Advertisement
ಭವ್ಯ ಟಿ.ಎಸ್. ಬರೆದ ಈ ದಿನದ ಕವಿತೆ

ಭವ್ಯ ಟಿ.ಎಸ್. ಬರೆದ ಈ ದಿನದ ಕವಿತೆ

ಕನಸೊಂದು ಕೈ ಜಾರದಂತೆ….

ಚುಕ್ಕಿ ತಾರೆ ನಗುವ
ಬೆಳದಿಂಗಳ ಅಂಗಳದಲ್ಲಿ
ಕುಳಿತವಳ ಕಂಗಳು
ಕೈ ಜಾರಿದ ಕನಸೊಂದನು
ಆಗಸದಲಿ‌ ಹುಡುಕುತಿವೆ

ತಾರೆಯಂತೆ ಮಿನುಗುವ
ಹಂಬಲದ ಹೃದಯದಲಿ
ಮಡುಗಟ್ಟಿದ ನೋವು
ಅಂಬರದ ಮೌನದಲಿ
ಕರಗುತ ಮರೆಯಾಗುತಿದೆ

ಪ್ರತಿ ಇರುಳಿನ ಶೂನ್ಯತೆ
ರಮ್ಯ ಕನಸುಗಳನೆ
ಎದೆಯೊಳಗೆ ಬಿತ್ತುವಂತೆ
ಅವಳು ಎಚ್ಚೆತ್ತಿರುತ್ತಾಳೆ
ಬಾಡದಂತೆ ಕನಸ ಚಿಗುರಿಗೆ
ಕಣ್ಣಹನಿಯ ಚಿಮುಕಿಸುತ

ಪ್ರತಿ ಮುಂಜಾನೆ ಅಂಗಳದಿ
ಮೂಡುವ ರಂಗವಲ್ಲಿಯ ಚಿತ್ತಾರ
ಬಿರಿವ ಮಲ್ಲಿಗೆಯ ಕಂಪಿನಿಂದ
ಅವಳು ತನ್ನ ಕನಸಿಗೆ ಒಂದಿಷ್ಟು
ರಂಗು ತಂದು ಜೋಪಾನ
ಮಾಡುತ್ತಾಳೆ ಮಾಸದಂತೆ
ಕೈ ಜಾರದಂತೆ ಬಚ್ಚಿಡುತ್ತಾಳೆ
ಪುಟ್ಟ ಹೃದಯದಲ್ಲಿ….

ಹಕ್ಕಿ ದನಿಯ ಇಂಚರದಲ್ಲಿ
ಮೊಗ್ಗರಳುವ ಸಂಭ್ರಮದಲ್ಲಿ
ಅರುಣ ಕಿರಣದ ಹೊಳಪಿನಲ್ಲಿ
ಕವಿತೆ ಗೀಚುತ್ತಾ ಕಾಯುತ್ತಾಳೆ
ಭರವಸೆಯ ಕದ ತೆರೆಯುವ
ಹೊಸದೊಂದು ಬೆಳಗಿಗಾಗಿ

ಭವ್ಯ ಟಿ.ಎಸ್. ಕನ್ನಡ ಶಿಕ್ಷಕರು
ಸರ್ಕಾರಿ ಪ್ರೌಢಶಾಲೆ ಕಾನುಗೋಡು
ಹೊಸನಗರ, ಶಿವಮೊಗ್ಗ

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ