Advertisement

Month: April 2026

ಅಪ್ಪಿಕೋ ಭೂತಾಯಿ ಗೌರಾದೇವಿ!: ಸುಕನ್ಯಾ ಕನಾರಳ್ಳಿ ಅಂಕಣ

ಅಧಿಕಾರಿಗಳಿಗೆ ಈಗ ಪೇಚಿಗಿಟ್ಟುಕೊಂಡಿತು. ಸದ್ಯಕ್ಕೆ ಅಲ್ಲಿಂದ ತೊಲಗಿ ನಂತರ ಬಂದರೆ ಹೇಗೆ? ಆದಿವಾಸಿ ಹೆಂಗಸರಿಗೆ ಸರಕಾರದ ಕುತಂತ್ರಗಳೇನೂ ಅಪರಿಚಿತವಲ್ಲ. ಅವರ ಆಯುಧಗಳನ್ನು ಹೊತ್ತೊಯ್ದು ಕೊಡುವ ನೆಪದಲ್ಲಿ ತಾತ್ಕಾಲಿಕವಾಗಿ ಕಟ್ಟಿದ್ದ ಸೇತುವೆಯನ್ನು ಅದೇ ಅಸ್ತ್ರಗಳಿಂದ ಉರುಳಿಸಿದಾಗ ಸರಕಾರ ಇತ್ತ ಕಡೆಯಲ್ಲಿ, ಇವರೆಲ್ಲ ಅತ್ತ ಕಡೆಯಲ್ಲಿ. ಇಡೀ ರಾತ್ರಿ ಸರಕಾರದ ಮಂದಿ ಮತ್ತೆ ಕಾಡೊಳಗೆ ನುಸುಳದಂತೆ ಹೆಂಗಸರು ಕಾವಲಿದ್ದರು. ಮಾರನೆಯ ದಿನ ಹಳ್ಳಿಗೆ ಹಿಂತಿರುಗಿದ ಗಂಡಸರಿಗೆ ಆಶ್ಚರ್ಯ ಕಾದಿತ್ತು. ಮಾರ್ಚ್ ೩೧, ೧೯೭೪ ರಂದು ಕಣಿವೆಯಲ್ಲಿ ತಮಟೆ ಕಹಳೆಗಳ ಸಮೇತ ಬೃಹತ್ ಪ್ರದರ್ಶನ ನಡೆಯಿತು.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಹನ್ನೆರಡನೆಯ ಬರಹ

Read More

ಸುಂದರ ಕಾಡಿನ ರೋಚಕ ಕಥೆಗಳು (೬): ರೂಪಾ ರವೀಂದ್ರ ಜೋಶಿ ಸರಣಿ

ಬೆಟ್ಟದ ಬಲಬದಿಯ ಕಿರುದಾರಿ ಹಿಡಿದು ಸಾಗಿದರೆ, ಅಲ್ಲೊಂದು ನೆಲ್ಲಿ ಮರ. ಅದರ ಬುಡದಲ್ಲಿ ನಮ್ಮ ನಾಯಿ ಅರೆ ಪ್ರಜ್ಞಾವಸ್ಥೆಯಲ್ಲಿ ಬಿದ್ದುಕೊಂಡಿದೆ. ನಾನು ಗಾಬರಿಯಿಂದ ಜೋರಾಗಿ ಅಳತೊಡಗಿದೆ. ಯಾರೋ ರಾತ್ರಿ ಅಲ್ಲಿರುವ ಪೊದೆಯಲ್ಲಿ ನಾಡ ಬಾಂಬು ಇಟ್ಟಿದ್ದಾರೆ! ಮಾಂಸದ ವಾಸನೆಗೆ ಮರುಳಾಗಿ, ಅದು ಆ ಬಾಂಬನ್ನು ಬಯಲಲ್ಲಿ ತಂದಿಟ್ಟುಕೊಂಡು ಇಡಿದಾಗಿ ಕಚ್ಚದೆ, ಮೆಲ್ಲಗೆ ಒಂದು ಮೂಲೆಯನ್ನು ಬಿಡಿಸಿದೆ. ಅದಕ್ಕೇ ಸ್ವಲ್ಪಭಾಗ ಸಿಡಿದು, ಅದರ ಮೇಲ್ದವಡೆ ಸ್ವಲ್ಪ ಸೀಳಿತ್ತು. ಬಾಯೆಲ್ಲ ರಕ್ತ ಸಿಕ್ತ.
ರೂಪಾ ರವೀಂದ್ರ ಜೋಶಿ ಬರೆಯುವ “ಹಸಿರ ಮಲೆನಾಡಲ್ಲಿ ಹಸನಾದ ಬಾಲ್ಯ” ಸರಣಿಯ ಹದಿನೈದನೆಯ ಕಂತು

Read More

ರಶ್ಮಿ ಕಬ್ಬಗಾರು ಬರೆದ ಈ ದಿನದ ಕವಿತೆ

“ಅವಳ ಕಣ್ಣಿಂದ್ಯಾವ ಕಿಡಿ ಸಿಡಿಯಿತೋ
ಮೈಯಿಂದಾವ ಘಮಲು
ಕೋಲು ಮೀಸೆಯ ಗಡದಪ್ಪನ ಜನುಮಕ್ಕೆ ತಿವಿಯಿತೂ ಕಾಣೆ
ಈಚಲು ಮರದ ಮಡಿಕೆ
ತಲೇ ಮೇಲೆ ಆಕಾಶದಿಂದ
ಕೌಚಿದಂತೆ ಶುರುವಾಯ್ತು
ಜಡಿ ಮಳೆ
ಮಡಗೋದು ಮದ್ಲು ಮಡಗವೋ
ಎಲ್ಲಿ ನಿನಗಂಡ
ಗ್ಯಾನ ಎಲ್ಲೈತೆ ಅವಂಗೆ ?”-ರಶ್ಮಿ ಕಬ್ಬಗಾರು ಬರೆದ ಈ ದಿನದ ಕವಿತೆ

Read More

ಹಿನ್ನೀರಿನಲ್ಲೊಂದು ಮುಂಜಾನೆ: ವಿನಾಯಕ ಅರಳಸುರಳಿ ಅಂಕಣ

ಇದೇ ಅಲೆಯ ಬುಡದಲ್ಲಿ ಒಂದು ಕಾಲದಲ್ಲಿ ಹಳ್ಳಿಯಿತ್ತು. ಗದ್ದೆಯಿತ್ತು. ಮನೆಯಿತ್ತು. ದನಕರುಗಳು ಓಡಾಡುತ್ತಿದ್ದವು. ಮನುಷ್ಯ ವಾಸವಾಗಿದ್ದ. ಅಲ್ಲೆಲ್ಲೋ ದೂರದಲ್ಲಿ ನದಿಯೊಂದರ ದಾರಿಯ ತಡೆದ ಕಾರಣಕ್ಕೆ ಇಲ್ಲಿ ಇವೆಲ್ಲವೂ ಮುಳುಗಿದವು. ಈ ನೀರಡಿಗೀಗ ಏನೇನಿರಬಹುದು? ಮುಳುಗಡೆಯಾಗುವ ಹೊತ್ತಿಗೆ ಎದ್ದು ಹೋದ ಮಗುವೊಂದು ಅರ್ಧಕ್ಕೇ ಆಡಿ ಬಿಟ್ಟ ಆಟಿಕೆಯಿರಬಹುದೇ? ರೈತನೊಬ್ಬ ನೂರಾರು ಕಟ್ಟು ಹುಲ್ಲು ಕೊಯ್ದಿರುವ ಕತ್ತಿಯಿರಬಹುದೇ? ಅಮ್ಮ ಒಬ್ಬಳು ನೂರಾರು ಬಾರಿ ಗಂಜಿ ಕಾಯಿಸಿರುವ ಪಾತ್ರೆಯಿರಬಹುದೇ? ಹಲವು ದೇವಸ್ಥಾನಗಳೂ ಇಲ್ಲಿ ಮುಳುಗಿ ಹೋಗಿವೆಯಂತೆ… ಇನ್ನಾದರೂ ಅಲ್ಲಿ ದೇವರಿರಬಹುದೇ?
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”ಯ ಬರಹ ನಿಮ್ಮ ಓದಿಗೆ

Read More

ಹೆಣ್ಣಂದ್ರ ರಕ್ತ ಬಸೀಬೇಕು….: ಸುವರ್ಣ ಚೆಳ್ಳೂರು ಸರಣಿ

ಹಿಂಗ ಒಮ್ಮಿ ನಾನು ನಿಮ್ಮವ್ವ ಆ ದೊಡ್ಡ ಹೊಲಕ್ಕ ರಾಶಿ ಮಾಡಕಂತ ಹೋಗಿದ್ವಿ, ಹೊಲದ್ ದಗದಾ ಅಂದ್ರ ತುಸಾss ಇರತೈತ್ಯನು ಮೈ ಬಗ್ಗಿಸಿ ದುಡದ್ರಷ್ಟss ನೀಗತೈತಿ. ಅವತ್ತು ಮಟ ಮಟ ಮಧ್ಯಾಹ್ನದಾಗ ನಾನು ನಿಮ್ಮವ್ವ ಈ ಮ್ಯಾಗಳಮನಿ ಗಂಗಪ್ಪನ ಹೊಲಕ್ಕ ಆರತಾಸಿನ‌ ದಗದಕ್ಕ ಹೋಗಿದ್ವಿ, ಆಕಿ ಕೂಡ ಅದಾ‌ ನೆಲ್ಲು ಕೊಯ್ಯಾ ಕೆಲಸಕ್ಕಂತ ನಮ್ಮ್ ಜೋಡಿ ಬಂದಿದ್ಲು, ಗಂಗಪ್ಪನ ಹೊಲ ಆ‌ ಮ್ಯಾಗಡಿ ಕಡಿ ಐತ್ಯಲಾ ಆ ದುರ್ಗಮ್ಮನ ಗುಡಿತಾಕ ಅಲ್ಲೆ ಒಂದು ಸಣ್ಣ್ ಹಳ್ಳ ಹರಿತೈತಿ ಅಲಾ ಆ ಹೊಲಕ್ಕೊಗಿದ್ವಿ.
ಸುವರ್ಣ ಚೆಳ್ಳೂರು ಬರೆಯುವ “ಆಕಿ” ಸರಣಿ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ