Advertisement

ಡಾ. ಎಸ್‌. ವಿ. ನರಸಿಂಹನ್

ದೇಮಾಜಿ ಎಂಬ ಸುಂದರ ತಾಣದಲ್ಲೊಂದು ತಂಗುದಾಣ

ಅಸ್ಸಾಮಿನ ಹಳ್ಳಿಗಳು, ತಾಲೂಕುಗಳು ಅರುಣಾಚಲ ಪ್ರದೇಶದಂತೆ ಅಲ್ಲ. ಟಾರು ಮೆತ್ತಿಸಿಕೊಂಡ ವಿಶಾಲ ರಸ್ತೆಗಳು ಪ್ರಯಾಣಿಗರಿಗೆ ಹಿತವಾಗಿವೆ. ಒಂದೊಂದೇ ಮರಗಿಡಗಳು ಕಿಟಿಕಿಯಿಂದಾಚೆಗೆ ನನ್ನಿಂದ ದೂರದೂರವಾಗುತ್ತಿರುವುದನ್ನು ನೋಡುತ್ತಲೇ ಮುಂದೆ ಹೋಗುತ್ತಿದ್ದೆ. ಅಸ್ಸಾಂ ಪೂರ್ತೀ ತುಂಬಾ ಖುಷಿ ನೀಡುವ ನೋಟವೆಂದರೆ ಅಲ್ಲಿನ ಹೆಣ್ಣು ಮಕ್ಕಳು ವಯೋಬೇಧವಿಲದೆ ಸೀರೆಗಳನ್ನುಟ್ಟು ಸೈಕಲ್‌ಗಳಲ್ಲಿ ಓಡಾಡುತ್ತಾರೆ. ರಸ್ತೆಯ, ಅಲ್ಲಿನ ಜನರ, ವಾಹನಗಳ, ಇಕ್ಕೆಲಗಳ ಹಸುರಿನ ಉಸಿರಿನಂಥಾ ಹೆಣ್ಣುಗಳು.
ಅಂಜಲಿ ರಾಮಣ್ಣ ಬರೆಯುವ ಪ್ರವಾಸ ಅಂಕಣ

Read More

ಆಪರೇಷನ್ ವಿಜಯ್ ನ ಜೀವಂತ ನೆನಪುಗಳು

ಹಾಲ್ ಆಫ್ ಫೇಂನಲ್ಲಿ ಆಪರೇಷನ್ ವಿಜಯ್ ಹೆಸರಿನಲ್ಲೇ ಒಂದು ಗ್ಯಾಲೆರಿ ತೆರೆದಿದ್ದಾರೆ. ಅಲ್ಲಿ ಕಾರ್ಗಿಲ್ ಯುದ್ಧಕ್ಕೆ ಬಳಸಲಾದ ಗನ್ನುಗಳನ್ನು ಇಡಲಾಗಿದೆ. ಮಾರ್ಗದರ್ಶನ ಮಾಡುತ್ತಿದ್ದ ಆ ಯೋಧ “ಈ ಗನ್ನ್ ಅನ್ನು ಕೈಯಲ್ಲಿ ಹಿಡಿದು ಫೋಟೋ ತೆಗೆಸಿಕೊಳ್ಳಿ” ಎಂದ. ನನ್ನ ಆನಂದಕ್ಕೆ ಮಿತಿಯೇಯಿರಲಿಲ್ಲ. ನಿಜಕ್ಕೂ ನಾನು ಆ ಘಳಿಗೆಯಲ್ಲಿ ವೈರಿಪಡೆಯನ್ನು ಸೆದೆಬಡಿದು ಬಿಡುತ್ತೇನೆ ಎನ್ನುವ ಭಾವದಿಂದ ಗನ್ನೊಂದನ್ನು ಕೈಗೆತ್ತಿಕೊಳ್ಳಲು ಹೋದೆ. ಉಹುಂ, ಆಗಲೇ ಇಲ್ಲ! ಎಷ್ಟೊಂದು ಭಾರವಿತ್ತು. ನಗರ ಜೀವನ ಶೈಲಿಗೆ ಹೊಂದಿಕೊಂಡ ನನ್ನ ತಾಕತ್ತು ಸೈನಿಕನ ಉಂಗುಷ್ಠವನ್ನೂ ಹೋಲಲು ಸೋತಿತು. ಕೊನೆಗೆ ಅಲ್ಲಿದ್ದ ಆ ಯೋಧ, ಗನ್ ಎತ್ತಿ ನನ್ನ ಕೈಯಲ್ಲಿ ತೂರಿಸಿದ, ಫೋಟೊ ಸೆರೆಹಿಡಿದ. ‘ಕಂಡಷ್ಟೂ ಪ್ರಪಂಚ’ ಅಂಕಣದಲ್ಲಿ ಅಂಜಲಿ ರಾಮಣ್ಣ ಅವರ ಲೇಖನ ಇಲ್ಲಿದೆ.

Read More

ಇಂಗ್ಲೆಂಡ್ ನ ವಿಶ್ವವಿದ್ಯಾಲಯಗಳ ಪಡಸಾಲೆಯಲ್ಲಿ

ಚಾರ್ಲ್ಸ್ ಡಾರ್ವಿನ್ ಓದಿದ್ದಾನೆ ಎನ್ನಲಾದ ಕ್ರೈಸ್ಟ್ ಕಾಲೇಜಿಗನೊಳಗೆ ಪ್ರವೇಶಿಸಿದೆ. ಅಲ್ಲಿ ಆತನ ಹತ್ತಾರು ಅಡಿಯಷ್ಟು ದೊಡ್ಡ ಅಮೃತಶಿಲೆಯ ಮೂರ್ತಿ ಇದೆ. ಕಾಲೀಜಿನಲ್ಲಿ ಇದ್ದ ಮಗನನ್ನು ನೋಡಲು ಬಂದಿದ್ದ ಆತನ ತಾಯಿಯ ಎದೆಮಟ್ಟದ ಮೂರ್ತಿಯೊಂದನ್ನೂ ಅಲ್ಲಿ ಇರಿಸಿದ್ದಾರೆ. ಅಲ್ಲಿಗೆ ನಾನು ಹೋಗಿದ್ದಾಗ ಯಾರೂ ಅಂದರೆ ಯಾರೂ ಇರಲಿಲ್ಲ, ಆದರೂ ಯಾವ ಕೋಣೆಯ, ಕಾಲೇಜಿನ ಬಾಗಿಲು ಹಾಕಿರಲಿಲ್ಲ. ಮುಖ್ಯದ್ವಾರದ ಬಳಿ ಒಬ್ಬಾತ ಒಳಹೋಗಲು ಬಯಸುವವರಿಗೆ ಒಂದು ಸಣ್ಣ ಬ್ರೋಷರ್ ಕೊಟ್ಟು ಕಳುಹಿಸುತ್ತಿದ್. ಕಂಡಷ್ಟೂ ಪ್ರಪಂಚ ಅಂಕಣದಲ್ಲಿ ಅಂಜಲಿ ರಾಮಣ್ಣ ಬರಹ.

Read More

ಪ್ರಾರ್ಥನೆಯೊಂದೇ ಆಯ್ಕೆಯಾಗಿ ಉಳಿದಾಗ…

ಆ ದಿನ ಅಲ್ಲಿ ಹಾಗೆ ಆದಾಗ ಆಕೆಗೆ ಒಳಿತಾಗಲಿ ಎಂದು ಬಯಸಿದ್ದು ಅಲ್ಲಿದ್ದ ನೂರಾರು ಮನಸ್ಸುಗಳು. ಅನುಮಾನವೇ ಇಲ್ಲ. ಆದರೆ ನನ್ನ ಗಮನ ಆಕೆಯ ಇಬ್ಬರು ಹರೆಯದ ಹೆಣ್ಣುಮಕ್ಕಳಾದ ಶ್ರದ್ಧಾ ಮತ್ತು ಪೂಜಾರೆಡೆಗೆ ಇದ್ದದ್ದೂ ಸುಳ್ಳಲ್ಲ. ಇಡೀ ಗುಂಪಿನಲ್ಲಿ ಅವರಿಬ್ಬರಿಗೇ ಇಂಗ್ಲಿಷ್ ಬರುತ್ತಿದ್ದದ್ದು. ಸ್ವಂತ ತಾಯಿ ಕುಸಿದು ಬಿದ್ದಿದ್ದಾಳೆ. ಅಪ್ಪನಿಗೆ ದಿಗ್ಭ್ರಮೆಯಾಗಿದೆ. ಪುಟ್ಟ ತಮ್ಮ ಅಳುತ್ತಿದ್ದಾನೆ. ವಯಸ್ಸಾದ ನೆಂಟರಿಷ್ಟರೆಲ್ಲಾ ಆತಂಕಗೊಂಡಿದ್ದಾರೆ. ಡಾಕ್ಟರ್‌ಗಳು ಹತ್ತು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.
“ಕಂಡಷ್ಟೂ ಪ್ರಪಂಚ” ಪ್ರವಾಸ ಅಂಕಣದಲ್ಲಿ ವಿಮಾನ ಪ್ರಯಾಣದ ಒಂದು ಭಿನ್ನ ಅನುಭವವನ್ನು ಹಂಚಿಕೊಂಡಿದ್ದಾರೆ ಅಂಜಲಿ ರಾಮಣ್ಣ

Read More

ಗಾಂಧಿತಾತನ ಜೊತೆಗೆ ಒಲಿವಿಯಾಳೂ ಸಿಕ್ಕಳು

ವಿದ್ಯಾರ್ಥಿಗಳು, ಕಲಾವಿದರು ತಮ್ಮ ಖರ್ಚು ಸರಿದೂಗಿಸಿಕೊಳ್ಳಲು ಹೀಗೆ ಸ್ವಯಂಸೇವೆ ಮಾಡುತ್ತಾರೆ ಮತ್ತು ಪಗಾರ ಪಡೆಯುತ್ತಾರೆ. ಬಹಳಷ್ಟು ಸ್ಮಶಾನಗಳಿಗೆ ಭೇಟಿ ನೀಡಿದ್ದೇನೆ. ಅವುಗಳು ಪಾರ್ಕ್‌ನಂತೆ ಬಳಸಲ್ಪಡುತ್ತವೆ. ಸ್ವಚ್ಛತೆ ಮತ್ತು ಮೌನವು ಮಾರ್ದನಿಸುತ್ತಿರುತ್ತವೆ. ಕೆಲವು ಕಡೆ ಸಮಯ ನಿಗಧಿಯಾಗಿರುತ್ತದೆ, ಆದರೆ ಬಹುಪಾಲು ಸ್ಮಶಾನಗಳಿಗೆ ಸಾರ್ವಜನಿಕರು ದಿನದ ಯಾವ ಸಮಯದಲ್ಲಿಯಾದರೂ ಹೋಗಬಹುದು, ಅಲ್ಲಿ ಕುಳಿತು ಸಮಯ ಕಳೆಯಬಹುದಾಗಿರುತ್ತದೆ.
ಅಂಜಲಿ ರಾಮಣ್ಣ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ