Advertisement

ಕೆಂಡಸಂಪಿಗೆ

ದೇವರನ್ನು‌ ಕುರಿತು ಒಂದಿಷ್ಟು….: ಬಸವನಗೌಡ ಹೆಬ್ಬಳಗೆರೆ ಸರಣಿ

ಇತ್ತೀಚೆಗಂತೂ ದೇವರ ಆರಾಧನೆಯ ಜೊತೆ ಜೊತೆಗೆ ಪುರುಷ ಪ್ರಯತ್ನಕ್ಕೂ ಹೆಚ್ಚು ಒತ್ತು ಕೊಡಬೇಕು ಎಂದು ಕಲಿತಿದ್ದೇನೆ. ದೇವರು ಒಂಥರಾ ರಾಸಾಯನಿಕ ಕ್ರಿಯೆಯ ‘ಕ್ರಿಯಾವರ್ಧಕ’ (ಕ್ಯಾಟಲಿಸ್ಟ್) ಇದ್ದ ಹಾಗೆ ಎಂದು ನಂಬಿದ್ದೇನೆ. ವ್ಯಕ್ತಿ ತಾನು ಮಾಡುವ ಕಾರ್ಯಗಳಿಂದ ದೇವರ ಸ್ಥಾನಕ್ಕೆ ಏರಬಹುದು ಎಂದು ಹಲವು ಮಹಾನುಭಾವರ ಜೀವನದಿಂದ ತಿಳಿದುಕೊಂಡಿದ್ದೇನೆ. ಆದರೂ ಹಲವರು ದೇವರ ಹೆಸರಲ್ಲಿ ಜಗಳವಾಡುವುದನ್ನು ನೋಡಿ ವಿಚಿತ್ರ ಎನಿಸುತ್ತದೆ.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಐವತ್ತನೆಯ ಕಂತು ನಿಮ್ಮ ಓದಿಗೆ

Read More

ಪುಸ್ತಕ ಹಾಗೂ ನೋಟ್ ಪುಸ್ತಕದ ಬಗ್ಗೆ ಒಂದಷ್ಟು ಮಾತು…: ಬಸವನಗೌಡ ಹೆಬ್ಬಳಗೆರೆ ಸರಣಿ

ನನಗೆ ಟಿಸಿಹೆಚ್ ಓದುವಾಗ ನಮ್ಮೂರಲ್ಲಿದ್ದ ಒಬ್ಬರು ನನಗೆ ಅವರ ಪುಸ್ತಕಗಳನ್ನು ಉಚಿತವಾಗಿ ಕೊಟ್ಟಿದ್ದರು. ಅಲ್ಲದೇ ನಮ್ಮೂರ ಗ್ರಂಥಪಾಲಕ ವಿಜಯಣ್ಣನೂ ಕೇಳಿದಾಗ ಪುಸ್ತಕಗಳನ್ನು ಕೊಡುತ್ತಿದ್ದರು. ನನ್ನ ಓದಿಗೆ ತುಂಬಾ ಸಹಕಾರ ಮಾಡಿದರು. ಪ್ರೌಢಶಾಲೆಯಲ್ಲಿದ್ದಾನ ನನಗೆ ನನ್ನ ಸೀನಿಯರ್ ಒಬ್ಬರು ಹಳೇ ಪುಸ್ತಕಗಳನ್ನು ಕೊಡುತ್ತೇನೆ ಎಂದು ಹೇಳಿ ಮೊದಲೇ ನನ್ನ ಬಳಿ ಅಡ್ವಾನ್ಸ್ ಆಗಿ ಹಣ ಪಡೆದು ಯಾಮಾರಿಸಿದ ಘಟನೆಯನ್ನು ನಾನು ಇನ್ನೂ ಮರೆತಿಲ್ಲ. ಅಲ್ಲದೇ ಪಿಯುಸಿಯನ್ನು ಬೆಂಗಳೂರಿನಲ್ಲಿ ಓದುವಾಗ ನಮ್ಮ ಹಾಸ್ಟೆಲ್ಲಿನ ಕೆಲ ಹುಡುಗರು ಪುಸ್ತಕಗಳನ್ನು ಕದ್ದು ಆಗ ಅವೆನ್ಯೂ ರಸ್ತೆಯಲ್ಲಿದ್ದ ಸೆಕೆಂಡ್ ಹ್ಯಾಂಡ್ ಪುಸ್ತಕದಂಗಡಿಗಳಿಗೆ ಮಾರುತ್ತಿದ್ದ ಘಟನೆಗಳೂ ಇವೆ!!
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿ

Read More

ಫ್ಲಾಪ್ ಆದ ಬಲೂನಿನ ಐಡಿಯಾ: ಬಸವನಗೌಡ ಹೆಬ್ಬಳಗೆರೆ ಸರಣಿ

ನನ್ನ ಐಡಿಯಾವನ್ನು ನನ್ನ ಗೆಳೆಯರು ಒಪ್ಪಿದರು. ಐಡಿಯಾವನ್ನು ಕಾರ್ಯಗತಗೊಳಿಸಲು ಅಣಿಯಾದೆವು. ಆದರೆ ನಾವೆಷ್ಟೇ ಪ್ರಯತ್ನಿಸಿದರೂ ಬಟ್ಟೆಯನ್ನು ಬಲೂನಿನೊಳಗೆ ತೂರಿಸಲು ಆಗಲಿಲ್ಲ! ಏನೇನೋ ಪ್ರಯತ್ನ ಪಟ್ಟು ಬಟ್ಟೆಯನ್ನು ಬಲೂನಿನೊಳಗೆ ಸೇರಿಸಿದೆವು. ಆದರೆ ಬಲೂನ್ ಒಡೆದ ಕೂಡಲೆ ಬಟ್ಟೆ ಮಡಿಚಿದ ಸ್ಥಿತಿಯಲ್ಲಿರುತ್ತಿತ್ತು! ಅಂದುಕೊಂಡಂತೆ ಅಕ್ಷರ ಕಾಣುತ್ತಲೇ ಇರಲಿಲ್ಲ! ಇದನ್ನು ಸರಿ ಮಾಡಲು ಬಹಳ ಪ್ರಯತ್ನಿಸುತ್ತಾ ಸಮಯ ಕಳೆದು ಹೋದದ್ದು ತಿಳಿಯಲೇ ಇಲ್ಲ. ಅದಾಗಲೇ ಬೆಳಗಿನ ಜಾವ ಮೂರಾಗಿತ್ತು!! ನಿದ್ದೆ ಮಂಪರು ಬೇರೆ, ನನ್ನ ಯೋಜನೆ ಕೈಗೊಡದಿದ್ದುದು ಬೇರೆ. ಯಾಕಾದ್ರೂ ಕಾರ್ಯದರ್ಶಿ ಆದೆನಪ್ಪಾ ಅನಿಸ್ತು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ನಲವತ್ತಾರನೆಯ ಕಂತು ನಿಮ್ಮ ಓದಿಗೆ

Read More

ಹಾಡೋ ಹಕ್ಕಿಗೆ ಬೇಕೇ ಬಿರುದು ಸನ್ಮಾನ?: ಬಸವನಗೌಡ ಹೆಬ್ಬಳಗೆರೆ ಸರಣಿ

ಟಿಸಿಹೆಚ್ ಕಾಲೇಜಿನಲ್ಲಿ ಬಹುತೇಕರು ಇಷ್ಟಪಡುತ್ತಿದ್ದುದು ‘ಅಪುನಾ ಸರ್’ ಅವರನ್ನೇ. ಇವರನ್ನು ನಾವು ನಮ್ಮ ಕಾಲೇಜು ಮಿತಿಯಲ್ಲಿ ‘ನಡೆದಾಡುವ ವಿಶ್ವಕೋಶ’ ಎಂದೇ ಕರೆಯುತ್ತಿದ್ದೆವು. ಅವರು ಮೂಲತಃ ‘ಜೀವ ವಿಜ್ಞಾನ ಶಿಕ್ಷಕ’ ರಾಗಿದ್ದಾಗ್ಯೂ ನಮಗೆ ಅವರ ಇಂಗ್ಲೀಷ್ ಭಾಷಾ ಪ್ರಾವೀಣ್ಯತೆ, ಸಮಾಜ ವಿಜ್ಞಾನದಲ್ಲಿ ಅವರಲ್ಲಿದ್ದ ಪಾಂಡಿತ್ಯ, ಪ್ರಖರ ದೇಶಪ್ರೇಮ, ಸಮಯಪ್ರಜ್ಞೆ, ನಾಯಕತ್ವ ಗುಣ, ಪಾಠವನ್ನು ಅರ್ಥೈಸುತ್ತಿದ್ದ ರೀತಿ ನಮ್ಮನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿತ್ತು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ನಲವತ್ತೈದನೆಯ ಕಂತು ನಿಮ್ಮ ಓದಿಗೆ

Read More

ಕಲಾ ಅಸೈನ್‌ಮೆಂಟ್ ಪುರಾಣ!!!: ಬಸವನಗೌಡ ಹೆಬ್ಬಳಗೆರೆ ಸರಣಿ

ಆಗ ಈಗಿನಂತೆ ಇರಲಿಲ್ಲ. ಸಣ್ಣಪುಟ್ಟ ತಪ್ಪಿಗೂ ಅಂಕಗಳನ್ನು ಕಳೆಯಲು ನೋಡಲಾಗುತ್ತಿತ್ತು!! ಆಗ ತಿಂಗಳಿಗೊಮ್ಮೆ ಕಿರುಪರೀಕ್ಷೆಗಳು ಇರಲಾಗುತ್ತಿತ್ತಾದರೂ ಆ ಅಂಕಗಳನ್ನು ವಾರ್ಷಿಕ ಪರೀಕ್ಷೆಯ ಅಂಕಗಳಿಗೆ ಲೆಕ್ಕಕ್ಕೆ ತೆಗೆದುಕೊಳ್ಳುತ್ತಿರಲಿಲ್ಲ. ಸೆಮಿಸ್ಟರ್ ಪದ್ಧತಿ ಇರಲಿಲ್ಲ. ಇಡೀ ವರ್ಷ ಮಾಡಿದ ಪಾಠಗಳನ್ನು ಒಳಗೊಂಡ ವಾರ್ಷಿಕ ಪರೀಕ್ಷೆ ಮಾಡಲಾಗುತ್ತಿತ್ತು. ಪರೀಕ್ಷೆಯಲ್ಲಿ ಕೇಳಲಾಗುತ್ತಿದ್ದ ಪ್ರಶ್ನೆಗಳೂ ಹೆಚ್ಚು ಅಂಕಗಳಿಗೆ, ದೀರ್ಘ ಉತ್ತರ ಬಯಸುವ ಪ್ರಶ್ನೆಗಳನ್ನೂ ಕೇಳಲಾಗುತ್ತಿತ್ತು. ಆಗ ಪರೀಕ್ಷೆಯಲ್ಲಿ 35 ಅಂಕಕ್ಕಿಂತ ಕಮ್ಮಿ ತೆಗೆದರೆ ಫೇಲ್ ಮಾಡುವ ವ್ಯವಸ್ಥೆಯಿತ್ತು. ಈಗ ಆ ವ್ಯವಸ್ಥೆಯು ಸಂಪೂರ್ಣ ಬದಲಾಗಿದೆ.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ನಲವತ್ನಾಲ್ಕನೆಯ ಕಂತು

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ