Advertisement
ಹೇಮಂತ್ ಎಲ್ ಚಿಕ್ಕಬೆಳವಂಗಲ ಬರೆದ ಈ ದಿನದ ಕವಿತೆ

ಹೇಮಂತ್ ಎಲ್ ಚಿಕ್ಕಬೆಳವಂಗಲ ಬರೆದ ಈ ದಿನದ ಕವಿತೆ

ಅವಳ ಹೆಸರು

ಮರಳ ದಂಡೆಯ ಮೇಲೆ
ಅವಳ ಎರಡಕ್ಷರದ ಹೆಸರ
ಚೆಂದವಾಗಿ ಬರೆದು,
ಅಲ್ಲೇ ಚೆಲ್ಲಾಡಿದ್ದ ಕಪ್ಪೆಚಿಪ್ಪು
ನಕ್ಷತ್ರ ಮೀನುಗಳ ಹುಡುಕಿ,
ಸುತ್ತಲೂ ಪೋಣಿಸಿ ಕಣ್ಣು
ತುಂಬಿಕೊಂಡದ್ದು,
ಸಾಗರದಾಳದಷ್ಟು
ಇಳಿದಿದೆ, ಎದೆಯೊಳಗೆ

ಕೆಲವೇ ಹೊತ್ತಿಗೆ ಇವೆಲ್ಲವೂ
ಅಲ್ಲಿರಲೇ ಇಲ್ಲ ಎಂಬಂತೆ
ಅಳಿಸಿಹಾಕಿದ ಕಿಡಿಗೇಡಿ ಅಲೆ,
ಮತ್ತೆ ಮತ್ತೆ ದಡಕ್ಕೆ ಬರುತ್ತಿದೆ
ಅವಳ ಹೆಸರ ಹುಡುಕಿ..

ಕತ್ತಲಾದಾಗ ಕೈಹಿಡಿದು
ತಂಗಾಳಿಗೆ ಎದೆಯೊಡ್ಡಿ,
ದಡದಗುಂಟ ಓಡಾಡೋಣ
ಎಂದಿದ್ದವಳು..
ಅಂದಿನಿಂದಲೂ ನನಗೆ
ಸಿಕ್ಕೇ ಇಲ್ಲ ಎಂಬುದು
ಹೇಗೆ ಗೊತ್ತಾಗಬೇಕು ಅದಕ್ಕೆ?
ನನ್ನಂತೆಯೇ ದಡ್ಡನ ಹಾಗೆ
ದಿನವೂ ತಬ್ಬಲು ನೋಡುತ್ತದೆ
ಅಪ್ಪಳಿಸಿ ದಡಕ್ಕೆ..

 

ಹೇಮಂತ್ ಎಲ್. ಬೆಂಗಳೂರು ಗ್ರಾಮಾಂತರ ಜಿಲ್ಲೆಯ, ದೊಡ್ಡಬಳ್ಳಾಪುರ ತಾಲ್ಲೂಕಿನ ಚಿಕ್ಕಬೆಳವಂಗಲ ಗ್ರಾಮದವರು.
ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಪದವಿ, ಬೆವಿಕಂ ನೆಲಮಂಗಲ ವಿಭಾಗದಲ್ಲಿ ಸಹಾಯಕ ಇಂಜಿನಿಯರ್(ವಿ.) ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ವಿಜ್ಞಾನ ಮತ್ತು ಸಾಹಿತ್ಯದಲ್ಲಿ ಅಪಾರ ಆಸಕ್ತಿ. ಕಥೆ, ಕವಿತೆ, ಲೇಖನಗಳನ್ನು ಬರೆಯುವುದು ಇವರ ಹವ್ಯಾಸಗಳು.

 

ಕಲಾಕೃತಿ : ಮೋನಿ (Monet)

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

2 Comments

  1. Annappaswamy

    ಚೆನ್ನಾಗಿದೆ ಕವಿತೆ

    Reply
  2. ಜಿ ಸುಮಲತ ಉಮೇಶ್

    ತಂಬಾ ಚೆನ್ನಾಗಿದೆ… ಶೀರ್ಷಿಕೆ ಕೂಡಾ.

    Reply

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ