Advertisement
ದೀಪ್ತಿ ಭದ್ರಾವತಿ ಬರೆದ ಈ ದಿನದ ಕವಿತೆ

ದೀಪ್ತಿ ಭದ್ರಾವತಿ ಬರೆದ ಈ ದಿನದ ಕವಿತೆ

ಹೆಬ್ಬೆರಳ ಹೂವು

ನಿನ್ನೊಲವ ತುಣುಕೊಂದು ಮೈಗೆ
ಮೆತ್ತಿದ ಕ್ಷಣ
ಬಾನೆತ್ತರ ಸಾಗಿ ಸಾಗಿ
ಮೋಡಗಳ
ಬೆನ್ನಿನಲಿ ನಮ್ಮಿಬ್ಬರ
ಹೆಸರು ಬರೆಯುತ್ತೇನೆ
ಅದು ಚಿಗುರ ನಾಭಿಯೊಳಗಿಳಿಯುತ್ತದೆ
ಅದರದಲಿ ಒಳಕುದಿಗಳ
ಹೆಕ್ಕಿಕೊಳ್ಳುತ್ತೇನೆ
ಕಣ್ಣಾಲಿ ಬಿಂಬ ಚಂದ್ರಮನ ಚೂರಿಗೆ
ಮೆಲ್ಲ ಡಿಕ್ಕಿ ಹೊಡೆಯುತ್ತದೆ
ಬೆರಳ ತುದಿಯಲ್ಲಿ ಬೆಳದಿಂಗಳ
ಕಡಲು
ಚಲಿಸುತ್ತೇನೆ
ಹೀಗೆ ಹೀಗೆ ಸರಿಯುತ್ತ
ನಿನ್ನ ತೇವದ ಬೊಗಸೆಗಳಿಗೆ
ಅಂಟಿ ನಿಲ್ಲುತ್ತೇನೆ
ಮರೆತ ಹೂವುಗಳು
ನಿನ್ನ ಕಾಲ ಹೆಬ್ಬೆರಳಿನಲಿ
ಅರಳುತ್ತವೆ.
ರೆಕ್ಕೆ ಸಿಕ್ಕಿಸಿ ತುಟಿ ಹಿಗ್ಗಿಸಿ
ಅನಾಮಿಕ ರಸ್ತೆಯಲಿ
ಅಲೆಯುತ್ತೇನೆ
ತೊನೆದ ಮಳೆಯಲ್ಲಿ
ಒಣ ಬೀಜ ಮಾತು ಹೆಕ್ಕುವಾಗ
ಓಹ್ ಓಲೆಕಾರನೇ ನಿನ್ನ
ಕದಂಬ ಬಾಹುಗಳಲಿ
ನನ್ನ ನಾ ದಾಖಲಿಸಿಕೊಳ್ಳಬೇಕೆಂದು
ಕೊಳ್ಳುತ್ತೇನೆ
ಜಡಿದ ಬೀಗ ತಲೆಗೆ ಬಡಿಯುತ್ತದೆ

 

ದೀಪ್ತಿ ಭದ್ರಾವತಿ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು.
ಈಗ ಭದ್ರಾವತಿಯಲ್ಲಿದ್ದಾರೆ.
“ಅಹಲ್ಯೆಯ ಸ್ವಗತ” (ಕವನ ಸಂಕಲನ) ಗೀರು (ಕಥಾ ಸಂಕಲನ) ಪ್ರಕಟಿತ ಕೃತಿಗಳು

 

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ