Advertisement
ನೂರುಲ್ಲಾ ತ್ಯಾಮಗೊಂಡ್ಲು ಬರೆದ ಈ ದಿನದ ಕವಿತೆ

ನೂರುಲ್ಲಾ ತ್ಯಾಮಗೊಂಡ್ಲು ಬರೆದ ಈ ದಿನದ ಕವಿತೆ

ಉಳಿದದ್ದು ಅರ್ಧ ಕವಿತೆ 

ಇಲ್ಲಿ ಎಲ್ಲ ಕ್ರೋಧತೆಗಳು ಹುತ್ತಗಟ್ಟಿವೆ
ಬಾಗಿಲವರೆಗೂ ಧಾವಿಸಿದ ಆಕ್ರೋಶಗಳು
ಬೀದಿಯಲಿ ಗಸ್ತು ಹೂಡಿವೆ

ನಗರದ ನಡುರಸ್ತೆಯಲಿ
ತೆವಳುವ ಇರುವೆ ಎದೆಗೂಡಿನ ಶಬ್ದ ಕೇಳಲಾಗದು ಇನ್ನು
ಅದರ ಅಂಗಾಲಿಗೆ ತಗುಲಿದ ನೆತ್ತರ ಅಳಲಿಗೆ
ರೆಕ್ಕೆಗಳಚಿದ ಸಮೀರನ ತಣ್ಣನೆ ಕೊರೆತ

ಬದುಕು ಉರಿದು ಹೋದ ಅರ್ಧ ಸಿಗರೇಟಿನ ಕಿಟ್ಟಂತೆ
ಇನ್ನರ್ಧ ಕವಿತೆಗಳಲ್ಲದ ಕವಿತೆಗಳಲಿ
ಅವಿತು ಜೀವ ಚೈತನ್ಯದ ಹಾಡು ಹಾಡಿದಂತೆ

ಏನಾದರೇನಂತೆ
ಅರಾಜಕತೆಯ ದಿನಗಳಲಿ ನಾಲಿಗೆ ಉದ್ದ ಸ್ವಾಮಿ
ಮುರಿದು ಹೋದ ಕೊಂಬೆ ಮೇಲಿನ ಹಕ್ಕಿಯ
ಜೀವಸ್ವರ ಕೇಳಲು ಕಿವಿಗಳು ಎಲ್ಲಿ

ಕವಿಯ ಎಲ್ಲ ಭಾವಗಳು ಅಭಾವಗಳಲ್ಲೇ
ಜೀವ ಕಳೆದುಕೊಳ್ಳುತ್ತಿವೆ
ಉಳಿದದ್ದು ಅರ್ಧ ಕವಿತೆ ಮಾತ್ರ
ಮತ್ತೆ ಬದುಕು ಅಷ್ಟೇ…

ನೂರುಲ್ಲಾ ತ್ಯಾಮಗೊಂಡ್ಲು ಬೆಂಗಳೂರು ಗ್ರಾಮೀಣ ಜಿಲ್ಲೆ ತ್ಯಾಮಗೊಂಡ್ಲುವಿನವರು
ನ್ಯಾಯಾಂಗ ಇಲಾಖೆಯಲ್ಲಿ ಸೇವೆಸಲ್ಲಿಸುತ್ತಿದ್ದಾರೆ
“ಬೆಳಕಿನ ಬುಗ್ಗೆ” ಮತ್ತು “ನನ್ನಪ್ಪ ಒಂದು ಗ್ಯಾಲಕ್ಸಿ” ಇವರ ಪ್ರಕಟಿತ ಕವನ ಸಂಕಲನಗಳು.
ಕವಿತೆ, ಕಥೆ, ವಿಮರ್ಶೆಯಲ್ಲಿ ಆಸಕ್ತಿ.

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

4 Comments

  1. Bi

    ಅರ್ಥಪೂರ್ಣ ಕವಿತೆ

    Reply
    • ನೂರುಲ್ಲಾ ತ್ಯಾಮಗೊಂಡ್ಲು

      ತುಂಬ ಧನ್ಯವಾದಗಳು ಬೀಜೀ…

      Reply
  2. Madhuraja

    ಮನಸಿನ ಭಾವನೆಗಳು ಅಭಾವದಲ್ಲೆ ಕಳೆದುಹೋಗುದಿದೆ
    ??

    Reply
    • ನೂರುಲ್ಲಾ ತ್ಯಾಮಗೊಂಡ್ಲು

      ಪ್ರತಿಕ್ರಿಯೆಗೆ ಧನ್ಯವಾದಗಳು ಮಧುರಾಜ ಸರ್…

      Reply

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ