Advertisement

ವ್ಯಕ್ತಿ ವಿಶೇಷ

ಅಲ್ಲಿಂದಿಲ್ಲಿಗೆ, ಇಲ್ಲಿಂದಲ್ಲಿಗೆ…: ಜುಲೇಖಾ ಬೇಗಂ ಜೀವನ ವೃತ್ತಾಂತ

ಅಲ್ಲಿಂದಿಲ್ಲಿಗೆ, ಇಲ್ಲಿಂದಲ್ಲಿಗೆ…: ಜುಲೇಖಾ ಬೇಗಂ ಜೀವನ ವೃತ್ತಾಂತ

ನನ್ನ ಬೆಳವಣಿಗೆಯನ್ನು ಅವಳಿಗಿಂತ ಚೆನ್ನಾಗಿ ಗುರುತಿಸಬಲ್ಲ ಬೇರಾರೂ ಇರಲಿಲ್ಲ. ನಾನು ಕಲಾವಿದೆಯಾಗಬೇಕೆಂದೇ ಅವಳ ಒತ್ತಾಯವೂ ಇತ್ತು. ಒಬ್ಬರಿಗಿಂತ ಇಬ್ಬರು ಲೇಸೆಂಬ ಮಾತು ನನಗೆ ಹೊಂದಿದ್ದೇ ಈಗ! ‘ಐದು ವರ್ಷದ ಹಿಂದೆಯೇ ನೀನು ಪಾತ್ರದಲ್ಲಿ ಕಳೆದುಹೋಗುತ್ತಿದ್ದೆ. ಇನ್ನು ಇಷ್ಟೆಲ್ಲ ಕಷ್ಟಪಟ್ಟು, ನಾಟಕಗಳಲ್ಲಿ ಅಭಿನಯಿಸಿ ಅನುಭವ ಪಡ್ಕೊಂಡಿದ್ದೀಯಾ. ದೊಡ್ಡ ಮಟ್ಟಕ್ಕೆ ಬೆಳೀಬೇಕು ಕಣೆ’ ಎಂದು ಬೆಂಬಲವಾಗಿ ನಿಂತು, ‘ನೀನು ಮಾಂಡ್ರೆಯಂತಹ ದೊಡ್ಡ ಕವಿಗಳ ಜೊತೆಯಲ್ಲಿ ಪಳಗಬೇಕು. ಕಲಿಯೋಕೆ ಸಾಕಷ್ಟಿರುತ್ತೆ’ ಅಂತಲೂ ದಾರಿ ತೋರಿದಳು.
ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ”

read more
ಹಾರಿಹೋದ ಪ್ರಾಣಪಕ್ಷಿ!: ಜುಲೇಖಾ ಬೇಗಂ ಜೀವನ ವೃತ್ತಾಂತ

ಹಾರಿಹೋದ ಪ್ರಾಣಪಕ್ಷಿ!: ಜುಲೇಖಾ ಬೇಗಂ ಜೀವನ ವೃತ್ತಾಂತ

ಆವತ್ತು ಸೋಮವಾರ. ಮುರುಡಯ್ಯನವರು ಸ್ನಾನ ಮುಗಿಸಿಕೊಂಡು ಕಾಲುದಾರಿಯನ್ನು ಹತ್ತಿ ಮೇಲೆ ಬರುತ್ತಿದ್ದರು. ‘ಅಂಕದ ಪರದೆ ಜಾರಿದ ಮೇಲೆ, ನಾಟಕವಿನ್ನು ಉಳಿದಿಹುದೇ?’ ಎಂದು ಹಾಡುತ್ತಾ ಮುರುಡಯ್ಯನವರು ಹೆಬ್ಬೆಟ್ಟು ಎಡವಿ ಧೊಪ್ಪೆಂದು ಕೆಳಗೆ ಬಿದ್ದಿದ್ದರು. ಅದನ್ನು ನೋಡಿದ ಕಂಪೆನಿಯ ಕೆಲವರು ಎತ್ತುವುದಕ್ಕೆಂದು ಮುಂದಾದರು. ಆಗ ಮುರುಡಯ್ಯನವರು ಏನೂ ಇಲ್ಲವೆಂಬಂತೆ ತಲೆಯಾಡಿಸುತ್ತಾ, ‘ವಹಿಸಿದ ಪಾತ್ರ ತೀರಿದ ಮೇಲೆ’ ಎಂದಿದ್ದಷ್ಟೇ, ಪ್ರಾಣಪಕ್ಷಿ ಹಾರಿಹೋಗಿತ್ತು.
ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ

read more
ಅಂದುಕೊಂಡಿದ್ದು ಆಗೇಹೋಯಿತು!: ಜುಲೇಖಾ ಬೇಗಂ ಜೀವನ ವೃತ್ತಾಂತ

ಅಂದುಕೊಂಡಿದ್ದು ಆಗೇಹೋಯಿತು!: ಜುಲೇಖಾ ಬೇಗಂ ಜೀವನ ವೃತ್ತಾಂತ

ಜುಬೇದಾಬಾಯಿ ಅವರನ್ನು ಮಾಕನೂರು ಭರಮಣ್ಣ ಅವರು ಅಪಹರಿಸಲು ಸಾಧ್ಯವಿರಲಿಲ್ಲ. ಅವರು ಪಾತ್ರಕ್ಕಾಗಿ ಹುಡುಕಾಡುತ್ತಿದ್ದರು; ನಾನೂ ಕಾಯುತ್ತಿದ್ದೆ. ರೋಗಿ ಬಯಸುವುದಕ್ಕೂ ವೈದ್ಯ ಹೇಳುವುದಕ್ಕೂ ಸರಿ ಹೋದರೆ ಇನ್ನೇನು? ಖುಷಿಯಿಂದ ಕುಪ್ಪಳಿಸಿದೆ. ಎರಡು ನಿಮಿಷ ಭೂಮಿಕೆಯಲ್ಲಿ ಇರುತ್ತಿದ್ದೆನೊ ಇಲ್ಲವೊ, ಆದರೆ ಆನಂದಿಸಿದೆ. ಮಾತಿಲ್ಲದ ಮುಖ್ಯ ಪಾತ್ರ ನನಗೆ ಸಿಕ್ಕಿತಲ್ಲಾ ಎಂಬ ಸಂಭ್ರಮ. ಉಳಿದವರೆಲ್ಲ, ‘ನಿಂಗೆ ಕೊಂಬು ಬರಬಾರದವ್ವಾ’ ಎಂದು ಛೇಡಿಸುತ್ತಾ, ನಗಿಸುತ್ತಿದ್ದರು.
ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ” ಹನ್ನೆರಡನೆಯ ಕಂತು

read more
ಕನಸು, ಕನವರಿಕೆ: ಜುಲೇಖಾ ಬೇಗಂ ಜೀವನ ವೃತ್ತಾಂತ

ಕನಸು, ಕನವರಿಕೆ: ಜುಲೇಖಾ ಬೇಗಂ ಜೀವನ ವೃತ್ತಾಂತ

ನಾನು ಬಹುವಾಗಿ ಇಷ್ಟಪಡುತ್ತಿದ್ದ ಜುಬೇದಾಬಾಯಿ, ನನ್ನನ್ನು ಕಂಡೊಡನೆ ‘ಎಷ್ಟು ಕ್ಯೂಟ್ ಅಯ್ತಲ್ಲ ಈ ಹುಡ್ಗಿ!’ ಎಂದು ಕೆನ್ನೆಗಿಂಡಿ, ಮುತ್ತಿಟ್ಟರು. ಕಳೆದುಹೋದೆ; ಆಕಾಶಕ್ಕೇರಿಬಿಟ್ಟೆ. ಆವತ್ತಿಡೀ ಕೆಳಗಿಳಿದಿದ್ದರೆ ಕೇಳಿ. ಹೇಮರೆಡ್ಡಿ ಮಲ್ಲಮ್ಮ ನಾಟಕವೆಂದರೆ ನನಗೂ ಉತ್ಸಾಹ ಹೆಚ್ಚಿರುತ್ತಿತ್ತು. ಏಕೆಂದರೆ ಅದೊಂದೇ ನಾಟಕದಲ್ಲಿ ನನಗೆ ವೇದಿಕೆಯೇರುವ ಅವಕಾಶ ಸಿಗುತ್ತಿದ್ದದ್ದು. ಮದುವೆ, ಉಡಿ ತುಂಬುವ ಗುಂಪು ದೃಶ್ಯಗಳಲ್ಲಿ ನಾನೂ ಇರುತ್ತಿದ್ದೆ. ಗುಂಪೋ ಪ್ರತ್ಯೇಕವೋ, ಜನ ನನ್ನ ನೋಡಿ ಗುರುತಿಸುತ್ತಾರೋ ಇಲ್ಲವೋ, ನನಗೆ ಇವೆಲ್ಲವೂ ಗೌಣ.
ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ” ಹನ್ನೊಂದನೆಯ ಕಂತು

read more
ಬಣ್ಣ ಹಚ್ಚುವ ಆಸೆಯೂ… ನನ್ನ ಅರಣ್ಯರೋಧನವೂ: ಜುಲೇಖಾ ಬೇಗಂ ಜೀವನ ವೃತ್ತಾಂತ

ಬಣ್ಣ ಹಚ್ಚುವ ಆಸೆಯೂ… ನನ್ನ ಅರಣ್ಯರೋಧನವೂ: ಜುಲೇಖಾ ಬೇಗಂ ಜೀವನ ವೃತ್ತಾಂತ

ಒಂಬತ್ತು ವರ್ಷದವಳಾದ ನನ್ನ ಕೈ ಬೆರಳುಗಳು ಇನ್ಹೇಗೆ ಇರುತ್ತದೆ ಹೇಳಿ! ಎಳೆಯ ಕೈಗಳಿಂದಲೇ ಆದಷ್ಟು ತೊಳೆದೆ. ಅವರಿಗೆ ಸಮಾಧಾನ ನೀಡಲಿಲ್ಲ. ‘ಆಯ್ತು, ಪರವಾಗಿಲ್ಲ ಇನ್ನೊಂದು ಅವಕಾಶ’ ಎಂದು ನಾಟಕದ ಕರಪತ್ರ ಕೊಡುವುದಕ್ಕೆ ಮತ್ತೆ ಅಂಟಿಸುವುದಕ್ಕೆ ಹೋಗೆಂದರು. ಇರುವ ಕೆಲಸಗಳನ್ನು ಬೇಗ ಮುಗಿಸಿ, ಸಮಯ ಹೊಂದಿಸಿಕೊಂಡು ಹೋಗುತ್ತಿದ್ದೆ. ‘ನಮ್ ನಾಟ್ಕಕ್ ಬನ್ರಿ’ ಎಂದು ಕೂಗಿ, ಕರೆದು ಹೆಚ್ಚುವರಿ ಕೆಲಸಗಳನ್ನೂ ಮಾಡುತ್ತಿದ್ದೆ. ಗೌರಿ ಪಾತ್ರವನ್ನು ಕಂಡು ಕಂಡು, ಸಂಭಾಷಣೆಗಳೆಲ್ಲ ಬಾಯತುದಿಯಲ್ಲೇ ಇತ್ತು. ಅಷ್ಟೇ ಅಲ್ಲ, ಪಾತ್ರಕ್ಕೆ ಬೇಕಾದ ವೈಯ್ಯಾರವನ್ನೂ ಮಾಡುತ್ತಿದ್ದೆ.
ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ”

read more
ನಾನೆಂಬ ‘ನನ್ನ’ನ್ನು ಅಳಿಸುವ ಆಧ್ಯಾತ್ಮಿಕ ಜಗತ್ತು: ಜುಲೇಖಾ ಬೇಗಂ ಜೀವನ ವೃತ್ತಾಂತ

ನಾನೆಂಬ ‘ನನ್ನ’ನ್ನು ಅಳಿಸುವ ಆಧ್ಯಾತ್ಮಿಕ ಜಗತ್ತು: ಜುಲೇಖಾ ಬೇಗಂ ಜೀವನ ವೃತ್ತಾಂತ

ಕುರ್ಚಿ ಅಡಿಗಳಲ್ಲಿ, ನೆಲ ಮತ್ತು ಚಾಪೆಯ ಸ್ಥಳಗಳನ್ನು ಗುಡಿಸಿ ಸ್ವಚ್ಛಗೊಳಿಸುವುದೆಂದರೆ ಬರೋಬ್ಬರಿ ಎರಡು ಗಂಟೆಗಳ ಕೆಲಸ. ನನ್ನ ಎಳೆ ರಟ್ಟೆಯಲ್ಲಿದ್ದ ಶಕ್ತಿಯೆಲ್ಲವೂ ಸೋರಿ ಹೋದಂತೆ ಅನಿಸುತ್ತಿತ್ತು. ನಟಿ ಫ್ಲೋರಿನಾ ಬಾಯಿಯವರದ್ದೇ ಮೇಲುಸ್ತುವಾರಿ. ‘ಇನ್ನೂ ಆಗಿಲ್ಲವಾ?’ ಎಂದು ಅಧಿಕಾರ ಸಾಧಿಸುವ ಮಾತುಗಳನ್ನೇ ಪ್ರಶ್ನೆಯಾಗಿ ಕೇಳುತ್ತಿದ್ದರು. ಅಂದಹಾಗೆ, ಇದೆಲ್ಲದರ ನಡುವೆ ಅವರ ಸಾಕಿದ ಮಗಳು ದೂರದ ಹಾಸ್ಟೆಲ್‌ನಲ್ಲಿ ಓದುತ್ತಿದ್ದಳು. ರಜೆಗೆಂದು ಬಂದಾಗ ನನ್ನನ್ನು ಕಂಡಳು. ಆಡಲು ಜೊತೆಯಾಗುತ್ತಾಳೆ ಎಂದುಕೊಂಡಿದ್ದಳೋ ಏನೊ, ಅದಕ್ಕಾಗಿ ನನ್ನ ಬರುವಿಕೆಯನ್ನೇ ದೂರದಲ್ಲೇ ನಿಂತು ಕಾಯುತ್ತಿದ್ದಳು.
ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ”

read more
ಅಭಿಮಾನಿಗಳ ಆಯರಿಯೂ, ಅಮ್ಮ ಹಾಕುತ್ತಿದ್ದ ಬರೆಗಳೂ….: ಜುಲೇಖಾ ಬೇಗಂ ಜೀವನ ವೃತ್ತಾಂತ

ಅಭಿಮಾನಿಗಳ ಆಯರಿಯೂ, ಅಮ್ಮ ಹಾಕುತ್ತಿದ್ದ ಬರೆಗಳೂ….: ಜುಲೇಖಾ ಬೇಗಂ ಜೀವನ ವೃತ್ತಾಂತ

ಒಂದೊಂದು ಪ್ರಯೋಗದಲ್ಲೂ ಲೋಹಿತಾಶ್ವನ ಪಾತ್ರವನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೆಚ್ಚುಮಾಡಿಕೊಳ್ಳುತ್ತಿದ್ದೆ. ಜನರೆಲ್ಲ ಮನೆಗೆ ಬರಲು ಶುರುವಿಟ್ಟರು. ಭಾಗಮ್ಮನವರು ಇಂತಹದಕ್ಕೆಲ್ಲ ಸೊಪ್ಪೇ ಹಾಕುತ್ತಿರಲಿಲ್ಲ. ಎಂಟು ವರ್ಷ ಮೀರಿದಂತೆ ದೇಹ ಬದಲಾವಣೆಯಾಗುತ್ತಿತ್ತು. ನನ್ನ ಮುಖ, ಗಲ್ಲ, ಎದೆ, ಕೈ ತೋಳುಗಳು, ಇಡೀ ದೇಹವೇ ಅಗಲಿಸುತ್ತಿದ್ದ ವಯಸ್ಸು. ಅದಕ್ಕಾಗೋ ಅಥವಾ ಅಸೂಯೆಯಿಂದಲೋ ನಾನ್ಯಾರ ಬಳಿಯಾದರೂ ಮಾತಿಗೆಂದು ನಿಂತರೂ ಬೈದು, ಹೊಡೆದು ರಾದ್ಧಾಂತ ಮಾಡುತ್ತಿದ್ದರು.
ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ” ಎಂಟನೆಯ ಕಂತು

read more
ಛಡಿ ಚಂ ಚಂ….: ಜುಲೇಖಾ ಬೇಗಂ ಜೀವನ ವೃತ್ತಾಂತ

ಛಡಿ ಚಂ ಚಂ….: ಜುಲೇಖಾ ಬೇಗಂ ಜೀವನ ವೃತ್ತಾಂತ

ಗಂಟಲಿನಿಂದ ಅದೆಷ್ಟೇ ಉಸಿರೆಳೆದರೂ, ನಾಲಗೆಯನ್ನು ಹೊರಳಿಸಿ ಉರುಳಿಸಿದರೂ ಊಹೂಂ, ಹಾಲು ಹಣ್ಣು ಬರಲೊಲ್ಲದು. ಅವರೂ ಹಿಡಿದ ಪಟ್ಟು ಬಿಡುವಂತೆ ಕಾಣಲಿಲ್ಲ. ಪಕ್ಕದಲ್ಲಿ ಪುಂಡಿ ಸೊಪ್ಪನ್ನು ಬಿಡಿಸಿಟ್ಟಿದ್ದರು. ಆ ಪುಂಡಿ ಕೋಲು ದಪ್ಪವಾಗಿರುತ್ತದೆ. ಮುಂದೇನು ಆಗಿರಬಹುದು ಹೇಳಿ? ಅನುಮಾನವೇ ಬೇಡ, ಬೆನ್ನಿಗೆ ಎರಡೇಟು ಬಾರಿಸಿದರು. ಚುರ್ ಎಂದು ಬಿದ್ದ ಏಟಿಗೆ ಕಣ್ಣಲ್ಲಿ ನೀರು ಜಿನುಗಿಸಿತು.
ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ” ಏಳನೆಯ ಕಂತು

read more
ಹೊಸ ಬದುಕಿಗೆ ಬಿದ್ದ ಬುನಾದಿ: ಜುಲೇಖಾ ಬೇಗಂ ಜೀವನ ವೃತ್ತಾಂತ

ಹೊಸ ಬದುಕಿಗೆ ಬಿದ್ದ ಬುನಾದಿ: ಜುಲೇಖಾ ಬೇಗಂ ಜೀವನ ವೃತ್ತಾಂತ

ಬಿಡುವಿದ್ದಾಗೆಲ್ಲ ಅವರ ಮನೆಗೆ ಹೋಗುವುದು ಸಾಮಾನ್ಯವಾಯಿತು. ಸುಮ್ಮನಿರುವ ಗೆಜ್ಜೆ ನನ್ನ ಮನಸ್ಸಲ್ಲೇನೊ ಸದ್ದು ಮಾಡಿದರಂತೆ. ‘ನಾನೂ ಗೆಜ್ಜೆ ಕಟ್ಬೇಕು. ಕಟ್ರಿ’ ಎಂದು ಅಲವತ್ತುಕೊಂಡೆ. ‘ಹಾಗೆಲ್ಲ ಕಟ್ಬಾರ್ದವ್ವಾ, ದೇವ್ರಿಗೆ ಪೂಜೆ ಮಾಡಿ ಕಟ್ಟೋದು ಗೊತ್ತೇನು?’ ಎಂದು ಸುಮ್ಮನಿರಿಸಲು ನೋಡಿದರು. ಬಿಡುವವಳಲ್ಲ ನಾನು, ‘ಹಾಂ, ನಾನೂ ಪೂಜೆ ಮಾಡ್ತೇನಿ. ಕಟ್ರಲಾ’ ಎನ್ನುತ್ತಿದ್ದೆ. ನನ್ನ ಚಾಲಾಕಿತನ ಕಂಡು ನಕ್ಕು, ತಲೆ ಬಡಿದುಕೊಂಡು, ‘ನಿಮ್ಮವ್ವ ಬಿಟ್ಟಾಳ ನಮ್ಮನ್ನ, ಕಸಬರಿಕಿ ತಗೊಂಡು ಓಡ್ಸ್ಕೋತಾ ಬರ್ತಾರ’ ಎಂದು ತಮಾಷೆ ಮಾಡಿಬಿಡುತ್ತಿದ್ದರು.
ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ”

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ