Advertisement

Month: May 2024

ಭಾರತದ ಕ್ರಿಕೆಟ್‍ನ ಸ್ಪಿನ್ನರ್ಸ್‌ಗಳು – 2

ನಿಧಾನವಾಗಿ ನಡೆದು ಬಂದು ಬೋಲಿಂಗ್ ಮಾಡುತ್ತಿದ್ದ ಬೇಡಿ ಅವರ ಬೋಲಿಂಗ್‌ನಲ್ಲಿ ಬಹಳ ಚಾಣಾಕ್ಷರಾಗಿದ್ದರು ಮತ್ತು ನಿಸ್ಸೀಮರು. ಒಂದು ಬಾಲು ನಿಧಾನವಾಗಿ ಬಂದರೆ ಮತ್ತೊಂದು ರಭಸದಿಂದ ಬಂದು ವಿಕೆಟ್ ಉರುಳಿಸಿ ಹೋಗುವುದು! ಇಷ್ಟಾಗಿ ಅವರ ಬೋಲಿಂಗ್ ಶೈಲಿಯಲ್ಲಿ ಕಿಂಚಿತ್ತೂ ವ್ಯತ್ಯಾಸವಿರುತ್ತಿರಲಿಲ್ಲ! ಒಂದು ಓವರ್‌ನಲ್ಲಿ 6 ವಿಧವಾಗಿ ಬಾಲು ಮಾಡುವ ಪ್ರತಿಭೆ ಹೊಂದಿದ್ದ ಬೇಡಿಯವರ ಬೋಲಿಂಗ್‌ಅನ್ನು ಹೇಗೆ ಆಡುವುದಪ್ಪ ಎಂದು ಬ್ಯಾಟ್ಮನ್‌ರನ್ನು ಕಾಡುತ್ತಿತ್ತು, ಯಾಕೆಂದರೆ ಏನು ಮಾಡಿದರೂ ಅವರು ನಡೆಯುವ ಶೈಲಿ, ರೀತಿ, ಹಾವಭಾವ ಯಾವುದರಲ್ಲೂ ಬದಲಾವಣೆ ಇರುತ್ತಿರಲಿಲ್ಲ.
ಇ.ಆರ್. ರಾಮಚಂದ್ರನ್ ಬರೆಯುವ ಅಂಕಣ

Read More

ಸತ್ಯಪ್ರಕಾಶ್ ರಾಮಯ್ಯ ಬರೆದ ಈ ದಿನದ ಕವಿತೆ

“ಒಂದಾನೊಂದು ಕಾಲದಲ್ಲಿ ಕಿಕ್ಕಿರಿದು ನಿಂತಿದ್ದ
ಗಗನಚುಂಬಿ ಕಟ್ಟಡಗಳು ನೆಲಸಮವಾಗಿತ್ತು
ಅಲ್ಲಲ್ಲಿ ನಿಂತ ವ್ಯಾನುಗಳ ನಲ್ಲಿಯಿಂದ
ಸೋರುತಿದ್ದ ಹಾಲಿನ‌ ಬಣ್ಣ ಕೆಂಪಾಗಿತ್ತು
ಬತ್ತಿಹೋದ ಕಣ್ಣುಗಳು, ಬಾಗಿದ ಬೆನ್ನುಗಳು
ನಿರ್ಭಾವುಕವಾಗಿ ಕನಲುತಿತ್ತು”- ಸತ್ಯಪ್ರಕಾಶ್ ರಾಮಯ್ಯ ಬರೆದ ಈ ದಿನದ ಕವಿತೆ

Read More

ನಾನೇಕೆ ಜಾತಿವಾದಿಯಲ್ಲ?

ನಾವೆಲ್ಲರೂ ಮನುಷ್ಯರೇ ತಾನೆ? ಈವತ್ತು ಸಮತೋಲಿತ ಮನಸ್ಸಿನಿಂದ ಕೂಡಿರುವವನು ಮುಂದೆ ಜಾತಿವಾದಿಯಾಗಬಹುದು. ಅಂತಹ ಪ್ರಲೋಭನೆ, ಒತ್ತಡಗಳು ಬರಬಹುದು. ಅಥವಾ ನಾವೇ ಅದನ್ನೆಲ್ಲ ಸೃಷ್ಟಿಸಿಕೊಂಡು ಈಗ ನಾನೇನು ಮಾಡಲಿ ಎಂದು ಅಸಹಾಯಕತೆ ನಟಿಸಿ ಜಾತಿವಾದಿಯಾಗಬಹುದು. ನಮ್ಮ ಆಪ್ತರೇ ಬಹಿರಂಗದಲ್ಲಿ ಸಮಾನಭಾವದವರಾಗಿದ್ದು, ಒಳಗಡೆ ತಮ್ಮ ಜಾತಿಯ ಬಗ್ಗೆ ಅನುಕೂಲವಾಗಿ ಭಾವಿಸುತ್ತಿರಬಹುದು, ನಡೆದುಕೊಳ್ಳುತ್ತಿರಬಹುದು.
ಕೆ. ಸತ್ಯನಾರಾಯಣ ಬರೆಯುವ “ಬೀದಿ ಜಗಳ ಮತ್ತು ಇತರೆ ಪ್ರಬಂಧಗಳು” ಸರಣಿಯ ಏಳನೆಯ ಪ್ರಬಂಧ ನಿಮ್ಮ ಓದಿಗೆ

Read More

ನಿಷೇಧಿತ ಗಿರಿ ನೆತ್ತಿಯಲ್ಲಿ

ಹೀಗೆ ಕಡುಹಿಂಸೆಯಲ್ಲೇ ಹದಿನೈದು ದಿನ ಕಳೆದ ಮೇಲೆ ಕೊನೆಗೊಂದು ದಿನ ಸ್ವತಃ ಮಾಂಟ್ಗೊಮರಿ ಸಾಹೇಬರು, `ಕಾರಕೋರಂ ಶ್ರೇಣಿಯ ಎರಡು ಶಿಖರಗಳ ಅನ್ವೇಷಣೆ ದೊಡ್ಡ ಸಾಧನೆ. ನಂಗಾ ಪರ್ವತದ ವಿವರಗಳನ್ನು ಕಲೆ ಹಾಕಿದ್ದೂ ಸಾರ್ಥಕವಾಯಿತು. ಕಾರಕೋರಂ ಶ್ರೇಣಿಯ ದ್ವಿತೀಯ ಶಿಖರ, ಪೀಕ್ ಹದಿನೈದನ್ನೂ ಮೀರಿಸುವಷ್ಟು ಎತ್ತರ ಇರುವಂತಿದೆ’ ಎಂದು ಹೆಮ್ಮೆಯಿಂದ ಹೇಳಿದ್ದರು. ಉಳಿದವರೂ ತಲೆಯಾಡಿಸಿ ಸಮ್ಮತಿಸಿದ್ದರು. ಅವರ ಸಂಭಾಷಣೆ ಕೇಳಿ, `ಕಾರಕೋರಂ ಕಾಶ್ಮೀರದ ಉತ್ತರದಲ್ಲಿರುವ ಪರ್ವತಶ್ರೇಣಿ ಎಂಬುದು ಯಾರಿಗೆ ಗೊತ್ತಿಲ್ಲ. ಅದರಲ್ಲಿರುವ ಎರಡು ಎತ್ತರದ ಶಿಖರಗಳನ್ನು ಇವರೇ ಶೋಧಿಸಿದರಂತೆ!
ಡಾ. ಗಜಾನನ ಶರ್ಮ ಹೊಸ ಕಾದಂಬರಿ “ಪ್ರಮೇಯ”ದ ಕೆಲವು ಪುಟಗಳು ನಿಮ್ಮ ಓದಿಗೆ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

`ಚಿಲಿಪಿಲಿ ಕನ್ನಡ ಕಲಿ’: ಮಂಡಲಗಿರಿ ಪ್ರಸನ್ನ ಬರಹ

ಹೊರನಾಡಿನಲ್ಲಿ ನೆಲೆಸಿರುವ ಕನ್ನಡ ಕಂದಮ್ಮಗಳ ಬೆಳವಣಿಗೆಯ ಪರಿಸರ ತೀರ ವಿಭಿನ್ನವಾದದ್ದು. ಅಂತಹ ಮಕ್ಕಳ ಕನ್ನಡ ಕಲಿಕೆಗೆ ಬೇಕಾದ ವಾತಾವರಣ ಸೀಮಿತವಾದದ್ದು. ಇಂತಹ ಮಕ್ಕಳಿಗೆ ಭಾಷೆ ಕಲಿಸಲು ಪದ್ಯಗಳು…

Read More

ಬರಹ ಭಂಡಾರ