯಿತರು  ಪರೋಕ್ಷವಾಗಿ ಕಾಯುತ್ತಿದ್ದರು ಎಂದು ಬರೆಯುತ್ತಾರೆ ಗಿರಿಜಾ ರೈಕ್ವ.  ದೇವಸನ್ನಿಧಿ ಅಂಕಣದಲ್ಲಿ ಅವರ ಹೊಸ ಬರಹ ಇಲ್ಲಿದೆ.

Read More

ಸಮರಕಂದ್‌ನ ಪಾರಂಪರಿಕ ಸ್ಥಳಗಳು ಮತ್ತು ಬಿಜಾಪುರದ ಗೋಲಗುಮ್ಮಟ

ಸಮರಕಂದ್ ನಗರದ ರೇಗಿಸ್ತಾನ್ ಚೌಕ್ ಅತ್ಯಂತ ಸುಂದರವಾದ ಇಸ್ಲಾಮೀ ಶೈಲಿಯ ವರ್ಣರಂಜಿತ ಇಮಾರತುಗಳಿಂದ ಕೂಡಿದ ಪ್ರದೇಶವಾಗಿದೆ. ತೈಮೂರ ಲಂಗನ ಗೋರಿ ಕೂಡ ಇಲ್ಲೇ ಇದೆ. ಅದು ಎತ್ತರದ ಪ್ರದೇಶದಲ್ಲಿರುವುದರಿಂದ ಬಹಳಷ್ಟು ಮೆಟ್ಟಿಲುಗಳನ್ನು ಹತ್ತಿ ಹೋಗಬೇಕು. ಸುದೈವದಿಂದ ನಮ್ಮ ಗೈಡ್ ಗುಲ್‌ಚೆಹರಾ ಎಂಬ ಯುವತಿ ಸಮರಕಂದ್ ಇತಿಹಾಸವನ್ನು ಬಹಳ ಚನ್ನಾಗಿ ಬಲ್ಲವಳಾಗಿದ್ದಳು. ಆಕೆ ಸಮರಕಂದ್ ಇತಿಹಾಸದ ಮೇಲೆ ಸಂಶೋಧನೆ ಮಾಡಿದವಳಾಗಿದ್ದಳೆಂಬ ನೆನಪು. ಪ್ರತಿಯೊಂದು ಸ್ಥಳದ ಬಗ್ಗೆ ಆಕೆ ವಿವರಿಸುವ ರೀತಿ ನನಗಂತೂ ಬಹಳ ಉಪಯುಕ್ತವಾಯಿತು.
ರಂಜಾನ್‌ ದರ್ಗಾ ಬರೆಯುವ ನೆನಪಾದಾಗಲೆಲ್ಲ ಸರಣಿಯ 45ನೇ ಕಂತು ಇಲ್ಲಿದೆ.

Read More

ಚಂದ್ರಗೌಡ ಕುಲಕರ್ಣಿ ಬರೆದ ಈ ದಿನದ ಕವಿತೆ…

“ಸುಳಿತಂಗಾಳಿ ಒಣಹವೆಯಲ್ಲ
ಶ್ವಾಸ ನಿಶ್ವಾಸದ ಉಸಿರು!
ಜುಳು ಜುಳು ಹರಿವುದು ಬರಿ ನೀರಲ್ಲ
ಅಮೃತ ಬೆರೆಸಿದ ಕೆಸರು!”- ಚಂದ್ರಗೌಡ ಕುಲಕರ್ಣಿ ಬರೆದ ಈ ದಿನದ ಕವಿತೆ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ…

Read More

ಬರಹ ಭಂಡಾರ