Advertisement

ವಿನಾಯಕ ಅರಳಸುರಳಿ

ನೈನಿತಾಲ್ ಟ್ರಿಪ್ ನಲ್ಲಿ ಭೇಟಿಯಾದ ಭಗಿನಿ ಮತ್ತು ಕವಿ

1929ರಲ್ಲಿ ಗಾಂಧೀಜಿ ಕೌಸಾನಿಗೆ ಬಂದು, ಒಂದು ಅತಿಥಿ ಗೃಹದಲ್ಲಿ 3 ತಿಂಗಳು ತಂಗಿದ್ದರು. ಅಲ್ಲಿ ಅವರು “ ಅನಾಸಕ್ತಿ ಯೋಗ” ದ ಬಗ್ಗೆ ಬರೆದ್ದದ್ದರಿಂದ ಆ ಗೆಸ್ಟ್ ಹೌಸ್ ಈಗ ಅನಾಸಕ್ತಿ ಆಶ್ರಮ ಎಂದು ಕರೆಸಿಕೊಳ್ಳುತ್ತಿದೆ. ಗಾಂಧಿ ಆಗ ಕೌಸಾನಿಯನ್ನು ‘ಸ್ವಿಟ್ಸರ್ ಲ್ಯಾಂಡ್’ ಎಂದು ಕರೆದಿದ್ದರಂತೆ. ಈಗ ಅನಾಸಕ್ತಿ ಆಶ್ರಮದಲ್ಲಿ ಮ್ಯೂಸಿಯಮ್, ಪುಸ್ತಗಳ ಸಂಗ್ರಹಾಲಯ ಮಾಡಲಾಗಿದೆ. ಸರ್ಕಾರದ ದೇಖ್‍ರೇಕಿಯಲ್ಲಿ ಇನ್ನೂ ಮೌನ ಮತ್ತು ಕಳಚಿಕೊಳ್ಳುವುದರ ಬಗ್ಗೆ ಆಸಕ್ತಿ ಹುಟ್ಟಿಸುತ್ತಾ ಸದ್ದು ಮಾಡದೆ ನಿಂತಿದೆ ಅನಾಸಕ್ತಿ ಆಶ್ರಮ.
ಕಂಡಷ್ಟೂ ಪ್ರಪಂಚ ಪ್ರವಾಸ ಅಂಕಣದಲ್ಲಿ  ಅಂಜಲಿ ರಾಮಣ್ಣ ಬರಹ ಇಂದಿನ ಓದಿಗಾಗಿ.

Read More

ತನ್ನೋಟಿ ಮಾತಾ ಆಶೀರ್ವಾದವೇ ಸೈನಿಕರಿಗೆ ಸ್ಫೂರ್ತಿ

ಇಂಡೋ-ಪಾಕ್ ಸರಹದ್ದು ನೋಡಲೇ ಬೇಕು ಎನ್ನುವ ಆಸೆ ಗುದ್ದತೊಡಗಿತು. ದೇಶಭಕ್ತಿ ಮರುಭೂಮಿಯ ಓಯಸಿಸ್ನಂತೆ ಚಿಮ್ಮುತ್ತಿತ್ತು. ಕಾಲೇಜು ದಿನಗಳಲ್ಲಿ ಎನ್.ಸಿ.ಸಿ ಜಲಸೇನೆ ವಿಭಾಗದಲ್ಲಿದ್ದೆ. ಹಿಂದೂ ಮಹಾಸಾಗರವನ್ನು ಉದ್ದಗಲಕ್ಕೂ ಈಜಿ ವರಾಹವತಾರವೆತ್ತಿ ಭಾರತ ಮಾತೆಯನ್ನು ರಕ್ಷಿಸಿಕೊಂಡು ಬಂದ್ಹಾಗೆ ಕಂಡಿದ್ದ ಕನಸು ನೆನಪಾಗುತ್ತಲೇಯಿತ್ತು. ದೇಶ ಭಕ್ತಿಯೊಂದೇ ಸ್ಥಾಯಿ ಭಾವ ಅಂದುಕೊಂಡು ಅಲ್ಲಿದ್ದ ಸೈನಿಕರನ್ನು ನೋಡುತ್ತಾ ತನ್ನೋಟಿ ಮಾತಾಳನ್ನು ‘ಬಾರ್ಡರ್ ಗೆ ಕರೆದುಕೊಂಡು ಹೋಗು ‘ ಎಂದು ಬೇಡಿಕೊಳ್ಳುತ್ತಿದ್ದೆ.‌ ಕಂಡಷ್ಟೂ ಪ್ರಪಂಚ ಅಂಕಣದಲ್ಲಿ ಅಂಜಲಿ ರಾಮಣ್ಣ ಅವರ ಬರಹ.

Read More

ಮೌಂಟ್‌ಅಬುವಿನ ಒಳಹೊರಗೆಲ್ಲ ಸುತ್ತುತ್ತಾ…

ಬೆಟ್ಟದ ದಾರಿ. ಸಂಜೆಯಾಗುವ ಮೊದಲೇ ಮೇಲೇರಬೇಕು ಎನ್ನುವ ಧಾವಂತದಲ್ಲೇ ಹೊರಟೆ. ಇಕ್ಕೆಲಗಳಲ್ಲೂ ಅರಾವಳಿ ಪರ್ವತಶ್ರೇಣಿಯ ಸ್ನಿಗ್ಧ ಸೌಂದರ್ಯಾಸ್ವಾದನೆ. ಸ್ವಪ್ನಲೋಕದ ದಾರಿಯಲ್ಲಿ ಪಯಣಿಸಿ ಸೂರ್ಯಾಸ್ತದ ವೇಳೆಗೆ ತಲುಪಿದ್ದು ಸಮುದ್ರಮಟ್ಟದಿಂದ 1200 ಮೀಟರುಗಳಷ್ಟು ಮೇಲಿರುವ, ಬೇಸಿಗೆ ಅರಮನೆಗಳ ನಗರ ಮೌಂಟಬುವನ್ನು. ಥಾರ್ ಮರುಭೂಮಿಯ ಈ ನಾಡಿಗೆ ಉಣ್ಣೆ ಬಟ್ಟೆಯನ್ನು ಹೊತ್ತಿ ಹೋಗುವ ಕಲ್ಪನೆಯೂ ನನಗಿರಲ್ಲಿಲ್ಲ. ಆದರೆ ಕಾಲಿಟ್ಟೊಡನೆ ಮೈನಡುಗಿಸಿತ್ತು ಅಲ್ಲಿನ ಹವೆ.
‘ಕಂಡಷ್ಟೂ ಪ್ರಪಂಚʼ ಪ್ರವಾಸ ಅಂಕಣದಲ್ಲಿ ಅಂಜಲಿ ರಾಮಣ್ಣ ಬರಹ

Read More

ಕಾಟ್ಸ್ ವೋಲ್ಡ್ಸ್: ಸಿಂಹದ ಒನಪಿರುವ ಕುರಿಗಳ ಸಾಮ್ರಾಜ್ಯ

ಕುರಿಯು ಸಿಂಹ ಎನಿಸಿಕೊಳ್ಳುವ ಏಕೈಕ ಜಾಗ ಕಾಟ್ಸ್ ವೋಲ್ಡ್ಸ್, ಹದಿನಾರು, ಹದಿನೇಳನೆಯ ಶತಮಾನದಿಂದಲೋ ಕುರಿ ಸಂತೆಗೆ ಪ್ರಖ್ಯಾತವಾಗಿರುವ ಜಾಗ. ಈ ರಾಜ್ಯದಂತಹಾ ಸಂಸ್ಥಾನದಲ್ಲಿ ಮೊನ್ನೆಮೊನ್ನೆಯವರೆಗೂ ಒಂದೇ ದಿನದಲ್ಲಿ ಇಪ್ಪತ್ತು ಸಾವಿರ ಕುರಿಗಳು ಮಾರಾಟವಾದ ಹೆಗ್ಗಳಿಕೆ. ಇಲ್ಲಿನ ಕುರಿಗಳು ಸಹಜವಾಗಿಯೇ ಒಮ್ಮೆಲೆ ಇನ್ನೂರು ಕಿಲೋಗ್ರಾಮ್ಗಳಷ್ಟು ಬೆಳೆಯಬಲ್ಲವು. ತಮ್ಮ ಮೈಮೇಲೆಲ್ಲಾ ಹೊನ್ನ ಬಣ್ಣದ ಕೂದಲನ್ನು ಬೆಳೆಸಿಕೊಂಡು ವಿಶ್ವದ ಗಮನವನ್ನು ತಮ್ಮೆಡೆಗೆ ಸೆಳೆದುಕೊಂಡವು ಇಲ್ಲಿನ ಕುರಿಗಳು. ‘ಕಂಡಷ್ಟೂ ಪ್ರಪಂಚ ಅಂಕಣದಲ್ಲಿ ಇಂಗ್ಲೆಂಡ್ ನ ಕುರಿ ಸಂಸ್ಥಾನದ ಕುರಿತು ಬರೆದಿದ್ದಾರೆ ಅಂಜಲಿ ರಾಮಣ್ಣ

Read More

ನೆತ್ತರ ಇತಿಹಾಸ ಕೇಳಿ, ಕೈಬಿಟ್ಟ ಬಳೆಗಳು

ಜಯದ್ವಾರದಿಂದ ಒಳಹೊಕ್ಕು ಲೋಹದ್ವಾರದಿಂದ ಹೊರಬರುವ ವ್ಯವಸ್ಥೆಯಿರುವ ಈ ಕೋಟೆ ಅನ್ನೋ ಮತ್ತೊಂದು ಜಗತ್ತನ್ನು ಅನುಭವಿಸೋದಕ್ಕೆ ಅದೆಷ್ಟು ಪುನರ್ಭೇಟಿಗಳು ಬೇಕೋ ಅಂದುಕೊಳ್ಳುತ್ತಾ, ಇತಿಹಾಸದೊಳಗಿನ ಯಾನದಾನಂದದಿಂದ ಹಗುರವಾಗಿದ್ದ ಮೈಮನಸು ಹೊತ್ತು ಕಲ್ಲು ಹಾಸಿನ ಗುಂಟ ಹೆಜ್ಜೆಯಿಡುತ್ತಾ ಹೊರ ಬರುತ್ತಿದ್ದೆ. ತಕ್ಷಣ ನನ್ನ ಬಲಗೈ ತುದಿಗಣ್ಣಿಗೆ ಕಂಡದ್ದು ಅಚ್ಚಕೆಂಪಿನ ಹದಿನೈದು ಜೊತೆ ಹಸ್ತಗಳ ಗುರುತು ಗೋಡೆಯ ಮೇಲೆ!
‘ಕಂಡಷ್ಟೂ ಪ್ರಪಂಚ’ ಪ್ರವಾಸ ಅಂಕಣದಲ್ಲಿ ಜೋಧ್‌ಪುರ ಪ್ರವಾಸದ ಕುರಿತು ಬರೆದಿದ್ದಾರೆ ಅಂಜಲಿ ರಾಮಣ್ಣ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ