Advertisement

ಉಮಾರಾವ್

ಸೇಫರ್ ಜೋನ್ ನಿಂದ ಹೊರಬರುವುದನ್ನು ಕಲೀಬೇಕು…: ಬಸವನಗೌಡ ಹೆಬ್ಬಳಗೆರೆ ಸರಣಿ

ಎಷ್ಟೋ ಜನಕ್ಕೆ ತಾವು ಈಗಿರುವ ಕೆಲಸ, ಸ್ಥಿತಿ ಸರಿಯಿಲ್ಲವೆಂದೆನಿಸಿರುತ್ತದೆ. ಯಾರನ್ನೇ ಕೇಳಲಿ ಈ ಕೆಲಸ ಸರಿಯಿಲ್ಲ ಅದು ಸರಿಯಿಲ್ಲ ಇದು ಸರಿಯಿಲ್ಲ ಎಂದು ದೂಷಣೆ ಮಾಡುತ್ತಿರುತ್ತಾರೆ. ಆದರೆ ತಮಾಷೆ ಅಂದ್ರೆ ಕಡೇವರೆಗೂ ಬೇರೆ ಕೆಲಸಕ್ಕೆ ಪ್ರಯತ್ನಿಸದೇ ಅದೇ ಕೆಲಸದಲ್ಲಿ ಮುಂದುವರೆಯುತ್ತಿರುತ್ತಾರೆ!! ಕೆಲವರಂತೂ ಅದೇ ಕೆಲಸದಲ್ಲಿದ್ದುಕೊಂಡು ಬೇರೆ ಕೆಲಸಕ್ಕೆ ಪ್ರಯತ್ನಿಸಿ ಯಶಸ್ವಿಯೂ ಆಗುತ್ತಾರೆ. ಇಲ್ಲಿ ಹೇಳೋಕೆ ಹೊರಟಿರೋದು ಏನಪ್ಪಾ ಅಂದ್ರೆ ನಾವು ಇದ್ದ ಸ್ಥಿತಿಯಲ್ಲಿ ಖುಷಿಯಾಗಿದ್ದುಕೊಂಡು ಬೇರೆಯದ್ದಕ್ಕೆ ಪ್ರಯತ್ನಿಸುತ್ತಾ ಇರಬೇಕು. ಸಿಕ್ಕರೆ ಒಳ್ಳೆಯದು, ಒಂದೊಮ್ಮೆ ಸಿಗದಿದ್ದರೆ ಈಗಿರುವ ಕೆಲಸವನ್ನು ಪ್ರೀತಿಸಬೇಕು. ಅದನ್ನು ಬಿಟ್ಟು ಬೇರೆಯದ್ದಕ್ಕೂ ಪ್ರಯತ್ನಿಸದೇ ಇರೋ ಕೆಲಸವನ್ನು ಗೊಣಗಿಕೊಂಡು ಮಾಡಿದರೆ ಅದು ನಮ್ಮ ನೆಮ್ಮದಿಗೆ ಲಾಸ್ ಅಷ್ಟೇ.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಐವತ್ತೈದನೆಯ ಕಂತು ನಿಮ್ಮ ಓದಿಗೆ

Read More

ಹರ್ಷದ ಕೂಳನ್ನು ನೆಚ್ಚಿಕೊಂಡು ವರ್ಷದ ಕೂಳನ್ನು  ಕಳೆದುಕೊಳ್ಳಬಾರದಂತೆ!!: ಬಸವನಗೌಡ ಹೆಬ್ಬಳಗೆರೆ ಸರಣಿ

ನನಗೆ ತೊಂದರೆ ಆಗುತ್ತಿದ್ದುದು ನನ್ನ ಸಂಬಂಧಿಕರ ಮನೆಯಿಂದ ಬರುತ್ತಿದ್ದ 3 ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿಯನ್ನು ಕರೆದುಕೊಂಡು ಹೋಗಲು ತುಂಬಾ ತಡವಾಗಿ ಬರುತ್ತಿದ್ದರು. ಇದರಿಂದ ನನಗೆ ಅವರು ಹೋಗುವವರೆಗೂ ಅಡುಗೆ ಮಾಡಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ನಾನು ಮಾಡಿದ್ದ ರೂಮಿನಲ್ಲಿ ಒಂದೇ ಹಾಲ್ ಇದ್ದುದ್ದರಿಂದ ಮಕ್ಕಳ ಎದುರಿಗೆ ಹೋಗಿ ಅಡುಗೆ ಮಾಡಿಕೊಳ್ಳಲು ಸಾಧ್ಯವಿಲ್ಲದಂತಾಗಿ ಅವರು ಹೋಗುವವರೆಗೂ ಕಾಯಬೇಕಾಗಿತ್ತು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಐವತ್ನಾಲ್ಕನೆಯ ಕಂತು ನಿಮ್ಮ ಓದಿಗೆ

Read More

ಕ್ವಾಲಿಫಿಕೇಷನ್ ಇದ್ದ ಮಾತ್ರಕ್ಕೆ ವ್ಯಕ್ತಿ ಶ್ರೇಷ್ಠವೆಂದು ಅಲ್ಲ!!: ಬಸವನಗೌಡ ಹೆಬ್ಬಳಗೆರೆ ಸರಣಿ

ಹೆಚ್ಚೆಚ್ಚು ಓದಿದಂತೆ ಶಿಕ್ಷಣವು ನಮ್ಮಲ್ಲಿ ಉದಾರತೆಯನ್ನು ಬೆಳೆಸಬೇಕಿತ್ತು. ಹೃದಯ ವೈಶಾಲ್ಯತೆಯನ್ನು ಬೆಳೆಸಬೇಕಿತ್ತು. ಎಲ್ಲರೊಡನೆ ಹೊಂದಿಕೊಂಡು ಹೋಗುವ ಗುಣವನ್ನು ಬೆಳೆಸಬೇಕಿತ್ತು. ಆದರೆ ಕ್ವಾಲಿಫಿಕೇಶನ್ ಅನ್ನುವುದು ನಮ್ಮಲ್ಲಿ ಅಹಂಕಾರವನ್ನು ಬೆಳೆಸುತ್ತಿದೆ. ನಮ್ಮಲ್ಲಿ ಸಂಕುಚಿತತೆಯನ್ನು ಮೂಡಿಸುತ್ತಿದೆ. ಹೊಂದಾಣಿಕೆಯ ಕೊರತೆಯನ್ನು ಮೂಡಿಸುತ್ತಿದೆ. ಕೆಲವರು ಈ ಮನೋಭಾವ ತೋರುವುದಿಲ್ಲವಾದರೂ ಬಹುತೇಕರು ಇದೇ ರೀತಿಯ ಮನೋಭಾವ ತೋರುತ್ತಾರೆಂಬುದು ನನ್ನ ಅನುಭವಕ್ಕೆ ಬಂದಿದೆ.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಐವತ್ಮೂರನೆಯ ಕಂತು ನಿಮ್ಮ ಓದಿಗೆ

Read More

ಪೋಸ್ಟರ್ ಬಳಿಯೋ ಕೆಲಸದಾಗಿನ ಕೆಲ ಅನುಭವಗಳು… ಬಸವನಗೌಡ ಹೆಬ್ಬಳಗೆರೆ ಸರಣಿ

ನಾವು ಪೋಸ್ಟರನ್ನು ಅಂಟಿಸುತ್ತಾ ಲಕ್ಷ್ಮೀ ಮೆಕ್ಕೆಜೋಳದ ಬೀಜಗಳ ಬಗ್ಗೆ ಪ್ರಚಾರ ಮಾಡುತ್ತಾ ಹೋಗುತ್ತಿದ್ದಾಗ ಒಂದು ಹಳ್ಳಿಯವರು ನಮ್ಮನ್ನು ಸುತ್ತುವರೆದು “ಕಳೆದ ವರ್ಷ ಇದೇ ಬೀಜಗಳನ್ನು ಬಿತ್ತಿದ್ದೆವು. ನಮಗೆ ಬೆಳೆ ಲಾಸ್ ಆಗಿದೆ. ಅವು ಸರಿಯಾಗಿ ಹುಟ್ಟಿಲ್ಲ. ಆದ್ದರಿಂದ ಆ ನಷ್ಟವನ್ನು ನೀವೇ ಭರಿಸಬೇಕು” ಎಂದು ನಮ್ಮನ್ನು ಕೇಳಲು ಶುರು ಮಾಡಿದರು. ಅದೇನೋ ಹೇಳ್ತಾರಲ್ಲಾ. ‘ಮದುವೆ ಆಗೋ ತಿಮ್ಮ ಅಂದ್ರೆ ನೀನೇ ನನ್ನ ಹೆಂಡ್ತಿ ಆಗೋ ಅಂದ್ನಂತೆ’ ಅನ್ನೋ ಹಾಗಾಯ್ತು ನಮ್ಮ ಪರಿಸ್ಥಿತಿ. ನಮ್ಮನ್ನು ಹಳ್ಳಿಯವರು ಹಾಗೇ ಕೇಳಿದಾಗ ನಾವು ನಮ್ಮ “ಮ್ಯಾನೇಜರ್‌ನ ಕರೆದುಕೊಂಡು ಬರ್ತೀವಿ” ಎಂದು ಹೇಳಿ ಅಲ್ಲಿಂದ ತಪ್ಪಿಸಿಕೊಂಡು ಓಡಿದೆವು!!
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿ

Read More

ಓದು ಮುಗಿದ ನಂತರದ ಪ್ರಾರಂಭದ ದಿನಗಳು…: ಬಸವನಗೌಡ ಹೆಬ್ಬಳಗೆರೆ ಸರಣಿ

ಆಗ ಜಿಲ್ಲಾವಾರು ನೇಮಕವಿದ್ದ ಕಾರಣ ನನಗೆ 2 ಜಿಲ್ಲೆಗಳಿಗೆ ಅರ್ಜಿ ಹಾಕಲು ಹಣ ಇಲ್ಲದ ಕಾರಣ ಬರೀ ಒಂದೇ ಜಿಲ್ಲೆಯಲ್ಲಿಯೇ ಅರ್ಜಿ ಸಲ್ಲಿಸಿದೆ, ಅದೂ ಮೈಸೂರಿನಲ್ಲಿ. ಕೆಲಸವನ್ನು ಗಿಟ್ಟಿಸಲೇ ಬೇಕೆಂಬ ಹಠವಿಡಿದು ಓದಿದೆ. ನಾನು ಮೈಸೂರಿನಲ್ಲಿಯೇ ಅರ್ಜಿ ಹಾಕಲು ಕಾರಣ ಅಲ್ಲಿ ನನ್ನ ಗೆಳೆಯನ ಅಣ್ಣನೊಬ್ಬನು ಓದುತ್ತಿದ್ದ. ಪರೀಕ್ಷೆ ಬರೆಯುವ ದಿನ ಅವನ ರೂಮಿನಲ್ಲಿ ಉಳಿಯಬಹುದು. ಬೇರೆ ಕಡೆ ಉಳಿದು ಖರ್ಚು ಮಾಡಲು ಹಣದ ತೊಂದರೆ ಇದ್ದುದರಿಂದ ನಾನು ಮೈಸೂರು ಒಂದಕ್ಕೇ ಅರ್ಜಿ ಹಾಕಲು ತೀರ್ಮಾನಿಸಿದ್ದೆ!
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ