Advertisement
ಅಭಿಷೇಕ ಬಳೆ ಮಸರಕಲ್ ಬರೆದ ಗಜಲ್

ಅಭಿಷೇಕ ಬಳೆ ಮಸರಕಲ್ ಬರೆದ ಗಜಲ್

ಗಜಲ್

ನಿನ್ನ ಕಣ್ಣ ಬಟ್ಟಲ ಬೆಳಕಿರಲು ಹಗಲಿಗೆ ಸೂರ್ಯನೇತಕೆ
ಹಿತವಾದ ಮುಗುಳುನಗೆ ಇರಲು ರಾತ್ರಿಗೆ ಚಂದಿರನೇತಕೆ

ತುಟಿಯ ಹನಿಯಲ್ಲಿ ಮಧುವಿರಲು ಮಧು ಶಾಲೆಯೇತಕೆ
ಅಂದದ ನಡುವು ಚೆಂದಾಗಿ ಕಾಡುತಿರಲು ಕಾಮನಬಿಲ್ಲೇತಕೆ

ಮಾತಲ್ಲೇ ಸವಿಜೇನು ತುಂಬಿರಲು ಆ ಮಧುವೇತಕೆ
ಏನೊಂದು ಲೋಪವಿಲ್ಲದ ಪುತ್ಥಳಿ ನೀನು ಕುಂಚವೇತಕೆ

ಮನದಿ ಒಲವ ಹಣತೆ ಬೆಳಗುತಿರಲು ನಕ್ಷತ್ರಗಳೇಕೆ
ನೀನಿಲ್ಲದ ಊರಲ್ಲಿ ಹಾಳಾದ ಈ ಕಾವಲೇತಕೆ

ನೀನಿಲ್ಲದ ಬರೀ ಖಾಲಿ ಜಿಂದಗಿ ಅಭಿಗೇತಕೆ
ಒಲಿದ ಜೀವಗಳು ಒಂದಾಗುವ ಖುಷಿಗೆ ಭಯವೇತಕೆ

ಅಭಿಷೇಕ್ ಬಳೆ ರಾಯಚೂರು ಜಿಲ್ಲೆಯ ಮಸರಕಲ್ ಊರಿನವರು.
ಬಿ.ಎಸ್ಸಿ, ಬಿ.ಎಡ್ ವ್ಯಾಸಂಗ ಮಾಡಿದ್ದಾರೆ
ಓದು ಮತ್ತು ಕವಿತೆ ರಚನೆ ಇವರ ಹವ್ಯಾಸಗಳು

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ