Advertisement
ವಸ್ತಾರೆ ಬರೆದ ದಿನದ ಕವಿತೆ

ವಸ್ತಾರೆ ಬರೆದ ದಿನದ ಕವಿತೆ

ಅಡಚಣೆ

ಕಡಲಿನ ಗೊತ್ತಿರುವ ಈ ಬದಿ ನಿಂತು
ಅಗಾಧ ದೂರದ
ಆಕಾಶದಂಚನ್ನು ನಿನ್ನೊಟ್ಟಿಗೆ ಕನಸುತ್ತಿದ್ದೆ.
ಸವೆಯುತ್ತಿತ್ತು ಹಗಲು.

ನೀರು ಮತ್ತು ಆಕಾಶ ಒಂದಕ್ಕೊಂದು
ಬೆಸೆದುಕೊಳ್ಳುವವರೆಗೆ-
ತುದಿ ಅಂತಿದ್ದಿದ್ದರೆ ಅಗೋ ಅಲ್ಲಿಯವರೆಗೆ
ಬೆಳಕೋ ಬೆಳಕು. ಆಗ ಸಂಜೆಗೆ ಚಿನ್ನದ ರೇಕು.

ತೆಕ್ಕೆಗೆ ತೆಕ್ಕೆ, ಅಗಣಿತ ಮುತ್ತು
ಗಳ ನಡುವೆ- ಕಡಲಿಗೆ ಬದಿಯೆಂಬುದಿದ್ದರೆ
ಅದು ನೆಲವೇ ಇದ್ದೀತು, ಆಕಾಶವಲ್ಲ
ಎಂದು ತಿದ್ದಿದೆ ನೀನು.

ನಿನ್ನೊಳಗೆ ಕದಡಿಕೊಂಡಿರುವ ನನಗೆ
ನಿನ್ನ ವಸ್ತುನಿಷ್ಠ ನಿಷ್ಠುರಗಳೇ
ಅಡಚಣೆ ಯಾವತ್ತಿಗೂ

(ರೇಖಾಚಿತ್ರ: ರೂಪಶ್ರೀ ಕಲ್ಲಿಗನೂರು)

About The Author

ನಾಗರಾಜ ವಸ್ತಾರೆ

ಕವಿ, ಆರ್ಕಿಟೆಕ್ಟ್ ಮತ್ತು ಕಥೆಗಾರ. ೨೦೦೨ರಲ್ಲಿ ದೇಶದ ಹತ್ತು ಪ್ರತಿಭಾನ್ವಿತ ಯುವ ವಿನ್ಯಾಸಕಾರರಾಗಿ ಆಯ್ಕೆಗೊಂಡವರಲ್ಲಿ ಇವರೂ ಒಬ್ಬರು.

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ