Advertisement
ರವಿ ಮಡೋಡಿ

ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ರವಿ ಮಡೋಡಿ ಅವರು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ನಿಟ್ಟೂರು ಬಳಿಯ ಮಡೋಡಿ ಗ್ರಾಮದವರು. ಹವ್ಯಾಸಿ ಯಕ್ಷಗಾನ ಕಲಾವಿದರಾಗಿ ಕಳೆದ 15 ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ 500ಕ್ಕೂ ಹೆಚ್ಚು ಪ್ರದರ್ಶನಗಳನ್ನು ತಮ್ಮ ತಂಡದೊಂದಿಗೆ ನೀಡಿದ್ದಾರೆ. ‌‘ಯಕ್ಷಸಿಂಚನ’ ಎನ್ನುವ ಹವ್ಯಾಸಿ ಯಕ್ಷಗಾನ ಸಂಸ್ಥೆಯ ಸ್ಥಾಪಕರಲ್ಲಿ ಒಬ್ಬರಾದ ಅವರು ಸಂಸ್ಥೆಯ ಈಗಿನ ಅಧ್ಯಕ್ಷರೂ ಹೌದು.  ಯಕ್ಷಗಾನ ಕ್ಷೇತ್ರಕ್ಕೆ ತಂತ್ರಜ್ಞಾನದ ಲಾಭ ದೊರಕಿಸಿಕೊಡುವಲ್ಲಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿಯೂ ಕೆಲಸ ಮಾಡುತ್ತಿರುವ ಇವರು ಮಲೆನಾಡಿನ ಒಂದು ಶತಮಾನದ ಯಕ್ಷಗಾನ ಇತಿಹಾಸವನ್ನು ತಿಳಿಸುವ  ‘ಮಲೆನಾಡಿನ ಯಕ್ಷಚೇತನಗಳು’  ಎಂಬ ಪುಸ್ತಕವನ್ನು ಹೊರತಂದಿದ್ದಾರೆ. ಇದರ ಜೊತೆಗೆ ʼನಮ್ಮಲ್ಲೇ ಮೊದಲು’, ’ಪ್ರಸಂಗಕರ್ತ ಶ್ರೀಧರ ಡಿ.ಎಸ್’ ಇವರ ಇತರ ಕೃತಿಗಳು. ಅವರ ಹಲವಾರು ಕಥೆ, ಲೇಖನ, ಲಲಿತ ಪ್ರಬಂಧಗಳು ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

ನಂಬುವುದಾದರೂ ಯಾರನ್ನು ಎಂಬ ಗೊಂದಲದ ಕಾಲವಿದು

ಇತ್ತೀಚಿನ ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಮೊದಲನೆ ಲಸಿಕೆ ಯಾವುದಿರುತ್ತದೆಯೋ ಎರಡನೆ ಲಸಿಕೆ ಕೂಡ ಅದೇ ಆಗಿರಬೇಕು ಎನ್ನುವ ವರದಿ ಹೊರಬಂದಿದೆ. ಹಾಗೆಂದು ನಾವು ವಿಶ್ವ ಆರೋಗ್ಯ ಸಂಸ್ಥೆಯನ್ನಾದರೂ ಹೇಗೆ ನಂಬುವುದು? ಅವರೂ ಕೂಡ ಅವರೇ ಕೊಟ್ಟ ವರದಿಯನ್ನು ಅನೇಕ ಬಾರಿ ಬದಲಿಸಿದ್ದಾರೆ. ಲಸಿಕೆ ಬಹಳ ಮುಖ್ಯ, ಲಸಿಕೆಯಿಂದ ಮಾತ್ರ ಕೊರೋನ ತಡೆಯುವ ಮಾರ್ಗ ಸಧ್ಯಕ್ಕೆ ಇರುವುದು.”

Read More

ದ್ವಂದ್ವಪೀಠದ ಮೇಲೆ ದೇವರ ನೆನೆಯುತ್ತ….

ದೇವರು ಎಂಬ ಪರಿಕಲ್ಪನೆಯೇ ಬಹಳ ವಿಸ್ಮಯವಾದುದು. ಮನುಷ್ಯವರ್ಗವು ರೂಪಿಸಿಕೊಂಡಿರುವ ಈ ಪರಿಕಲ್ಪನೆಯಲ್ಲಿ ಎಷ್ಟೊಂದು ವಿರೋಧಾಭಾಸಗಳಿವೆ! ದೇವರ ಬಗ್ಗೆ, ಅಧ್ಯಾತ್ಮದ ಬಗ್ಗೆ, ಭಕ್ತಿಯ ಬಗ್ಗೆ, ಮನಸ್ಸಿನ ಬಗ್ಗೆ, ಜೀವನದ ಬಗ್ಗೆ ತಿಳಿ ಹೇಳಲು ಬಂದ ಮಹಾನುಭಾವರನ್ನೆಲ್ಲಾ ದೇವರನ್ನಾಗಿ ಮಾಡಿ ಅವರ ನುಡಿಗಳಲ್ಲೆ ಅವರನ್ನು ಸಮಾಧಿ ಮಾಡಿರುವ ಜಗತ್ತು ನಮ್ಮದು. – ದೇವರು –ಮನುಷ್ಯನ ಸಂಬಂಧದ ಬಗ್ಗೆ ಬರೆದಿದ್ದಾರೆ ಪ್ರಶಾಂತ್ ಬೀಚಿ.

Read More

ದಾನಗಳಲ್ಲಿ ಮಹಾದಾನ…

“ಆಸ್ಪತ್ರೆಯಿಂದ ಅವರ ದೇಹವನ್ನು ಮನೆಗೆ ತಂದು, ಸಂಪ್ರದಾಯದ ಪ್ರಕಾರ ಎಲ್ಲಾ ಪದ್ಧತಿಗಳನ್ನು ಮತ್ತು ಕಾರ್ಯವನ್ನು ಮುಗಿಸಿ, ದೇಹವನ್ನು ಮಣ್ಣಿಗೆ ಇಡುವ ಬದಲು ಸಂಶೋಧನೆಗೆ ನೀಡಿದರು. ಮನಸ್ಸಿಗೆ ನೆಮ್ಮದಿ ಆಗುವ ಹಾಗೆ ಸಂಪ್ರದಾಯವೂ ಆಯಿತು, ಅವರ ದೇಹವನ್ನು ಸಂಶೋಧಿಸಿ ನೂರಾರು ವಿದ್ಯಾರ್ಥಿಗಳು ಮುಂದೆ ಸಾವಿರಾರು ಜೀವಗಳನ್ನು ಉಳಿಸಲು ಶಕ್ತರಾಗಲು ಸಹಾಯವೂ ಆಯ್ತು. ಒಂದು ದೇಹದ ಸಂಶೋಧನೆಯಿಂದ ಸಾವಿರಾರು ಜೀವಗಳನ್ನು…”

Read More

ಸೀಮಾರೇಖೆಯಿಲ್ಲದ ಮೂಢನಂಬಿಕೆಗಳು……!

“ಏವ್‌ಬರಿ ಸುತ್ತಮುತ್ತ ಕ್ರೈಸ್ತ ಜನಾಂಗದವರೆ ಬದುಕುತ್ತಿದ್ದರು, ಯಾರಾದರು ಸತ್ತಾಗ ಅವರ ಮನೆಯವರು ಅಂತ್ಯಸಂಸ್ಕಾರವನ್ನು ಮುಗಿಸಿ ಏವ್‌ಬರಿಯ ಚರ್ಚಿಗೆ ಬಂದು ಪೂಜೆ ಸಲ್ಲಿಸುತ್ತಿದ್ದರು. ಕೆಲವರ ಮನೆಯಲ್ಲಿ ಸತ್ತವರ ಹೆಸರಿನ ಪೂಜೆ ಸಲ್ಲಿಸಿದ ಮೇಲೆಯೂ ಕೂಡ ಆತ್ಮ ಕಾಣಿಸಿದ ಅನುಭವವಾಗಿದೆ. ಅಂಥಹ ಸಮಯದಲ್ಲಿ ಚರ್ಚಿನ ಪಾದ್ರಿಯ ಸಲಹೆಯ ಮೇರೆಗೆ ಒಂದು ಪೂಜಿಸಿದ ಯಂತ್ರವನ್ನು ಮನೆಯಲ್ಲಿ ಇಟ್ಟುಕೊಂಡಿದ್ದಾರೆ. ಅದಾಗಿಯೂ ಸುತ್ತ ಮುತ್ತಲಿನ ಕೆಲವು ಊರುಗಳಲ್ಲಿ ಆತ್ಮಗಳು…”

Read More

‘ನಿನಗೆ ಅರ್ಥವಾಗುವುದಿಲ್ಲ ಬಿಡು!’ ಅಂದರೇನು?

“ಅವರು ಮೊದಲ ಬಾರಿಗೆ ತಾಂಜಾನಿಯಾಕ್ಕೆ ಬಂದಿದ್ದರು, ಹೆಚ್ಚಿನ ಮಾಹಿತಿ ಇಲ್ಲದೆ ಕೈಲಿದ್ದ ಲ್ಯಾಪ್ ಟಾಪ್ ಬಹಳ ಸುಲಭವಾಗಿ ಹೆಗಲಿಗೆ ಹಾಕಿಕೊಂಡು ಸುತ್ತಾಡಿದ್ದಾರೆ. ಇವರಿಗೆ ಇಂಗ್ಲೀಷ್ ಸರಿಯಾಗಿ ಬರುವುದಿಲ್ಲ ಮತ್ತು ಹೊಸಬರು ಎನ್ನುವುದು ಕೆಲವರಿಗೆ ಗೊತ್ತಾಗಿ ಸಣ್ಣ ಕಳ್ಳರು ಇವರನ್ನು ಹಿಂಬಾಲಿಸಿದ್ದಾರೆ. ಕಡಿಮೆ ಜನರು ಓಡಾಡುವ ಸ್ಥಳ ಬಂದಾಗ ಇವರ ಕೈಲಿದ್ದ ಕ್ಯಾಮೆರಾ, ಲ್ಯಾಪ್ ಟಾಪ್ ಮತ್ತು ಒಬ್ಬರ ಪೋನ್ ಕಿತ್ತುಕೊಂಡು ಓಡಿದ್ದಾರೆ…”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ