Advertisement

ಸರಣಿ

ಬ್ಯಾಟಿ ಬಸಮ್ಮನ ಕತೀ ಕೇಳ್ರಿ…: ಸುವರ್ಣ ಚೆಳ್ಳೂರು ಸರಣಿ

ಬ್ಯಾಟಿ ಬಸಮ್ಮನ ಕತೀ ಕೇಳ್ರಿ…: ಸುವರ್ಣ ಚೆಳ್ಳೂರು ಸರಣಿ

ನಾನು ಹಿಂಗ ನನ್ನ ಬದುಕನ್ನ ನಾನಾ ಕಟ್ಟಿಗ್ಯಂಡು ದುಡ್ಯಾಕತೀನಿ, ಹೆಣಮಕ್ಕಳಂದ್ರ ಬರೀ ಅಂದ ಚಂದ ಮೈ ಬಣ್ಣ ಅನ್ಕೊಂಡಿರೋರ್ನ ಮಿರ್ಚಿನ ಬಿಸಿ ಎಣ್ಯಾಗ ಎದ್ದಿದಂಗ ಎದ್ದಿ ಕಳಸ್ತಿನಿ, ದಾರಿಯೊಳಾಗ ದಿಕ್ಕಿರಲಾರದ ಸಿಕ್ಕ ಈ ರಾಮಪ್ಪಗೂ ನನಗೂ ಕತಿ ಕಟ್ಟತಾರ ಆದ್ರ, ತಲಿ ಸರಿ ಇಲ್ಲದಿರೊ ಆತಗ ಬೇಕಾಗಿರಾದು ಎರಡೊತ್ತಿನ ಊಟ ಅಷ್ಟ! ಎರಡಕ್ಷರ ಗೊತ್ತಿರೊ ನನಗ, ಯಾವ ಜಾತಿ ಜಿಡ್ಡಿನ ಮ್ಯಾಗೂ ನಂಬಿಕಿ ಇಲ್ಲ. ಊರಿನ್ಯಾರು ಅದೆಷ್ಟSS ಕತಿ ಕಟ್ಟಿದರೂನು ನಾನು ನನ್ನ ಕತಿನ ನಾನೇ ಬರಿಯಾಕಿ’ ಅಂತ ಮತ್ತೊಮ್ಮೆ ಜೋರಾಗಿ ನಗತೊಡಗಿದ್ಲು. ಆಕಿ ಮಾತ್ ಕೇಳಿ ಮೈ ಜುಮ್ಮಂದಂಗಾತು.
ಸುವರ್ಣ ಚೆಳ್ಳೂರು ಬರೆಯುವ “ಆಕಿ” ಸರಣಿಯ ಒಂಭತ್ತನೆಯ ಬರಹ

read more
ಮೆಕ್ಸಿಕೋ ದೇಶದ ಕವಿ ವಿಕ್ಟರ್ ಡಿ ಲಾ ಕ್ರೂಜ಼್ ಕಾವ್ಯ ಪರಿಚಯ: ಎಸ್. ಜಯಶ್ರೀನಿವಾಸ ರಾವ್ ಸರಣಿ

ಮೆಕ್ಸಿಕೋ ದೇಶದ ಕವಿ ವಿಕ್ಟರ್ ಡಿ ಲಾ ಕ್ರೂಜ಼್ ಕಾವ್ಯ ಪರಿಚಯ: ಎಸ್. ಜಯಶ್ರೀನಿವಾಸ ರಾವ್ ಸರಣಿ

ಜ಼ಪೊಟೆಕ್‌-ನಲ್ಲಿ ಅವರ ಭಾಷೆಯನ್ನು ‘ಡೈಡ್ಕ್ಸಾಜಾ’ (Diidxazá) ಎಂದು ಕರೆಯಲಾಗುತ್ತದೆ, ಇದು “ನಾಲಿಗೆ” ಮತ್ತು “ಮೋಡ” ಪದಗಳನ್ನು ಸಂಯೋಜಿಸಿ “ಮೋಡಗಳ ಭಾಷೆ” ಎಂಬ ಅರ್ಥ ಬರುವ ಪದವಾಗಿದೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಮೆಕ್ಸಿಕೋ (Mexico) ದೇಶದ ಜ಼ಪೊಟೆಕ್ ಮೂಲಜನಾಂಗಕ್ಕೆ ಸೇರಿದ ಜ಼ಪೊಟೆಕೋ (Zapoteco) ಭಾಷಾ ಕವಿ ವಿಕ್ಟರ್ ಡಿ ಲಾ ಕ್ರೂಜ಼್-ರವರ (Victor De La Cruz, 1948-2015) ಕಾವ್ಯದ ಕುರಿತ ಬರಹ

read more
ಕಂಚುಕುಟಿಗ: ಡಾ. ಎಸ್.ವಿ. ನರಸಿಂಹನ್‌‌ ಸರಣಿ

ಕಂಚುಕುಟಿಗ: ಡಾ. ಎಸ್.ವಿ. ನರಸಿಂಹನ್‌‌ ಸರಣಿ

ಕಂಚುಕುಟ್ಟಿಗಗಳಿಗೆ ಹಣ್ಣುಗಳೆಂದರೆ ಬಹಳ ಇಷ್ಟ, ಅದರಲ್ಲೂ ನಗರವೇ ಆಗಿರಲಿ, ಗ್ರಾಮಾಂತರ ಪ್ರದೇಶವೇ ಆಗಿರಲಿ, ಯಾವುದೇ ಮರವಿರಬಹುದು, ಅದರಲ್ಲೂ ಅತ್ತಿ, ಆಲ, ಅರಳಿ, ಬಸರಿ ಹಣ್ಣುಗಳೆಂದರೆ, ಗುಂಪಾಗಿ ಬಂದು ಔತಣ ಕೂಟದಲ್ಲಿ ಭಾಗವಹಿಸುತ್ತವೆ; ಅಲ್ಲದೆ ಕೀಟಗಳು, ಸಣ್ಣ ಜೀವಿಗಳು ಮತ್ತು ಹೂ ಮಕರಂದವೂ ಇವುಗಳ ಆಹಾರದ ಪಟ್ಟಿಯಲ್ಲಿ ಸೇರಿವೆ. ಮಹಾ ಬಕಾಸುರ ಕೂಡ! ಇವು ಮಕರಂದವನ್ನು ಹೀರುವಾಗ, ಕೊಕ್ಕಿನ ಬುಡದಲ್ಲಿರುವ ಕೂದಲಿನಲ್ಲಿ ಪರಾಗಗಳು ಅಂಟಿಕೊಳ್ಳುತ್ತವೆ.
ಡಾ. ಎಸ್.ವಿ. ನರಸಿಂಹನ್‌ ಬರೆಯುವ “ಹಕ್ಕಿಪಕ್ಷಿ ಚಿತ್ರ ಸಂಪುಟ” ಸರಣಿಯಲ್ಲಿ ಕಂಚುಕುಟಿಗ ಹಕ್ಕಿಗಳ ಕುರಿತ ಬರಹ ಇಲ್ಲಿದೆ

read more
ಸಾಹಿತಿಗಳ ಶೋಷಣೆ…: ಎಚ್. ಗೋಪಾಲಕೃಷ್ಣ ಸರಣಿ

ಸಾಹಿತಿಗಳ ಶೋಷಣೆ…: ಎಚ್. ಗೋಪಾಲಕೃಷ್ಣ ಸರಣಿ

ಈಗಲೂ ಅಂದಿನ ನಮ್ಮ ಭಂಡಾಟ ನೆನೆಸಿಕೊಂಡರೆ ಈಗಲೂ ನಾಲ್ಕು ತೆಪರಾಕಿ ನಮಗೆ ನಾವೇ ಕೊಟ್ಕೋಬೇಕು ಅನಿಸುತ್ತೆ ಸರ. ಪಾಪ ಕನ್ನಡದ ಸಾಹಿತಿಗಳು ಬಡವರು, ಕಾಸು ಕಾಸಿಗೆ ಪರದಾಡುವಷ್ಟು ಬಡವರು ಅಂತ ಗೊತ್ತಿದ್ದೂ ಅವರಿಗೆ ಸಂಭಾವನೆ ಕೊಡದೆ ಬರೀ ಅರ್ಧ ಕಪ್ ಕಾಫಿ ಎರಡು ಬಿಸ್ಕತ್‌ನಲ್ಲಿ ಅವರ ನಾಲ್ಕೈದು ಗಂಟೆ ವೇಸ್ಟ್ ಮಾಡ್ತಾ ಇದ್ದೆವು ಅನ್ನುವ ಸಂಕಟ! ಮೊದಮೊದಲು ಹೀಗೆ ಸಭೆ ನಡೆಸುವಾಗ ಮುಜುಗರ ಅಂತ ಅನಿಸುತ್ತಾ ಇರಲಿಲ್ಲ.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿ

read more
ಸುಂದರ ಕಾಡಿನ ರೋಚಕ ಕಥೆಗಳು-೧೨: ರೂಪಾ ರವೀಂದ್ರ ಜೋಶಿ ಸರಣಿ

ಸುಂದರ ಕಾಡಿನ ರೋಚಕ ಕಥೆಗಳು-೧೨: ರೂಪಾ ರವೀಂದ್ರ ಜೋಶಿ ಸರಣಿ

ಬೆಳಗಾಗುವುದೊರಳಗೆ, ಸುದ್ದಿ ಕಾಳ್ಗಿಚ್ಚಿನಂತೇ ಎಲ್ಲೆಡೆ ಹರಡಿತ್ತು. ಈಗ ತನಿಖೆ ಶುರುವಾಯಿತು. ತನಿಖೆಯಲ್ಲಿ ಹೊರಬಿದ್ದ ವರದಿ ನಿಜಕ್ಕೂ ಎಲ್ಲರನ್ನೂ ಬೆಚ್ಚಿ ಬೀಳಿಸಿತ್ತು. ಈ ಕೆಲಸ ಮಾಡಿದವನೊಬ್ಬ ದೊಡ್ಡ ರಾಜಕೀಯ ವಶೀಲಿ ಇರುವ ಮನುಷ್ಯ. ಅಲ್ಲಿಯ ತನಕವೂ ಸುತ್ತೂರಿನವರ ಕಣ್ಣಲ್ಲಿ ಆತ ಪ್ರತ್ಯಕ್ಷ ದೇವರಾಗಿದ್ದ. ಬಡವರ ಪಾಲಿನ ಕಾಮಧೇನು ಎಂದೆಲ್ಲ ಹೆಸರು ಗಳಿಸಿದ್ದ ಆತ, ಮಾಡುತ್ತಿದ್ದ ಈ ಕಳ್ಳತನದ ಕೆಲಸ ಜಗಜ್ಜಾಹೀರಾದ ದಿನ ಎಲ್ಲರೂ ಆತನನ್ನು ಮನಸಾರೆ ಶಪಿಸಿದ್ದರು.
ರೂಪಾ ರವೀಂದ್ರ ಜೋಶಿ ಬರೆಯುವ “ಹಸಿರ ಮಲೆನಾಡಲ್ಲಿ ಹಸನಾದ ಬಾಲ್ಯ” ಸರಣಿ

read more
ಅತ್ತಿ ಲಸಮಮ್ಮನೂ… ಜೂನಿ ಬೀರಮ್ಮನೂ…: ಸುವರ್ಣ ಚೆಳ್ಳೂರು ಸರಣಿ

ಅತ್ತಿ ಲಸಮಮ್ಮನೂ… ಜೂನಿ ಬೀರಮ್ಮನೂ…: ಸುವರ್ಣ ಚೆಳ್ಳೂರು ಸರಣಿ

ಇದನ್ನೆಲ್ಲಾ ಕೇಳಿದಾಗೊಮ್ಮೆ ಬೀರಮ್ಮ ಜೋರಾಗಿ ‘ಅಲಲೊ ಜಿಟ್ಟಿಗುಳ, ಬಿಳಿ ಧೋತ್ರ ಉಟ್ಗಂಡು ಮನ್ಯಾಗ ಹೆಂಡತಿ ಮಾಡಿರೊ ಅಡಿಗಿ ಉಂಡ್ಕಂತ, ಊರ್ ಒಣ ರಾಜಕೀಯ ಮಾಡಿಕ್ಯಂತ, ಅವರಿವರಿಂದ ಸುತ್ತಿಗ್ಯಂತ, ಅಜ್ಜ ಮಾಡಿದ್ದ ಆಸ್ತಿಗೆ ಜೋತಾಡಿಕ್ಯಂತ, ಊರಮಂದಿ ಬಗ್ಗೆ ಮಾತಾಡಿಕ್ಯಂತ ಊರ ಕಟ್ಟಿಮ್ಯಾಗ ಕುಂತಗಂಡು ಪಂಟ್ ಹೋಡಿತಿರಾದು ನೀವು. ನನ್ನಂಗ ದುಡದು ಉಂಡಿರೇನ್ ಯಾವತ್ತರಾ? ಅಜ್ಜ ನೆಟ್ಟಿರಾ ಆಲದ ಮರಕ್ಕ ಜೋತಾಡಾದಲ್ಲ, ನೀವು ದುಡದು ಉಣ್ಣಾದು ಕಲ್ತು ಆವಾಗ ನನ್ನ್ ಮುಂದ ಬಂದ್ ಇಂತಾ ಒಣ ಮಾತಾಡ್ರಿ ಕೇಳ್ತಿನಿ’.
ಸುವರ್ಣ ಚೆಳ್ಳೂರು ಬರೆಯುವ “ಆಕಿ” ಸರಣಿ

read more
ಉದ್ದಕೊಕ್ಕಿನ ಸೂರಕ್ಕಿ: ಡಾ. ಎಸ್.ವಿ. ನರಸಿಂಹನ್‌‌ ಸರಣಿ

ಉದ್ದಕೊಕ್ಕಿನ ಸೂರಕ್ಕಿ: ಡಾ. ಎಸ್.ವಿ. ನರಸಿಂಹನ್‌‌ ಸರಣಿ

ಉದ್ದಕೊಕ್ಕಿನ ಸೂರಕ್ಕಿಗಳು ಉದುರೆಲೆ, ಕುರುಚಲು ಕಾಡು, ಎಸ್ಟೇಟು, ಮನೆಗಳ ಸುತ್ತಮುತ್ತಲು ಬೆಳೆದ ಹೂದೋಟಗಳಲ್ಲಿ ವಾಸ ಮಾಡುತ್ತವೆ. ಉದ್ದಕೊಕ್ಕಿನ ಸೂರಕ್ಕಿಗಳು ನೆಕ್ಟರಿನೈಡೆ ಕುಟುಂಬಕ್ಕೆ ಸೇರಿದ ಇತರ ಸೂರಕ್ಕಿಗಳಂತೆ ಮಕರಂದಪ್ರಿಯ ಹಕ್ಕಿಗಳು. ಕಾಡಿನಲ್ಲಾಗಲೀ, ಎಸ್ಟೇಟು-ಹೂದೋಟವೇ ಆಗಲೀ, ಮರಗಿಡಗಳಲ್ಲಿ ಹೂವರಳಿದರೆ ಸಾಕು, ಮಕರಂದಕ್ಕಾಗಿ ಎಲ್ಲಿದ್ದರೂ ಹಾಜರು! ಮಕರಂದವನ್ನು ಹೀರುವುದಕ್ಕಾಗಿಯೇ ಹೇಳಿಸಿ ಮಾಡಿಸಿದಂತಿರುವ, ಬಾಗಿದ ಉದ್ದವಾದ ಕೊಕ್ಕು ಮತ್ತು ಕೊಳವೆಯಂತಹ ನಾಲಿಗೆ.
ಡಾ. ಎಸ್.ವಿ. ನರಸಿಂಹನ್‌ ಬರೆಯುವ “ಹಕ್ಕಿಪಕ್ಷಿ ಚಿತ್ರ ಸಂಪುಟ” ಸರಣಿಯಲ್ಲಿ ಉದ್ದಕೊಕ್ಕಿನ ಸೂರಕ್ಕಿಗಳ ಕುರಿತ ಬರಹ ಇಲ್ಲಿದೆ

read more
ಕಲೆ ಮತ್ತು ಭ್ರಾಮಕ ವಾಸ್ತವ: ಚಿತ್ರಾ ವೆಂಕಟರಾಜು ಸರಣಿ

ಕಲೆ ಮತ್ತು ಭ್ರಾಮಕ ವಾಸ್ತವ: ಚಿತ್ರಾ ವೆಂಕಟರಾಜು ಸರಣಿ

ಪ್ರತಿ ಕಲಾಭ್ಯಾಸಿಗೂ ತಾನು ಯಾವಾಗ ರಂಗದ ಮೇಲೆ ಪ್ರದರ್ಶನ ನೀಡುತ್ತೇನೋ ಎನ್ನುವ ಕಾತರ ಇರುತ್ತದೆ. ಇರಬೇಕು ಕೂಡಾ‌. ಒಮ್ಮೆ ನಾವು ರಂಗದಲ್ಲಿ ಪೂರ್ಣಪ್ರಮಾಣದ ಪ್ರದರ್ಶನ ನೀಡಿದೆವೋ ನಮ್ಮೊಳಗಿನ ಆ ಚಡಪಡಿಕೆ ಆ ಕ್ಷಣಕ್ಕೆ ಥಟ್ಟನೆ ಕಡಿಮೆ ಆಗುತ್ತದೆ. ನಮ್ಮೊಳಗೆ ಹುದುಗಿದ್ದ ಅಪಾರವಾದ ಆಸೆ, ಕಾವನ್ನು ಆ ಒಂದು ಪ್ರದರ್ಶನ ತಣಿಸಿರುತ್ತದೆ. ಮತ್ತೆ ನಮ್ಮನ್ನು ನಾವು ಅಭ್ಯಾಸಕ್ಕೆ ನಮ್ಮ ಮನಸ್ಸು ದೇಹವನ್ನು ಹುರಿಗೊಳಿಸಿಕೊಳ್ಳಲು ಕೆಲವು ಸಮಯವೇ ಬೇಕಾಗುತ್ತದೆ. ಹೀಗೆ ಒಂದು ಪ್ರದರ್ಶನ ದ ಹಿಂದೆ ಮತ್ತು ಪ್ರದರ್ಶನ ನಂತರ ಒಬ್ಬ ಕಲಾವಿದನ ಮನಸಿನಲ್ಲಿ ಇಷ್ಟೆಲ್ಲಾ ಕೆಲಸಗಳು ನಡೆದಿರುತ್ತದೆ.
ಚಿತ್ರಾ ವೆಂಕಟರಾಜು ಬರೆಯುವ “ಚಿತ್ತು-ಕಾಟು” ಸರಣಿ

read more
ಸಾಧನೆಯೇ ಮಾತಾಗಬೇಕು!: ಬಸವನಗೌಡ ಹೆಬ್ಬಳಗೆರೆ ಸರಣಿ

ಸಾಧನೆಯೇ ಮಾತಾಗಬೇಕು!: ಬಸವನಗೌಡ ಹೆಬ್ಬಳಗೆರೆ ಸರಣಿ

ಕೆಲವೊಂದರಲ್ಲಿ ಇಡೀ ಕರ್ನಾಟಕಕ್ಕೆ ನಮ್ಮ ಕಂಪೆನಿಯಲ್ಲಿ ಟಾಪರ್ ಆಗೋವಷ್ಟು ಸೇಲ್ ಮಾಡಿದ್ದೆ. ಆದರೆ ಹಲ್ಲು ನೋವಿಗೆ ಬಳಸುವ ಟೂಥ್ ಪೇಸ್ಟ್ ಒಂದರ ಸೇಲ್‌ನಲ್ಲಿ ತುಂಬಾ ಕಮ್ಮಿ ಸಾಧನೆ ಮಾಡಿದ್ದೆ. ಇದುವರೆಗೂ ಹೊಗಳಿದವರು ಈ ವಿಷಯ ಬಂದಾಗ ನನ್ನನ್ನು ಹಿಗ್ಗಾ ಮುಗ್ಗಾ ಬಯ್ದರು. ನಾನು ತುಂಬಾ ಸೆನ್ಸಿಟೀವ್ ಆಗಿ ಇದ್ದುದ್ದರಿಂದ ಅಂದು ಅವರು ನೀಡಿದ್ದ ಸುಗ್ರಾಸ ಭೋಜನವನ್ನು ಸೇವಿಸಲು ಮನಸ್ಸಾಗಲಿಲ್ಲ… ಆಗ ಬೇರೆ ಮೆಡಿಕಲ್ ರೆಪ್‌ಗಳು ಬಂದು ಇಲ್ಲೆಲ್ಲಾ ಬಯ್ಯೋದು, ಬಯ್ಸಿಕೊಳ್ಳೋದು ಕಾಮನ್. ಇವುಗಳ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು ಎಂದಾಗ ನನಗೆ ಮನಸ್ಸಿಗೆ ಸಮಾಧಾನ ಎನ್ನಿಸಿತ್ತು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಐವತ್ತೊಂಭತ್ತನೆಯ ಕಂತು ನಿಮ್ಮ ಓದಿಗೆ

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ