ಸೇಫರ್ ಜೋನ್ ನಿಂದ ಹೊರಬರುವುದನ್ನು ಕಲೀಬೇಕು…: ಬಸವನಗೌಡ ಹೆಬ್ಬಳಗೆರೆ ಸರಣಿ
ಎಷ್ಟೋ ಜನಕ್ಕೆ ತಾವು ಈಗಿರುವ ಕೆಲಸ, ಸ್ಥಿತಿ ಸರಿಯಿಲ್ಲವೆಂದೆನಿಸಿರುತ್ತದೆ. ಯಾರನ್ನೇ ಕೇಳಲಿ ಈ ಕೆಲಸ ಸರಿಯಿಲ್ಲ ಅದು ಸರಿಯಿಲ್ಲ ಇದು ಸರಿಯಿಲ್ಲ ಎಂದು ದೂಷಣೆ ಮಾಡುತ್ತಿರುತ್ತಾರೆ. ಆದರೆ ತಮಾಷೆ ಅಂದ್ರೆ ಕಡೇವರೆಗೂ ಬೇರೆ ಕೆಲಸಕ್ಕೆ ಪ್ರಯತ್ನಿಸದೇ ಅದೇ ಕೆಲಸದಲ್ಲಿ ಮುಂದುವರೆಯುತ್ತಿರುತ್ತಾರೆ!! ಕೆಲವರಂತೂ ಅದೇ ಕೆಲಸದಲ್ಲಿದ್ದುಕೊಂಡು ಬೇರೆ ಕೆಲಸಕ್ಕೆ ಪ್ರಯತ್ನಿಸಿ ಯಶಸ್ವಿಯೂ ಆಗುತ್ತಾರೆ. ಇಲ್ಲಿ ಹೇಳೋಕೆ ಹೊರಟಿರೋದು ಏನಪ್ಪಾ ಅಂದ್ರೆ ನಾವು ಇದ್ದ ಸ್ಥಿತಿಯಲ್ಲಿ ಖುಷಿಯಾಗಿದ್ದುಕೊಂಡು ಬೇರೆಯದ್ದಕ್ಕೆ ಪ್ರಯತ್ನಿಸುತ್ತಾ ಇರಬೇಕು. ಸಿಕ್ಕರೆ ಒಳ್ಳೆಯದು, ಒಂದೊಮ್ಮೆ ಸಿಗದಿದ್ದರೆ ಈಗಿರುವ ಕೆಲಸವನ್ನು ಪ್ರೀತಿಸಬೇಕು. ಅದನ್ನು ಬಿಟ್ಟು ಬೇರೆಯದ್ದಕ್ಕೂ ಪ್ರಯತ್ನಿಸದೇ ಇರೋ ಕೆಲಸವನ್ನು ಗೊಣಗಿಕೊಂಡು ಮಾಡಿದರೆ ಅದು ನಮ್ಮ ನೆಮ್ಮದಿಗೆ ಲಾಸ್ ಅಷ್ಟೇ.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಐವತ್ತೈದನೆಯ ಕಂತು ನಿಮ್ಮ ಓದಿಗೆ

