Advertisement
ಮನು ಗುರುಸ್ವಾಮಿ ಬರೆದ ಈ ದಿನದ ಕವಿತೆ

ಮನು ಗುರುಸ್ವಾಮಿ ಬರೆದ ಈ ದಿನದ ಕವಿತೆ

ಹೆಣ ಬೀಳಬಹುದು!

ನಡೆದಿತ್ತು ಘಟನೆ; ಕೇಳಿತ್ತು ಕಿವಿ
ಗ್ರಹಚಾರ ಕೆಟ್ಟಿರಬಹುದು;
ಅಪ್ಪನ ನಿನಾದ!
ಶಾಸ್ತ್ರ ಕೇಳಲೇಬೇಕು
ಅವ್ವನ ವಾದ.

ಕವಡೆ ಬಿಡು ಹೀಗೆ,
ನಾಲ್ಕು ಬಿತ್ತು..
ಹೆಣ ಬೀಳಬಹುದು
ಶಾಂತಿ ಮಾಡಿಸಬೇಕು!

ಮೊನ್ನೆ ಮಚ್ಚೆತ್ತಿದ್ದ ಬಾಮೈದ?!
ಅವನೇ… ಅವನಿಂದಲೇ
ಗ್ರಹಚಾರ…
ಹುಣಸೆಮರದ ಗುಟ್ಟು
ಸುತ್ತಿ ಸುಳಿದು ಬಾ ಮಡಿಯುಟ್ಟು!

ಕವಡೆ ಮಾತು ಸುಳ್ಳಾಗದು ಕಂದ
ಇಡು ಕಾಣಿಕೆ, ಬಿಡು ಗಾಡಿ
ವಾರ ಕಳೆಯುವುದರೊಳಗೆ
ವಾತಾವರಣ ಶಾಂತ !

ಸಾವಿರ ಸುಲಿದ; ಮನೆಗೆ ನಡೆದೆವು
ಅದೋ.. ಆ ಪೂಜಾರಿ ಬಂದಿದ್ದ
ನಿನಗೂ ಬಾಮೈದನಿಗೂ ಜಗಳವಂತೆ;
ವಿಚಾರಿಸಿ ಹೋದ ಹೀಗೆ!
ಪಕ್ಕದ ಮನೆಯವಳು ನುಡಿದಳು

ನನ್ನದೇ ಮನೆಯ ಕಥೆ ಕೇಳಿ
ಕವಡೆ ತೂರಿ ಭವಿಷ್ಯ ನುಡಿದವ
ಮತ್ತೊಂದು ಗೋಡೆಗೆ ಕಿವಿಯಾಗಿದ್ದ ಕದ್ದು,
ನಾಳೆ ಆ ಮನೆಯ ಭವಿಷ್ಯ
ಹೇಳಬಾರದೆ ಖುದ್ದು!

About The Author

ಮನು ಗುರುಸ್ವಾಮಿ

ಮನು ಗುರುಸ್ವಾಮಿ ಮೂಲತಃ ಮೈಸೂರು ಜಿಲ್ಲೆಯ ತಲಕಾಡಿನವರು. ಪ್ರಸ್ತುತ ಬೆಂಗಳೂರಿನ ವಿದ್ಯಾವನ ಪಿಯು ಮತ್ತು ಪದವಿ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಿಬ್ಬೆರಗು (ನಾಟಕ), ಅವಳೂ ಕತೆಯಾದಳು (ನೀಳ್ಗತೆ), ಕಲ್ಲು ದೇವರು ದೇವರಲ್ಲ (ಸಂಶೋಧನಾ ನಿಬಂಧ), ಗಾಂಧಿ ನೀ ನನ್ನ ಕೊಂದೆ (ನಾಟಕ) ಇವರ ಪ್ರಕಟಿತ ಕೃತಿಗಳು. ನಿನ್ನ ಇಚ್ಛೆಯಂತೆ ನಡೆವೆ (ಲೇಖನ ಸಂಕಲನ), ವ್ಯಭಿಚಾರಿ ಹೂವು ( ಕವನ ಸಂಕಲನ) ಅವಳು ಮತ್ತು ಸಾವು (ಗೀಚು ಬರಹ), ಹುಡುಗಿಯರ ಸೇಫ್ಟಿಪಿನ್ ಅಲ್ಲ ಹುಡುಗರು ( ವ್ಯಕ್ತಿತ್ವ ವಿಕಸನ), ಮೈಮನ ಮಾರಿಕೊಂಡವರು (ನೀಳ್ಗತೆ) ಪ್ರಕಟಣಾ ಹಂತದಲ್ಲಿವೆ. ಗ್ರಾಮೀಣ ಪ್ರದೇಶದಲ್ಲಿನ ಬಡಮಕ್ಕಳ ಅನುಕೂಲಕ್ಕಾಗಿ ಕುವೆಂಪು ಪುಸ್ತಕ ಮನೆ ಎಂಬ ಹೆಸರಿನ ಗ್ರಂಥಾಲಯವನ್ನು ಸ್ಥಾಪಿಸಿದ್ದಾರೆ.

Leave a comment

Your email address will not be published. Required fields are marked *

ಜನಮತ

ಬದುಕಲು ನಿಮಗೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ