Advertisement

ಶ್ರೀಧರ್‌ ಎಸ್.‌ ಸಿದ್ದಾಪುರ

ಈ ಮಾಣಿ ಎಂತಕ್ಕೂ ಪ್ರಯೋಜನವಿಲ್ಲ…

ಅಜ್ಜ ಬಲಿಪರು ಪದ್ಯ ಹೇಳಿಕೊಡುತ್ತಿದ್ದ ಶೈಲಿ ಅನನ್ಯವಾದದ್ದು, ಇನ್ನೊಬ್ಬರು ಅನುಸರಣೆ ಮಾಡಲಾಗದ್ದು. ಪದ್ಯವನ್ನು ಬಾಯಿಯಲ್ಲಿ ಹೇಳುತ್ತಾ ಎರಡೂ ಕೈಯ್ಯಲ್ಲಿ ಪದ್ಯದ ಛಂದೋಗತಿಯನ್ನು ತೋರಿಸುತ್ತಾ ಇರುವಂತೆಯೋ ಎನ್ನುವಂತೆ ಅಥವಾ ಪದ್ಯ ನಿಬದ್ಧವಾದ ತಾಳದ ಘಾತಗಳನ್ನು ಹಸ್ತದ ಬೀಸುವಿಕೆಯಿಂದ ತೋರಿಸುತ್ತಾ ಹೇಳಿಕೊಡುತ್ತಿದ್ದರು.
ಇದರಿಂದ ಸಹಜವಾಗಿ ಅವರ ಶರೀರದ ಭಾಷೆಯೂ ಶಾರೀರದ ಭಾಷೆಯೂ ಕಲಿಯುತ್ತಿರುವ ಮೊಮ್ಮಗ ಕಿರಿಯ ಬಲಿಪರಲ್ಲಿ ಹಾಡಿನ ಅಂತರ್ಯವಾದ

Read More

ಲುಪ್ತವಾಗಿ ಹೋದ ‘ಪ್ರಸಂಗ ಕಥಾಸಾರ’ ಕುರಿತ ವಿಚಾರಗಳು

ಹಿಂದಿನ ಕಾಲದಲ್ಲಿ ಭಾಗವತರು ಪ್ರಸಂಗದ ಮೊದಲಿನಿಂದ ಕೊನೆಯವರೆಗಿನ ಪದ್ಯಗಳನ್ನು ಬಾಯಿಪಾಠ ಮಾಡಿಕೊಂಡೇ ತಯಾರಾಗಿರಬೇಕಾಗಿತ್ತು. ಇಂತಹಾ ಆದಿಯ ಪದ್ಯಗಳಿಗೆ ಕಥಾಸಾರ ಎಂಬ ಹೆಸರು. ಇದನ್ನು ಕಥಾನುಸಾರವೆಂದೂ ಕರೆಯುತ್ತಿದ್ದರು. ಅಜ್ಜ ಬಲಿಪ ನಾರಾಯಣ ಭಾಗವತರ ಕಾಲ ಮತ್ತು ಅದಕ್ಕೂ ಮೊದಲು ಪ್ರಸಂಗದ ಕಥಾಸಾರವನ್ನು ಪ್ರದರ್ಶನದ ವೇಳೆ ಕೈ ಬಿಡುವ ಪದ್ಧತಿ ಇರಲಿಲ್ಲ.ಸದ್ಯದ ಸಂದರ್ಭ ಕಥಾಸಾರ ಅಂದರೇನೆಂಬುದೇ ಅರಿವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. 

Read More

ಅಜ್ಜ ಕೊಟ್ಟ ಜಾಗಟೆಯ ಮಹಿಮೆ

ದಿವಂಗತ ಹಿರಿಯ ಬಲಿಪ ನಾರಾಯಣ ಭಾಗವತರು ಉಪಯೋಗಿಸುತ್ತಿದ್ದ ಜಾಗಟೆ ಧರ್ಮಸ್ಥಳದ ಧರ್ಮಾಧಿಕಾರಿಗಳಾಗಿದ್ದ ಮಂಜಯ್ಯ ಹೆಗ್ಗಡೆಯವರು ಕೊಟ್ಟದ್ದು. ಇದು ಈಗಲೂ ಬಲಿಪ ಮನೆತನದ ಅತ್ಯಮೂಲ್ಯ ಆಸ್ತಿಯಂತಿದೆ. ಇದು ಕರಾವಳಿಯ ತೆಂಕುತಿಟ್ಟು ಯಕ್ಷಗಾನದ ಅನಭಿಷಿಕ್ತ ಸಾಮ್ರಾಟ ಮುನ್ನಡೆಸಿದ ಯಕ್ಷಗಾನಗಳಿಗೆ ಸಾಕ್ಷಿಯಂತೆ ಇರುವ, ಐತಿಹಾಸಿಕ ಮಹತ್ವವಿರುವ ಜಾಗಟೆ. ಈಗ ಅದು ನೋಡುತ್ತಿರುವುದು ಬಲಿಪ ಪರಂಪರೆಯ ನಾಲ್ಕನೆಯ ತಲೆಮಾರನ್ನು. ‘ಬಲಿಪ ಮಾರ್ಗ’ ಅಂಕಣದಲ್ಲಿ ಕೃಷ್ಣ ಪ್ರಕಾಶ ಉಳಿತ್ತಾಯ ಬರಹ.

Read More

ಕೃಷ್ಣಪ್ರಕಾಶ್ ಉಳಿತ್ತಾಯ ಬರೆಯುವ ಬಲಿಪ ಮಾರ್ಗ ಅಂಕಣ ಇಂದಿನಿಂದ

ತೆಂಕುತಿಟ್ಟು ಯಕ್ಷಗಾನ ಕ್ಷೇತ್ರದಲ್ಲಿ ಹಿರಿಯ ಬಲಿಪನಾರಾಯಣ ಭಾಗವತರದ್ದು ಅಗ್ರ ಹೆಸರು. ತೆಂಕುತಿಟ್ಟಿನ ಮಾರ್ಗಪ್ರವರ್ತಕರೆಂದು ಗುರುತಿಸಿಕೊಂಡವರು. ‘ಭಾಗವತ’ನಿಗಿರಬೇಕಾದ ಜ್ಞಾನವನ್ನು ಮೈಗೂಡಿಸಿಕೊಂಡು ಮನ್ನಣೆಗೆ ಪಾತ್ರರಾದವರು. ಲೇಖಕ ಕೃಷ್ಣಪ್ರಕಾಶ ಉಳಿತ್ತಾಯ ಅವರು ಯಕ್ಷಗಾನದ ಹಿಮ್ಮೇಳ ಕಲಾವಿದರೂ ಆಗಿರುವುದರಿಂದ, ಹಿರಿಯ ಬಲಿಪನಾರಾಯಣ ಭಾಗವತರ ಜೀವನವನ್ನು ಅವರ ಭಾಗವತಿಕೆಯ ಮಾರ್ಗವನ್ನು ಹೆಚ್ಚು ಸಮರ್ಥವಾಗಿ ನಿರೂಪಿಸಬಲ್ಲರು. ಇಂದಿನಿಂದ ಅವರು ಬರೆಯುವ ಬಲಿಪ ಮಾರ್ಗ ಅಂಕಣ ಹದಿನೈದು ದಿನಗಳಿಗೊಮ್ಮೆ ಪ್ರಕಟವಾಗಲಿದೆ.

Read More

ರಚನಾಕೌಶಲ ಬಿಂಬಿಸುವ ಬುದ್ಧಚರಣ

ಇಲ್ಲಿ ಅಪೂರ್ವವಾದ ರಚನಾ ಸೌಂದರ್ಯವನ್ನು ಗಮನಿಸಬಹುದು. ಭಗವಂತ ಸುಗತನ ಕರುಣೆಯೆಂಬ ಮನದ ಹುತ್ತಗಟ್ಟುವಿಕೆ ನಾಲ್ಕು ಪಾದಗಳ ಪದ್ಯಗಳಿಂದ ತೊಡಗಿ, ಎಂಟು ಮತ್ತು ಹದಿನಾಲ್ಕಕ್ಕೆ ಏರಿ; ಮತ್ತೆ ಎಂಟಕ್ಕಿಳಿದು ನಾಲ್ಕು ಪಾದಗಳಿಗೆ ಕೊನೆಯಾಗಿ ಒಂದು ಪಾದದ “ಓಂ ಶಾಂತಿಃ ಶಾಂತಿಃ ಶಾಂತಿಃ” ಎಂಬ ಉಕ್ತಿಯಲ್ಲಿ ಕೊನೆಯಾಗುವುದು ಧ್ವನಿಪೂರ್ಣವಾಗಿದೆ. ಕರುಣ ರಸದ ಆತ್ಯಂತಿಕ ನೆಲೆ ಶಾಂತರಸದಲ್ಲೇ ಎಂಬುದು ಇಡೀ ಕಾವ್ಯ ಧ್ವನಿಸುತ್ತದೆ. ಇದನ್ನು ಕವಿಯು ಕೇವಲ ಕಾವ್ಯದಲ್ಲಿ ಮಾತ್ರ ಬಿಂಬಿಸದೆ ತನ್ನ ರಚನಾ ಕೌಶಲದಲ್ಲೂ ಔಚಿತ್ಯಪೂರ್ಣವಾಗಿ ಕಾಣಿಸಿರುವುದು ಮನಮುಟ್ಟುವಂಥದ್ದು..
ಹೆಚ್.ಎಸ್.ವೆಂಕಟೇಶಮೂರ್ತಿ ಬರೆದ ಬುದ್ಧ ಚರಣ ಕವನ ಸಂಕಲನದ ಕುರಿತು ಕೃಷ್ಣಪ್ರಕಾಶ್ ಉಳಿತ್ತಾಯ ಬರಹ

Read More

ಜನಮತ

ಬದುಕಲು ನಿಮಗೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ